ಕರಿವರದರಾಜ ಬೆಟ್ಟದ ಬಳಿ ತ್ಯಾಜ್ಯದ ರಾಶಿಯಲ್ಲಿ ಚಿಂದಿ ಆಯುವ ಮಕ್ಕಳು: ಇಲ್ಲಿದೆ ಹೆಚ್ಚಿನ ವಿವರ
ಚಾಮರಾಜನಗರ, ನವೆಂಬರ್ 09: ಬಿಳಿಗಿರಿರಂಗನಾಥ ಹುಲಿ ಸಂರಕ್ಷಿತ ಪ್ರದೇಶಕ್ಕೆ ಹೊಂದಿಕೊಂಡಂತಿರುವ ಚಾಮರಾಜನಗರ ಜಿಲ್ಲಾ ಕೇಂದ್ರದಿಂದ ಅಣತಿ ದೂರದಲ್ಲಿರುವ ಕರಿವರದರಾಜ ಬೆಟ್ಟದ ಬಳಿ ಇರುವ ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ಅಸ್ಸಾಂ ರಾಜ್ಯದ ಚಿಂದಿ ಹೆಕ್ಕುವ ಮಂದಿ ಇದ್ದು, ಅವರೊಂದಿಗೆ ಪುಟ್ಟ ಕಂದಮ್ಮಗಳಿದ್ದು, ಅವುಗಳ ಸುರಕ್ಷತೆ ಯಾರಿಗೂ ಬೇಡದಂತಹ ಸ್ಥಿತಿ ಬೆಳಕಿಗೆ ಬಂದಿದೆ.
ಕರಿವರದರಾಜ ಬೆಟ್ಟದ ಸಮೀಪದಲ್ಲಿ ನಗರಸಭೆಯಿಂದ ಘನತ್ಯಾಜ್ಯ ವಿಲೇವಾರಿ ಘಟಕ ಸ್ಥಾಪಿಸಲಾಗಿದ್ದು, ಅದು ದುರ್ನಾತದಿಂದ ಕೂಡಿದೆ. ಕೊಳಗೇರಿಗಿಂತ ಕಡೆಯಾಗಿದೆ ಈ ಪ್ರದೇಶ. ಇಲ್ಲಿ ಜೀವನ ಸಾಗಿಸಲು ಅಸ್ಸಾಂ ರಾಜ್ಯದಿಂದ ರಸ್ತೆ ಬದಿ ಸಿಗುವ ಚಿಂದಿ ಹಾಯ್ದುಕೊಂಡು ಬರುವ ಮಂದಿ ಇರುವರು. ಇವರೊಂದಿಗೆ ಎಳೆ ಕಂದಮ್ಮಗಳು ಇದ್ದು, ಅವುಗಳಿಗೆ ಸುರಕ್ಷತೆ ಇಲ್ಲದಂತಾಗಿದೆ. ಸ್ಥಳೀಯ ಸಂಸ್ಥೆಯು ಇಂತಹ ಅಸಹಾಯಕ ಮಂದಿಯ ಮೇಲೆ ಕಾಳಜಿ ವಹಿಸಿ ರಕ್ಷಣೆ ನೀಡಬೇಕಾಗಿದ್ದು ಕರ್ತವ್ಯವಾಗಿದೆ. ಆದರೆ ಅಧಿಕಾರಿಗಳ ನಿರ್ಲಕ್ಷ್ಯತನದಿಂದ ಅಸಹಾಯಕರು ಸುರಕ್ಷತೆಗೆ ಪರದಾಡುವಂತಾಗಿದೆ.

ಚಾಮರಾಜನಗರದ ಹೊರವಲಯದಲ್ಲಿರುವ ಕರಿವರದರಾಜ ವೃಕ್ಷವನದ ಹಿಂಭಾಗದಲ್ಲಿರುವ ಕಸ ವಿಲೇವಾರಿ ಘಟಕವ ದುರ್ನಾತ ಬೀರುವ ಕಸದ ದೊಡ್ಡ ರಾಶಿಗಳ ನಡುವೆ ಚಿಂದಿ ಆಯುವವರ ಮೂವರು ಮಕ್ಕಳು ಇದ್ದಾರೆ. ಅಸ್ಸಾಂ ರಾಜ್ಯದಿಂದ ಜೀವನ ಸಾಗಿಸಲು ಅಲೆಯುತ್ತಾ ಚಾಮರಾಜನಗರದವರೆಗೂ ಬಂದಿರುವ ಚಿಂದಿ ಆಯುವವರಲ್ಲಿ 5 ಜನರು ಕೆಲಸ (ಇಬ್ಬರು ಪುರುಷರು, ಮೂವರು ಮಹಿಳೆಯರು) ಮಾಡುತ್ತಿದ್ದರು.
ಘನ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಚಿಂದಿ ಹಾಕುವವರು ಸಮೀರ್, ಮುಕುಲ್, ಶಹೀನಾ, ಮಾಮೂನಿ, ಶಹೀದಾ ಎಂದು ಹೇಳಿಕೊಳ್ಳುವರು. ಇವರೊಂದಿಗೆ 6 ವರ್ಷ, 5 ವರ್ಷ ಮತ್ತು 8-9 ತಿಂಗಳ ಮಗುವೊಂದು ದುರ್ನಾತ ವಾಸನೆಗೆ ಉಸಿರುಗಟ್ಟುವ ವಾತಾವರಣದಲ್ಲಿ ಜೀವನ ಸಾಗಿಸುತ್ತಿದ್ದಾರೆ.
ನಗರಸಭೆ ವ್ಯಾಪ್ತಿಯ ಮನೆಗಳಿಂದ ವಿಂಗಡಣೆಯಾಗದೆ ಬಂದಿರುವ ಘನತ್ಯಾಜ್ಯದ ನಡುವೆ ಚಿಂದಿ ಆಯುವವರು ಯಾವುದೇ ಸುರಕ್ಷತಾ ಸಾಮಗ್ರಿ ಧರಿಸದೆ ಪ್ಲಾಸ್ಟಿಕ್ಗಳನ್ನು ಸಂಗ್ರಹಿಸುತ್ತಿದ್ದರೆ, ತ್ಯಾಜ್ಯದಿಂದ ಹೊರಬರುವ ಕಲುಷಿತ ನೀರು, ವಾತಾರವಣದ ತುಂಬೆಲ್ಲಾ ಆವರಿಸಿರುವ ಮಲೀನದ ನಡುವೆ ಪುಟ್ಟ ಕಂದಮ್ಮಗಳಿದ್ದವು.

ತಾನಿರುವ ಜಾಗವು ತನ್ನ ಆರೋಗ್ಯವನ್ನೇ ಚಿಂದಿ ಮಾಡುತ್ತದೆ ಎಂಬ ಅರಿವು ಇಲ್ಲದ ಎರಡು ಮಕ್ಕಳು ಕಸದ ರಾಶಿಯಲ್ಲಿ ಸಿಕ್ಕ ಆಟಿಕೆಗಳೊಂದಿಗೆ ಆಟವಾಡುತ್ತಿದ್ದವು. 8-9 ತಿಂಗಳ ಮಗುವನ್ನು ಸೊಂಟದಲ್ಲಿ ಕೂಡಿಸಿಕೊಂಡಿದ್ದ ಸಣ್ಣ ವಯಸ್ಸಿನ ತಾಯಿ ತನ್ನ ಮತ್ತು ತನ್ನ ಮಗುವಿನ ಭವಿಷ್ಯವನ್ನು ಕಸದ ಮಧ್ಯೆ ಬಂಧಿ ಮಾಡಿಕೊಂಡಿದ್ದಾಳೆ.
ಜಿಲ್ಲಾ ಕೇಂದ್ರದಲ್ಲಿರುವ ನಗರಸಭೆಯೇ ತನ್ನ ವ್ಯಾಪ್ತಿಯಲ್ಲಿ ಕೆಟ್ಟದಾಗಿ ದುಡಿಸಿಕೊಳ್ಳುತ್ತಿದೆ. ಇವರು ಕಸದಲ್ಲಿ ಪ್ಲಾಸ್ಟಿಕ್ ಆಯ್ದುಕೊಂಡು ನಗರಸಭೆಗೆ ಹಣ ಕೊಡುತ್ತಾರೆ. ಬರುವ ಆದಾಯವನ್ನು ಮಾತ್ರ ನೋಡದೆ ದುಡಿಯುವವರ ಆರೋಗ್ಯದ ಕಡೆಯೂ ಗಮನ ನೀಡುತ್ತಿಲ್ಲ. ಇವರೊಂದಿಗೆ ಇರುವ ಮಕ್ಕಳ ಮೇಲೆ ಕಾಳಜಿ ತೋರುತ್ತಿಲ್ಲ ಎನ್ನುವುದು ಶೋಚನೀಯ ಸಂಗತಿಯಾಗಿದೆ.
ಇಲ್ಲಿಗೆ ಭೇಟಿ ನೀಡಿದ ವೇಳೆ ನಗರಸಭೆ ಕಸ ವಿಲೇವಾರಿ ಘಟಕದಲ್ಲಿ ಚಿಂದಿ ಆಯುತ್ತಿದ್ದವರು ಯಾವುದೇ ಸುರಕ್ಷತಾ ಸಲಕರಣೆಗಳನ್ನು ಧರಿಸಿರಲಿಲ್ಲ. ಜೊತೆಗೆ ಇಲ್ಲೇ ಒಣ ಕಸವನ್ನು ಗೊಬ್ಬರವನ್ನಾಗಿ ತಯಾರು ಮಾಡುವ ನಗರಸಭೆ ಸಿಬ್ಬಂದಿಯೂ ಸುರಕ್ಷತಾ ಸಾಮಗ್ರಿಗಳನ್ನು ಹಾಕಿಕೊಂಡಿರಲಿಲ್ಲ.
ಪ್ರಧಾನ ಮಂತ್ರಿ ದಕ್ಷ ಮತ್ತು ಕೌಶಲ ಸಂಪನ್ನ ಹಿತಗ್ರಹಿ ಯೋಜನೆಯಡಿ ೧೮ರಿಂದ ೪೫ ವರ್ಷದೊಳಗಿನ ಚಿಂದಿ ಆಯುವವರು ಸೌಲಭ್ಯ ಪಡೆಯಲು ಅರ್ಹರಾಗಿರುತ್ತಾರೆ. ಇದರಲ್ಲಿ ಫಲಾನುಭವಿಗಳು ಕೌಶಲಾಭಿವೃದ್ಧಿ ತರಬೇತಿ, ಉದ್ಯಮಶೀಲತೆ ಅಭಿವೃದ್ಧಿ ತರಬೇತಿ ಪಡೆಯಹುದಾಗಿತ್ತು. ಚಾಮರಾಜನಗರ ನಗರಸಭೆ ವ್ಯಾಪ್ತಿಯಲ್ಲಿ ಇಂತಹ ಕಾರ್ಯಕ್ರಮಗಳು ನಡೆದಿರುವುದು ಅನುಮಾನವಾಗಿದೆ.
ಚಿಂದಿ ಆಯುವವರು ಅಸಂಘಟಿತ ಕಾರ್ಮಿಕ ವಲಯಕ್ಕೆ ಬರುತ್ತಾರೆ. ಕಾರ್ಮಿಕ ಇಲಾಖೆಯಲ್ಲಿ ಇವರು ನೋಂದಣಿಯಾದರೆ ಹಲವು ಸೌಲಭ್ಯಗಳು ಸಿಗುತ್ತವೆ. ಈ ಸಂಬಂಧ ಜಿಲ್ಲಾ ಕಾರ್ಮಿಕ ಇಲಾಖೆ ಚಿಂದಿ ಆಯುವವರನ್ನು ಪತ್ತೆ ಮಾಡಿ ನೋಂದಣಿ ಮಾಡಿಸಲು ನಗರಸಭೆಗೆ ತಿಂಗಳ ಹಿಂದೆ ಪತ್ರ ಬರೆದಿತ್ತು. ಆದರೆ ಅವರಿಂದ ಯಾವುದೇ ಮಾಹಿತಿ ಬಂದಿಲ್ಲ ಎಂದು ತಿಳಿದುಬಂದಿದೆ.
-
Yami Gautam: ಕನ್ನಡದಲ್ಲೇ ಧುರಂಧರ್ ನಿರ್ದೇಶಕನ ಪತ್ನಿ ಯಾಮಿ ಗೌತಮ್ ಮೊದಲ ಸಿನಿಮಾ, ಸ್ಟಾರ್ ಹೀರೋ ಜೊತೆ ಚೊಚ್ಚಲ ನಟನೆ -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ












Click it and Unblock the Notifications