Get Updates
Get notified of breaking news, exclusive insights, and must-see stories!

ಚಾಮರಾಜನಗರ: ರುಚಿಯಿಲ್ಲದ ಊಟ, ಡೀನ್ ದಬ್ಬಾಳಿಕೆ ಖಂಡಿಸಿ ರೊಚ್ಚಿಗೆದ್ದ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳು

ಚಾಮರಾಜನಗರ, ನವೆಂಬರ್, 27: ಇತ್ತೀಚಿನ ದಿನಗಳಲ್ಲಿ ರಾಜ್ಯದ ಬಹುತೇಕ ಹಾಸ್ಟೇಲ್‌ಗಳಲ್ಲಿ ಊಟ ಸರಿಯಿಲ್ಲ ಎನ್ನುವ ಆರೋಪಗಳು ಕೇಳಿಬರುತ್ತಲೇ ಇವೆ. ಹಾಗೆಯೇ ಇದೀಗ ರುಚಿ ಇಲ್ಲದ ಊಟ ಹಾಗೂ ವಿದ್ಯಾರ್ಥಿಗಳ ಮೇಲೆ ದಬ್ಬಾಳಿಕೆ ನಡೆಸುತ್ತಿರುವುದನ್ನು ಖಂಡಿಸಿ ಚಾಮರಾಜನಗರ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳು ತರಗತಿ ತೊರೆದು ದಿಢೀರ್ ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.

ಚಾಮರಾಜನಗರ ಮೆಡಿಕಲ್ ಕಾಲೇಜಿನ ಡೀನ್ ಡಾ.ಎಚ್.ಜಿ.ಮಂಜುನಾಥ್, ಯಾವುದೇ ಸಮಸ್ಯೆ ಇಲ್ಲದೇ
ವಿದ್ಯಾರ್ಥಿಗಳು ನಡೆಸುತ್ತಿದ್ದ ಮೆಸ್ ರದ್ದುಪಡಿಸಿ ಆಸ್ಪತ್ರೆಗೆ ಊಟ ಸರಬರಾಜು ಮಾಡುವ ಗುತ್ತಿಗೆದಾರರಿಗೆ ಗುತ್ತಿಗೆ ಕೊಟ್ಟಿದ್ದಾರೆ. ತಿಂಗಳಿಗೆ 3,600 ರೂಪಾಯಿ ಕೊಟ್ಟರೂ ಕಳೆದ 6 ತಿಂಗಳಿನಿಂದಲೂ ಊಟ ರುಚಿಯಾಗಿರುವುದಿಲ್ಲ, ಕಳಪೆ ಮಟ್ಟದದಿಂದ ಕೂಡಿರುತ್ತದೆ‌. ಇಂದು ದಿಢೀರ್ ಬೆಳಗ್ಗೆ 10ಕ್ಕೆ ಮೆಸ್ ಕ್ಲೋಸ್ ಆಗಲಿದೆ ಎಂದು ಆದೇಶ ಹೊರಡಿಸಿ, ತಿಂಡಿ ತಿನ್ನುತ್ತಿದ್ದ ಮೂವರ ಮೇಲೆ ಹಲ್ಲೆ ಕೂಡ ನಡೆಸಿದ್ದಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.

Medical College Students Protest Against Dean s Exploitation in Chamarajanagar

ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳು ತರಗತಿ ತೊರೆದು ಪ್ರತಿಭಟನೆ ನಡೆಸಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ.

ರೈತರ ಆಕ್ರೊಶ: ಇನ್ನು ಮತ್ತೊಂದೆಡೆ ಚಾಮರಾಜನಗರ ಜಿಲ್ಲೆಯ ಕುದೇರು ಹಾಲು ಉತ್ಪಾದಕರ ಸಹಕಾರ ಸಂಘವು ರೈತರಿಂದ ಪಡೆಯುವ ಹಾಲಿಗೆ ಒಂದು ರೂಪಾಯಿಯನ್ನು ಕಡಿಮೆ ಮಾಡಿರುವುದನ್ನ ಖಂಡಿಸಿ ತಾಲೂಕು ಕಚೇರಿ ಮುಂಭಾಗದಲ್ಲೊ ನೂರಾರು ರೈತರು ಜಮಯಿಸಿ ಪ್ರತಿಭಟನೆ ನಡೆಸಿದ ಘಟನೆ ಇತ್ತೀಚೆಗಷ್ಟೆ ನಡೆದಿತ್ತು. ಅಲ್ಲದೆ, ಏಕಾಏಕಿ ಕಡಿಮೆ ಮಾಡಿರುವ ಹಾಲಿನ ದರವನ್ನು ಕೂಡಲೇ ಏರಿಸುವಂತೆ ರೈತರು ಆಗ್ರಹಿಸಿದ್ದರು.

ಈ ಸಂದರ್ಭದಲ್ಲಿ ಚಾಮರಾಜನಗರ ಜಿಲ್ಲಾ ರೈತ ಸಂಘದ ಅಧ್ಯಕ್ಷ ಹೊನ್ನೂರು ಬಸವಣ್ಣ ಮಾತನಾಡಿ ಚಾಮುಲ್ ಏಕಾಏಕಿ ಹಾಲಿನ ದರ ಏರಿಕೆ ಮಾಡಿ ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿದ್ದಾರೆ. ಇಲ್ಲಿನ ಅಧಿಕಾರಿ ವರ್ಗ ಹಾಗೂ ನಿರ್ದೇಶಕರ ವೈಫಲ್ಯದಿಂದ ರೈತರ ಹಾಲಿನ ದರ ಕಡಿಮೆ ಮಾಡಿರುವುದು ಎಷ್ಟು ಸರಿ. ಬೇರೆ ಜಿಲ್ಲೆಯಲ್ಲಿ ಒಂದು ದರ ನಮ್ಮ ಜಿಲ್ಲೆಯಲ್ಲಿ ಒಂದು ದರ ಒಕ್ಕೂಟದ ವತಿಯಿಂದ ತಾರತಮ್ಯದ ನೀತಿ ಎಂದು ಕಟುವಾಗಿ ಟೀಕಿಸಿದ್ದಾರೆ.

ಹಾಲು ಒಕ್ಕೂಟದಲ್ಲಿ ಉತ್ಪಾದನೆ ಮಾಡಿದ ಉತ್ಪಾನ್ನಗಳಿಗೆ ಒಂದು ನಿಗದಿ ಮಾಡಿರುವ ಒಕ್ಕೂಟ, ರೈತರ ಹಾಲಿನ ದರ ಏಕಾಏಕಿ ಕಡಿತ ಮಾಡಿರುವುದು ಖಂಡನೀಯ ಎಂದರು. ಅಲ್ಲದೇ ರೈತರ ಹಿತ ದೃಷ್ಟಿಯಿಂದ ಕಡಿತ ಮಾಡಿರುವ 1 ರೂ ದರವನ್ನು ಮತ್ತೆ ಸೇರಿಸಬೇಕು ಎಂದು ಹಾಲು ಒಕ್ಕೂಟದ ಅಧ್ಯಕ್ಷರಿಗೆ ಮನವಿ ಮಾಡಿದ್ದಾರೆ.

ಬಳಿಕ ಚಾಮುಲ್ ಅಧ್ಯಕ್ಷ ವೈ ಸಿ ನಾಗೇಂದ್ರ ಮಾತನಾಡಿ. ಹಾಲು ಒಕ್ಕೂಟದ ಹಿತದೃಷ್ಟಿಯಿಂದ ರೈತರ ಹಾಲಿನ ದರದಲ್ಲಿ ಒಂದು ರೂಪಾಯಿ ಕಡಿತ ಮಾಡಬೇಕಾಗಿದೆ ವಿನಃ, ಯಾವುದೇ ದುರುದ್ದೇಶ ಇಲ್ಲ. ಈಗಾಗಲೇ ನಮ್ಮ ಹಾಲು ಒಕ್ಕೂಟ ನಷ್ಟದಲ್ಲಿದ್ದು, ಮುಂಬರುವ ದಿನಗಲ್ಲಿ ಈ ದರವನ್ನು ಪರಿಷ್ಕರಣೆ ಮಾಡಿ ರೈತರಿಗೆ ಸೂಕ್ತ ದರ ನೀಡಲಾಗುವುದು. ರೈತರ ಸಹಕಾರ ನಮ್ಮ ಹಾಲು ಒಕ್ಕೂಟಕ್ಕೆ ಅತ್ಯಗತ್ಯ ಎಂದು ಹೇಳಿದ್ದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+