ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಂತೇಮರಳ್ಳಿ ಸರ್ಕಲ್ ನಲ್ಲಿ ಅಡ್ಡಾದಿಡ್ಡಿ ಚಲಿಸಿದ ಬಸ್

By ಚಾಮರಾಜನಗರ ಪ್ರತಿನಿಧಿ
|
Google Oneindia Kannada News

ಚಾಮರಾಜನಗರ, ಅಕ್ಟೋಬರ್ 10 : ಬ್ರೇಕ್ ವಿಫಲಗೊಂಡ ಸಾರಿಗೆ ಬಸ್ ಅಡ್ಡಾದಿಡ್ಡಿ ಚಲಿಸಿ, ಬೈಕ್ ಸೇರಿದಂತೆ ವಾಹನಗಳಿಗೆ ಡಿಕ್ಕಿ ಹೊಡೆದ ಘಟನೆ ಸಂತೇಮರಹಳ್ಳಿಯಲ್ಲಿ ನಡೆದಿದೆ. ಘಟನೆಯಲ್ಲಿ ನಾಲ್ವರು ಗಾಯಗೊಂಡಿದ್ದು, ಹಲವು ಬೈಕ್ ಗಳು ಜಖಂಗೊಂಡಿವೆ.

ಟ್ಯಾಂಕರ್ ಮಗುಚಿ ಲಕ್ಷಾಂತರ ರುಪಾಯಿಯ ಹಾಲು ಬಾಳೆ ತೋಟದ ಪಾಲುಟ್ಯಾಂಕರ್ ಮಗುಚಿ ಲಕ್ಷಾಂತರ ರುಪಾಯಿಯ ಹಾಲು ಬಾಳೆ ತೋಟದ ಪಾಲು

ಈ ಘಟನೆ ಸೋಮವಾರ ನಡೆದಿದ್ದು, ಘಟನೆಯ ದೃಶ್ಯಾವಳಿ ಸಿಸಿಟಿವಿಯಲ್ಲಿ ದಾಖಲಾಗಿದೆ. ಸಂತೇಮರಹಳ್ಳಿಯ ಬಸ್ ನಿಲ್ದಾಣ ಬಳಿಯ ವೃತ್ತದಲ್ಲಿ ನಡೆದ ಈ ಘಟನೆ ಜನರಲ್ಲಿ ಭಯವನ್ನುಂಟು ಮಾಡಿತ್ತು.

Government bus break failure in Santhemarahalli circle

ಸಾರಿಗೆ ಬಸ್ (ಕೆಎ 09 ಎಫ್ 3759) ಸಂತೇಮರಹಳ್ಳಿಯ ವೃತ್ತದಲ್ಲಿ ಕೊಳ್ಳೇಗಾಲ ಮಾರ್ಗಕ್ಕೆ ತಿರುಗುವ ವೇಳೆ ಬ್ರೇಕ್ ವಿಫಲಗೊಂಡು ಬಸ್ ಚಾಲಕನ ನಿಯಂತ್ರಣ ತಪ್ಪಿದೆ. ಈ ವೇಳೆ ನಿಯಂತ್ರಣಕ್ಕೆ ತರಲು ಪ್ರಯತ್ನಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ.

ಗುಂಡ್ಲುಪೇಟೆ: ಸಮಯಪ್ರಜ್ಞೆಯಿಂದ 70 ಮಂದಿ ಜೀವ ಉಳಿಸಿದ ಕೆಎಸ್ಸಾರ್ಟಿಸಿ ಚಾಲಕಗುಂಡ್ಲುಪೇಟೆ: ಸಮಯಪ್ರಜ್ಞೆಯಿಂದ 70 ಮಂದಿ ಜೀವ ಉಳಿಸಿದ ಕೆಎಸ್ಸಾರ್ಟಿಸಿ ಚಾಲಕ

ಹೀಗಾಗಿ ಬಸ್ ಅಡ್ಡಾದಿಡ್ಡಿ ಚಲಿಸಿದ್ದು, ಪರಿಣಾಮ ರಸ್ತೆಯಲ್ಲಿ ಎದುರಿಗೆ ಸಿಕ್ಕ ಬೈಕ್ ಸವಾರರಿಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಸವಾರ ನೆಲಕ್ಕುರುಳಿದ್ದಾನೆ. ಬಳಿಕ ಮುಂದೆ ತೆರಳಿ ದಂಪತಿ ಸಾಗುತ್ತಿದ್ದ ಬೈಕ್ ಗೆ ಡಿಕ್ಕಿ ಹೊಡೆದಿದೆ. ಇದನ್ನು ಕಂಡು ಕೆಲವರು ಸ್ಥಳದಿಂದ ಓಡಿ, ಜೀವ ಉಳಿಸಿಕೊಂಡಿದ್ದಾರೆ.

Government bus break failure in Santhemarahalli circle

ಬಸ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಗಳು ಜಖಂಗೊಂಡಿವೆ. ಬೈಕ್ ಸವಾರರು ಗಂಭೀರವಾಗಿ ಗಾಯಗೊಂಡಿದ್ದು, ಚಾಮರಾಜನಗರದ ನಿವಾಸಿಯಾದ ಮಹದೇವಶೆಟ್ಟಿ, ಶಿವಮಲ್ಲು ಮತ್ತು ಪದ್ಮಿನಿ ದಂಪತಿ, ಯರಯೂರಿನ ನಿವಾಸಿಯೊಬ್ಬರು ಸೇರಿದಂತೆ ನಾಲ್ವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಬಸ್ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

English summary
Karnataka government bus break failure in Santhemarahalli circle, Chamarajanagar on Monday. After that bus hits many bikes and complaint registered against driver.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X