ಚಾಮರಾಜನಗರದೆಲ್ಲೆಡೆ ಮಂಜು ಮುಸುಕಿದ ವಾತಾವರಣ, ಚುಮುಚುಮು ಚಳಿ ನಡುವೆ ಪ್ರಯಾಣ
ಚಾಮರಾಜನಗರ, ನವೆಂಬರ್, 29: ಅಚ್ಚಹಸಿರಿನಿಂದ ಕಂಗೊಳಿಸುವ ಗಡಿಜಿಲ್ಲೆ ಚಾಮರಾಜನಗರದಲ್ಲಿ ಇದೀಗ ಎಲ್ಲಿ ನೋಡಿದರೂ ಮಂಜಿನ ಮಯವಾಗಿದೆ. ವಾಹನ ಸವಾರರಿಗೆ ಸ್ವಲ್ಪ ಮಟ್ಟಿಗೆ ತೊಂದರೆ ಆದರೂ ಕೂಡ ಈ ಮಂಜಿನ ದೃಶ್ಯವನ್ನು ನೋಡಲು ಮನಮೋಹಕವಾಗಿರುತ್ತದೆ. ಜಿಲ್ಲಾದ್ಯಂತ ಚುಮುಚುಮು ಚಳಿ ಹೆಚ್ಚಾಗಿದ್ದು, ಬೆಳಗ್ಗೆ 8ರಿಂದ 9 ಆದರೂ ಮಂಜು ಮುಸುಕಿದ ವಾತಾವರಣ ಇದ್ದೇ ಇರುತ್ತದೆ.
ಈ ಮಂಜಿನ ದೃಶ್ಯವನ್ನು ಸವಿಯಲು ಬೆಳಗಿನ ಜಾವ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುವುದನ್ನೂ ನೋಡಬಹುದಾಗಿದೆ. ಚಾಮರಾಜನಗರ ಜಿಲ್ಲೆಯಲ್ಲಿ ಮುಂಜಾನೆ ಮಂಜಿನ ಸೊಬಗು ಮೇಳೈಸಿದೆ. ಬೆಳಗ್ಗೆ 9 ಗಂಟೆಯಾದರೂ ದಟ್ಟನೆಯ ಮಂಜು ಆವರಿಸಿದ್ದು, ಈ ಸಂದರ್ಭದಲ್ಲಿ ಚಳಿಯ ಕಚಗುಳಿ ವಾತಾವರಣ ನಿರ್ಮಾಣವಾಗಿತ್ತು. ಇನ್ನು ಅರಣ್ಯ ಪ್ರದೇಶದಲ್ಲಂತೂ ಸ್ವರ್ಗವೇ ಧರೆಗಿಳಿದಂತೆ ಪ್ರಕೃತಿಯ ಚೆಲುವು ಕಂಗೊಳಿಸುತ್ತಿದೆ.
ಅಪಾಯವಿದ್ದರೂ ಶಿವನಸಮುದ್ರದ ವೆಸ್ಲಿ ಸೇತುವೆ ಬಳಿ ಪ್ರವಾಗರ ದಂಡು; ಪೊಲೀಸರು ಮೌನ
ಎಲ್ಲಾ
ಕಡೆ
ಆವರಿಸಿದ
ಮಂಜು
ಜಿಲ್ಲೆಯ
ಪುರಾಣ
ಪ್ರಸಿದ್ಧ
ಕ್ಷೇತ್ರವಾದ
ಯಳಂದೂರು
ತಾಲೂಕಿನ
ಬಿಳಿಗಿರಿರಂಗನ
ಬೆಟ್ಟ
ಹಾಗೂ
ಗುಂಡ್ಲುಪೇಟೆ
ತಾಲೂಕಿನ
ಹಿಮವದ್
ಗೋಪಾಲಸ್ವಾಮಿ
ಸ್ವಾಮಿ
ಬೆಟ್ಟದಲ್ಲಂತೂ
ಹಸಿರಿಗೆ
ಮಂಜಿನ
ಹೊದಿಕೆ
ಹೊದ್ದಂತೆ
ಭಾಸವಾಗುತ್ತದೆ.
ಬೆಳಗ್ಗೆ
9
ಗಂಟೆ
ಆದರೂ
ಮಂಜು
ಮುಸುಕಿದ
ವಾತಾವರಣ
ಹಾಗೆಯೇ
ಇದ್ದು,
ವಾಹನ
ಸವಾರರು
ಲೈಟ್ಗಳನ್ನು
ಹಾಕಿಕೊಂಡೇ
ವಾಹನಗಳನ್ನು
ಚಲಾಯಿಸುವಂತಹ
ಪರಿಸ್ಥಿತಿ
ನಿರ್ಮಾಣವಾಗಿತ್ತು.
ಈ
ವರ್ಷದಲ್ಲಿ
ಇದೇ
ಮೊದಲ
ಬಾರಿಗೆ
ಇಷ್ಟು
ದಟ್ಟನೆಯ
ಮುಂಜಾನೆ
ಮಂಜಿನ
ಅನುಭವವನ್ನು
ಜನರು
ಹಾಗೂ
ಪ್ರವಾಸಿಗರು
ಪಡೆಯುತ್ತಿದ್ದಾರೆ.
ಜಿಲ್ಲೆಗೆ
ಆಗಮಿಸಿರುವ
ಪ್ರವಾಸಿಗರ
ಮನಸಿಗೆ
ಮಂಜು
ಹಾಗೂ
ಹಸಿರು
ಮತ್ತಷ್ಟು
ಇಂಪು
ನೀಡಿದೆ.
ಹಿಮವದ್
ಗೋಪಾಲಸ್ವಾಮಿ
ಬೆಟ್ಟದ
ವಿಶೇಷ
ಇನ್ನು
ಹಿಮವದ್
ಗೋಪಾಲಸ್ವಾಮಿ
ಬೆಟ್ಟವು
ಬಂಡೀಪುರ
ರಾಷ್ಟ್ರೀಯ
ಉದ್ಯಾನದ
ಅತಿ
ಎತ್ತರದ
ಶಿಖರವಾಗಿದೆ.
ಮೈಸೂರು
ಜಿಲ್ಲೆಯ
ಗುಂಡ್ಲುಪೇಟೆ
ಬಳಿ
ಇರುವ
ಹಿಮವದ್
ಗೋಪಾಲಸ್ವಾಮಿ
ಬೆಟ್ಟವು
ವೇಣುಗೋಪಾಲಸ್ವಾಮಿ
ದೇವಾಲಯ
ಮತ್ತು
ಹಚ್ಚ
ಹಸಿರಿನಿಂದ
ಕೂಡಿದ
ನೈಸರ್ಗಿಕ
ಪರಿಸರದಿಂದಾಗಿ
ಪ್ರವಾಸಿಗರನ್ನು
ತನ್ನತ್ತ
ಆಕರ್ಷಿಸುತ್ತಲೇ
ಇದೆ.
14ನೇ
ಶತಮಾನದಲ್ಲಿ
ಅಗಸ್ತ್ಯ
ಋಷಿ
ನಿರ್ಮಿಸಿದ
ವೇಣುಗೋಪಾಲಸ್ವಾಮಿ
ದೇವಸ್ಥಾನದಲ್ಲಿ
ಭಗವಾನ್
ಕೃಷ್ಣ
ನೃತ್ಯದ
ಭಂಗಿಯಲ್ಲಿ
ನಿಂತು
ತನ್ನ
ಕೈಯಲ್ಲಿ
ಕೊಳಲು
ನುಡಿಸುವ
ವಿಗ್ರಹ
ಇದೆ.
ವಿಗ್ರಹದ
ಹಿಂದಿನ
ಫಲಕವು
ಕೃಷ್ಣನ
ಪತ್ನಿಯರಾದ
ಸತ್ಯಭಾಮ,
ರುಕ್ಮಿಣಿ
ಮತ್ತು
ನೆಚ್ಚಿನ
ಪ್ರಾಣಿಯಾದ
ಹಸು
ಮತ್ತು
ಗೋಪಾಲಕರ
ಕೆತ್ತನೆಗಳನ್ನು
ಒಳಗೊಂಡಿದೆ.
ಪ್ರವಾಸಿಗರಿಗೆ
ತಂಗಲು
ವಸತಿ
ವಿವರ
ವೇಣುಗೋಪಾಲಸ್ವಾಮಿ
ದೇವಾಲಯದ
ಸುತ್ತಲಿನ
ಪ್ರದೇಶವು
ಅಚ್ಚ
ಹಸಿರಿನಿಂದ
ಕೂಡಿದ್ದು,
ಇದು
ಪ್ರವಾಸಿಗರಿಗೆ
ನೆಚ್ಚಿನ
ತಾಣವಾಗಿದೆ.
ಈ
ಮನಮೋಹಕ
ದೃಶ್ಯವನ್ನು
ಸವಿಯಲು
ಪ್ರತಿನಿತ್ಯ
ಪ್ರವಾಸಿಗರು
ಕಿಕ್ಕಿರಿದು
ಬರುತ್ತಲೇ
ಇರುತ್ತಾರೆ.
ಇಲ್ಲಿನ
ಹಿಮವದ್
ಗೋಪಾಲಸ್ವಾಮಿ
ಬೆಟ್ಟ
ಬೆಂಗಳೂರಿನಿಂದ
219
ಕಿಲೋ
ಮೀಟರ್
ಮತ್ತು
ಮೈಸೂರಿನಿಂದ
80
ಕಿಲೋ
ಮೀಟರ್
ದೂರದಲ್ಲಿದೆ.
ಬೆಟ್ಟದಿಂದ
20
ಕಿಲೋ
ಮೀಟರ್
ದೂರದಲ್ಲಿರುವ
ಗುಂಡ್ಲುಪೆಟೆ
ಪಟ್ಟಣದಲ್ಲಿ
ಉಳಿಯಲು
ವಸತಿ
ಗೃಹಗಳಿವೆ.
ಹಾಗೆಯೇ
ಜಂಗಲ್
ಲಾಡ್ಜಸ್
ಮತ್ತು
ರೆಸಾರ್ಟ್
ನಡೆಸುವ
ಬಂಡೀಪುರ
ಸಫಾರಿ
ಲಾಡ್ಜ್
ಗೋಪಾಲಸ್ವಾಮಿ
ಬೆಟ್ಟದಿಂದ
16
ಕಿಲೋ
ಮೀಟರ್
ದೂರದಲ್ಲಿದೆ
.
ಈ
ಪ್ರದೇಶದಲ್ಲಿ
ಹಲವು
ಹೋಂ
ಸ್ಟೇಗಳು
ಮತ್ತು
ರೆಸಾರ್ಟ್ಗಳು
ಲಭ್ಯವಿದೆ.
ಮೈಸೂರು
ನಗರದಲ್ಲಿ
ಹೆಚ್ಚಿನ
ವಾಸ್ತವ್ಯದ
ಆಯ್ಕೆಗಳು
ಲಭ್ಯವಿದೆ
ಎನ್ನುವ
ಮಾಹಿತಿಯನ್ನು
ಪ್ರವಾಸಿಗರಿಗೆ
ನೀಡಲಾಗಿದೆ.