3 ದಿನಗಳ ಕಾಲ ಮಲೆ ಮಹದೇಶ್ವರ ಬೆಟ್ಟಕ್ಕೆ ಭಕ್ತರ ಪ್ರವೇಶ ನಿಷೇಧ
ಚಾಮರಾಜನಗರ, ಜನವರಿ 7: ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕು ಪ್ರಕರಣಗಳ ಏರಿಕೆಯನ್ನು ನಿಯಂತ್ರಿಸಲು ಸರ್ಕಾರ ವಾರಾಂತ್ಯ ಕರ್ಫ್ಯೂ ಜಾರಿಗೊಳಿಸಿದೆ. ಈ ಹಿನ್ನಲೆ ಚಾಮರಾಜನಗರ ಜಿಲ್ಲೆಯ ಇತಿಹಾಸ ಪ್ರಸಿದ್ಧ ಮಲೆ ಮಹದೇಶ್ವರ ಬೆಟ್ಟಕ್ಕೆ ಜ.7ರ ಸಂಜೆ 5 ಗಂಟೆಯಿಂದ ಜ.10 ರ ಬೆಳಗ್ಗೆ 7 ಗಂಟೆಯವರೆಗೆ ಭಕ್ತರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ. ಇದಲ್ಲದೆ ಶುಕ್ರವಾರ, ಶನಿವಾರ ಭಾನುವಾರ ಮೂರು ದಿನ ಭಕ್ತರ ವಾಸ್ತವ್ಯಕ್ಕೂ ನಿಷೇಧ ಹೇರಲಾಗಿದೆ.
ಉಳಿದ ದಿನಗಳಲ್ಲಿ ಜನವರಿ 19 ರವರೆಗೆ ದರ್ಶನಕ್ಕೆ ಮಾತ್ರ ಅವಕಾಶ ಇರಲಿದ್ದು, ಚಿನ್ನದತೇರು, ಬಸವ ವಾಹನ, ರುದ್ರಾಕ್ಷಿ ಮಂಟಪೋತ್ಸವ ಸೇರಿದಂತೆ ಎಲ್ಲಾ ಉತ್ಸವ ಹಾಗೂ ಸೇವೆಗಳನ್ನು ಮುಂದಿನ ಆದೇಶದವರೆಗೆ ರದ್ದುಪಡಿಸಲಾಗಿದೆ. ಲಾಡು ಪ್ರಸಾದ ಸಹ ಇರುವುದಿಲ್ಲ ಎಂದು ಮಹದೇಶ್ವರ ಬೆಟ್ಟ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಜಯ ವಿಭವಸ್ವಾಮಿ ತಿಳಿಸಿದ್ದಾರೆ.
ಸಾಂಪ್ರದಾಯಿಕ ಹಾಗೂ ದೈನಂದಿನ ಪೂಜಾ ವಿಧಿವಿಧಾನಗಳು ಎಂದಿನಂತೆ ನಡೆಯಲಿದ್ದು, ವಾರಾಂತ್ಯದಲ್ಲಿ ಭಕ್ತರಿಗೆ ಅವಕಾಶ ಇರುವುದಿಲ್ಲ. ಉಳಿದ ದಿನಗಳಲ್ಲಿ ದೇವರ ದರ್ಶನಕ್ಕೆ ಮಾತ್ರ ಅವಕಾಶ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಚಿಕ್ಕಲ್ಲೂರು
ಜಾತ್ರೆ
ರದ್ದು
ರಾಜ್ಯದಲ್ಲಿ
ಕೊರೊನಾ
ಸೋಂಕು
ವ್ಯಾಪಕವಾಗಿ
ಹರಡುತ್ತಿರುವ
ಹಿನ್ನಲೆಯಲ್ಲಿ
ಮುಂಜಾಗ್ರತಾ
ಕ್ರಮವಾಗಿ
ಈ
ಬಾರಿಯೂ
ಪ್ರಸಿದ್ಧ
ಹನೂರು
ತಾಲೂಕಿನ
ಪ್ರಸಿದ್ದ
ಚಿಕ್ಕಲ್ಲೂರು
ಜಾತ್ರೆ
ರದ್ದುಗೊಳಿಸಲಾಗಿದೆ.
ಈ
ವರ್ಷ
ಚಿಕ್ಕಲ್ಲೂರು
ಸಿದ್ದಾಪ್ಪಾಜಿ
ಜಾತ್ರೆ
ಜ.17ರಿಂದ
21
ರವರೆಗೆ
ನಿಗದಿಯಾಗಿತ್ತು.
ಕೊರೊನಾ
ಸೋಂಕು
ತಡೆಗಟ್ಟಲು
ಸರ್ಕಾರ
ಹೊರಡಿಸುರುವ
ಮಾರ್ಗಸೂಚಿ
ಅನ್ವಯ
ಜಾತ್ರೆಗೆ
ನಿರ್ಬಂಧ
ಹೇರಲಾಗಿದೆ.
ಜ.17ರಿಂದ 21ರವರೆಗೆ ಐದು ದಿನಗಳ ಚಿಕ್ಕಲ್ಲೂರು ಸಿದ್ದಪ್ಪಾಜಿ ಜಾತ್ರೆಗೆ ಜಿಲ್ಲಾಡಳಿತದಿಂದ ಅನುಮತಿ ನೀಡಬೇಕಿತ್ತು. ಜಾತ್ರೆಯನ್ನು ಸುಸೂತ್ರವಾಗಿ ನಡೆಸಲು ಎಲ್ಲಾ ರೀತಿಯ ಸಹಕಾರ ನೀಡಬೇಕು ಎಂದು ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕು ಬಿ.ಜಿ. ಪುರದ ಮಂಟೇಸ್ಚಾಮಿ ಮಠದಿಂದ ಚಾಮರಾಜನಗರ ಜಿಲ್ಲಾಧಿಕಾರಿಗೆ ಪತ್ರ ಬರೆದು ಮನವಿ ಮಾಡಲಾಗಿತ್ತು.
ಕಳೆದ
ವರ್ಷವೂ
ರದ್ದಾಗಿದ್ದ
ಜಾತ್ರೆ
ಜನವರಿಯಲ್ಲಿ
ನಡೆಯುವ
5
ದಿನಗಳ
ಚಿಕ್ಕಲ್ಲೂರು
ಸಿದ್ದಪ್ಪಾಜಿ
ಜಾತ್ರೆಗೆ
ಚಾಮರಾಜನಗರ,
ಮೈಸೂರು,
ಮಂಡ್ಯ,
ರಾಮನಗರ,
ಬೆಂಗಳೂರು
ಸೇರಿದಂತೆ
ಬೇರೆ
ಬೇರೆ
ಜಿಲ್ಲೆಗಳಿಂದ
ಲಕ್ಷಾಂತರ
ಮಂದಿ
ಭಕ್ತರು
ಆಗಮಿಸಿ
ಇಲ್ಲಿಯೇ
ಬಿಡಾರ
ಹೂಡಿ
ಹರಕೆ
ತೀರಿಸುತ್ತಿದ್ದರು.
Recommended Video
ಸೂರ್ಯಮಂಡಲ, ಪಂಕ್ತಿಸೇವೆ ಮೊದಲಾದ ಪೂಜೆ ಪುರಸ್ಕಾರಗಳಲ್ಲಿ ಭಾಗವಹಿಸುತ್ತಿದ್ದರು. ಕಳೆದ ವರ್ಷವೂ ಸಹ ಕೋವಿಡ್- 19 ಹಿನ್ನೆಲೆಯಲ್ಲಿ ಜಾತ್ರೆ ನಿಷೇಧಿಸಲಾಗಿತ್ತು. 100 ಜನರ ಮಿತಿಯಲ್ಲಿ ಸಾಂಪ್ರದಾಯಿಕ ಪೂಜಾ ವಿಧಿವಿಧಾನಗಳನ್ನು ನಡೆಸಲಿ ಚಾಮರಾಜನಗರ ಜಿಲ್ಲಾಡಳಿತ ಅನುಮತಿ ನೀಡಿತ್ತು.