ಗುಂಡ್ಲುಪೇಟೆ ಬಳಿ ಅಪರೂಪದ ಕರಿ ಚಿರತೆ ಸಾವು
ಚಾಮರಾಜನಗರ, ಫೆಬ್ರವರಿ 15: ಬಂಡೀಪುರ ಅಭಯಾರಣ್ಯದಲ್ಲಿ ಒಂದಲ್ಲ ಒಂದು ವನ್ಯ ಪ್ರಾಣಿ ಸಾವನ್ನಪ್ಪುತ್ತಲೇ ಇರುತ್ತವೆ. ಇದುವರೆಗೂ ಇಲ್ಲಿ ಕಾಡಾನೆ, ಹುಲಿಗಳು ಸಾವನ್ನಪ್ಪಿದ್ದು ಕಂಡುಬಂದಿದ್ದವು. ಚಿರತೆಗಳೂ ಸಾವನ್ನಪ್ಪಿದ ಉದಾಹರಣೆಗಳು ದೊರೆತಿವೆ. ಇದೀಗ ಅಪರೂಪದ ಕರಿಚಿರತೆಯೊಂದು ಗುಂಡ್ಲುಪೇಟೆ ಸಮೀಪ ಸಾವನ್ನಪ್ಪಿದೆ.
ಈ ಹೆಣ್ಣು ಕರಿ ಚಿರತೆ ಸುಮಾರು ಮೂರು ವರ್ಷ ಪ್ರಾಯದ್ದಿರಬಹುದು ಎಂದು ಅಂದಾಜಿಸಲಾಗಿದೆ. ಕರಿ ಚಿರತೆಯ ಮೃತದೇಹ ಇಲ್ಲಿಗೆ ಸಮೀಪದ ತಮಿಳುನಾಡಿನ ಊಟಿ ವ್ಯಾಪ್ತಿಯ ಕೋತಗಿರಿ ಅರಣ್ಯ ಪ್ರದೇಶದಲ್ಲಿ ಪತ್ತೆಯಾಗಿದೆ. ಬಹುಶಃ ಈ ಚಿರತೆ ಮತ್ತೊಂದು ಪ್ರಾಣಿಯೊಂದಿಗೆ ಕಾದಾಡಿ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ.
ಶಿವಮೊಗ್ಗದಲ್ಲಿ ರೈಲಿಗೆ ಸಿಲುಕಿ ಚಿರತೆ ಸಾವು
ಎರಡು ಚಿರತೆಗಳು ಕಾದಾಡಿದ್ದರಿಂದ ಒಂದು ಕರಿ ಚಿರತೆ ಸಾವನ್ನಪ್ಪಿರಬಹುದು ಎನ್ನಲಾಗಿದೆ.
Comments
English summary
Till now, the death of elephants and tiger, leopard reported near bandipura forest area. Yesterday, Rare balck Panther dies near gundlupete in chamarajanagar,