ಬಂಡೀಪುರದ ಕೆರೆಯಲ್ಲಿ ಕಾಡಾನೆಗಳ ಚೆಂದದ ಗುದ್ದಾಟ! ಸಫಾರಿ ಗ್ಯಾಂಗ್ ಫುಲ್ ಖುಷ್
ಚಾಮರಾಜನಗರ, ಅಕ್ಟೋಬರ್ 29: ಕಾಡಂಚಿನ ಗ್ರಾಮದಲ್ಲಿ ಕಾಡಾನೆ ಹಾವಳಿ, ಸಫಾರಿ ವೇಳೆ ಅಲ್ಲೊಂದು ಇಲ್ಲೊಂದು ಆನೆಗಳು ರಸ್ತೆಗೆ ಬರುವುದು ನೋಡಿರುತ್ತೀರಾ. ಆದರೆ ಈ ಬಾರಿ ಬಂಡೀಪುರ ಅರಣ್ಯ ಪ್ರದೇಶದಲ್ಲಿ ಸಫಾರಿಗೆ ಹೋದವರಿಗೆ ಆನೆಗಳ ಕಾಳಗ ದರ್ಶನವಾಗಿದೆ. ಅದು ನೀರಿನಲ್ಲಿ ಕಾಡನೆಗಳ ಗುದ್ದಾಟ ಕಂಡು ಬಂದಿರುವುದು ಅಪರೂಪ ಎನ್ನಲಾಗುತ್ತದೆ.
ಜನಪ್ರಿಯ ಹುಲಿ ರಕ್ಷಿತಾರಣ್ಯಗಳಲ್ಲಿ ಒಂದಾದ ಗುಂಡ್ಲುಪೇಟೆ ತಾಲೂಕಿನ ಬಂಡೀಪುರದಲ್ಲಿ ಎಂದಿನಂತೆ ಪ್ರವಾಸಿಗರು ಆಗಮಿಸಿದ್ದರು. ಸಫಾರಿ ವಾಹನದಲ್ಲಿ ತೆರಳಿದ್ದರು. ಈ ವೇಳೆ ಅರಣ್ಯದೊಳಗಿದ್ದ ಕೆರೆಯಲ್ಲಿ ಕಾಡಾನೆಗಳು ಪ್ರತ್ಯಕ್ಷವಾಗಿದೆ. ಅವುಗಳು ಮೈ ಉಜ್ಜಿಕೊಂಡಂತೆ ಒಂದಕ್ಕೊಂದು ಗುದ್ದಾಡಿಕೊಂಡಿದ್ದು ನೋಡಿ ಸಫಾರಿಗೆ ತೆರಳಿದ್ದವರು ಫುಲ್ ಖುಷ್ ಆಗಿದ್ದಾರೆ.

ಹಸಿರ ಕಾನನ ಮಧ್ಯೆ ನೀರಲ್ಲಿ ಆನೆಗಳ ಕಾದಾಟ
ನಿರಂತರ ಮಳೆಗೆ ಬಂಡೀಪುರ ಅರಣ್ಯದಲ್ಲಿ ಕೆರೆಗಳು ತುಂಬಿಕೊಂಡಿವೆ. ಹಚ್ಚ ಹಸಿರು ನಳ ನಳಿಸುತ್ತಿದೆ. ನೀರಿಗಿಳಿದ ಎರಡು ಮದಗಜಗಳು ಗುದ್ದಾಡಿಕೊಂಡಿವೆ. ಬಂಡೀಪುರದ ಸಫಾರಿಗೆ ತೆರಳಿದವರು ತುಂಬಾ ಹತ್ತಿರದಲ್ಲಿಯ ರೋಮಾಂಚಕ ಫೈಟ್ ನೋಡಿ ಫಿದಾ ಆಗಿದ್ದಾರೆ. ಹೀಗೆ ಆನೆಗಳು ನೀರಿಗಿಳಿದಾಗ ಕಾಣಸಿಗುವುದು ಅಪರೂಪ ಎನ್ನಲಾಗಿದೆ.
ಬಂಡೀಪುರದ ಸಫಾರಿಯಲ್ಲಿ ಸರ್ವೇ ಸಾಮಾನ್ಯವಾಗಿ ಆನೆಗಳ ಹಿಂಡು ಪ್ರವಾಸಿಗರಿಗೆ ದರ್ಶನ ಕೊಡುತ್ತವೆ. ಆದರೆ, ಆನೆಗಳ ಕಾದಾಟ ನೋಡಲು ಸಿಗುವುದು ಬಹಳ ಅಪರೂಪ. ಅಂತಹದರಲ್ಲಿ ಕೆರೆ ನೀರಿನಲ್ಲಿ ಗುದ್ದಾಡಿಕೊಂಡ ಆನೆಗಳನ್ನು ಕಂಡ ಸಫಾರಿಗರು ಸಂತಸಗೊಂಡಿದ್ದು, ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ವಿಡಿಯೋ ಮಾಡಿಕೊಂಡಿದ್ದಾರೆ.
ಕೆಲವರು ಸಫಾರಿಯ ವೇಳೆ ತಮಗಾದ ಸಂತಸದ ಅನುಭವವನ್ನು, ಕಾಡಾಣೆಗಳ ಗಜಗಳ ಕಾದಾಟ ಫೋಟೋ, ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಹೊಗೆನಕಲ್: ಕಾವೇರಿ ನದಿಯಲ್ಲಿ ತೆಪ್ಪ ಓಡಿಸಲು ತಮಿಳುನಾಡು ಖ್ಯಾತೆ
ಹೊಗೆನಕಲ್ ಜಲಪಾತ ವೀಕ್ಷಣೆಗೆ ಪ್ರವಾಸಿಗರನ್ನು ಸೋಮವಾರ ಕರೆದುಕೊಂಡು ಹೋಗಿದ್ದಾಗ ತಮಿಳುನಾಡು ಪೊಲೀಸರು ತೆಪ್ಪ ಒಡಿಸುವವರಿಂದ ಮೊಬೈಲ್ ಹಾಗೂ ಹುಟ್ಟು ಕಿತ್ತುಕೊಂಡು ತೆಪ್ಪ ಓಡಿಸಲು ಖ್ಯಾತೆ ತೆಗೆದಿದ್ದರು. ಈ ಹಿನ್ನೆಲೆ ತೆಪ್ಪ ಒಡಿಸುವವರಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿ ಸೋಮವಾರ ಮಧ್ಯಾಹದಿಂದಲೇ ಕರ್ನಾಟಕದ ತೆಪ್ಪ ಓಡಿಸುವವರು ತೆಪ್ಪ ಸಂಚಾರ ಸ್ಥಗಿತಗೊಳಿಸಿ ಆಕ್ರೋಶ ಹೊರಹಾಕಿದ್ದರು.
ಇದರ ಬೆನ್ನಲ್ಲೆ ತಮಿಳುನಾಡು ಕರ್ನಾಟಕ ಉಭಯ ರಾಜ್ಯಗಳ ಅಧಿಕಾರಿಗಳ ಸಂಧಾನದಿಂದ ಕರ್ನಾಟಕ ಭಾಗದಲ್ಲಿ ಮತ್ತೆ ತೆಪ್ಪ ನಡೆಸಲು ರಾಜಿ ಸಂಧಾನ ಮಾತುಕತೆ ಯಶಸ್ವಿಯಾದ ಹಿನ್ನೆಲೆ ವಿವಾದಕ್ಕೆ ತೆರೆ ಬಿದ್ದಿದೆ.
ಕಾವೇರಿ ನದಿ ನೀರು, ಮೇಕೆದಾಟು, ಎರಡನೇ ವಿಮಾನ ನಿಲ್ದಾಣ ಆಯ್ತು ಇದೀಗ ತಮಿಳುನಾಡು ಗಡಿಯಲ್ಲಿ ಕಾವೇರಿ ನದಿ ನೀರಿನಲ್ಲಿ ತೆಪ್ಪದಲ್ಲಿ ಪ್ರವಾಸಿಗರನ್ನು ಕರೆದುಕೊಂಡು ಹೋಗಲು, ಬರುವುದಕ್ಕೆ ತಮಿಳುನಾಡು ತಕರಾರು ತೆಗೆದಿದ್ದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಸದ್ಯ ಎಲ್ಲ ಗೊಂದಲ, ವಿವಾದವು ಸುಖಾಂತ್ಯಗೊಂಡಿದೆ.
-
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
ಕಾಂತಾರ ವಿವಾದ: ಮೈಸೂರು ಚಾಮುಂಡಿ ಬೆಟ್ಟಕ್ಕೆ ಬರ್ತೀನಿ, ಕ್ಷಮೆಯೂ ಕೇಳ್ತೀನಿ ಎಂದ ನಟ ರಣವೀರ್ ಸಿಂಗ್












Click it and Unblock the Notifications