ಗುಂಡ್ಲುಪೇಟೆಗೆ ಬಂದ ಅಪರೂಪದ ಬಿಳಿ ಹಾವು: ಅಚ್ಚರಿಯಲ್ಲಿ ಜನತೆ
ಚಾಮರಾಜನಗರ, ಆಗಸ್ಟ್ 9: ಹಲವು ಅಪರೂಪದ ಪ್ರಭೇದದ ಜೀವಿಗಳು ಅಳಿವಿನಂಚಿಗೆ ತೆರಳುತ್ತಿದೆ. ಈ ಹೊತ್ತಿನಲ್ಲಿ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ತಾಲೂಕಿನ ಸೋಮಹಳ್ಳಿ ಗ್ರಾಮಪಂಚಾಯಿತಿ ಕಾರ್ಯಾಲಯದ ಅಪರೂಪದ ಹಾವೊಂದು ಕಾಣಿಸಿಕೊಂಡು ಅಚ್ಚರಿ ಮೂಡಿಸಿದೆ.
ಹೈದರಾಬಾದಿನಲ್ಲಿ ಪತ್ತೆಯಾಯ್ತು ಹಳದಿ ಕಂಠದ ಅಪರೂಪದ ಹಾವು
Recommended Video
ಸಾಮಾನ್ಯವಾಗಿ ಈ ವ್ಯಾಪ್ತಿಯಲ್ಲಿ ಕೇರೆಹಾವು, ಹಸಿರುಹಾವು, ನಾಗರಹಾವು ಹೀಗೆ ಕೆಲವು ಸಾಮಾನ್ಯ ಹಾವುಗಳನ್ನು ನೋಡಿದ್ದ ಮಂದಿಗೆ ಈ ಹಾವು ವಿಚಿತ್ರವಾಗಿ ಕಂಡು ಅಚ್ಚರಿ ಹುಟ್ಟಿಸಿತ್ತು.
ಗ್ರಾಪಂ ಕಾರ್ಯಾಲಯದ ಬಳಿ ತೆವಳಿಕೊಂಡು ಹೋಗುತ್ತಿದ್ದ ಬಿಳಿಬಣ್ಣದ ಪುಟ್ಟ ಹಾವನ್ನು ಕಂಡು ಈ ಭಾಗದ ಜನರು ಹೌಹಾರಿದ್ದಾರೆ. ಇದುವರೆಗೆ ಬಿಳಿಬಣ್ಣದ ಹಾವನ್ನೇ ನೋಡಿರದ ಜನರು ಈ ಹಾವನ್ನು ನೋಡಲು ಮುಗಿಬೀಳುತ್ತಿದ್ದರು.
ಈಗಾಗಲೇ ಹಾವುಗಳನ್ನು ರಕ್ಷಿಸಿ ಕಾಡಿಗೆ ಬಿಡುವ ಗುಂಡ್ಲುಪೇಟೆಯ ಸ್ನೇಕ್ ಶಶಿ ಎಂಬುವರನ್ನು ಕರೆಯಿಸಿ ಅದನ್ನು ಹಿಡಿಸಲಾಯಿತು. ಉರಗ ತಜ್ಞ ಶಶಿ ಅವರು ಈ ಹಾವನ್ನು ಉಲ್ಫ್ ಜಾತಿಗೆ ಸೇರಿದ್ದೆಂದು ಹೇಳಿದ್ದಾರೆ.ಸದ್ಯಕ್ಕೆ ಹಾವನ್ನು ಅರಣ್ಯ ಪ್ರದೇಶಕ್ಕೆ ಸುರಕ್ಷಿತವಾಗಿ ಬಿಡಲಾಗಿದೆ.