ಯಾಹೂ ತನ್ನ ಬೆಂಗಳೂರು ಕಚೇರಿ ಮುಚ್ಚುತ್ತಿಲ್ಲ
ಬೆಂಗಳೂರು, ಅ.8: ಯಾಹೂ ಇಂಡಿಯಾ ಸಂಸ್ಥೆಯಿಂದ ಪಿಂಕ್ ಸ್ಲಿಪ್ ಮೇಳ ಜಾರಿಯಲ್ಲಿರುವ ಬೆನ್ನಲ್ಲೇ ಬೆಂಗಳೂರಿನ ಆರ್ ಅಂಡ್ ಡಿ ಕೇಂದ್ರವನ್ನು ಸಂಪೂರ್ಣವಾಗಿ ಬಂದ್ ಮಾಡಲಾಗುವುದು ಎಂಬ ಸುದ್ದಿಯನ್ನು ಯಾಹೂ ಸಂಸ್ಥೆ ತಳ್ಳಿ ಹಾಕಿದೆ. ಅದರೆ, ಈಗಾಗಲೇ 400 ಉದ್ಯೋಗಿಗಳಿಗೆ ಪಿಂಕ್ ಸ್ಲಿಪ್ ವಿತರಿಸಿರುವುದು ದೃಢಪಟ್ಟಿದೆ.
ಯಾಹೂ ಇಂಡಿಯಾ ಸಂಸ್ಥೆಯ ಸಂಶೋಧನಾ ಮತ್ತು ಅಭಿವೃದ್ಧಿ ಕೇಂದ್ರದಲ್ಲಿ ಸುಮಾರು 2000ಕ್ಕೂ ಅಧಿಕ ಉದ್ಯೋಗಿಗಳಿದ್ದಾರೆ. ಈ ಪೈಕಿ 400ಜನರನ್ನು ಮನೆಗೆ ಕಳಿಸಲಾಗಿದೆ. ಕಾರ್ಯಕ್ಷಮತೆ ಹೆಚ್ಚಳ,ಬದಲಾಗುತ್ತಿರುವ ಮಾರುಕಟ್ಟೆ ಸ್ಥಿತಿ ಗತಿಯ ಅನ್ವಯ ಉದ್ಯೋಗ ಕಡಿತ ಅನಿವಾರ್ಯವಾಗಿದೆ ಎಂದು ಯಾಹೂ ಸಂಸ್ಥೆ ಪ್ರಕಟಿಸಿದೆ. ಅದರೆ, ಇನ್ನೂ ಎಷ್ಟು ಮಂದಿಯನ್ನು ಮನೆಗೆ ಕಳಿಸಲಾಗುವುದು ಎಂಬುದರ ಸುಳಿವು ನೀಡಿಲ್ಲ.
ಆದರೆ, ಬೆಂಗಳೂರಿನ ಕಚೇರಿ ಯಾಹೂಗೆ ಬಹುಮುಖ್ಯವಾಗಿದ್ದು, ಕಚೇರಿ ಬಂದ್ ಮಾಡುವ ಅಥವಾ ಅಲ್ಲಿನ ಉದ್ಯೋಗಿಗಳ ಸಂಖ್ಯೆ ಕಡಿತ ಮಾಡುವುದಿಲ್ಲ ಎಂದಿದ್ದಾರೆ.[ಯಾಹೂ WFH ನಿರ್ಬಂಧಕ್ಕೆ ಪ್ರತಿರೋಧ]

ಫೇಸ್ ಬುಕ್ ಹಾಗೂ ಗೂಗಲ್ ಜೊತೆ ಪೈಪೋಟಿ ನಡೆಸುತ್ತಿರುವ ವೆಬ್ ಲೋಕದ ದೈತ್ಯ ಸಂಸ್ಥೆ ಯಾಹೂ ಈಗ ಸಿಇಒ ಮಾರಿಸ್ಸಾ ಮೇಯರ್ ಅವರ ಹೊಸ ಹೊಸ ಯೋಜನೆಗೆ ಒಗ್ಗಿಕೊಳ್ಳುತ್ತಿದೆ. ಭಾರತದಲ್ಲಿರುವ ಆರ್ ಅಂಡ್ ಡಿ ಕಚೇರಿಯನ್ನು ಯುಎಸ್ ಗೆ ಸ್ಥಳಾಂತರಿಸಲು ಮೇಯರ್ ಚಿಂತಿಸಿದ್ದಾರೆ.
ಸುಮಾರು 13 ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಸ್ಥಾಪನೆಗೊಂಡ ಯಾಹೂ ಆರ್ ಅಂಡ್ ಡಿ ಕೇಂದ್ರದಿಂದ ಅನೇಕ ಹೊಸ ಉತ್ಪನ್ನಗಳನ್ನು ವೆಬ್ ಲೋಕಕ್ಕೆ ಯಾಹೂ ಪರಿಚಯಿಸಿದೆ. ಯಾಹೂ ಕ್ರಿಕೆಟ್, omg!, ಯಾಹೂ ವಿಡಿಯೋ, ಪಾಲಿಯಾಡ್ಸ್, ಪ್ರಿಡಿಕ್ಟ್ ಮುಂತಾದವು ಇಲ್ಲೇ ಹುಟ್ಟಿ ನಿರ್ವಹಣೆಗೊಳಲ್ಪಡುತ್ತಿರುವ ಉತ್ಪನ್ನಗಳಾಗಿವೆ. ಸೆಪ್ಟೆಂಬರ್ ತಿಂಗಳಿನಲ್ಲಿ ಬೆಂಗಳೂರಿನ ಬುಕ್ ಪ್ಯಾಡ್ ಸಂಸ್ಥೆಯನ್ನು 90 ಕೋಟಿ ರು ಕೊಟ್ಟು ಯಾಹೂ ಖರೀದಿಸಿದ್ದನ್ನು ಇಲ್ಲಿ ಮರೆಯುವಂತಿಲ್ಲ. [ಬೆಂಗಳೂರಿನ ಸಂಸ್ಥೆ ಖರೀದಿಸಿದ ದೈತ್ಯ ಯಾಹೂ]
2009 ರಿಂದ 2013 ಮಾರ್ಚ್ ತನಕ ಆರ್ ಅಂಡ್ ಡಿ ವಿಭಾಗ 500 ಮಂದಿಯಿಂದ 2000 ಉದ್ಯೋಗಿಗಳ ತನಕ ಬೆಳೆದಿತ್ತು. ಶೌವಿಕ್ ಮುಖರ್ಜಿ ಇಲ್ಲಿನ ನಿರ್ವಹಣೆ ನೋಡಿಕೊಳ್ಳುತ್ತಿದ್ದಾರೆ.ಯಾಹೂ ಉಪಾಧ್ಯಕ್ಷ ಹಾಗೂ ಇಂಡಿಯಾದ ಆರ್ ಅಂಡ್ ಡಿ ಕೇಂದ್ರದ ಸಿಇಒ ಮುಖರ್ಜಿ ಅವರನ್ನು ಸನ್ನಿವೇಲ್ ಕ್ಯಾಲಿಫೋರ್ನಿಯಾದ ಕೇಂದ್ರ ಕಚೇರಿಗೆ ಕರೆಸಿಕೊಂಡು ಕನ್ಸೂಮರ್ ಪ್ಲಾಟ್ ಫರ್ಮ್ಸ್ ವಿಭಾಗದ ಉಪಾಧ್ಯಕ್ಷ ಹುದ್ದೆ ನೀಡಲಾಗಿದೆ. ನಿಧಾನಗತಿಯಲ್ಲಿ ಬೆಂಗಳೂರಿನ ಬಾಗ್ಮನೆ ಟೆಕ್ ಪಾರ್ಕ್ ನಿಂದ ಯಾಹೂ! ಕ್ಯಾಲಿಫೋರ್ನಿಯಾಗೆ ಹಾರುವ ಸೂಚನೆಯಂತೂ ಸಿಕ್ಕಿದೆ.
-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಶಾಕ್: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 195 ರೂ. ಭಾರಿ ಏರಿಕೆ












Click it and Unblock the Notifications