ವಿಜಯ ಬ್ಯಾಂಕ್ ಜತೆ ಇನ್ನೆರಡು ಬ್ಯಾಂಕ್ ಹೋಲಿಕೆ, ಇದು ಗೆಲ್ಲೋ ಆಟವಲ್ಲ!
ಒಳ್ಳೆಯವರಾಗಿ, ಸಾಧನೆ ಮಾಡಿದರೂ ಅದನ್ನು ಗುರುತಿಸಿ ಶಿಕ್ಷೆ ವಿಧಿಸುವಂತಾಗಿದೆ ಕೇಂದ್ರ ಸರಕಾರದ ತ್ರಿವಳಿ ಬ್ಯಾಂಕ್ ಗಳ ವಿಲೀನದ ನಿರ್ಧಾರ. ಕರ್ನಾಟಕ ತವರಿನ ವಿಜಯ ಬ್ಯಾಂಕ್ ಸರಕಾರಿ ವಲಯದ ಬ್ಯಾಂಕ್ ಗಳಲ್ಲಿ ಉತ್ತಮವಾದ ಸ್ಥಾನ ಗಳಿಸಿದೆ.
ಸಾರ್ವಜನಿಕ ವಲಯದ ಬ್ಯಾಂಕ್ ಗಳಲ್ಲಿ ವಿಜಯ ಬ್ಯಾಂಕ್ ಒಂದೇ ಹಿಂದಿನ ವರ್ಷ ಡಿವಿಡೆಂಡ್ ಘೋಷಿಸಿ, ವಿತರಿಸಿದ ಬ್ಯಾಂಕ್ ಎಂಬ ಅಗ್ಗಳಿಕೆಗೆ ಪಾತ್ರವಾಗಿದೆ. ಹಾಗೆ ಇಂಡಿಯನ್ ಬ್ಯಾಂಕ್ ಸಹ ಪ್ರತಿ ಷೇರಿಗೆ 6 ರುಪಾಯಿ ಡಿವಿಡೆಂಡ್ (ಲಾಭಾಂಶ) ಪ್ರಕಟಿಸಿ, ನಂತರ ವಿತರಣೆ ಮಾಡದೆ ಹಿಂಪಡೆಯಿತು. ಇದು ಕಾರ್ಪೊರೇಟ್ ವಲಯದ ನೀತಿ ಪಾಲನೆ ಲೋಪ ಎನ್ನಬಹುದು. ಆದರೆ ಸರಕಾರಿ ವಲಯದ ಬ್ಯಾಂಕ್ ಆದ್ದರಿಂದ ಜಾರಿಕೊಂಡಿತು.
ಬ್ಯಾಂಕ್ ಗಳು ಈ ಹಿಂದೆ ಇದ್ದಂತೆ ಈಗಲೂ ಸೇವಾ ವಲಯ ಎಂದು ಪರಿಗಣಿಸಿದರೂ ಸೇವೆ ಎಂಬುದು ಶುಲ್ಕಾಧಾರಿತ, ಕೆಲವು ವೇಳೆ ಶುಲ್ಕಭರಿತವು ಆಗುತ್ತಿದೆ. ಆದ್ದರಿಂದಲೇ ಷರತ್ತು-ನಿಬಂಧನೆಗಳು ಅನ್ವಯ ಎಂಬುದು ಒಳಗೊಂಡಿರುತ್ತದೆ. ಒಟ್ಟಿನಲ್ಲಿ ಅಗೋಚರವಾದ ರೀತಿಯಲ್ಲಿ ಶುಲ್ಕವನ್ನು ವಿಧಿಸಲಾಗುತ್ತಿದೆ.

ಗ್ರಾಹಕರಿಗೆ ಹಲವು ರೀತಿ ಕಿರಿಕಿರಿ
ನೆಟ್ ಬ್ಯಾಂಕಿಂಗ್ ಹೆಸರಿನಲ್ಲಿ ಕೆಲವು ಬಿಲ್ ಪಾವತಿಗೂ "ಕನ್ವಿನಿಯನ್ಸ್ ಫೀ" ಎಂದು ಸಂಗ್ರಹಿಸಲಾಗುವುದು. ಹಣ ವರ್ಗಾವಣೆಗೂ ಶುಲ್ಕ ವಸೂಲು ಮಾಡಲಾಗುವುದು. ಒಂದು ಬ್ಯಾಂಕ್ ನ ಚೆಕ್ ಅನ್ನು ಅದೇ ಬ್ಯಾಂಕ್ ನ ಇನ್ನೊಂದು ಶಾಖೆಯಲ್ಲಿ ಕ್ಲಿಯರಿಂಗ್ ಗೂ ದಿನಗಟ್ಟಲೆ ಕಾಯಬೇಕಾದ ತಾಂತ್ರಿಕತೆಯ ಅಡಚಣೆಯನ್ನು ಸಹ ಗ್ರಾಹಕರು ಅನುಭವಿಸುವಂತಾಗಿದೆ.

ಅಧಿಕಾರಿಗಳಲ್ಲಿ ಜವಾಬ್ದಾರಿ ಕ್ಷೀಣ
ಇಂತಹ ವಾತಾವರಣದಲ್ಲಿ ಗ್ರಾಹಕರನ್ನು ಗುರಿಯಾಗಿಸಿಕೊಂಡು ತಮ್ಮ ಖಾತೆಯಲ್ಲಿನ ಹಣವನ್ನು ಹಿಂಪಡೆದರೂ ಶುಲ್ಕ ನೀಡುವುದು ಸಹ ಕೆಲವು ಬ್ಯಾಂಕ್ ಗಳು ಅಳವಡಿಸಿವೆ. ಕೋರ್ ಬ್ಯಾಂಕಿಂಗ್ ವ್ಯವಸ್ಥೆ, ತಾಂತ್ರಿಕತೆ ಮತ್ತು ಹೆಚ್ಚಾದ ಬ್ಯಾಂಕ್ ನ ಗಾತ್ರ ಅಧಿಕಾರಿಗಳಲ್ಲಿ ಜವಾಬ್ದಾರಿಯನ್ನು ಕ್ಷೀಣಗೊಳ್ಳುವಂತೆ ಮಾಡುತ್ತಿದೆ. ಸೇವೆ ಎಂಬುದು ಕಣ್ಮರೆಯಾಗುತ್ತಿದೆ ಎಂಬುದು ಎಲ್ಲರ ಅನುಭವ, ಅನಿಸಿಕೆ.

ಮೂರೂ ಬ್ಯಾಂಕ್ ಗಳ ಹೋಲಿಕೆ ಇಲ್ಲಿದೆ
ಇಂಥ ಸನ್ನಿವೇಶದಲ್ಲಿ ಮೂರು ವಿಭಿನ್ನ ಸ್ಥಿತಿಯಲ್ಲಿರುವ ಬ್ಯಾಂಕ್ ಗಳ ವಿಲೀನಕ್ಕೆ ಪ್ರಸ್ತಾವ ಮಾಡಲಾಗಿದೆ. ಈಗ ವಿಲೀನಗೊಳ್ಳಲಿರುವ ಮೂರೂ ಬ್ಯಾಂಕ್ ಗಳಲ್ಲಿ ಒಂದೊಂದು ಬ್ಯಾಂಕ್ ಒಂದೊಂದು ರೀತಿಯ ಅಂಕಿ ಅಂಶಗಳನ್ನು ಹೊಂದಿದ್ದು ಸಾಮ್ಯತೆಯನ್ನು ಹೊಂದಿಲ್ಲ ಎಂಬುದನ್ನು ಈ ಮೇಲಿನ ಕೋಷ್ಟಕದಲ್ಲಿ ಕಾಣಬಹುದು.

ವಿಲೀನಕ್ಕೆ ಸಂಬಂಧಿಸಿದಂತೆ ಸ್ಪಷ್ಟತೆಯೇ ಇಲ್ಲ
ಈಗ ಪ್ರಕಟವಾಗಿರುವುದು ಕೇವಲ ತೇಲಿಬಿಟ್ಟ ಯೋಜನೆಯಾಗಿದೆ. ಮುಂದೆ ಯಾವ ಅನುಪಾತದಲ್ಲಿ ವಿಲೀನಗೊಳಿಸಲಾಗುವುದು, ಯಾವ ಬ್ಯಾಂಕ್ ನ ಹೆಸರಿನಲ್ಲಿ ನಡೆಸಲಾಗುವುದು. ಇದರ ಕೇಂದ್ರ ಕಚೇರಿ ಎಲ್ಲಿರುವುದು ಮುಂತಾದ ಗೊಂದಲಗಳು ಉದ್ಭವಿಸಿರುವುದನ್ನು ಬುಧವಾರದಂದು ವಿಜಯ ಬ್ಯಾಂಕ್ (ರೂ.52.70), ಬ್ಯಾಂಕ್ ಆಫ್ ಬರೋಡ ( ದಿನದ ಕನಿಷ್ಠ ಬೆಲೆ ರೂ.110.50), ದೇನಾ ಬ್ಯಾಂಕ್( ರೂ.17.35ರ ಕನಿಷ್ಠ ) ಗಳು ಕಂಡಿರುವ ಭಾರಿ ಕುಸಿತ ದೃಢಪಡಿಸುತ್ತದೆ.
-
Zomato: ಹಸಿದ ಹೊಟ್ಟೆಗೆ ಜೊಮ್ಯಾಟೋ ಬರೆ.. ಆನ್ಲೈನ್ ಊಟ ಬಲು ದುಬಾರಿ -
ಅಯ್ಯಯ್ಯೋ.. 93 ರೂಪಾಯಿಗೆ ಕುಸಿತ ಕಂಡ ಭಾರತದ ಕರೆನ್ಸಿ, ಡಾಲರ್ ಎದುರು ಮಹಾ ಪತನ.. Rupee And Dollar -
13,00,000 ಕೋಟಿ ರೂಪಾಯಿ ಹೂಡಿಕೆದಾರರ ಹಣ ಉಡೀಸ್, ಭಾರತೀಯ ಷೇರುಪೇಟೆಯಲ್ಲಿ ಬಿರುಗಾಳಿ... Stock Market -
ಚಿನ್ನದ ಬೆಲೆ 55,000 ರೂಪಾಯಿ ದಿಢೀರ್ ಒಂದೇ ದಿನ ಭರ್ಜರಿ ಕುಸಿತ, ಇಂದಿನ ಬೆಲೆ ತಿಳಿಯಿರಿ... Gold Price -
Hotel Gas Bill: ಊಟದ ನಂತರ ಹೋಟೆಲ್ ಬಿಲ್ ನೋಡಿ ದಂಗಾದ ಗ್ರಾಹಕ: ₹1,110 ಬಿಲ್ ಜೊತೆ ₹100 'ಗ್ಯಾಸ್ ಚಾರ್ಜ್'!: ಭಾರೀ ವೈರಲ್ -
Rain Alert: ಕರ್ನಾಟಕದ ಈ 9 ಜಿಲ್ಲೆಗಳಿಗೆ ಮುಂದಿನ 2 ದಿನ ವ್ಯಾಪಕ ಆಲಿಕಲ್ಲು ಮಳೆ ಎಚ್ಚರಿಕೆ -
IMD Weather Forecast: ಈ ಭಾಗಗಳಲ್ಲಿ ಮುಂದಿನ 3 ದಿನ ಬಿರುಗಾಳಿ, ಆಲಿಕಲ್ಲು ಸಹಿತ ಭಾರೀ ಮಳೆ -
ರಾಮಚಂದ್ರ ರಾವ್ ಪ್ರಕರಣ: 'ಎಐ' ಅಲ್ಲ ಅಸಲಿ ವಿಡಿಯೋ; ಎಫ್ಎಸ್ಎಲ್ ವರದಿಯಲ್ಲಿ ಬಯಲಾಯ್ತು ಸತ್ಯ -
New Railway Lines: ಬಿರೂರು-ಶಿವಮೊಗ್ಗ ರೈಲು ಹಳಿ ಡಬ್ಲಿಂಗ್, ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ಸಂಪರ್ಕಕ್ಕೆ ಒತ್ತಾಯ -
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Anil Kumble: ವಿರಾಟ್ ಕೊಹ್ಲಿ-ಬೆಂಗಳೂರು ನಡುವಿನ ಅವಿನಾಭಾವ ಸಂಬಂಧದ ಬಗ್ಗೆ ಕನ್ನಡಿಗ ಅನಿಲ್ ಕುಂಬ್ಳೆ ಮನದಾಳದ ಮಾತು -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣದ ಸ್ಥಳ: ಸಚಿವ ಎಂ.ಬಿ.ಪಾಟೀಲ್ ಮಹತ್ವದ ಮಾಹಿತಿ












Click it and Unblock the Notifications