ವಿಜಯ ಬ್ಯಾಂಕ್ ಜತೆ ಇನ್ನೆರಡು ಬ್ಯಾಂಕ್ ಹೋಲಿಕೆ, ಇದು ಗೆಲ್ಲೋ ಆಟವಲ್ಲ!
ಒಳ್ಳೆಯವರಾಗಿ, ಸಾಧನೆ ಮಾಡಿದರೂ ಅದನ್ನು ಗುರುತಿಸಿ ಶಿಕ್ಷೆ ವಿಧಿಸುವಂತಾಗಿದೆ ಕೇಂದ್ರ ಸರಕಾರದ ತ್ರಿವಳಿ ಬ್ಯಾಂಕ್ ಗಳ ವಿಲೀನದ ನಿರ್ಧಾರ. ಕರ್ನಾಟಕ ತವರಿನ ವಿಜಯ ಬ್ಯಾಂಕ್ ಸರಕಾರಿ ವಲಯದ ಬ್ಯಾಂಕ್ ಗಳಲ್ಲಿ ಉತ್ತಮವಾದ ಸ್ಥಾನ ಗಳಿಸಿದೆ.
ಸಾರ್ವಜನಿಕ ವಲಯದ ಬ್ಯಾಂಕ್ ಗಳಲ್ಲಿ ವಿಜಯ ಬ್ಯಾಂಕ್ ಒಂದೇ ಹಿಂದಿನ ವರ್ಷ ಡಿವಿಡೆಂಡ್ ಘೋಷಿಸಿ, ವಿತರಿಸಿದ ಬ್ಯಾಂಕ್ ಎಂಬ ಅಗ್ಗಳಿಕೆಗೆ ಪಾತ್ರವಾಗಿದೆ. ಹಾಗೆ ಇಂಡಿಯನ್ ಬ್ಯಾಂಕ್ ಸಹ ಪ್ರತಿ ಷೇರಿಗೆ 6 ರುಪಾಯಿ ಡಿವಿಡೆಂಡ್ (ಲಾಭಾಂಶ) ಪ್ರಕಟಿಸಿ, ನಂತರ ವಿತರಣೆ ಮಾಡದೆ ಹಿಂಪಡೆಯಿತು. ಇದು ಕಾರ್ಪೊರೇಟ್ ವಲಯದ ನೀತಿ ಪಾಲನೆ ಲೋಪ ಎನ್ನಬಹುದು. ಆದರೆ ಸರಕಾರಿ ವಲಯದ ಬ್ಯಾಂಕ್ ಆದ್ದರಿಂದ ಜಾರಿಕೊಂಡಿತು.
ಬ್ಯಾಂಕ್ ಗಳು ಈ ಹಿಂದೆ ಇದ್ದಂತೆ ಈಗಲೂ ಸೇವಾ ವಲಯ ಎಂದು ಪರಿಗಣಿಸಿದರೂ ಸೇವೆ ಎಂಬುದು ಶುಲ್ಕಾಧಾರಿತ, ಕೆಲವು ವೇಳೆ ಶುಲ್ಕಭರಿತವು ಆಗುತ್ತಿದೆ. ಆದ್ದರಿಂದಲೇ ಷರತ್ತು-ನಿಬಂಧನೆಗಳು ಅನ್ವಯ ಎಂಬುದು ಒಳಗೊಂಡಿರುತ್ತದೆ. ಒಟ್ಟಿನಲ್ಲಿ ಅಗೋಚರವಾದ ರೀತಿಯಲ್ಲಿ ಶುಲ್ಕವನ್ನು ವಿಧಿಸಲಾಗುತ್ತಿದೆ.

ಗ್ರಾಹಕರಿಗೆ ಹಲವು ರೀತಿ ಕಿರಿಕಿರಿ
ನೆಟ್ ಬ್ಯಾಂಕಿಂಗ್ ಹೆಸರಿನಲ್ಲಿ ಕೆಲವು ಬಿಲ್ ಪಾವತಿಗೂ "ಕನ್ವಿನಿಯನ್ಸ್ ಫೀ" ಎಂದು ಸಂಗ್ರಹಿಸಲಾಗುವುದು. ಹಣ ವರ್ಗಾವಣೆಗೂ ಶುಲ್ಕ ವಸೂಲು ಮಾಡಲಾಗುವುದು. ಒಂದು ಬ್ಯಾಂಕ್ ನ ಚೆಕ್ ಅನ್ನು ಅದೇ ಬ್ಯಾಂಕ್ ನ ಇನ್ನೊಂದು ಶಾಖೆಯಲ್ಲಿ ಕ್ಲಿಯರಿಂಗ್ ಗೂ ದಿನಗಟ್ಟಲೆ ಕಾಯಬೇಕಾದ ತಾಂತ್ರಿಕತೆಯ ಅಡಚಣೆಯನ್ನು ಸಹ ಗ್ರಾಹಕರು ಅನುಭವಿಸುವಂತಾಗಿದೆ.

ಅಧಿಕಾರಿಗಳಲ್ಲಿ ಜವಾಬ್ದಾರಿ ಕ್ಷೀಣ
ಇಂತಹ ವಾತಾವರಣದಲ್ಲಿ ಗ್ರಾಹಕರನ್ನು ಗುರಿಯಾಗಿಸಿಕೊಂಡು ತಮ್ಮ ಖಾತೆಯಲ್ಲಿನ ಹಣವನ್ನು ಹಿಂಪಡೆದರೂ ಶುಲ್ಕ ನೀಡುವುದು ಸಹ ಕೆಲವು ಬ್ಯಾಂಕ್ ಗಳು ಅಳವಡಿಸಿವೆ. ಕೋರ್ ಬ್ಯಾಂಕಿಂಗ್ ವ್ಯವಸ್ಥೆ, ತಾಂತ್ರಿಕತೆ ಮತ್ತು ಹೆಚ್ಚಾದ ಬ್ಯಾಂಕ್ ನ ಗಾತ್ರ ಅಧಿಕಾರಿಗಳಲ್ಲಿ ಜವಾಬ್ದಾರಿಯನ್ನು ಕ್ಷೀಣಗೊಳ್ಳುವಂತೆ ಮಾಡುತ್ತಿದೆ. ಸೇವೆ ಎಂಬುದು ಕಣ್ಮರೆಯಾಗುತ್ತಿದೆ ಎಂಬುದು ಎಲ್ಲರ ಅನುಭವ, ಅನಿಸಿಕೆ.

ಮೂರೂ ಬ್ಯಾಂಕ್ ಗಳ ಹೋಲಿಕೆ ಇಲ್ಲಿದೆ
ಇಂಥ ಸನ್ನಿವೇಶದಲ್ಲಿ ಮೂರು ವಿಭಿನ್ನ ಸ್ಥಿತಿಯಲ್ಲಿರುವ ಬ್ಯಾಂಕ್ ಗಳ ವಿಲೀನಕ್ಕೆ ಪ್ರಸ್ತಾವ ಮಾಡಲಾಗಿದೆ. ಈಗ ವಿಲೀನಗೊಳ್ಳಲಿರುವ ಮೂರೂ ಬ್ಯಾಂಕ್ ಗಳಲ್ಲಿ ಒಂದೊಂದು ಬ್ಯಾಂಕ್ ಒಂದೊಂದು ರೀತಿಯ ಅಂಕಿ ಅಂಶಗಳನ್ನು ಹೊಂದಿದ್ದು ಸಾಮ್ಯತೆಯನ್ನು ಹೊಂದಿಲ್ಲ ಎಂಬುದನ್ನು ಈ ಮೇಲಿನ ಕೋಷ್ಟಕದಲ್ಲಿ ಕಾಣಬಹುದು.

ವಿಲೀನಕ್ಕೆ ಸಂಬಂಧಿಸಿದಂತೆ ಸ್ಪಷ್ಟತೆಯೇ ಇಲ್ಲ
ಈಗ ಪ್ರಕಟವಾಗಿರುವುದು ಕೇವಲ ತೇಲಿಬಿಟ್ಟ ಯೋಜನೆಯಾಗಿದೆ. ಮುಂದೆ ಯಾವ ಅನುಪಾತದಲ್ಲಿ ವಿಲೀನಗೊಳಿಸಲಾಗುವುದು, ಯಾವ ಬ್ಯಾಂಕ್ ನ ಹೆಸರಿನಲ್ಲಿ ನಡೆಸಲಾಗುವುದು. ಇದರ ಕೇಂದ್ರ ಕಚೇರಿ ಎಲ್ಲಿರುವುದು ಮುಂತಾದ ಗೊಂದಲಗಳು ಉದ್ಭವಿಸಿರುವುದನ್ನು ಬುಧವಾರದಂದು ವಿಜಯ ಬ್ಯಾಂಕ್ (ರೂ.52.70), ಬ್ಯಾಂಕ್ ಆಫ್ ಬರೋಡ ( ದಿನದ ಕನಿಷ್ಠ ಬೆಲೆ ರೂ.110.50), ದೇನಾ ಬ್ಯಾಂಕ್( ರೂ.17.35ರ ಕನಿಷ್ಠ ) ಗಳು ಕಂಡಿರುವ ಭಾರಿ ಕುಸಿತ ದೃಢಪಡಿಸುತ್ತದೆ.
-
Ram Gopal Varma: ದಾವೂದ್ ಇಬ್ರಾಹಿಂ ಇಲ್ಲದಿದ್ದರೆ ನಾನು ಬದುಕು ಕಟ್ಟಿಕೊಳ್ಳುತ್ತಿರಲಿಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ -
Dhurandhar 2 Pakistan: ಅರಬ್ ರಾಷ್ಟ್ರದ ಸಾಲ ತೀರಿಸಲು ದುರಂಧರ್ 2 ಬಿಡುಗಡೆಗೆ ಮುಂದಾಯ್ತಾ ಪಾಕಿಸ್ತಾನ, ಟ್ವಿಸ್ಟ್ -
Karnataka Train: ಕಲಬುರಗಿ - ಕಲ್ಯಾಣ ಕರ್ನಾಟಕದಲ್ಲಿ ರೈಲು ಪ್ರಯಾಣಿಕರ ನಿತ್ಯ ಪರದಾಟ: ಸಿದ್ದು ಮಠಪತಿ ಬರಹ -
Lata Mangeshkar & Asha Bhosle: ಆ ಒಂದು ಕಾರಣಕ್ಕೆ ತಂಗಿ ಆಶಾ ಬೋಸ್ಲೆ ಜೊತೆ ಮಾತು ಬಿಟ್ಟಿದ್ದ ಲತಾ ಮಂಗೇಶ್ಕರ್ -
ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನಿ ಸೇನಾಪಡೆ ನಿಯೋಜನೆ: ಮಿತ್ರ ರಾಷ್ಟ್ರಕ್ಕೆ 13,000 ಸೈನಿಕರು, ಯುದ್ಧ ವಿಮಾನಗಳ ರವಾನೆ -
Asha Bhosle Kannada Songs: ಆಶಾ ಭೋಸ್ಲೆ ಹಾಡಿದ ಕನ್ನಡದ ಹಾಡುಗಳು: ಕರ್ನಾಟಕದ ಜನರ ಮನ ಗೆದ್ದ ಖ್ಯಾತ ಗಾಯಕಿ -
Weekly Horoscope: ನಾಲ್ಕು ರಾಶಿಯವರಿಗೆ ಅದೃಷ್ಟ ಹೊತ್ತು ತರುವ ವಾರ ಇದು: ಹೇಗಿದೆ ನೋಡಿ ನಿಮ್ಮ ವಾರ ಭವಿಷ್ಯ -
Bhagyalakshmi Serial: ಕೊನೆಗೂ ಭಾಗ್ಯಲಕ್ಷ್ಮೀ - ಆದಿ ಮದುವೆ, ಮೂರು ಕುಟುಂಬಗಳನ್ನು ಒಂದು ಮಾಡುವ ಟಾಸ್ಕ್ -
Karntaka Weather: ಹವಾಮಾನ ವೈಪರೀತ್ಯ! ರಾಜ್ಯದ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ -
Banana Price: ತಮಿಳುನಾಡು ಬಿಸಿಗಾಳಿ ಎಫೆಕ್ಟ್ಗೆ ಕುಸಿದ ಬಾಳೆಹಣ್ಣು ಧಾರಣೆ: ಬೆಂಗಳೂರಿನಲ್ಲಿ ಕೆ.ಜಿಗೆ 7 ರೂಪಾಯಿ -
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ












Click it and Unblock the Notifications