ಫೇಸ್App ಸುರಕ್ಷಿತವಲ್ಲ, ಬಳಕೆದಾರರಿಗೆ ಅಪಾಯ ಖಾತ್ರಿ ಎಚ್ಚರ!
ಬೆಂಗಳೂರು, ಜುಲೈ 18: ಜನಸಾಮಾನ್ಯರಿಂದ ಸೆಲೆಬ್ರಿಟಿಗಳ ತನಕ ಅತ್ಯಂತ ಜನಪ್ರಿಯತೆ ಗಳಿಸಿರುವ 'ಫೇಸ್ ಆ್ಯಪ್' (FaceApp) ಬಳಕೆದಾರರಿಗೆ ಸೈಬರ್ ಲೋಕದ ತಜ್ಞರು ಎಚ್ಚರಿಕೆ ಸಂದೇಶ ನೀಡಿದ್ದಾರೆ. ಕೃತಕ ಬುದ್ಧಿಮತ್ತೆ ಬಳಸುವ ಈ ಅಪ್ಲಿಕೇಷನ್ ನಿಂದ ಸುಮಾರು 120 ಮಿಲಿಯನ್ ಬಳಕೆದಾರರ ಗೌಪ್ಯ ಮಾಹಿತಿ ಬಹಿರಂಗಗೊಳ್ಳುವ ಅಪಾಯವಿದೆ ಎಂದು ಎಫ್ ಬಿಐ ಹಾಗೂ ಸಿಐಎ ಎಚ್ಚರಿಸಿದೆ.
ರಷ್ಯಾ ಹಾಗೂ ಇನ್ನಿತರ ದೇಶಗಳ ತಂತ್ರಜ್ಞರು 2017ರಲ್ಲಿ ಹೊರ ತಂದ ಈ ಮೊಬೈಲ್ ಅಪ್ಲಿಕೇಷನ್ 2019ರಲ್ಲಿ ಭಾರಿ ಜನಪ್ರಿಯತೆ ಗಳಿಸುತ್ತಿದೆ. ಈ ಅಪ್ಲಿಕೇಷನ್ ಬಳಸಿ ಭಾವಚಿತ್ರವೊಂದರಲ್ಲಿ ಕಾಣುವ ಮುಖವನ್ನು ವೃದ್ಧಾಪ್ಯದಲ್ಲಿ ಹೇಗೆ ಕಾಣಿಸಬಹುದು, ಬಾಲ್ಯಾವಸ್ಥೆಯಲ್ಲಿ, ಗಡ್ಡಧಾರಿಯಾಗಿ, ಹಸನ್ಮುಖಿಯಾಗಿ, ಲಿಂಗ ಬದಲಾವಣೆ ಮಾಡಿ, ಕೂದಲಿನ ಬಣ್ಣ ಬದಲಾಯಿ, ಹೊಸ ಕೇಶ ರಾಶಿಯಲ್ಲಿ, ಹಿನ್ನಲೆ ಫೋಟೋ ಬದಲಾಯಿಸಿ, ಫೋಟೊ ಎಡಿಟ್ ಮಾಡಿ ಫಲಿತಾಂಶವನ್ನು ಪಡೆಯಬಹುದು. ಹೀಗೆ ಪಡೆದ ಚಿತ್ರವನ್ನು ತಕ್ಷಣವೇ ಸಾಮಾಜಿಕ ಜಾಲ ತಾಣಗಳಾದ ಟ್ವಿಟ್ಟರ್, ಇನ್ ಸ್ಟಾಗ್ರಾಮ್, ಫೇಸ್ಬುಕ್ ಗಳಲ್ಲಿ ಹಂಚಿಕೊಂಡು ಖುಷಿ ಪಡುತ್ತಿದ್ದಾರೆ.
ಈ ಮೂವರನ್ನ ಬಿಟ್ಟು ಉಳಿದವರಿಗೆಲ್ಲಾ Faceappನಲ್ಲಿ ವಯಸ್ಸಾಗಿದೆ.!
ಆದರೆ, 'ಫೇಸ್ ಆ್ಯಪ್' (FaceApp) ಬಳಸುವ ಮುನ್ನ ಈ ಅಪ್ಲಿಕೇಷನ್ ಬಳಕೆದಾರರಿಗೆ ವಿಧಿಸಿರುವ ಷರತ್ತು ಹಾಗೂ ನಿಬಂಧನೆಗಳನ್ನು ಓದದೆ ಇದ್ದರೆ ಅಪಾಯ ಖಚಿತ. ಫೇಸ್ ಆ್ಯಪ್ ತನ್ನ ಬಳಕೆದಾರರ ಫೋಟೊಗಳನ್ನು, ಎಡಿಟೆಡ್ ಫೋಟೊಗಳನ್ನು ಸಂಸ್ಥೆ ಬಳಸಬಹುದು ಹಾಗೂ ಇದು ವಾಣಿಜ್ಯ ಉದ್ದೇಶವಾಗಿರಬಹುದು. ಇದಕ್ಕೆ ಯಾವುದೇ ಜಾಗತಿಕ ಗಡಿ ಮಿತಿಯಿಲ್ಲ ಎಂಬ ಅಂಶ ಆತಂಕಕಾರಿಯಾಗಿದೆ.

ನೀವು ಎಡಿಟ್ ಮಾಡಿ, ಸೇವ್ ಮಾಡಿದ ಚಿತ್ರವನ್ನು ನಿಮ್ಮ ಅನುಮತಿಯಿಲ್ಲದೆ FaceApp ತನ್ನ ಪ್ರಚಾರಕ್ಕಾಗಿ ಬಳಸಬಹುದು, ಫೋಟೊ ಅಲ್ಲದೆ, ನೀವು ಸೇವ್ ಮಾಡಿದ ದನಿ, ಹೆಸರು ಎಲ್ಲವನ್ನು ಇದು ಒಳಗೊಂಡಿರುತ್ತದೆ. ಯೂಸರ್ ನೇಮ್, ಲೊಕೇಶನ್ ಅಥವಾ ಪ್ರೊಫೈಲ್ ಫೋಟೊಗಳನ್ನು ಬಳಸಿಕೊಳ್ಳಲು ನಾನು ಒಪ್ಪಿದ್ದೇನೆ ಎಂದು ನಿಬಂಧನೆಗೆ ಒಪ್ಪಿದ್ದರೆ ಅಲ್ಲಿಗೆ ನಿಮ್ಮ ಗೌಪ್ಯತೆಯನ್ನು ಬಿಚ್ಚಿಟ್ಟು ಆ ಸಂಸ್ಥೆ ಕೈಗೆ ಇಟ್ಟಂತೆ ಆಗುತ್ತದೆ.

Face App ಅಲ್ಲ ಸಿನಿಮಾದ ಪಾತ್ರಕ್ಕಾಗಿ ಬದಲಾಗಿದ್ದಾರೆ ತಾಪ್ಸಿ
ಸಾಮಾನ್ಯವಾಗಿ ಇಂಥ ಅಪ್ಲಿಕೇಷನ್ ಗಳು ಕ್ಲೌಡ್ ಸರ್ವರ್ ಬಳಸಿಕೊಂಡು, ಬಳಕೆದಾರರ ದತ್ತಾಂಶವನ್ನು ಕೆಲ ಕಾಲ ಸೇವ್ ಮಾಡಿರುತ್ತದೆ. ನಂತರ ಅದನ್ನು ಡಿಲೀಟ್ ಮಾಡುವ ಭರವಸೆ ಇರುತ್ತದೆ, ಆದರೆ, ಡಿಲೀಟ್ ಆಗದಿದ್ದರೆ, ಮೂರನೇ ಪಾರ್ಟಿ ಬಳಕೆದಾರರ ಮಾಹಿತಿ ಹಂಚುವ ಅಪಾಯವೂ ಇದೆ.
-
ರಿಚರ್ಡ್ ಕೆಟಲ್ಬರೋ ಔಟ್: ಟಿ20 ವಿಶ್ವಕಪ್ ಫೈನಲ್ಗೂ ಮುನ್ನ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಸಂತಸದ ಸುದ್ದಿ -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣಕ್ಕೆ ಈ ಪ್ರದೇಶ ಬೆಸ್ಟ್: ಉದ್ಯಮಿ ಕಿರಣ್ ಮಜುಂದಾರ್ ಶಾ -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Sachin Tendulkar: ಅಭಿಷೇಕ್ ಶರ್ಮಾಗೆ ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ವಿಶೇಷ ಸಂದೇಶ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂಬ ಮಾತಿನಂತೆ ನಡೆದುಕೊಂಡ ಯುವರಾಜ್ ಸಿಂಗ್ ಶಿಶ್ಯ ಅಭಿಷೇಕ್ ಶರ್ಮಾ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು












Click it and Unblock the Notifications