ವಿಮಾನದ ಟೆಕೆಟ್ ದರ ಹೆಚ್ಚಳ: ವಿದೇಶ ಪ್ರಯಾಣಕ್ಕೆ ತೆರಬೇಕು ದುಬಾರಿ ಬೆಲೆ
ಬೆಂಗಳೂರು, ಜುಲೈ11: ನೀವೇನಾದ್ರು ದಸರಾ, ದೀಪಾವಳಿ ಹಬ್ಬದ ರಜೆ ಸಂದರ್ಭದಲ್ಲಿ ವಿದೇಶಕ್ಕೆ ಪ್ರವಾಸ ಹೋಗ್ಬೇಕು ಅಂದ್ಕೊಂಡಿದಿರಾ, ಹಾಗಾದ್ರೆ ಈ ಬಾರಿ ನೀವು ಟಿಕೆಟ್ಗಾಗಿ ಹೆಚ್ಚಿನ ಹಣ ಖರ್ಚು ಮಾಡಬೇಕು. ಯಾಕಂದ್ರೆ, ಅಂತಾರಾಷ್ಟ್ರೀಯ ವಿಮಾನಗಳ ಟಿಕೆಟ್ ಬೆಲೆ ಗಣನೀಯ ಏರಿಕೆಯಾಗಿದೆ.
ಮುಂಚಿತವಾಗಿ ಬುಕ್ ಮಾಡಿದರೆ ವಿಮಾನ ಟಿಕೆಟ್ಗಳ ಬೆಲೆ ಕೊಂಚ ಕಡಿಮೆ ಇರುತ್ತದೆ ಆದರೆ ಈ ಬಾರಿ ಮುಂಚಿತವಾಗಿ ಬುಕ್ ಮಾಡಿದರೂ ದುಬಾರಿ ಬೆಲೆ ತೆರಬೇಕಾಗಿದೆ. ಟಿಕೆಟ್ಗಾಗಿ ಪ್ರಯಾಣಿಕರು ಸಾಮಾನ್ಯಕ್ಕಿಂತ ಹೆಚ್ಚು ಹಣವನ್ನು ಖರ್ಚು ಮಾಡುತ್ತಿದ್ದಾರೆ.
ಕಳೆದ ವರ್ಷಕ್ಕೆ ಹೋಲಿಸಿದರೆ ವಿಮಾನ ಟಿಕೆಟ್ ದರದಲ್ಲಿ ಗಣನೀಯ ಏರಿಕೆಯಾಗಿದೆ ಎನ್ನುತ್ತಾರೆ ನಗರದ ಟ್ರಾವೆಲ್ ಏಜೆಂಟ್ಗಳು. ಹಲವಾರು ದೇಶಗಳು ಕೋವಿಡ್ ನಿರ್ಬಂಧಗಳನ್ನು ತೆಗೆದುಹಾಕಿವೆ, ಇದರಿಂದಾಗಿ ಅನೇಕ ಜನರು ದಸರಾ, ದೀಪಾವಳಿ ಸಮಯದಲ್ಲಿ ಅಂತರರಾಷ್ಟ್ರೀಯ ಪ್ರವಾಸಗಳನ್ನು ಯೋಜಿಸುತ್ತಿದ್ದಾರೆ.
ಎಕ್ಸ್ಪ್ಲೋರ್ ವರ್ಲ್ಡ್ವೈಡ್ ಪ್ರೈವೇಟ್ ಲಿಮಿಟೆಡ್ನ ಮಾಲಕಿ ಅನಿತಾ ಕೃಷ್ಣನ್, "ದೀಪಾವಳಿ ರಜೆಯ ಅವಧಿಯಲ್ಲಿ ವಿಮಾನ ದರಗಳು ತುಂಬಾ ಹೆಚ್ಚಾಗಿದೆ. ಕಳೆದ ಎರಡು ವರ್ಷಗಳಲ್ಲಿ ಯುರೋಪ್ ಪ್ರವಾಸಕ್ಕಾಗಿ ತೆರೆದಿರಲಿಲ್ಲ ಮತ್ತು ಈಗ ಎಲ್ಲಾ ದೇಶಗಳು ಪ್ರವಾಸಕ್ಕೆ ಅನುಮತಿ ನೀಡಿವೆ ಮತ್ತು ವಾಣಿಜ್ಯ ವಿಮಾನಗಳು ಪ್ರಾರಂಭವಾಗಿವೆ, ಕೋವಿಡ್-ಪೂರ್ವ ಸಮಯಗಳಿಗೆ ಹೋಲಿಸಿದರೆ ವಿಮಾನ ಟಿಕೆಟ್ ದರಗಳು ಶೇಕಡ 30 ರಷ್ಟು ಹೆಚ್ಚಾಗಿದೆ" ಎಂದು ಹೇಳಿದ್ದಾರೆ.

ಯೂರೋಪ್ ಪ್ರವಾಸಕ್ಕೆ ಬೇಡಿಕೆ ಹೆಚ್ಚು
ಇಂಗ್ಲೆಂಡ್ ವಿಮಾನಗಳಿಗೆ ಹೆಚ್ಚಿನ ಬುಕಿಂಗ್ಗಳಿವೆ ಎಂದು ಅವರು ಹೇಳಿದರು, "ಯುರೋಪ್ಗೆ ಬಂದಾಗ, ಹೆಚ್ಚಿನ ಜನರು ಯುಕೆ ವಿಮಾನಗಳನ್ನು ಬುಕ್ ಮಾಡುತ್ತಿದ್ದಾರೆ, ನಂತರ ಫ್ರಾನ್ಸ್, ಇಟಲಿ, ನೆದರ್ಲ್ಯಾಂಡ್ಸ್ ಮತ್ತು ಸ್ಪೇನ್ಗಳಿಗೆ ಬುಕ್ ಮಾಡುತ್ತಾರೆ. ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ, ಈ ಸ್ಥಳಗಳಿಗೆ ವಿಮಾನ ದರಗಳು 50,000 ರುಪಾಯಿಗಳಿಂದ 60,000 ರು. ನಡುವೆ ಇರುತ್ತದೆ. ಆದರೆ, ಈಗ ಅದರ ಬೆಲೆ 90,000 ರುಪಾಯಿಯಿಂದ 1 ಲಕ್ಷ ರುಪಾಯಿಗೆ ಏರಿಕೆಯಾಗಿದೆ," ಎಂದು ಅವರು ಹೇಳಿದರು.
ಬೆಲೆ ಹೆಚ್ಚಿದ್ದರೂ ಜನರು ಬುಕ್ ಮಾಡುತ್ತಿದ್ದಾರೆ ಎಂದು ಮಾಹಿತಿ ನೀಡಿದರು. ಬಹಳ ಸಮಯದಿಂದ ಜನರು ಮನೆಗಳಲ್ಲಿದ್ದಾರೆ ಮತ್ತು ಈಗ ಪ್ರಯಾಣಿಸಲು ಬಯಸುತ್ತಾರೆ. ಕಡಿಮೆ ದರದ ವಿಮಾನಗಳಲ್ಲಿ ಪ್ರಯಾಣಿಸಲು ಬಯಸುತ್ತಾರೆ ಎಂದರು.

ದುಬಾರಿಯಾದ ಟಿಕೆಟ್ ದರ
ಶೇಕಡ 50-75ರಷ್ಟು ಟಿಕೆಟ್ ದರ ಏರಿಕೆಯಾಗಿದೆ ಎಂದು ಸನ್ಮಾನ ಟ್ರಾವೆಲ್ಸ್ ಮಾಲೀಕ ಶಮಂತ್ ಕೃಷ್ಣಮೂರ್ತಿ ತಿಳಿಸಿದ್ದಾರೆ. "ಈ ಹಿಂದೆ ಸಿಂಗಾಪುರದಂತಹ ಸ್ಥಳಕ್ಕೆ, ರೌಂಡ್ ಟ್ರಿಪ್ಗೆ ಟಿಕೆಟ್ಗೆ ಸುಮಾರು 18,000 ರಿಂದ 20,000 ರೂ. ಆದರೆ ಈಗ ಅದೇ ಟಿಕೆಟ್ಗಳನ್ನು ನಾವು 36,000 ರಿಂದ 37,000 ರೂ.ಗೆ ಬುಕ್ ಮಾಡುತ್ತೇವೆ" ಎಂದಿದ್ದಾರೆ.
"ಥೈಲ್ಯಾಂಡ್, ಸಿಂಗಾಪುರ್ ಮತ್ತು ಮಲೇಷ್ಯಾ ಮತ್ತು ದುಬೈನಂತಹ ದೇಶಗಳಿಗೆ ಬುಕಿಂಗ್ಗಳು ಹೆಚ್ಚು. ಆದರೆ, ಥೈಲ್ಯಾಂಡ್ ಮತ್ತು ಮಲೇಷ್ಯಾದಲ್ಲಿ ಬೆಲೆ ಹೆಚ್ಚಿಲ್ಲ ಆದರೆ ದುಬೈನಲ್ಲಿ ದರಗಳು ಸಾಕಷ್ಟು ಹೆಚ್ಚಾಗಿದೆ. ಈ ಹಿಂದೆ ದುಬೈಗೆ ಟಿಕೆಟ್ ಬೆಲೆ ಸುಮಾರು 22,000 ರಿಂದ 24,000 ರೂ.ಗಳಷ್ಟಿತ್ತು ಆದರೆ ಈಗ ಕಡಿಮೆ ದರದ ವಿಮಾನಯಾನ ಸಂಸ್ಥೆಗಳಿಗೆ ಸರಿಸುಮಾರು 36,000 ರುಗಳಿಂದ ರಿಂದ 40,000 ರು.ಗಳವರೆಗೆ ಪಾವತಿಸಬೇಕು" ಎನ್ನುತ್ತಾರೆ.

ವಿಮಾನಗಳ ಸಂಖ್ಯೆ ಕಡಿಮೆ
ವಿಮಾನ ಟಿಕೆಟ್ಗಳ ಬೆಲೆ ಹೆಚ್ಚಳಕ್ಕೆ ಪ್ರಮುಖ ಕಾರಣವೆಂದರೆ ವಿಮಾನಗಳ ಸಂಖ್ಯೆ ಕಡಿಮೆಯಾಗಿರುವುದು ಎಂದು ಅವರು ಹೇಳಿದರು. "ಕೋವಿಡ್ಗೆ ಮೊದಲು, ಸುಮಾರು 10 ವಿಮಾನಗಳು ದುಬೈಗೆ ಹೋಗುತ್ತಿದ್ದವು. ಆದರೆ ಈಗ ನಾಲ್ಕೈದು ವಿಮಾನಗಳು ಮಾತ್ರ ದುಬೈಗೆ ಹೋಗುತ್ತಿದ್ದು, ಬೆಲೆ ಏರಿಕೆಯಾಗಿದೆ" ಎಂದು ಶಮಂತ್ ಹೇಳಿದ್ದಾರೆ.
ಇಂಧನ ಬೆಲೆಯಲ್ಲಿನ ಹೆಚ್ಚಳವು ವಿಮಾನ ಟಿಕೆಟ್ಗಳ ಬೆಲೆಯಲ್ಲಿಯೂ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಅವರು ಹೇಳಿದರು.

ಟಿಕೆಟ್ ದರ ನೋಡಿ ಪ್ರವಾಸಿಗರು ಸುಸ್ತು
ಬೆಂಗಳೂರು ನಿವಾಸಿಯಾದ ರಾಧಿಕಾ ಎಸ್ ಮಾತನಾಡಿ, "ನಾನು ನನ್ನ ಕುಟುಂಬದೊಂದಿಗೆ ದೀರ್ಘಕಾಲದಿಂದ ಅಂತರರಾಷ್ಟ್ರೀಯ ಪ್ರವಾಸಕ್ಕಾಗಿ ಯೋಜಿಸುತ್ತಿದ್ದೆ ಆದರೆ ಕೋವಿಡ್ನಿಂದ ನಮಗೆ ಹೋಗಲು ಸಾಧ್ಯವಾಗಲಿಲ್ಲ. ದೀಪಾವಳಿ ರಜಾದಿನಗಳಲ್ಲಿ ಪ್ರವಾಸ ಮಾಡಲು ಅನುಕೂಲವಾಗಿದೆ" ಎಂದರು.
ಹಾಗಾಗಿ, ನಾವು ಲಂಡನ್ ಪ್ರವಾಸವನ್ನು ಬುಕ್ ಮಾಡಿದ್ದೇವೆ, ಆದರೆ ಬೆಲೆಗಳನ್ನು ನೋಡಿ ನಾವು ಬೆಚ್ಚಿಬಿದ್ದೆವು. ಕಳೆದ ವರ್ಷ ಕೇವಲ 30,000 ರುಪಾಯಿ ಟಿಕೆಟ್ ಬೆಲೆ ಇತ್ತು. ಆದರೆ ಈಗ ನಾವು 62,000 ರುಪಾಯಿ ಪಾವತಿಸಿದ್ದೇವೆ ಎಂದು ಹೇಳಿದರು.
-
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
KEA: ರಾಜ್ಯದ ವಸತಿ ಶಾಲೆಗಳ ಪ್ರವೇಶ ಪರೀಕ್ಷೆ, ಅಂತಿಮ ಅಂಕಪಟ್ಟಿ ಪ್ರಕಟ -
Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಏರಿಕೆ: ಇಲ್ಲಿದೆ ಮಾರ್ಚ್ 26ರ ದರಪಟ್ಟಿ -
Tamarind Price: ಹುಣಸೆ ಬೆಲೆಯಲ್ಲಿ ಭರ್ಜರಿ ಹೆಚ್ಚಳ: ಇಂದಿನ ಬೆಲೆ ಎಷ್ಟಿದೆ, ಹುಣಸೆ ಹಣ್ಣು ಬೆಲೆ ಏರಿಕೆಗೆ ಕಾರಣವೇನು -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Bengaluru: ಶ್ರೀರಾಮ ನವಮಿ ಹಬ್ಬದ ಪ್ರಯುಕ್ತ ಮಾ.27ರಂದು ನಗರದಲ್ಲಿ ಮಾಂಸ ಮಾರಾಟ ಬಂದ್ಗೆ GBA ಆದೇಶ -
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Petrol Diesel Shortage: ಪೆಟ್ರೋಲ್, ಡೀಸೆಲ್ ಖಾಲಿಯಾಗುತ್ತೆ ಅನ್ನೋ ಸುಳ್ಳು ವದಂತಿಗಳಿಗೆ ಕಿವಿಕೊಡಬೇಡಿ; ಇಂಡಿಯನ್ ಆಯಿಲ್











Click it and Unblock the Notifications