ಎಸ್ಬಿಐ ಬಡ್ಡಿದರ ಏರಿಕೆ, ಗೃಹಸಾಲ ಪಡೆದವರಿಗೆ ಕಷ್ಟ!
ಬೆಂಗಳೂರು, ಮಾರ್ಚ್ 01: ಹೋಳಿ ಹಬ್ಬಕ್ಕೂ ಮುನ್ನವೇ ಗ್ರಾಹಕರಿಗೆ ಭರ್ಜರಿ ಉಡುಗೊರೆ ನೀಡಿದ್ದ ದೇಶದ ಅತಿದೊಡ್ಡ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಎಸ್ ಬಿಐ ಇಂದು ಗ್ರಾಹಕರಿಗೆ ಆಘಾತ ನೀಡಿದೆ.
ದೇಶದ ಅತ್ಯಂತ ದೊಡ್ಡ ಬ್ಯಾಂಕ್ ಸ್ಥಿರ ಠೇವಣಿ ಮೇಲೆ ನೀಡುವ ಬಡ್ಡಿಯನ್ನು ಶೇಕಡಾ 0.50ರಷ್ಟು ಏರಿಕೆ ಮಾಡಿತ್ತು. ಎಸ್ ಬಿ ಐ 1 ಕೋಟಿಗಿಂತ ಕಡಿಮೆ ಸ್ಥಿರ ಠೇವಣಿಯಿಟ್ಟ ಗ್ರಾಹಕರಿಂದ ಹಿಡಿದು 10 ಕೋಟಿ ರೂಪಾಯಿವರೆಗೆ ಸ್ಥಿರ ಠೇವಣಿಯಿಟ್ಟ ಎಲ್ಲರಿಗೂ ಸಿಗುವ ಬಡ್ಡಿಯಲ್ಲಿ ಏರಿಕೆ ಮಾಡಲಾಗಿತ್ತು.

ಆದರೆ, ಇಂದು ಬಹುತೇಕ ಅನೇಕ ಮೆಚ್ಯುರಿಟಿಗಳ ಮೇಲಿನ marginal cost based lending rates (MCLR) ಗಳನ್ನು ಏರಿಕೆ ಮಾಡಿದೆ. ಶೇ 7.95 ರಿಂದ ಶೇ 8.15ಕ್ಕೇರಿಯಾಗಿದ್ದು, ಏಪ್ರಿಲ್ 2016ರ ನಂತರ ಇದೇ ಮೊದಲ ಬಾರಿಗೆ ಎಂಸಿಎಲ್ ಆರ್ ದರಗಳನ್ನು ಪರಿಷ್ಕರಿಸಲಾಗಿದೆ. ಇದರಿಂದ ಸಾಲದ ಮೇಲಿನ ಬಡ್ಡಿದರ, ಇಎಂಐ ಹೆಚ್ಚಳವಾಗಲಿದೆ.
ಬಹುಕೋಟಿ ಹಗರಣದಲ್ಲಿ ಸಿಲುಕಿರುವ ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್ ಬಿ) ಕೂಡಾ ಮಾರ್ಚ್ 01, 2018ರಿಂದ ಜಾರಿಗೆ ಬರುವಂತೆ ಒಂದು ವರ್ಷ ಅವಧಿಯ ಎಂ ಸಿಎಲ್ ಆರ್ ದರವನ್ನು ಶೇ 8.15ರಿಂದ ಶೇ 8.30ಕ್ಕೇರಿಸಿದೆ.
ಎಸ್ಬಿಐ ಎಂಸಿಎಲ್ ಆರ್ ಬದಲಾವಣೆಯಿಂದ ಹೊಸ ಸಾಲ ಪಡೆಯುವವರ ಇಎಂಐ ಏರಿಕೆಯಾಗಲಿದೆ. ಆದರೆ, ಹಳೆ ಸಾಲದಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ. ಎಂಸಿಎಲ್ ಆರ್ ಆಧಾರದ ಮೇಲೆ ಗೃಹ ಸಾಲ, ವಾಹನ ಸಾಲ, ಶಿಕ್ಷಣ ಸಾಲ, ವೈಯಕ್ತಿಕ ಸಾಲ, ಆಸ್ತಿ ಮೇಲಿನ ಸಾಲಗಳ ಬಡ್ಡಿದರ, ಇಎಂಐ ನಿರ್ಧಾರವಾಗುತ್ತದೆ.
ಉದಾಹರಣೆಗೆ 2017ರ ನವೆಂಬರ್ ನಲ್ಲಿ ಒಂದು ವರ್ಷದ ಎಂಸಿಎಲ್ ಆರ್ ಗೆ ನಿಮ್ಮ ಗೃಹ ಸಾಲ ಜೋಡಣೆಯಾಗಿದ್ದರೆ ಚಿಂತಿಸಬೇಕಿಲ್ಲ, ನಿಮ್ಮ ಸಾಲದ ಮೇಲಿನ ಬಡ್ಡಿದರದ ಬದಲಾವಣೆ ನವೆಂಬರ್ 2018ರಿಂದ ಅನ್ವಯವಾಗಲಿದೆ. ಹೊಸ ಸಾಲಗಾರಿಗೆ ಮೂಲಾಂಶದ 20 ಅಂಶದಂತೆ ಸಾಲದ ಮೇಲಿನ ಬಡ್ಡಿದರ ಹೆಚ್ಚಳವಾಗಲಿದೆ.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications