ರಿಲಯನ್ಸ್ 3ನೇ ತ್ರೈಮಾಸಿಕ: ಶೇ 41ಕ್ಕೂ ಅಧಿಕ ಲಾಭ ದಾಖಲು
ಮುಂಬೈ, ಜನವರಿ 23: ರಿಲಯನ್ಸ್ ಇಂಡಸ್ಟ್ರೀಸ್ ನಿಂದ ಅಕ್ಟೋಬರ್- ಡಿಸೆಂಬರ್ 2020ರ ತ್ರೈಮಾಸಿಕ ಫಲಿತಾಂಶ ಶುಕ್ರವಾರ ಪ್ರಕಟಿಸಲಾಗಿದ್ದು, ಶೇಕಡಾ 40ಕ್ಕಿಂತ ಹೆಚ್ಚಿನ ಬೆಳವಣಿಗೆ ಪಡೆದುಕೊಂಡಿದೆ.
ಈ ತ್ರೈಮಾಸಿಕದಲ್ಲಿ ಕಂಪೆನಿಯ ನಿವ್ವಳ ಲಾಭ 15,015 ಕೋಟಿ ರುಪಾಯಿ ಬಂದಿದೆ. ಕಳೆದ ತ್ರೈಮಾಸಿಕಕ್ಕೆ ಹೋಲಿಸಿದಲ್ಲಿ 41.6% ಲಾಭ ಹೆಚ್ಚಾಗಿದೆ. ಇನ್ನು ಆದಾಯ 1,37,829 ಕೋಟಿ ರುಪಾಯಿ ಬಂದಿದ್ದು, ಕಳೆದ ತ್ರೈಮಾಸಿಕದಲ್ಲಿ ಬಂದಿದ್ದಕ್ಕಿಂತ 7.4% ಆದಾಯ ಹೆಚ್ಚಾಗಿದೆ.
ತೈಲದಿಂದ ರಾಸಾಯನಿಕದ ತನಕ (O2C) ವ್ಯವಹಾರ ನಡೆಸುವ ರಿಲಯನ್ಸ್ (RIL) ನಿವ್ವಳ ಲಾಭ 8744 ಕೋಟಿ ರುಪಾಯಿ ಬಂದಿದ್ದು, ಕಳೆದ ತ್ರೈಮಾಸಿಕಕ್ಕೆ ಹೋಲಿಸಿದರೆ 33.6% ಹೆಚ್ಚಿನ ಲಾಭ ದಾಖಲಿಸಿದೆ. ಇನ್ನು ಆದಾಯ 10.9% ಹೆಚ್ಚಳವಾಗಿ, ರು. 71,454 ಕೋಟಿ ತಲುಪಿದೆ. ಈ ತ್ರೈಮಾಸಿಕದಲ್ಲಿ ಕಂಪೆನಿಯ ರಫ್ತು ಪ್ರಮಾಣ ರು. 31,599 ಕೋಟಿ ಆಗಿದ್ದು, 8.5% ಕುಸಿತ ಆಗಿದೆ.

ಜಿಯೋ ಪ್ಲಾಟ್ ಫಾರ್ಮ್ ಸಮಗ್ರ ಫಲಿತಾಂಶ ಗಮನಿಸುವುದಾದರೆ, ಈ ತ್ರೈಮಾಸಿಕದ ನಿವ್ವಳ ಲಾಭ ರು. 3489 ಕೋಟಿ ಬಂದಿದ್ದು, ಕಳೆದ ತ್ರೈಮಾಸಿಕಕ್ಕೆ ಹೋಲಿಸಿದಲ್ಲಿ 15.5% ಬೆಳವಣಿಗೆ ದಾಖಲಿಸಿದೆ. ಇನ್ನು ಆದಾಯ ರು. 22,858 ಕೋಟಿ ರುಪಾಯಿ ಬಂದಿದ್ದು, 5.3% ಪ್ರಗತಿ ಕಂಡಿದೆ. ಡಿಸೆಂಬರ್ 31, 2020ಕ್ಕೆ ಗ್ರಾಹಕರ ಸಂಖ್ಯೆ 41.08 ಕೋಟಿ ಆಗಿದ್ದು, ನಿವ್ವಳವಾಗಿ 51.2 ಲಕ್ಷ ಗ್ರಾಹಕರು ಸೇರ್ಪಡೆ ಆಗಿದ್ದಾರೆ.
ಈ ತ್ರೈಮಾಸಿಕದಲ್ಲಿ ಬಳಕೆದಾರರ ಸರಾಸರಿ ತಲಾ ಆದಾಯ (ARPU) ಒಬ್ಬ ಗ್ರಾಹಕರಿಗೆ ತಿಂಗಳಿಗೆ ರು. 151.0 ಇದೆ. ಒಟ್ಟಾರೆ ಡೇಟಾ ಟ್ರಾಫಿಕ್ ಈ ತ್ರೈಮಾಸಿಕದಲ್ಲಿ 1,586 ಕೋಟಿ ಜಿಬಿ ಇದ್ದು, 4% ಬೆಳವಣಿಗೆ ಕಂಡಿದೆ.
ಇನ್ನು ರಿಲಯನ್ಸ್ ರೀಟೇಲ್ ನಿಂದ ರು. 1830 ಕೋಟಿ ಲಾಭ ಬಂದಿದೆ. ಕಳೆದ ತ್ರೈಮಾಸಿಕಕ್ಕೆ ಹೋಲಿಸಿದಲ್ಲಿ 88.1% ಹೆಚ್ಚಾಗಿದೆ. ಆದಾಯ ರು. 37,845 ಕೋಟಿ ಬಂದಿದ್ದು, 7.9%ನಷ್ಟು ಆದಾಯದಲ್ಲಿ ಇಳಿಕೆ ಆಗಿದೆ. ಈ ತ್ರೈಮಾಸಿಕದಲ್ಲಿ ಒಟ್ಟು 12,201 ಮಳಿಗೆಗಳು ಕಾರ್ಯ ನಿರ್ವಹಿಸಿವೆ. ಆ ಪೈಕಿ 327 ಮಳಿಗೆಗಳನ್ನು ಇದೇ ಅವಧಿಯಲ್ಲಿ ಆರಂಭಿಸಲಾಗಿದೆ.
ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಹಾಗೂ ಕಾರ್ಯನಿರ್ವಾಹಕ ನಿರ್ದೇಶಕರಾದ ಮುಕೇಶ್ ಅಂಬಾನಿ ಮಾತನಾಡಿ, "ಮಾರ್ಚ್ 2020ರಿಂದ ಈಚೆಗೆ ರಿಲಯನ್ಸ್ ನಿಂದ 50 ಸಾವಿರಕ್ಕೂ ಹೆಚ್ಚು ಜನರಿಗೆ ಉದ್ಯೋಗ ದೊರೆತಿದೆ ಎಂಬ ಬಗ್ಗೆ ಹೆಮ್ಮೆ ಆಗುತ್ತದೆ. ಅದರಲ್ಲೂ ಭಾರತದ ಆರ್ಥಿಕತೆ ಚೇತರಿಕೆ ಕಾಣುತ್ತಿರುವ ಹಂತದಲ್ಲಿ ರಿಲಯನ್ಸ್ ಕೂಡ ಅದ್ಭುತ ಪ್ರದರ್ಶನದ ಮೂಲಕ ಕೊಡುಗೆ ನೀಡುತ್ತಿರುವುದನ್ನು ವಿನಯಪೂರ್ವಕವಾಗಿ ಗಮನಕ್ಕೆ ತರಲು ಬಯಸುತ್ತದೆ" ಎಂದಿದ್ದಾರೆ.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications