ಲೈವ್ : ಮೇಕ್ ಇನ್ ಇಂಡಿಯಾ ಅಭಿಯಾನಕ್ಕೆ ಚಾಲನೆ
ನವದೆಹಲಿ, ಸೆ.25: ದೆಹಲಿಯ ವಿಜ್ಞಾನ ಭವನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಹೊಸ ಇತಿಹಾಸ ಸೃಷ್ಟಿಗೆ ಮುಂದಾಗಿದ್ದಾರೆ. ತಮ್ಮ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆ ಮೇಕ್ ಇನ್ ಇಂಡಿಯಾ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ಜಾಗತಿಕ ಮತ್ತು ಸ್ಥಳೀಯ ಉದ್ಯಮಿಗಳ ಬೃಹತ್ ಸಮಾವೇಶದ ಜೊತೆಗೆ ದೇಶದ ಉತ್ಪಾದನಾ ಕ್ಷೇತ್ರದಲ್ಲಿ ಸುಮಾರು 10೦ ಮಿಲಿಯನ್ ಉದ್ಯೋಗ ಸೃಷ್ಟಿಗೆ ಮುಂದಾಗಿದ್ದಾರೆ.
ಸ್ವಾತಂತ್ರ್ಯ ದಿನಾಚರಣೆ ದಿನದಂದು ಮೋದಿ ಅವರು ಕೆಂಪುಕೋಟೆ ಮುಂದೆ ನಿಂತು ಭಾಷಣ ಮಾಡುತ್ತಾ' ಮೇಕ್ ಇನ್ ಇಂಡಿಯಾ' ಅಭಿಯಾನದ ಬಗ್ಗೆ ಹೇಳಿದ್ದರು. ಈಗ ಮೇಕ್ ಇನ್ ಇಂಡಿಯಾದ ಧ್ಯೇಯ ವಾಕ್ಯ ಘೋಷಿಸಲಾಗಿತ್ತು. Goodbye red tape, hello red carpet ಎಂದು ಘೋಷಿಸಲಾಗಿದೆ.
ಸ್ವಾತಂತ್ರ್ಯ ದಿನಾಚರಣೆಯಂದು ಐತಿಹಾಸಿಕ ಕೆಂಪುಕೋಟೆ ಮೇಲೆ ಭಾಷಣ ಮಾಡುವ ಸಂದರ್ಭದಲ್ಲಿ ಪ್ರಧಾನಿ ಮೇಕ್ ಇನ್ ಇಂಡಿಯಾಕ್ಕೆ ಒತ್ತುಕೊಟ್ಟಿದ್ದರು. ದೇಶದ ಯುವ ಜನತೆಗೆ ಈ ಅಭಿಯಾನ ನೆರವಾಗಲಿದೆ. ಯುವ ಇಂಜಿನಿಯರ್ ಗಳು ದೇಶದ ಉತ್ಪಾದನಾ ಕ್ಷೇತ್ರಕ್ಕೆ ಬೆನ್ನಲುಬಾಗಿ ನಿಲ್ಲಬೇಕಿದೆ ಎಂದಿದ್ದರು.[ಪ್ರಧಾನಿ ಮೋದಿ ಭಾಷಣ ಸಾರಾಂಶ]
ಕುಮಾರ್ ಮಂಗಲಂ ಬಿರ್ಲಾ, ಅಜೀಂ ಪ್ರೇಂಜಿ, ಫಿಲ್ ಶಾ, ವೈಸಿ ದೇವೇಶ್ವರ್, ಮುಖೇಶ್ ಅಂಬಾನಿ, ಸುಜುಕಿಯ ಕೆನಿಛಿ ಅಯುಕವಾ ಸೇರಿದಂತೆ ಅನೇಕ ಪ್ರಮುಖ ಕಂಪನಿಗಳ ಮುಖ್ಯಸ್ಥರು ಮೇಕ್ ಇನ್ ಇಂಡಿಯಾ ಅಭಿಯಾನ ಚಾಲನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಹಲವು ಉದ್ಯಮಿಗಳು ನಿಂತುಕೊಂಡೇ ಮೋದಿ ಅವರ ಭಾಷಣ ಕೇಳುತ್ತಿದ್ದರು. ಇದನ್ನು ಕಂಡ ಮೋದಿ ಅವರು ಭಾಷಣದ ಆರಂಭದಲ್ಲೇ ಉದ್ಯಮಿಗಳ ಕ್ಷಮೆಯಾಚಿಸಿದರು.
"Make in India campaign is a #LionsStep" @narendramodi at #MakeInIndia launch.
— Make in India (@makeinindia_) September 25, 2014 
ಮೇಕ್ ಇನ್ ಇಂಡಿಯಾ ಲೋಗೋ
ಮೇಕ್ ಇನ್ ಇಂಡಿಯಾದ ಧ್ಯೇಯ ವಾಕ್ಯ: Goodbye red tape, hello red carpet
ಮೇಕ್ ಇನ್ ಇಂಡಿಯಾ ಟ್ವಿಟ್ಟರ್ ಐಡಿ: @makeinindia_
ವೆಬ್ ತಾಣ: http://www.makeinindia.com

ಪ್ರಧಾನಿ ಮೋದಿ ಭಾಷಣದ ಸಾರಾಂಶ
* ಮೇಕ್ ಇನ್ ಇಂಡಿಯಾ ಕೇವಲ ಅಭಿಯಾನವಲ್ಲ, ನಮ್ಮ ಜವಾಬ್ದಾರಿಯಾಗಿದೆ
* FDI = First Development India ಎಂದಾಗಬೇಕು.
* ಕೌಶಲ್ಯ ಅಭಿವೃದ್ಧಿಗೆ PPP ಯೋಜನೆ ಮಾದರಿಯಲ್ಲಿ ಅಭಿಯಾನ ಬೇಕಿದೆ
* ಭಾರತದ ಬಡತನ ನಿವಾರಣೆಗೆ ಉದ್ಯೋಗ ನೀಡೋಣ ಆಗ ಗ್ರಾಹಕರ ಸಂಖ್ಯೆ ಹೆಚ್ಚುತ್ತದೆ
* ನಿನ್ನೆಯ ಮಂಗಳಯಾನ ಯಶಸ್ಸಿನ ನಂತರ ಭಾರತದ ಪ್ರತಿಭೆ ಬಗ್ಗೆ ಯಾರೂ ಎದುರು ಮಾತನಾಡುವುದಿಲ್ಲ.
* ಉದ್ಯಮಿಗಳೆ ನಿಮ್ಮ ಬಂಡವಾಳ ನಷ್ಟವಾಗದಂತೆ ಮೇಕ್ ಇನ್ ಇಂಡಿಯಾ ಅಭಿಯಾನ ರೂಪಿಸಲಾಗಿದೆ
* 'Look East' and 'Link West' policy in the country and we will move towards it
* ಉದ್ಯಮಿಗಳೆ ದೇಶ ತೊರೆಯಬೇಡಿ, ಭಾರತದ ಕಂಪನಿಗಳು ಇಲ್ಲೇ ಬೇರೂರಿ ಬಹುರಾಷ್ಟ್ರೀಯ ಕಂಪನಿಗಳಾಗಬಹುದು
ಕಾರ್ಯಕ್ರಮದ ನೇರ ಪ್ರಸಾರ ವಿಡಿಯೋ
ವಿಜ್ಞಾನ ಭವನದಲ್ಲಿ ನಡೆದಿರುವ ಕಾರ್ಯಕ್ರಮದ ನೇರ ಪ್ರಸಾರ ವಿಡಿಯೋ

ಎಷ್ಟು ಕಂಪನಿಗಳು ಪಾಲ್ಗೊಳ್ಳಲಿವೆ
ಒಟ್ಟಾರೆ ವಿವಿಧ ಕಂಪನಿಗೆ ಸೇರಿದ 500ಕ್ಕೂ ಅಧಿಕ ಸಿಇಒಗಳು, ಪ್ರತಿನಿಧಿಗಳು ಭಾಗವಹಿಸಿದ್ದಾರೆ. ಅಮೆರಿಕ, ಜಪಾನ್, ಕೊರಿಯಾ, ಸ್ವೀಡನ್, ಆಸ್ಟ್ರೇಲಿಯಾ, ಪೋಲ್ಯಾಂಡ್, ಚೀನಾ, ಇಟಲಿ, ಜರ್ಮನಿ, ಫ್ರಾನ್ಸ್ ಸೇರಿದಂತೆ ಅನೇಕ ರಾಷ್ಟ್ರಗಳ ವಾಣಿಜ್ಯ ಉದ್ಯಮಿಗಳು ಮತ್ತು ಭಾರತದ ಖ್ಯಾತ ಉದ್ಯಮಿಗಳು ಇದರಲ್ಲಿ ಪಾಲ್ಗೊಂಡಿದ್ದಾರೆ

ಎಷ್ಟು ಕ್ಷೇತ್ರದಲ್ಲಿ ಅಭಿಯಾನ ಅಳವಡಿಕೆ?
ಎನ್ ಡಿಎ ಸರ್ಕಾರ ಸುಮಾರು 25 ಪ್ರಮುಖ ವಲಯಗಳನ್ನು ಗುರುತಿಸಿದೆ. ಈ ವಲಯಗಳಿಗೆ ಸಂಬಂಧಿಸಿದ ವಿವರಣೆಗಳ ಕೈಪಿಡಿಯನ್ನು ಪ್ರಧಾನಿ ಮೋದಿ ಅವರು ಬುಧವಾರವೇ ಬಿಡುಗಡೆಗೊಳಿಸಿದ್ದಾರೆ.
ಆಟೋಮೊಬೈಲ್, ಕೆಮಿಕಲ್, ಮಾಹಿತಿ ತಂತ್ರಜ್ಞಾನ, ಔಷಧ, ಜವಳಿ, ಬಂದರು, ವೈಮಾನಿಕ, ಚರ್ಮ, ಪ್ರವಾಸೋದ್ಯಮ, ಆತಿಥ್ಯೋದ್ಯಮ, ಆರೋಗ್ಯ, ರೈಲ್ವೆ, ಡಿಸೈನ್ ಉತ್ಪಾದನೆ, ಗಣಿಗಾರಿಕೆ, ಜೈವಿಕ ತಂತ್ರಜ್ಞಾನ, ಎಲೆಕ್ಟ್ರಾನಿಕ್ ಮುಂತಾದ ಕ್ಷೇತ್ರಗಳಿವೆ.
ಚಿತ್ರದಲ್ಲಿ : ಕುಮಾರ್ ಮಂಗಲಂ ಬಿರ್ಲಾ |
ಮೋದಿ ಭಾಷಣದ ಟ್ವೀಟ್
ಮೋದಿ ಭಾಷಣ ಟ್ವೀಟ್ ಮಾಡಿದ ಮೇಕ್ ಇನ್ ಇಂಡಿಯಾ ಖಾತೆ. ವಿಜ್ಞಾನ ಭವನದಲ್ಲಿ ಉದ್ಯಮಿಗಳಿಗೆ ಕುಳಿತುಕೊಳ್ಳಲು ಸ್ಥಳವಕಾಶ ಸಿಗದಿದ್ದಕ್ಕಾಗಿ ಕ್ಷಮೆಯಾಚಿಸಿದ ಮೋದಿ ಅಭೂತ ಪೂರ್ವ ಭಾಷಣ ಮಾಡಿದರು.
|
ವೈ ಸಿ ದೇವೇಶ್ವರ್ ಅವರ ಮಾತುಗಳು
ಉದ್ಯಮಿ ಐಟಿಸಿ ಚೇರ್ಮನ್ ವೈ ಸಿ ದೇವೇಶ್ವರ್ ಅವರ ಮಾತುಗಳು
|
ಫಿಲ್ ಶಾ ಅವರ ಭಾಷಣ
ಫಿಲ್ ಶಾ ಅವರ ಭಾಷಣದಲ್ಲಿ ಹೇಳಿದ ಮಾತುಗಳಿವು.
|
ಉದ್ಯಮಿ ಫಿಲ್ ಶಾ ಮಾತುಗಳಿವು
ಉದ್ಯಮಿ ಲಾಕ್ ಶೀಡ್ ಮಾರ್ಟಿನ್ ಇಂಡಿಯಾ ಕಂಪನಿ ಸಿಇಒ ಫಿಲ್ ಶಾ ಮಾತುಗಳಿವು
|
ಅಭಿಯಾನದ ಮುಖ್ಯ ಉದ್ದೇಶ ಇದೆ
ಅಭಿಯಾನದ ಮುಖ್ಯ ಉದ್ದೇಶ ಏನು ಎಂಬುದನ್ನು ವಿಷದಪಡಿಸಿದ ಪ್ರಧಾನಿ ಸಚಿವಾಲಯ
-
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ












Click it and Unblock the Notifications