ಹೊಸದಾಗಿ ಬರುತ್ತಿರುವ 500 ರು. ನೋಟಿನ ಬಗ್ಗೆ ಆರ್ ಬಿಐ ಹೇಳೋದೇನು?
ಹೊಸದಾಗಿ 500 ರು. ನೋಟುಗಳನ್ನು ಬಿಡುಗಡೆಗೊಳಿಸಲು ಭಾರತೀಯ ರಿಸರ್ವ್ ಬ್ಯಾಂಕ್ ಸಜ್ಜಾಗಿದೆ. ಹಾಗಾಗಿ, ಹೊಸ ನೋಟುಗಳ ಬಗ್ಗೆ ಮಾಹಿತಿಯನ್ನು ಅದು ಪ್ರಕಟಿಸಿದೆ. ಅದರಂತೆ, ನೋಟಿನ ಮುಂಭಾಗದಲ್ಲಿ ಈವರೆಗೆ ಇದ್ದ 'A' ಅಕ್ಷರದ ಬದಲಿಗೆ 'E' ಅಕ್ಷರ
ನವದಹೆಲಿ, ಜೂನ್ 13: ಹೊಸ 500 ರು.ಗಳ ನೋಟುಗಳು ಸದ್ಯದಲ್ಲೇ ಚಲಾವಣೆಗೆ ಬರಲಿವೆ. ಹಾಗಾಗಿ, ಈ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಸಲುವಾಗಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ), ಹೊಸ ನೋಟಿನಲ್ಲಿ ಇರುವ ಅಂಶಗಳ ಬಗ್ಗೆ ಪ್ರಕಟಣೆ ನೀಡಿದೆ.
ನೋಟುಗಳ ಮುಂಭಾಗದಲ್ಲಿ ಈವರೆಗೆ ಇಂಗ್ಲೀಷ್ ನ E ಅಕ್ಷರದ ಬದಲಾಗಿ, A ಅಕ್ಷರ ಇರುತ್ತದೆ ಎಂದು ಹೇಳಿರುವ ಆರ್ ಬಿಐ, ಈಗ ಚಾಲ್ತಿಯಲ್ಲಿರುವ 500 ರು. ನೋಟುಗಳಲ್ಲಿರುವ ಮಿಕ್ಕ ಯಾವ ವಿಚಾರಗಳೂ ಹೊಸ ನೋಟುಗಳಲ್ಲಿ ಬದಲಾಗಿಲ್ಲ ಎಂದು ಸ್ಪಷ್ಟಪಡಿಸಿದೆ. ಹಾಗಾಗಿ, ಈಗ ನೋಟಿನ ಬದಲಾಗುವ ಅಂಶಗಳ ಜತೆಗೆ ಬದಲಾಗದ ಅಂಶಗಳನ್ನೂ ಈ ಕೆಳಗಿನಂತೆ ಪಟ್ಟಿ ಮಾಡಿಕೊಟ್ಟಿದೆ ಆರ್ ಬಿಐ.
ಆದರೆ, ಹೊಸ 2000 ಮುಖಬೆಲೆಯ ನೋಟುಗಳ ಬಗ್ಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಏನನ್ನೂ ಹೇಳಿಲ್ಲ. ಸದ್ಯಕ್ಕೆ 500 ರು. ಮುಖಬೆಲೆಯ ನೋಟುಗಳಲ್ಲಿನ ಸಣ್ಣ ವ್ಯತ್ಯಾಸದ ಬಗ್ಗೆ ಮಾತ್ರ ಹೇಳಿದೆ.

ಭಾವಚಿತ್ರ ಯಥಾವತ್ತು
ಹಾಲಿ ಚಾಲ್ತಿಯಲ್ಲಿರುವ 500 ರು. ನೋಟುಗಳಲ್ಲಿರುವ ಗುಣಲಕ್ಷಣಗಳನ್ನೇ ಹೋಲುತ್ತದೆ. ಮಹಾತ್ಮ ಗಾಂಧಿಯವರ ಭಾವಚಿತ್ರದಲ್ಲೂ ಯಾವುದೇ ಬದಲಾವಣೆ ಮಾಡಲಾಗಿಲ್ಲ ಎಂದು ಆರ್ ಬಿಐ ಹೇಳಿದೆ.

ಆಂಗ್ಲ ಭಾಷೆಯ ಎ ಅಕ್ಷರ
ಈಗ ಚಾಲ್ತಿಯಲ್ಲಿರುವ ಐದು ನೂರು ನೋಟುಗಳ ಮುಂಭಾಗದ ಹಾಗೂ ಕೆಳಗೆ 'E' ಅಕ್ಷರವನ್ನು ಕಾಣಬಹುದು. ಹೊಸ ನೋಟುಗಳಲ್ಲಿ 'A' ಅಕ್ಷರವನ್ನು ಕಾಣಬಹುದು.

ಮುಖಬೆಲೆಯೂ ಅಲ್ಲೇ
ಹೊಸ ಐನೂರರ ನೋಟಿನಲ್ಲಿ, ಹಳೇ ನೋಟಿನಲ್ಲಿದ್ದಂತೆ ಇಂಟಾಗ್ಲಿಯೋ ಪ್ರಿಂಟಿಂಗ್ ತಂತ್ರಜ್ಞಾನದಲ್ಲಿ ಮೂಡಿಬಂದ ಮಹಾತ್ಮ ಗಾಂಧಿ ಭಾವಚಿತ್ರ, ಅಶೋಕ ಸ್ತಂಭ, ರಾಷ್ಟ್ರ ಲಾಂಛನ, ಬ್ಲೀಡ್ ಲೈನ್ ಗಳು ಹಾಗೂ ವೃತ್ತದೊಳಗೆ 500 ಮುಖಬೆಲೆ - ಈ ಎಲ್ಲವೂ ಆಯಾ ಜಾಗಗಳಲ್ಲೇ ಇರುತ್ತವೆ. ಇದರಲ್ಲಿ ಯಾವುದೇ ವ್ಯತ್ಯಾಸವಿಲ್ಲ. ಹೊಸ ನೋಟು ಎಂದು ನಿಮಲ್ಲಿಗೆ ಬರುವ ಯಾವುದೇ ನೋಟುಗಳಲ್ಲಿ ಇವು ವ್ಯತ್ಯಾಸವಾಗಿದ್ದರೆ ತಕ್ಷಣ ಆರ್ ಬಿಐ ಸಂಪರ್ಕಿಸಬಹುದು.

ಲೋಗೋಗಳ ಸ್ಥಾನಗಳಲ್ಲಿ ವ್ಯತ್ಯಾಸವಿಲ್ಲ
ನೋಟಿನ ಮುಂಭಾಗದಲ್ಲಿ ಆರ್ ಬಿಐ ಗವರ್ನರ್ ಊರ್ಜಿತ್ ಪಟೇಲ್ ಸಹಿ ಇದೆ. ನೋಟು ಪ್ರಿಂಟ್ ಆದ ವರ್ಷ, ಸ್ವಚ್ಛ ಭಾರತ ಲೋಗೋಗಳು ನೋಟಿದ ಹಿಂಬದಿಯಲ್ಲಿವೆ.

ಏನೂ ವ್ಯತ್ಯಾಸವಿಲ್ಲ
ಅಲ್ಲದೆ, ದೆಹಲಿಯ ಕೆಂಪು ಕೋಟೆಯ ಚಿತ್ರವೂ ಇರುತ್ತದೆ. ಇದರಲ್ಲೂ ಯಾವುದೇ ವ್ಯತ್ಯಾಸವಾಗಿರುವುದಿಲ್ಲ.
-
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Shivam Dube: ಶಿವಂ ದುಬೆ ಸಾಧನೆಗೆ ಮನಸಾರೆ ಮೆಚ್ಚುಗೆ ಸೂಚಿಸಿದ ಪತ್ನಿ ಅಂಜುಮ್ ಖಾನ್: ಇನ್ಸ್ಟಾ ಪೋಸ್ಟರ್ ಭಾರೀ ವೈರಲ್ -
Fact Check: ಟಿ20 ವಿಶ್ವಕಪ್ ಫೈನಲ್ ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆ ವೇಳೆ ಕಣ್ಣೀರಿಟ್ಟ ಕಿವೀಸ್ ಆಟಗಾರ ಇಶ್ ಸೋಧಿ -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ












Click it and Unblock the Notifications