ಹೊಸದಾಗಿ ಬರುತ್ತಿರುವ 500 ರು. ನೋಟಿನ ಬಗ್ಗೆ ಆರ್ ಬಿಐ ಹೇಳೋದೇನು?
ಹೊಸದಾಗಿ 500 ರು. ನೋಟುಗಳನ್ನು ಬಿಡುಗಡೆಗೊಳಿಸಲು ಭಾರತೀಯ ರಿಸರ್ವ್ ಬ್ಯಾಂಕ್ ಸಜ್ಜಾಗಿದೆ. ಹಾಗಾಗಿ, ಹೊಸ ನೋಟುಗಳ ಬಗ್ಗೆ ಮಾಹಿತಿಯನ್ನು ಅದು ಪ್ರಕಟಿಸಿದೆ. ಅದರಂತೆ, ನೋಟಿನ ಮುಂಭಾಗದಲ್ಲಿ ಈವರೆಗೆ ಇದ್ದ 'A' ಅಕ್ಷರದ ಬದಲಿಗೆ 'E' ಅಕ್ಷರ
ನವದಹೆಲಿ, ಜೂನ್ 13: ಹೊಸ 500 ರು.ಗಳ ನೋಟುಗಳು ಸದ್ಯದಲ್ಲೇ ಚಲಾವಣೆಗೆ ಬರಲಿವೆ. ಹಾಗಾಗಿ, ಈ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಸಲುವಾಗಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ), ಹೊಸ ನೋಟಿನಲ್ಲಿ ಇರುವ ಅಂಶಗಳ ಬಗ್ಗೆ ಪ್ರಕಟಣೆ ನೀಡಿದೆ.
ನೋಟುಗಳ ಮುಂಭಾಗದಲ್ಲಿ ಈವರೆಗೆ ಇಂಗ್ಲೀಷ್ ನ E ಅಕ್ಷರದ ಬದಲಾಗಿ, A ಅಕ್ಷರ ಇರುತ್ತದೆ ಎಂದು ಹೇಳಿರುವ ಆರ್ ಬಿಐ, ಈಗ ಚಾಲ್ತಿಯಲ್ಲಿರುವ 500 ರು. ನೋಟುಗಳಲ್ಲಿರುವ ಮಿಕ್ಕ ಯಾವ ವಿಚಾರಗಳೂ ಹೊಸ ನೋಟುಗಳಲ್ಲಿ ಬದಲಾಗಿಲ್ಲ ಎಂದು ಸ್ಪಷ್ಟಪಡಿಸಿದೆ. ಹಾಗಾಗಿ, ಈಗ ನೋಟಿನ ಬದಲಾಗುವ ಅಂಶಗಳ ಜತೆಗೆ ಬದಲಾಗದ ಅಂಶಗಳನ್ನೂ ಈ ಕೆಳಗಿನಂತೆ ಪಟ್ಟಿ ಮಾಡಿಕೊಟ್ಟಿದೆ ಆರ್ ಬಿಐ.
ಆದರೆ, ಹೊಸ 2000 ಮುಖಬೆಲೆಯ ನೋಟುಗಳ ಬಗ್ಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಏನನ್ನೂ ಹೇಳಿಲ್ಲ. ಸದ್ಯಕ್ಕೆ 500 ರು. ಮುಖಬೆಲೆಯ ನೋಟುಗಳಲ್ಲಿನ ಸಣ್ಣ ವ್ಯತ್ಯಾಸದ ಬಗ್ಗೆ ಮಾತ್ರ ಹೇಳಿದೆ.

ಭಾವಚಿತ್ರ ಯಥಾವತ್ತು
ಹಾಲಿ ಚಾಲ್ತಿಯಲ್ಲಿರುವ 500 ರು. ನೋಟುಗಳಲ್ಲಿರುವ ಗುಣಲಕ್ಷಣಗಳನ್ನೇ ಹೋಲುತ್ತದೆ. ಮಹಾತ್ಮ ಗಾಂಧಿಯವರ ಭಾವಚಿತ್ರದಲ್ಲೂ ಯಾವುದೇ ಬದಲಾವಣೆ ಮಾಡಲಾಗಿಲ್ಲ ಎಂದು ಆರ್ ಬಿಐ ಹೇಳಿದೆ.

ಆಂಗ್ಲ ಭಾಷೆಯ ಎ ಅಕ್ಷರ
ಈಗ ಚಾಲ್ತಿಯಲ್ಲಿರುವ ಐದು ನೂರು ನೋಟುಗಳ ಮುಂಭಾಗದ ಹಾಗೂ ಕೆಳಗೆ 'E' ಅಕ್ಷರವನ್ನು ಕಾಣಬಹುದು. ಹೊಸ ನೋಟುಗಳಲ್ಲಿ 'A' ಅಕ್ಷರವನ್ನು ಕಾಣಬಹುದು.

ಮುಖಬೆಲೆಯೂ ಅಲ್ಲೇ
ಹೊಸ ಐನೂರರ ನೋಟಿನಲ್ಲಿ, ಹಳೇ ನೋಟಿನಲ್ಲಿದ್ದಂತೆ ಇಂಟಾಗ್ಲಿಯೋ ಪ್ರಿಂಟಿಂಗ್ ತಂತ್ರಜ್ಞಾನದಲ್ಲಿ ಮೂಡಿಬಂದ ಮಹಾತ್ಮ ಗಾಂಧಿ ಭಾವಚಿತ್ರ, ಅಶೋಕ ಸ್ತಂಭ, ರಾಷ್ಟ್ರ ಲಾಂಛನ, ಬ್ಲೀಡ್ ಲೈನ್ ಗಳು ಹಾಗೂ ವೃತ್ತದೊಳಗೆ 500 ಮುಖಬೆಲೆ - ಈ ಎಲ್ಲವೂ ಆಯಾ ಜಾಗಗಳಲ್ಲೇ ಇರುತ್ತವೆ. ಇದರಲ್ಲಿ ಯಾವುದೇ ವ್ಯತ್ಯಾಸವಿಲ್ಲ. ಹೊಸ ನೋಟು ಎಂದು ನಿಮಲ್ಲಿಗೆ ಬರುವ ಯಾವುದೇ ನೋಟುಗಳಲ್ಲಿ ಇವು ವ್ಯತ್ಯಾಸವಾಗಿದ್ದರೆ ತಕ್ಷಣ ಆರ್ ಬಿಐ ಸಂಪರ್ಕಿಸಬಹುದು.

ಲೋಗೋಗಳ ಸ್ಥಾನಗಳಲ್ಲಿ ವ್ಯತ್ಯಾಸವಿಲ್ಲ
ನೋಟಿನ ಮುಂಭಾಗದಲ್ಲಿ ಆರ್ ಬಿಐ ಗವರ್ನರ್ ಊರ್ಜಿತ್ ಪಟೇಲ್ ಸಹಿ ಇದೆ. ನೋಟು ಪ್ರಿಂಟ್ ಆದ ವರ್ಷ, ಸ್ವಚ್ಛ ಭಾರತ ಲೋಗೋಗಳು ನೋಟಿದ ಹಿಂಬದಿಯಲ್ಲಿವೆ.

ಏನೂ ವ್ಯತ್ಯಾಸವಿಲ್ಲ
ಅಲ್ಲದೆ, ದೆಹಲಿಯ ಕೆಂಪು ಕೋಟೆಯ ಚಿತ್ರವೂ ಇರುತ್ತದೆ. ಇದರಲ್ಲೂ ಯಾವುದೇ ವ್ಯತ್ಯಾಸವಾಗಿರುವುದಿಲ್ಲ.
-
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Bengaluru Property Tax: ಆಸ್ತಿ ತೆರಿಗೆ ಸ್ವೀಕಾರಕ್ಕಾಗಿ ರಾತ್ರಿ 10ಗಂಟೆವರೆಗೆ ಪಾಲಿಕೆ ಕಚೇರಿ ಓಪನ್ -
Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಭರ್ಜರಿ ಏರಿಕೆ: ಇಲ್ಲಿದೆ ಮಾರ್ಚ್ 30ರ ದರಪಟ್ಟಿ -
Hardik Pandya: ಕೇವಲ 35 ದಿನಗಳಲ್ಲಿ ಕೋಟಿ.. ಕೋಟಿ ಖರ್ಚು ಮಾಡಿದ ಹಾರ್ದಿಕ್ ಪಾಂಡ್ಯ; ಇಲ್ಲಿದೆ ಪಟ್ಟಿ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ












Click it and Unblock the Notifications