ಕಾರು ಕೊಳ್ಳುವ ಕನಸಿಗೆ ತಡೆ ಹಾಕಿದ ಮಾರುತಿ ಸುಝುಕಿ
ಬೆಂಗಳೂರು, ಡಿಸೆಂಬರ್ 03 : ಹೊಸ ವರ್ಷದಲ್ಲಿ ಕಾರು ಕೊಳ್ಳಲು ಯೋಜನೆ ಹಾಕಿಕೊಂಡಿದ್ದರೆ ಇದು ಕಹಿ ಸುದ್ದಿ. ಮಾರುತಿ ಸುಝುಕಿ ಇಂಡಿಯಾ ಜನವರಿಯಲ್ಲಿ ಕಾರುಗಳ ಬೆಲೆಗಳನ್ನು ಹೆಚ್ಚಿಸಲಾಗುತ್ತದೆ ಎಂದು ಘೋಷಣೆ ಮಾಡಿದೆ.
ವಿವಿಧ ಮಾದರಿಯ ಕಾರುಗಳ ಬೆಲೆಗಳನ್ನು 2020ರ ಜನವರಿಯಿಂದ ಏರಿಕೆ ಮಾಡಲಾಗುತ್ತದೆ ಎಂದು ಮಾರುತಿ ಸುಝುಕಿ ಇಂಡಿಯಾ ಹೇಳಿದೆ. ಆದರೆ, ಯಾವ ಮಾದರಿಯ ಕಾರುಗಳ ಬೆಲೆ ಹೆಚ್ಚಾಗಲಿದೆ ಎಂಬ ಗುಟ್ಟನ್ನು ಕಂಪನಿ ಬಿಟ್ಟುಕೊಟ್ಟಿಲ್ಲ.
ಅರೇನಾ ಮತ್ತು ನೆಕ್ಸಾ ಎಂಬ ವಿಭಾಗಗಳಲ್ಲಿ ಮಾರುತಿ ಕಾರುಗಳನ್ನು ಮಾರಾಟ ಮಾಡುತ್ತದೆ. ಈಗ ಉತ್ಪಾದನಾ ವೆಚ್ಚವನ್ನು ಸರಿದೂಗಿಸಲು ಕಾರುಗಳ ಬೆಲೆಗಳನ್ನು ಏರಿಕೆ ಮಾಡಲಾಗುತ್ತದೆ ಎಂದು ಕಂಪನಿ ಹೇಳಿದೆ.

ಕಳೆದ ಹಲವು ವರ್ಷಗಳಿಂದ ಉತ್ಪಾದನಾ ವೆಚ್ಚ ಅಧಿಕವಾಗುತ್ತಿದೆ. ಆದ್ದರಿಂದ, ಕಾರುಗಳ ಬೆಲೆಯನ್ನು ಹೆಚ್ಚಳ ಮಾಡಬೇಕಿದೆ. ಜನವರಿ ತಿಂಗಳಿನಿಂದ ಕಾರುಗಳ ಬೆಲೆಯನ್ನು ಏರಿಕೆ ಮಾಡಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಅರೇನಾ ಡೀಲರ್ ಶಿಪ್ ಮೂಲಕ ಆಲ್ಟೋ, ವ್ಯಾಗ್ಯನಾರ್, ಸೆಲೆರಿಯೋ, ಸಿಫ್ಟ್, ಸಿಫ್ಟ್ ಡಿಸೈರ್, ಬ್ರೀಝಾ ಮುಂತಾದ ಕಾರುಗಳನ್ನು ಮಾರುತಿ ಮಾರಾಟ ಮಾಡುತ್ತಿದೆ. ನೆಕ್ಸಾದಡಿ ಇಗ್ನೀಸ್, ಬಲೇನೋ, ಎಸ್-ಕ್ರಾಸ್, ಎಕ್ಸ್ಎಲ್ 6 ಮುಂತಾದವುಗಳ ಮಾರಾಟ ನಡೆಯುತ್ತದೆ.
2019ರ ಅಕ್ಟೋಬರ್ ತಿಂಗಳಿನಲ್ಲಿ ಮಾರುತಿ ಸುಝುಕಿ ಇಂಡಿಯಾದ ಕಾರುಗಳ ಮಾರಾಟದಲ್ಲಿ 4.5ರಷ್ಟು ಏರಿಕೆ ಕಂಡಿತ್ತು. ಬೆಲೆಗಳು ಏರಿಕೆ ಕಂಡ ಬಳಿಕ ಜನವರಿಯಲ್ಲಿ ಮಾರಾಟ ಹೆಚ್ಚಾಗಲಿದೆಯೇ? ಎಂದು ಕಾದು ನೋಡಬೇಕು.
ನವೆಂಬರ್ ತಿಂಗಳಿನಲ್ಲಿ ಕಂಪನಿಯ ಸಣ್ಣ ಕಾರುಗಳ ಮಾರಾಟ ಕಡಿಮೆ ಇತ್ತು. ಕಾಂಪ್ಯಾಕ್ಟ್ ಮಾದರಿಯ ಸಿಫ್ಟ್, ಸೆಲೆರಿಯೊ, ಇಗ್ನಿಸ್, ಬಲೇನೋ, ಡಿಸೈರ್ ಮಾದರಿ ಕಾರುಗಳ ಮಾರಾಟ ಹೆಚ್ಚಳವಾಗಿತ್ತು.
ಮಾರುತಿ ಸುಝುಕಿ 17 ಮಾದರಿಯ ಕಾರುಗಳನ್ನು ಹೊಂದಿದೆ. ಜನವರಿಯಲ್ಲಿ ಇನ್ನೂ 2 ಹೊಸ ಮಾದರಿಯ ಕಾರುಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದೆ. ಜನವರಿಯಿಂದ ಡೀಸೆಲ್ ಕಾರುಗಳ ಬದಲು ಸಿಎನ್ಜಿ ಕಾರುಗಳ ಉತ್ಫಾದನೆ ಹೆಚ್ಚಿಲು ಕಂಪನಿ ಚಿಂತನೆ ನಡೆಸಿದೆ.
-
ಪ್ರಧಾನಿ ಮೋದಿಗೆ ಕರೆ ಮಾಡಿದ ಟ್ರಂಪ್: ಶಾಂತಿ ಸ್ಥಾಪನೆಗೆ ಭಾರತದ ಬೆಂಬಲ, ಮಹತ್ವ ಮಾತುಕತೆ -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ












Click it and Unblock the Notifications