ಮತ್ತೆ ಕುಸಿತ ಕಂಡ ಎಲ್ಐಸಿ ಷೇರು: ಹೂಡಿಕೆದಾರರಿಗೆ ಭಾರಿ ನಷ್ಟ
ದೆಹಲಿ, ಜೂನ್ 6: ಭಾರಿ ನಿರೀಕ್ಷೆಯೊಂದಿಗೆ ಷೇರುಮಾರುಕಟ್ಟೆಗೆ ಪ್ರವೇಶಿಸಿದ್ದ ಭಾರತೀಯ ಜೀವ ವಿಮಾ ನಿಗಮದ (ಎಲ್ಐಸಿ) ಷೇರುಗಳು ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಕುಸಿದಿದ್ದು ಹೂಡಿಕೆದಾರರು ಭಾರಿ ನಷ್ಟ ಅನುಭವಿಸಿದ್ದಾರೆ.
ಸೋಮವಾರ ಎಲ್ಐಸಿ ಷೇರು ಬೆಲೆ ಸೋಮವಾರದ ದಿನದಾಂತ್ಯಕ್ಕೆ 800 ರೂಪಾಯಿಗಿಂತ ಕಡಿಮೆಯಾಗಿ, 776.50 ರೂಪಾಯಿಯಲ್ಲಿ ದಿನದ ವಹಿವಾಟು ಕೊನೆಗೊಳಿಸಿದೆ. ಷೇರಿನ ಐಪಿಒ ವಿತರಣೆ ಬೆಲೆ 949 ರೂಪಾಯಿಗಳಿಗೆ ಹೋಲಿಸಿದರೆ ಸದ್ಯದ ಬೆಲೆ ಶೇ.23.75ಕ್ಕಿಂತ ಕಡಿಮೆಯಾಗಿವೆ.
ಷೇರುಗಳ ಬೆಲೆಯಲ್ಲಿನ ಕುಸಿತದೊಂದಿಗೆ ಎಲ್ಐಸಿ ಮಾರುಕಟ್ಟೆ ಮೌಲ್ಯ 5 ಲಕ್ಷ ಕೋಟಿ ರೂಪಾಯಿಗಳಿಗಿಂತ ಕೆಳಕ್ಕಿಳಿದು, 4.92 ಲಕ್ಷ ಕೋಟಿ ರೂಪಾಯಿಗೆ ತಲುಪಿದೆ. ಐಪಿಒದಲ್ಲಿ ಷೇರು ವಿತರಣೆ ವೇಳೆ ಎಲ್ಐಸಿ ಮಾರುಕಟ್ಟೆ ಮೌಲ್ಯ 6,00,242 ಕೋಟಿ ರೂಪಾಯಿಗಳಷ್ಟಿತ್ತು. ಇದುವರೆಗೂ ಒಟ್ಟಾರೆ ಕಂಪನಿ ಮೌಲ್ಯ 1.08 ಲಕ್ಷ ಕೋಟಿ ಕಡಿಮೆಯಾಗಿದೆ. ಈ ಕುಸಿತದೊಂದಿಗೆ ಎಲ್ಐಸಿ ಸದ್ಯ ಅತ್ಯಮೂಲ್ಯ ಕಂಪನಿ ರ್ಯಾಂಕಿಂಗ್ನಲ್ಲಿ ಏಳನೇ ಸ್ಥಾನದಲ್ಲಿದೆ.

2022ರ ಮೇ 17 ರಂದು ಎಲ್ಐಸಿ ಷೇರುಗಳು ಮಾರುಕಟ್ಟೆಯಲ್ಲಿ ಪಟ್ಟಿ ಮಾಡಲ್ಪಟ್ಟಿದ್ದವು. ಷೇರುಗಳು ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸುತ್ತವೆ ಎಂದೇ ನಂಬಲಾಗಿತ್ತು. ದೇಶದ ಜನರಲ್ಲಿ, ಹೂಡಿಕೆದಾರರಲ್ಲಿ ಎಲ್ಐಸಿ ಷೇರು ಕುರಿತು ಭಾರಿ ಕುತೂಹಲ ಮೂಡಿಸಿತ್ತು. ದೀರ್ಘಾವಧಿಯ ನಿರೀಕ್ಷೆ ಮತ್ತು ಗಾತ್ರದಲ್ಲಿ ತೀವ್ರ ಕಡಿತದ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ತೀವ್ರ ಬೇಡಿಕೆ ಸೃಷ್ಟಿಯಾಗಬಹುದು ಎನ್ನಲಾಗಿತ್ತು.
ನಿರೀಕ್ಷೆಯೊಂದಿಗೆ ಮಾರುಕಟ್ಟೆಗೆ ಬಂದ ಷೇರುಗಳು ಪ್ರಾರಂಭದಿಂದಲೇ ನಿರಂತರ ಕುಸಿತ ಕಾಣುತ್ತಿವೆ. ಅಂದಿನಿಂದ ಇಂದಿನವರೆಗೂ ಕೇವಲ ನಾಲ್ಕು ವಹಿವಾಟುಗಳಲ್ಲಿ ಮಾತ್ರ ಗಳಿಕೆ ಕಂಡಿವೆ, ಉಳಿದ ದಿನಗಳಲ್ಲಿ ಮಾರಾಟದ ಒತ್ತಡದಲ್ಲಿ ಕುಸಿತ ಕಂಡಿದೆ.
ಎಮ್ಕಿ ಗ್ಲೋಬಲ್, ಎಲ್ಐಸಿಯನ್ನು "ನೃತ್ಯ ಮಾಡದ ಆನೆ" ಎಂದು ಕರೆದಿದೆ, ಅದರ ಬೆಳವಣಿಗೆಗೆ ತಕ್ಕಂತೆ ಬೆಲೆ ಇದೆ ಎಂದು ಹೇಳಿದೆ. ಎಲ್ಐಸಿ ಕಂಪನಿಯ ಗಾತ್ರ, ಉದ್ಯಮದಲ್ಲಿನ ಪ್ರಾಬಲ್ಯ ಮತ್ತು ಅದರ ಪರಂಪರೆಯೇ ಷೇರಿನ ಬೆಲೆ ಏರಿಕೆಗೆ ಅಡಚಣೆಗಳಾಗಿ ಮುಂದುವರಿಯುತ್ತವೆ ಎಂದು ಹೇಳಿದೆ. ಹೆಚ್ಚಿನ ವಿಶ್ಲೇಷಕರು ಷೇರಿನ ಬೆಲೆ ತಟಸ್ಥವಾಗಿರಲಿದೆ ಎಂದು ಹೇಳಿದ್ದು, ಹೆಚ್ಚು ಏರಿಕೆ ಕಾಣುವುದಿಲ್ಲ ಎಂಬ ಭವಿಷ್ಯ ನುಡಿದಿದ್ದಾರೆ.
"13 ಲಕ್ಷ ಏಜೆಂಟ್ಗಳ ನೆಟ್ವರ್ಕ್ ಎಲ್ಐಸಿಯ ಅತಿದೊಡ್ಡ ಶಕ್ತಿಯಾಗಿದೆ. ಖಾಸಗಿ ಪ್ರತಿಸ್ಪರ್ಧಿಗಳಿಗೆ ಹೋಲಿಸಿದರೆ ಇದು ಭೌತಿಕವಾಗಿ ಹೆಚ್ಚಿನ ಉತ್ಪಾದಕತೆಯನ್ನು ಹೊಂದಿದೆ. ಆದರೂ, ಬೃಹತ್ ಗಾತ್ರದ ಶಾಖೆಯ ನೆಟ್ವರ್ಕ್ ವೆಚ್ಚ ಹೆಚ್ಚಾಗಲೂ ಕೂಡ ಕಾರಣವಾಗಿದೆ," ಎಂದು ಅದು ತನ್ನ ವರದಿಯಲ್ಲಿ ತಿಳಿಸಿದೆ.
-
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಪಿಎಂ ಇ-ಬಸ್ ಯೋಜನೆ: ಕರ್ನಾಟಕದಲ್ಲಿ ರಸ್ತೆಗಿಳಿಯಲಿವೆ 750 ಇ-ಬಸ್ಗಳು; ಮಹಾರಾಷ್ಟ್ರಕ್ಕೆ ಸಿಂಹಪಾಲು -
Bengaluru Drone Survey: ಬೆಂಗಳೂರಿನಲ್ಲಿ ಆಸ್ತಿಗಳ ಡ್ರೋನ್ ಸರ್ವೇ: ಇದರ ಉದ್ದೇಶವೇನು, ವಿರೋಧವೇಕೆ ಇಲ್ಲಿದೆ ಮಾಹಿತಿ -
ಇರಾನ್ ಸಂಘರ್ಷ: ಭಾರತದ ಪ್ರಯತ್ನಕ್ಕೆ ಫಲ, ಕೊಲ್ಲಿ ಮಾರ್ಗವಾಗಿ ಭಾರತಕ್ಕೆ ಬಂದ ಮೊದಲ ತೈಲ ಟ್ಯಾಂಕರ್ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
ಭಾರತದ ಹಡಗುಗಳಿಗೆ ಭರ್ಜರಿ ಸುದ್ದಿ ನೀಡಿದ ಇರಾನ್, ಗ್ಯಾಸ್ ಸಮಸ್ಯೆ ಇತ್ಯರ್ಥ ಸಾಧ್ಯತೆ | Operation Roaring Lion -
Swamijis: ಬಹುತೇಕ ಕಾವಿಧಾರಿ ಸ್ವಾಮೀಜಿಗಳು ಅವಿವಾಹಿತರು, ಆದರೆ ಅವರೆಲ್ಲರೂ ಬ್ರಹ್ಮಚಾರಿಗಳಲ್ಲ: ರವಿಕೃಷ್ಣ ರೆಡ್ಡಿ -
ಬೆಂಗಳೂರಿನ ಪ್ರಮುಖ ವಿದ್ಯುತ್ ಸ್ಥಾವರ ಬಂದ್; ರಾಜ್ಯದಲ್ಲಿ ವಿದ್ಯುತ್ ಕಡಿತದ ಭೀತಿ!












Click it and Unblock the Notifications