ಬ್ಲೂಸ್ಮಾರ್ಟ್ ಜೊತೆ ಜಿಯೋ-ಬಿಪಿ ಒಪ್ಪಂದ, ಇವಿ ಚಾರ್ಜಿಂಗ್ ಕೇಂದ್ರ ಸ್ಥಾಪನೆ
ಮುಂಬೈ, ಸೆಪ್ಟೆಂಬರ್ 10: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಮತ್ತು ಬಿಪಿ ನಡುವಿನ ಇಂಧನ ಹಾಗೂ ಸಾರಿಗೆ ಜಂಟಿ ಉದ್ಯಮವಾದ ʻಜಿಯೋ-ಬಿಪಿʼಯು ದೇಶಾದ್ಯಂತ ದೊಡ್ಡ ಮಟ್ಟದಲ್ಲಿ ವಿದ್ಯುತ್ ಚಾಲಿತ ವಾಹನಗಳ (ʻಇವಿʼ) ಚಾರ್ಜಿಂಗ್ ಕೇಂದ್ರಗಳ ಜಾಲವನ್ನು ಸ್ಥಾಪಿಸಲು ಮುಂದಾಗಿದೆ. ಇದಕ್ಕಾಗಿ ಭಾರತದ ಮೊದಲ ಮತ್ತು ಅತಿದೊಡ್ಡ ಸಂಪೂರ್ಣ ವಿದ್ಯುತ್ಚಾಲಿತ ಬಾಡಿಗೆ ವಾಹನಗಳ (ಆಲ್ ಎಲೆಕ್ಟ್ರಿಕ್ ರೈಡ್-ಹೇಲಿಂಗ್) ವೇದಿಕೆಯಾದ ʻಬ್ಲೂಸ್ಮಾರ್ಟ್ʼನೊಂದಿಗೆ ಪಾಲುದಾರಿಕೆಯನ್ನು ಘೋಷಿಸಿದೆ. ಪಾಲುದಾರಿಕೆಯ ಭಾಗವಾಗಿ ʻಜಿಯೋ-ಬಿಪಿʼಯು ದೇಶಾದ್ಯಂತ ಪ್ರಯಾಣಿಕರ ಎಲೆಕ್ಟ್ರಿಕ್ ವಾಹನಗಳು ಮತ್ತು ಫ್ಲೀಟ್ಗಳಿಗಾಗಿ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಲಿದೆ.
ʻಬ್ಲೂಸ್ಮಾರ್ಟ್ʼ, ತನ್ನ ಸಂಪೂರ್ಣ ವಿದ್ಯುತ್ಚಾಲಿತ ವಾಹನಗಳ ಮೂಲಕ, ದೆಹಲಿ ಎನ್ಸಿಆರ್ನಲ್ಲಿ ವಿಶ್ವಾಸಾರ್ಹ, ಶೂನ್ಯ-ಸರ್ಜ್ ಮತ್ತು ಶೂನ್ಯ ಮಾಲಿನ್ಯದ ದ್ವಿಚಕ್ರವಾಹನ ಬಾಡಿಗೆ ಸೇವೆಯನ್ನು ಒದಗಿಸುತ್ತಿದ್ದು, ಆ ಮೂಲಕ ಸಾರಿಗೆ ವ್ಯವಸ್ಥೆಯಲ್ಲಿ ಹೊಸ ಕ್ರಾಂತಿ ತಂದಿದೆ. ಅತಿ ಹೆಚ್ಚು ʻಇವಿʼ ವಾಹನಗಳನ್ನು ಹೊಂದಿರುವ ʻಬ್ಲೂಸ್ಮಾರ್ಟ್ ʼ ತನ್ನ ಸೇವಾ ಜಾಲವನ್ನು ಭಾರತದಾದ್ಯಂತ ಇತರ ಪ್ರಮುಖ ನಗರಗಳಿಗೂ ವಿಸ್ತರಿಸುವ ಗುರಿಯನ್ನು ಹೊಂದಿದೆ.
ಈ ಪಾಲುದಾರಿಕೆಯ ಮೂಲಕ ಎರಡೂ ಕಂಪನಿಗಳು ಪ್ರಸ್ತುತ ʻಬ್ಲೂಸ್ಮಾರ್ಟ್ʼ ಅಸ್ತಿತ್ವದಲ್ಲಿರುವ ನಗರಗಳಲ್ಲಿ ಸೂಕ್ತ ಸ್ಥಳಗಳಲ್ಲಿ ಇವಿ ಚಾರ್ಜಿಂಗ್ ಮೂಲಸೌಕರ್ಯದ ಯೋಜನೆ, ಅಭಿವೃದ್ಧಿ ಮತ್ತು ಕಾರ್ಯಾಚರಣೆಯಲ್ಲಿ ಸಹಯೋಗ ಹೊಂದಲಿವೆ. ದಿಲ್ಲಿಯ ನ್ಯಾಷನಲ್ ಕ್ಯಾಪಿಟಲ್ ಪ್ರದೇಶದಲ್ಲಿ ಮೊದಲ ಹಂತದಲ್ಲಿ ಈ ಪಾಲುದಾರಿಕೆ ಅನುಷ್ಠಾನಗೊಳ್ಳಲಿದೆ. ಇದರಡಿ ಸ್ಥಾಪಿಸಲಾಗುವ ಪ್ರತಿಯೊಂದು ಇವಿ ಚಾರ್ಜಿಂಗ್ ಕೇಂದ್ರವೂ ಕನಿಷ್ಠ 30 ವಾಹನಗಳ ನಿಲುಗಡೆ ಸಾಮರ್ಥ್ಯ ಹೊಂದಿರಲಿವೆ ಮತ್ತು ಈ ಕೇಂದ್ರಗಳೆಲ್ಲವೂ ನಗರ ಪ್ರದೇಶಗಳಲ್ಲಿ ಕೇಂದ್ರೀಕೃತವಾಗಿರುತ್ತವೆ.

ಕಾರ್ಯನಿರ್ವಾಹಕ ಅಧಿಕಾರಿ ಹರೀಶ್ ಸಿ. ಮೆಹ್ತಾ
ಸಹಯೋಗದ ಬಗ್ಗೆ ಮಾತನಾಡಿದ ಜಿಯೋ-ಬಿಪಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರೀಶ್ ಸಿ. ಮೆಹ್ತಾ ಅವರು, "ದೇಶದಲ್ಲಿ ʻಇವಿʼ ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಜಿಯೋ-ಬಿಪಿ ಮುಂಚೂಣಿಯಲ್ಲಿದೆ. ಗ್ರಾಹಕರಿಗೆ ಅತ್ಯಾಧುನಿಕ ಇವಿ ತಂತ್ರಜ್ಞಾನ ಒದಗಿಸಲು ʻಜಿಯೋ-ಬಿಪಿʼ ಉದ್ದೇಶಿಸಿದೆ. ಬ್ಲೂಸ್ಮಾರ್ಟ್ನೊಂದಿಗಿನ ನಮ್ಮ ಪಾಲುದಾರಿಕೆಯು ಕಡಿಮೆ ಇಂಗಾಲ ಹೊರಸೂಸುವ, ಶುದ್ಧ ಮತ್ತು ಹೆಚ್ಚು ಕೈಗೆಟುಕುವ ಆಯ್ಕೆಗಳನ್ನು ನೀಡುವ ನಮ್ಮ ಧ್ಯೇಯೋದ್ದೇಶ ಸಾಧನೆಯಲ್ಲಿ ಒಂದು ಮಹತ್ವದ ಮೈಲಿಗಲ್ಲಾಗಿದೆ,ʼʼ ಎಂದರು.

ಸಿಇಒ ಅನ್ಮೋಲ್ ಜಗ್ಗಿ
ʻಬ್ಲೂಸ್ಮಾರ್ಟ್ʼನ ಸಹ-ಸಂಸ್ಥಾಪಕ ಮತ್ತು ಸಿಇಒ ಅನ್ಮೋಲ್ ಜಗ್ಗಿ ಅವರು ಮಾತನಾಡಿ, "ಭಾರಿ ಪ್ರಮಾಣದಲ್ಲಿ ಹೆಚ್ಚುತ್ತಿರುವ ಇವಿ ವಾಹನಗಳಿಗೆ ಶಕ್ತಿ ತುಂಬಲು ಬೃಹತ್ ಇವಿ ಚಾರ್ಜಿಂಗ್ ಸೂಪರ್ ಹಬ್ಗಳನ್ನು ʻಬ್ಲೂಸ್ಮಾರ್ಟ್ʼ ನಿರ್ವಹಿಸುತ್ತಿದೆ. ಜಿಯೋ-ಬಿಪಿ ಜೊತೆ ನಮ್ಮ ಪಾಲುದಾರಿಕೆಯು ಭಾರತಕ್ಕೆ ವಿಶ್ವದರ್ಜೆಯ ಇವಿ ಚಾರ್ಜಿಂಗ್ ಮೂಲಸೌಕರ್ಯ ಪರಿಹಾರಗಳನ್ನು ಒದಗಿಸುವ ನಮ್ಮ ಸಾಮರ್ಥ್ಯಕ್ಕೆ ಕನ್ನಡಿ ಹಿಡಿದಿದೆ,ʼʼ ಎಂದರು. ಜಿಯೋ-ಬಿಪಿ ಜೊತೆ ಪಾಲುದಾರಿಕೆ ಹೊಂದಲು ನಾವು ಅತೀವ ಉತ್ಸುಕರಾಗಿದ್ದೇವೆ ಮತ್ತು ಈ ವ್ಯೂಹಾತ್ಮಕ ಸಹಯೋಗವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲು ಬದ್ಧರಾಗಿದ್ದೇವೆ ಎಂದು ಹೇಳಿದರು.

ಮೂಲಮಾದರಿಗಳ ಅಭಿವೃದ್ಧಿಗೆ ʻಡಿಎಸ್ಟಿʼ ಮುಂದಾಳತ್ವ
ಸಾರ್ವಜನಿಕ ಅಥವಾ ಖಾಸಗಿ ಚಾರ್ಜಿಂಗ್ ಪಾಯಿಂಟ್ಗಳ ಸದೃಢ ಹಾಗೂ ವ್ಯಾಪಕ ಜಾಲ ನಿರ್ಮಾಣವು ಇವಿ ಪರಿವರ್ತನೆಯನ್ನು ಬೆಂಬಲಿಸಲು ನಿರ್ಣಾಯಕವಾಗಿದೆ. "ಭಾರತದಲ್ಲಿ ಇವಿ ಪರಿಸರ ವ್ಯವಸ್ಥೆಯ ಅಗತ್ಯಗಳಿಗೆ ಅನುಗುಣವಾಗಿರುವ, ವೆಚ್ಚ-ಪರಿಣಾಮಕಾರಿ ಚಾರ್ಜಿಂಗ್ ಜಾಲ ಅಗತ್ಯವಾಗಿದೆ. ಈ ಬೇಡಿಕೆಗೆ ಬೆಂಬಲಿಸುವ ನಿಟ್ಟಿನಲ್ಲಿ, ಇವಿ ಚಾರ್ಜಿಂಗ್ಗಾಗಿ ಭಾರತೀಯ ಮಾನದಂಡಗಳು ಮತ್ತು ಮೂಲಮಾದರಿಗಳ ಅಭಿವೃದ್ಧಿಗೆ ʻಡಿಎಸ್ಟಿʼ ಮುಂದಾಳತ್ವ ವಹಿಸುತ್ತಿದೆ. ಈ ಕೈಪಿಡಿಯಲ್ಲಿ ವ್ಯಾಖ್ಯಾನಿಸಲಾದ ಅಗ್ಗದ ಇವಿ ಚಾರ್ಜ್ ಪಾಯಿಂಟ್ಗಳ ಯೋಜನಾ ಮಾದರಿಯು ಮುಂದೆ ಈ ವಲಯದಲ್ಲಿ ಬರುವಂತಹ ಮಾನದಂಡಗಳೊಂದಿಗೆ ಉತ್ತಮವಾಗಿ ಹೊಂದಿಕೊಳ್ಳುತ್ತದೆ. ಜೊತೆಗೆ ಚಾರ್ಜಿಂಗ್ ಮೂಲಸೌಕರ್ಯದ ತ್ವರಿತ ವಿಸ್ತರಣೆಗೂ ಬೆಂಬಲಿಸಬಹುದು," ಎಂದು ಡಿಎಸ್ಟಿ ಕಾರ್ಯದರ್ಶಿ ಡಾ. ಅಶುತೋಷ್ ಶರ್ಮಾ ಹೇಳಿದರು.

ಪ್ರತಿ 3 X 3 ಗ್ರಿಡ್ಗೆ ಕನಿಷ್ಠ ಒಂದು ಚಾರ್ಜಿಂಗ್ ಕೇಂದ್ರ
ಪ್ರತಿ 3 X 3 ಗ್ರಿಡ್ಗೆ ಕನಿಷ್ಠ ಒಂದು ಚಾರ್ಜಿಂಗ್ ಕೇಂದ್ರವನ್ನು ಹೊಂದುವ ಅಥವಾ ಹೆದ್ದಾರಿಯಲ್ಲಿ ಪ್ರತಿ 25 ಕಿ.ಮೀ.ಗೆ ಒಂದು ಚಾರ್ಜಿಂಗ್ ಕೇಂದ್ರವನ್ನು ಹೊಂದುವ ರಾಷ್ಟ್ರೀಯ ಗುರಿಯನ್ನು ಇಂಧನ ಸಚಿವಾಲಯವು ಹೊಂದಿದೆ. ಆದಾಗ್ಯೂ ಸ್ಥಳೀಯ ಗುರಿಗಳ ನಿಗದಿ ಮತ್ತು ಯೋಜನೆಯನ್ನು ನಗರ ಸ್ಥಳೀಯ ಸಂಸ್ಥೆಗಳು ಅಥವಾ ರಾಜ್ಯದ ನೋಡಲ್ ಏಜೆನ್ಸಿಗಳಿಗೆ ಬಿಡಲಾಗಿದೆ.
ಪ್ರಾಥಮಿಕವಾಗಿ ನಗರಪಾಲಿಕೆಗಳು ಮತ್ತು ಡಿಸ್ಕಾಂಗಳಂತಹ ಯೋಜನಾ ಅನುಷ್ಠಾನ ಸಂಸ್ಥೆಗಳನ್ನು ಉದ್ದೇಶಿಸಿ ಈ ಕೈಪಿಡಿಯನ್ನು ತಯಾರಿಸಲಾಗಿದ್ದರೂ ಚಾರ್ಜಿಂಗ್ ಮೂಲಸೌಕರ್ಯವನ್ನು ಸ್ಥಾಪಿಸುವ ಪ್ರಕ್ರಿಯೆಯನ್ನು ಮತ್ತಷ್ಟು ಸುಲಭಗೊಳಿಸುವ ನಿಯಂತ್ರಣ ಕ್ರಮಗಳನ್ನು ಇದು ಎತ್ತಿ ಹಿಡಿಯುತ್ತದೆ. ಈ ಕೈಪಿಡಿಗೆ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ, ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಮತ್ತು ಬೃಹತ್ ಕೈಗಾರಿಕಾ ಇಲಾಖೆಗಳಿಂದ ಬೆಂಬಲ ದೊರೆತಿದೆ.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications