ಇಂಡೋನೇಷಿಯಾದಿಂದ ವೀಸಾ ಆನ್ ಅರೈವಲ್, ನೇರ ವಿಮಾನ!
ಬೆಂಗಳೂರು, ಸೆ. 09: ಬೆಂಗಳೂರು ಸೇರಿದಂತೆ ಭಾರತದ ಪ್ರಮುಖ ನಗರಗಳಾದ ಮುಂಬೈ, ಚೆನ್ನೈ, ದೆಹಲಿಯಿಂದ ಇಂಡೋನೇಷ್ಯಾಗೆ ನೇರ ವಿಮಾನಯಾನ ಸಂಪರ್ಕ ಕಲ್ಪಿಸಲು ಕೇಂದ್ರ ಸರ್ಕಾರದ ಸಚಿವಾಲಯದ ಜೊತೆ ಮಾತುಕತೆ ನಡೆಸುವುದಾಗಿ ಇಂಡೋನೇಷ್ಯಾದ ಪ್ರವಾಸೋದ್ಯಮ ಸಚಿವ ಹಾರಿಸ್ ಯಾಹ್ಯ ಹೇಳಿದರು. ಇದರ ಜೊತೆಗೆ ವೀಸಾ ಆನ್ ಅರೈವಲ್ ಸೌಲಭ್ಯವನ್ನು ವಿಸ್ತರಿಸಲಾಗುವುದು ಎಂದಿದ್ದಾರೆ.
ಪಾಟಾ ಸಮ್ಮೇಳನದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಇಂಡೋನೇಷ್ಯಾ ಪ್ರವಾಸಿಗರಿಗೆ ಹೆಚ್ಚು ಆಕರ್ಷಣೆಯಾಗಿದೆ. ಚೀನಾದಿಂದ ನಮ್ಮ ದೇಶಕ್ಕೆ ಹೆಚ್ಚು ಪ್ರವಾಸಿಗರು ಬರುತ್ತಿದ್ದಾರೆ. [ಹೃದಯ್, ಪ್ರಸಾದ್ ಪ್ರವಾಸೋದ್ಯಮ ಯೋಜನೆ ಜಾರಿ: ಅನಂತ್]
ಭಾರತದಿಂದ
ಇಂಡೋನೇಷ್ಯಾಕ್ಕೆ
ವಾರ್ಷಿಕವಾಗಿ
2
ಲಕ್ಷ
ಮಂದಿ
ಆಗಮಿಸುತ್ತಿದ್ದಾರೆ.
ನೇರ
ವಿಮಾನಯಾನ
ಸೌಲಭ್ಯ
ಇಲ್ಲದಿರುವುದು
ಇದಕ್ಕೆ
ಕಾರಣ,
ಈ
ಸಂಖ್ಯೆಯನ್ನು
ಡಿಸೆಂಬರ್
ವೇಳೆಗೆ
2,70,000ಕ್ಕೇರಿಸಲು
ಯೋಜಿಸಲಾಗಿದೆ
ಎಂದರು.
ಎಲ್ಲೆಲ್ಲಿಗೆ ನೇರ ವಿಮಾನಯಾನ: ಜಕಾರ್ತಾದಿಂದ ನವದೆಹಲಿ, ಮುಂಬೈ, ಚೆನ್ನೈ ಹಾಗೂ ಬೆಂಗಳೂರಿಗೆ ನೇರ ವಿಮಾನ ಸೌಲಭ್ಯ ಕಲ್ಪಿಸಲಾಗುತ್ತದೆ. 39ನೇ ಫೆಸಿಪಿಕ್ ಏಷ್ಯಾ ಟ್ರಾವೆಲ್ ಅಸೋಸಿಯೇಷನ್ ಟ್ರಾವೆಲ್ ಮಾರ್ಟ್ (PATA) ಸೆಪ್ಟೆಂಬರ್ 7 ರಿಂದ 9, 2016ರ ತನಕ ಆಯೋಜನೆಗೊಂಡಿದೆ. ಹೀಗಾಗಿ ನೇರ ವಿಮಾನಯಾನ ಸೌಲಭ್ಯ ಉಭಯ ದೇಶಗಳ ವ್ಯಾಪಾರ, ವ್ಯವಹಾರಕ್ಕೆ ನೆರವಾಗಲಿದೆ. [ಕರ್ನಾಟಕದಲ್ಲಿ ಯಾವ ಸಂಸ್ಥೆ ಎಲ್ಲೆಲ್ಲಿ, ಎಷ್ಟು ಹೂಡಿಕೆ?]
ವೀಸಾ
ಆನ್
ಅರೈವಲ್:
ಇಂಡೋನೇಷ್ಯಾ
ಈಗಾಗಲೇ
15
ದೇಶಗಳಿಗೆ
ಉಚಿತ
ವೀಸಾ
ಸೌಲಭ್ಯ
ನೀಡುತ್ತಿದೆ.
ಮುಂದಿನ
ದಿನಗಳಲ್ಲಿ
30
ದೇಶಗಳಿಗೆ
ವೀಸಾ
ಸೌಲಭ್ಯ
ವಿತರಿಸುವ
ಚಿಂತನೆ
ಇದೆ.
ಭಾರತಕ್ಕೆ
ಉಚಿತ
ವೀಸಾ
ಸೌಲಭ್ಯ
ನೀಡುವುದಾಗಿ
ಘೋಷಿಸಿದರು.
ಇಂಡೋನೇಷ್ಯಾದ
ಕಲೆ
ಮತ್ತು
ಸಂಸ್ಕೃತಿಗಳ
ಬಗ್ಗೆ
ವಿವರಣೆ
ನೀಡಿದರು.
[ವೀಸಾ
ಆನ್
ಅರೈವಲ್
ಪಡೆದ
43
ದೇಶಗಳ
ಪಟ್ಟಿ]
ಮಲೇಷ್ಯಾದ ಪ್ರವಾಸೋದ್ಯಮ ಇಲಾಖೆಯ ಡೆಪ್ಯೋಟಿ ಜನರಲ್ ಡಾಟೋ ಹಾಜಿ ಅಜೀಜ್ ನೂರುದ್ದೀನ್ ಮಾತನಾಡಿ, ಮಲೇಷಿಯಾದಲ್ಲಿ 1000ಕ್ಕೂ ಹೆಚ್ಚು ದ್ವೀಪಗಳಿವೆ ನೀವು ಯಾವುದೇ ಹೆಸರು ಹೇಳಿದರೂ ಆ ಹೆಸರಿನ ದ್ವೀಪ ನಮ್ಮಲ್ಲಿ ಸಿಗುತ್ತವೆ ಎಂದರು.
ಮಧುಚಂದ್ರಕ್ಕೆ ಮಲೇಷಿಯಾ ಹೇಳಿ ಮಾಡಿಸಿದ ಸ್ಥಳ. ಪ್ರವಾಸಿಗರನ್ನು ಆಕರ್ಷಿಸುವ ಸಲುವಾಗಿ ಮಲೇಷಿಯಾ ಸರ್ಕಾರ ಹೊಸ ಹೊಸ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುತ್ತವೆ. ಈ ವರ್ಷ ದೀಪಾವಳಿ-ಕ್ರಿಸ್ಮಸ್ ಸೇರಿದಂತೆ 50ಕ್ಕೂ ಹೆಚ್ಚು ಬೃಹತ್ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ