ಹೊಸ ಕೇಬಲ್ ನೀತಿ ಜಾರಿ, 100 ಚಾನೆಲ್ ಗೆ ಎಷ್ಟು ರೇಟಾಗುತ್ತೆ?
ನವದೆಹಲಿ, ಡಿಸೆಂಬರ್ 27: ಸುಪ್ರೀಂಕೋರ್ಟ್ ಆದೇಶದಂತೆ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ(ಟ್ರಾಯ್) ಹೊಸ ಕೇಬಲ್ ನೀತಿ ಜಾರಿಗೆ ತರುತ್ತಿದೆ. ಡಿಸೆಂಬರ್ 29ರಿಂದ ಅನ್ವಯವಾಗಲಿರುವ ಹೊಸ ನೀತಿ ಗ್ರಾಹಕ ಸ್ನೇಹಿಯಾಗುವುದೇ? ಗ್ರಾಹಕರಿಗೆ ಹೊರೆಯಾಗುವುದೇ? ಮುಂದೆ ಓದಿ...
ಡಿಸೆಂಬರ್ 29 ರಿಂದ ಹೊಸ ಕೇಬಲ್ ನೀತಿ ಜಾರಿಯಾಗಲಿದ್ದು, ಯಾವ ಚಾನೆಲ್ ಬರಲಿದೆ, ಯಾವುದು ಸಿಗುವುದಿಲ್ಲ ಎಂಬ ಗೊಂದಲ ಗ್ರಾಹಕರಲ್ಲಿ ಮೂಡಿದೆ.
ಈ ಬಗ್ಗೆ ಚಿಂತೆ ಬೇಡ ಹೊಸ ಕೇಬಲ್ ನೀತಿಯಂತೆ ಗ್ರಾಹಕರು ತಮ್ಮ ಆಯ್ಕೆಯ ಚಾನೆಲ್ ಗಳನ್ನು ಸುಲಭವಾಗಿ ಆಯ್ಕೆ ಮಾಡಿಕೊಳ್ಳಬಹುದು. ಗ್ರಾಹಕರ್ಯ್ ಆಯ್ಕೆ ಮಾಡಿದ ಚಾನೆಲ್ ಗಳನ್ನು ಮಾತ್ರ ಕೇಬಲ್, ಡಿ.ಟಿ.ಹೆಚ್. ಆಪರೇಟರ್ ಗಳು ನೀಡಬೇಕಾಗುತ್ತದೆ.
ಗ್ರಾಹಕರಿಗೆ ಅನಗತ್ಯ ಚಾನೆಲ್ ಕಿರಿಕಿರಿಯನ್ನು ತಪ್ಪಿಸಲು ಕೇಂದ್ರ ಸರ್ಕಾರ ಹೊಸ ನೀತಿ ಜಾರಿಗೆ ತರುತ್ತಿದೆ. ಇದರ ಅನ್ವಯ ಚಾನೆಲ್ಗಳ ಆಯ್ಕೆ ಗ್ರಾಹಕದ್ದೇ ಆಗಿರುತ್ತದೆ. ಎಷ್ಟು ಚಾನೆಲ್ ಆಯ್ಕೆ ಮಾಡುತ್ತೀರೋ? ಅಷ್ಟಕ್ಕೆ ಮಾತ್ರ ಹಣ ಪಾವತಿ ಮಾಡಿದರೆ ಸಾಕು.

100ಕ್ಕೂ ಅಧಿಕ ಚಾನೆಲ್ ಉಚಿತವಾಗಿ ಸಿಗಲಿದೆ
ನೂರಾರು ಚಾನೆಲ್ ಉಚಿತವಿದೆ: ದೂರದರ್ಶನದ ಉಚಿತ 26 ಚಾನೆಲ್ ಸೇರಿದಂತೆ 100 ಚಾನೆಲ್(74 Free to Air) ಗಳನ್ನು ವೀಕ್ಷಿಸಬಹುದು. ಇದಕ್ಕಾಗಿ 130 ರೂ. ಶುಲ್ಕ ನಿಗದಿಪಡಿಸಲಾಗಿದ್ದು, ಇದರೊಂದಿಗೆ ಶೇ. 18 ರಷ್ಟು ಜಿ.ಎಸ್.ಟಿ. ಪಾವತಿಸಿ 154 ರೂ.ಗೆ 100 ಚಾನಲ್ ಗಳನ್ನು ಗ್ರಾಹಕರು ವೀಕ್ಷಿಸಬಹುದಾಗಿದೆ. HD ಚಾನೆಲ್ ಹೊರತು ಪಡಿಸಿ ಎಸ್ ಡಿ ಚಾನೆಲ್ ಗಳ 100ರ ಪ್ಯಾಕ್ ಗೆ 184ರು ಗಿಂತ ಅಧಿಕ ನೀಡಬೇಡಿ ಎಂದು ಟ್ರಾಯ್ ಸೂಚಿಸಿದೆ.
ಪ್ರತಿ 25 ಉಚಿತ ಚಾನೆಲ್ ಗಳಿಗೆ ಜಿ.ಎಸ್.ಟಿ. ಸೇರಿ 25 ರೂ.ಪಾವತಿಸಬೇಕಿದೆ. ಪ್ರತಿಯೊಂದು ಚಾನೆಲ್ ಗೂ 1 ಪೈಸೆಯಿಂದ 19 ರೂ.ರವರೆಗೆ ದರ ನಿಗದಿಯಾಗಿದೆ ಎಂದು ಎಂದು ಭಾರತೀಯ ಟೆಲಿಕಾಂ ನಿಯಂತ್ರಣ ಸಂಸ್ಥೆ(ಟ್ರಾಯ್) ತಿಳಿಸಿದೆ.

ಚಾನೆಲ್ ಗಳ ಆಯ್ಕೆ ಹೇಗೆ?
ಆಯ್ಕೆ ಹೇಗೆ? : ಒಂದು ಚಾನೆಲ್ ಅಥವಾ ಚಾನೆಲ್ ಗಳ ಸಮೂಹಗಳಿರುವ ಪ್ಯಾಕೆಜ್ ಹಾಕಿಸಿಕೊಳ್ಳಬಹುದು. ಜೀ, ಸೋನಿ, ಸ್ಟಾರ್, ಕಲರ್ಸ್ ವಾಹಿನಿ ಹೀಗೆ ಪ್ಯಾಕೆಜ್ ಗಳು ಸಿದ್ಧವಾಗಿವೆ. ಕೇಬಲ್/ ಡಿಟಿಎಚ್ ಅಪರೇಟರ್ ಸಂಪರ್ಕಿಸಿ, ಬೇಕಾದ ಪ್ಯಾಕೇಜ್ ಪಡೆಯಿರಿ
* ಜೀ ಫ್ಯಾಮಿಲಿ ಪ್ಯಾಕೇಜ್ (68 ಚಾನೆಲ್ 45 ರುಗೆ ಲಭ್ಯ)
* ಸ್ಟಾರ್ ಇಂಡಿಯಾ ಪ್ಯಾಕೇಜ್ (ಹಿಂದಿಗೆ 49 ರು)
* ಸ್ಟಾರ್ ಸುವರ್ಣ 30ರು
* ಸೋನಿ ಪಿಕ್ಚರ್ಸ್ 32 ಚಾನೆಲ್ ಗೆ 90ರು
* ಕಲರ್ಸ್ ಕನ್ನಡ ವಾಹಿನಿ ಕೇವಲ 1 ರು ನ ಪ್ಯಾಕೇಜ್ ಘೋಷಿಸಿದೆ.

ಕೇಬಲ್ ಆಪರೇಟರ್ಸ್ ವಿರೋಧ
ಟ್ರಾಯ್ ಈ ಕ್ರಮದಿಂದ ಗ್ರಾಹಕರಿಗೆ ಹೆಚ್ಚು ಹೊರೆ ಬೀಳಲಿದೆ. ಉದಾಹರಣೆಗೆ 10 ಚಾನೆಲ್ ಗಳನ್ನು ಗ್ರಾಹಕ ಖರೀದಿಸದರೆ 19 ರೂಗಳಂತೆ 190 ಹೆಚ್ಚುವರಿ ಹೊರೆ ಬೀಳಲಿದೆ.ಇದರಿಂದ ಈ ಹಿಂದೆ ಆಪರೇಟರ್ಸ್ಗಳು ನಗರದ ಭಾಗದಲ್ಲಿ 300 ರೂಗಳಿಗೆ 400 ಚಾನೆಲ್ ನೀಡುತ್ತಿದ್ದರು, ಇದಕ್ಕೆ ಹೋಲಿಸಿದರೆ ಹೊಸ ದರ ನಿಗದಿ ಗ್ರಾಹಕರಿಗೆ ಸಂಕಷ್ಟ ಎಂಬುದು ಕೇಬಲ್ ಆಪರೇಟರ್ಸ್ಗಳ ವಾದವಾಗಿದೆ.

ಪ್ರೀಪೇಯ್ಡ್ ಗೊಂದಲ
ಕೇಬಲ್ ಆಪರೇಟರ್ಗಳಿಗೂ ಹೊಸ ವ್ಯವಸ್ಥೆ ಬಗ್ಗೆ ಇನ್ನು ಸ್ಪಷ್ಟವಾದ ಮಾಹಿತಿ ಸಿಕ್ಕಿಲ್ಲ. ಆದರೆ, ಯಾವುದೇ ಕಾರಣಕ್ಕೂ ಸೆಟ್ ಆಪ್ ಬಾಕ್ಸ್ ಬದಲಾವಣೆ ಮಾಡುವುದು ಬೇಡ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ. ಒಂದೆರಡು ತಿಂಗಳು ಗ್ರಾಹಕರಿಗೆ ಗೊಂದಲ ಉಂಟಾಗಬಹುದು ಬಳಿಕ ಎಲ್ಲವೂ ಸರಿಯಾಗಲಿದೆ ಎನ್ನುವುದು ಕೇಬಲ್ ಆಪರೇಟರ್ಗಳ ಮಾತು.
ಗ್ರಾಮೀಣ ಭಾಗದ ಗ್ರಾಹಕರಿಗೂ ಇದರಿಂದ ಹೆಚ್ಚಿನ ಸಂಕಷ್ಟ ಉಂಟಾಗಲಿದೆ. ಪ್ರೀಪೇಯ್ಡ್ ಪ್ಯಾಕೇಜ್ ನಲ್ಲಿ ಮುಂಚಿತವಾಗಿ ಹಣ ಕಟ್ಟಿ ಎಂದು ಅವರಿಗೆ ವಿವರಿಸಿ ಹೇಳುವುದು ಕಷ್ಟ ಎಂದು ಕೇಬಲ್ ಆಪರೇಟರ್ಸ್ ಗೊಣಗುತ್ತಿದ್ದಾರೆ.

250 ಚಾನೆಲ್ ಉಚಿತವಾಗಿ ಸಿಗಲಿದೆಯಂತೆ
ಈಗ ಇರುವ ವಾಹಿನಿಗಳ ಸಂಖ್ಯೆ(26)ಗೆ ಮತ್ತೆ 40 ವಾಹಿನಿಗಳನ್ನು ಸೇರಿಸುವುದು ಈಗಿನ ಗುರಿ. ಅದು ಪೂರ್ಣಗೊಂಡ ಬಳಿಕ 250 ವಾಹಿನಿಗಳನ್ನು ನೀಡುವುದು ಮುಂದಿನ ಗುರಿ. ಇದಕ್ಕೆ ಹೆಚ್ಚುವರಿ ಟ್ರಾನ್ಸ್ಪಾಂಡರ್ಗಳ (ಸಂಕೇತಗಳನ್ನು ಬಿತ್ತರಿಸುವ ವ್ಯವಸ್ಥೆ) ಅಗತ್ಯ ಇದೆ.
ವಾಹಿನಿಗಳನ್ನು ಹೆಚ್ಚಿಸುವುದಕ್ಕೆ ಬೇಕಾದ ತಾಂತ್ರಿಕ ನೆರವಿಗೆ ಇಸ್ರೊ ಸಹಾಯ ಪಡೆದುಕೊಳ್ಳಲಾಗುವುದು' ಎಂದು ಪ್ರಸಾರ ಭಾರತಿ ಪ್ರಕಟಿಸಿದೆ.
ಆದರೆ, ಕಳೆದ ಮುರ್ನಾಲ್ಕು ವರ್ಷಗಳಿಂದ ಪ್ರಸಾರ ಭಾರತಿ, ಇದೇ ರಾಗ ಹಾಡುತ್ತಿದೆ. 250ಕ್ಕೂ ಅಧಿಕ ವಾಹಿನಿಗಳು ಉಚಿತವಾಗಿ ನೀಡಲಾಗುವುದು, ಎರಡನೇ ಹಾಗೂ ಮೂರನೇ ಸ್ತರಗಳ ನಗರಗಳಿಗೆ ಫ್ರೀಡಿಶ್ ಡಿಟಿಎಚ್ ವಿಸ್ತರಣೆ ಮಾಡಲಾಗುವುದು
-
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Shivam Dube: ಶಿವಂ ದುಬೆ ಸಾಧನೆಗೆ ಮನಸಾರೆ ಮೆಚ್ಚುಗೆ ಸೂಚಿಸಿದ ಪತ್ನಿ ಅಂಜುಮ್ ಖಾನ್: ಇನ್ಸ್ಟಾ ಪೋಸ್ಟರ್ ಭಾರೀ ವೈರಲ್ -
Fact Check: ಟಿ20 ವಿಶ್ವಕಪ್ ಫೈನಲ್ ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆ ವೇಳೆ ಕಣ್ಣೀರಿಟ್ಟ ಕಿವೀಸ್ ಆಟಗಾರ ಇಶ್ ಸೋಧಿ -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ












Click it and Unblock the Notifications