ಜಗತ್ತಿನ ಐಟಿ ಹಬ್ ಎನಿಸಿಕೊಂಡ ನಗರಗಳಲ್ಲಿ ಬೆಂಗಳೂರಿಗೆ ಎಷ್ಟನೇ ಸ್ಥಾನ?
ಬೆಂಗಳೂರು, ಆಗಸ್ಟ್ 26: ಏಷ್ಯಾ-ಪೆಸಿಫಿಕ್ನಾದ್ಯಂತ ಅಗ್ರ ಟೆಕ್ ಹಬ್ಗಳಲ್ಲಿ ಬೆಂಗಳೂರು ಎರಡೇ ಸ್ಥಾನದಲ್ಲಿ ಗುರುತಿಸಿಕೊಂಡಿದೆ. ಅಗ್ರಸ್ಥಾನದಲ್ಲಿ ಬೀಜಿಂಗ್ ಕಾಣಿಸಿಕೊಂಡಿದ್ದು, ಎರಡನೇ ಸ್ಥಾನದಲ್ಲಿ ಕರ್ನಾಟಕದ ರಾಜಧಾನಿ ಸ್ಥಾನ ಪಡೆದುಕೊಂಡಿದೆ.
ಬೆಂಗಳೂರಿನ ನಂತರದ ಸ್ಥಾನದಲ್ಲಿ ಚೆನ್ನೈ, ಹೈದರಾಬಾದ್ ಮತ್ತು ದೆಹಲಿ ಮಹಾನಗರಗಳು ಪತ್ತೆಯಾಗಿವೆ. ಈ ಪ್ರದೇಶಗಳಲ್ಲಿ ದೇಶೀಯ ಮತ್ತು ಬಹುರಾಷ್ಟ್ರೀಯ ಕಂಪನಿಗಳಿಂದ ಗುಣಮಟ್ಟದ ಕಚೇರಿ ಸ್ಥಾಪನೆಗೆ ಸ್ಥಳಕ್ಕಾಗಿ ನಿರಂತರ ಬೇಡಿಕೆಯಿದೆ ಎಂದು ಕುಶ್ಮನ್ ಮತ್ತು ವೇಕ್ಫೀಲ್ಡ್ ವರದಿ ತಿಳಿಸಿದೆ.
ಕಳೆದ ಆರ್ಥಿಕ ವರ್ಷದಲ್ಲಿ ಭಾರತವೊಂದರಲ್ಲಿ ಅತಿಹೆಚ್ಚು ಉದ್ಯೋಗಿಗಳನ್ನು ಐಟಿ ವಲಯವು ನೇಮಿಸಿಕೊಂಡಿದೆ. ತಾಂತ್ರಿಯ ಕ್ಷೇತ್ರವೊಂದರಲ್ಲೇ ಒಂದು ವರ್ಷದಲ್ಲಿ ಬರೋಬ್ಬರಿ 5 ಲಕ್ಷ ಉದ್ಯೋಗಿಗಳನ್ನು ನೇಮಿಸಿಕೊಳ್ಳಲಾಗಿದೆ.

ತಾಂತ್ರಿಕ ವಲಯವೇ ಭಾರತದ ಆರ್ಥಿಕತೆಗೆ ಶಕ್ತಿ
"ಭಾರತದ ಆರ್ಥಿಕತೆಗೆ ಐಟಿ ಮತ್ತು ತಂತ್ರಜ್ಞಾನ-ಚಾಲಿತ ವಲಯಗಳು ಪ್ರಮುಖ ಪ್ರೇರಕ ಶಕ್ತಿಯಾಗಿದೆ," ಎಂದು ಭಾರತ ಮತ್ತು ಆಗ್ನೇಯ ಏಷ್ಯಾದ ಎಂಡಿ ಅನ್ಶುಲ್ ಜೈನ್ ಹೇಳಿದ್ದಾರೆ. "ಭಾರತದಲ್ಲಿ ಐಟಿ ವಲಯಗಳು ಹೆಚ್ಚು ಹೆಚ್ಚು ಹೂಡಿಕೆ ಮಾಡುವುದಕ್ಕೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಪ್ರಮುಖ ನೀತಿಗಳಲ್ಲಿ ಬದಲಾವಣೆ ಮಾಡಿಕೊಳ್ಳಲಾಗಿದೆ. ಇದರಿಂದ ಜಾಗತಿಕ ಮಟ್ಟದಿಂದ ಹೆಚ್ಚು ಬೇಡಿಕೆಯಿರುವ ವಲಯದಲ್ಲಿ ಹೊಸ ಪ್ರತಿಭೆಗಳನ್ನು ಹುಡುಕುವುದಕ್ಕೆ ಅನುಕೂಲವಾಗಲಿದೆ," ಎಂದಿದ್ದಾರೆ.

ದೇಶಕ್ಕಿಂತ ಬೆಂಗಳೂರಿನಲ್ಲೇ ಅತಿಹೆಚ್ಚು ಗುತ್ತಿಗೆ ಪಾಲು
ತಾಂತ್ರಿಕ ವಲಯದ ಕಂಪನಿಗಳು ಬೆಂಗಳೂರನ್ನು ಹುಡುಕಿಕೊಂಡು ಬರುತ್ತಿವೆ. ಜಾಗತಿಕ ಮಟ್ಟದಲ್ಲಿ ಭಾರತದ ಪಾಲು ಎಷ್ಟಿದೆಯೋ ಅದಕ್ಕಿಂತ ಬೆಂಗಳೂರಿನ ಪಾಲು ದೇಶದಲ್ಲಿ ಹೆಚ್ಚಾಗಿರುವುದು ಅಂಕಿ-ಅಂಶಗಳಿಂದ ತಿಳಿದು ಬಂದಿದೆ. ಬೆಂಗಳೂರಿನಲ್ಲಿ ತಾಂತ್ರಿಕ ಕಂಪನಿಗಳ ಗುತ್ತಿಗೆ ಪಾಲು ಶೇ.38 ರಿಂದ 40ರಷ್ಟಿದೆ. ಭಾರತದಲ್ಲಿ ಐಟಿ ವಲಯಗಳ ಗುತ್ತಿಗೆ ಪಾಲು ಶೇ.35ರಷ್ಟಿದೆ. ರಾಷ್ಟ್ರದಲ್ಲಿನ ಗುತ್ತಿಗೆ ಪಾಲನ್ನು ಹೋಲಿಸಿದರೆ, ಬೆಂಗಳೂರಿನಲ್ಲಿ ಐಟಿ ವಲಯಗಳ ಗುತ್ತಿಗೆ ಪಾಲು ಹೆಚ್ಚಾಗಿದೆ.

ಚೆನ್ನೈ, ಹೈದ್ರಾಬಾದ್ ಕಡೆಗೆ ಐಟಿ ಕಂಪನಿಗಳ ಹೆಜ್ಜೆ
ಮೈಕ್ರೋಸಾಫ್ಟ್ ಮತ್ತು ಫೇಸ್ ಬುಕ್ ಕಂಪನಿಗಳು ಹೈದ್ರಾಬಾದ್ ನಗರದ ಅತಿಹೆಚ್ಚು ಪ್ರದೇಶದಲ್ಲಿ ಕಂಪನಿಯನ್ನು ಆರಂಭಿಸುತ್ತಿದೆ. 44 ದಶಲಕ್ಷ ಸ್ಕ್ವೇರ್ ಫೀಟ್ ಜಾಗದಲ್ಲಿ ಕಂಪನಿ ಕಾಮಗಾರಿ ನಡೆಸಲಾಗುತ್ತಿದೆ. ದಕ್ಷಿಣದ ಮತ್ತೊಂದು ನಗರವಾದ ಚೆನ್ನೈ ಎರಡನೇ ಅತಿ ದೊಡ್ಡ ಸಾಫ್ಟ್ವೇರ್ ರಫ್ತುದಾರ ಮತ್ತು ಭಾರತದ ಅತಿದೊಡ್ಡ ಡೇಟಾ ಸೆಂಟರ್ ಮಾರುಕಟ್ಟೆಗಳಲ್ಲಿ ಒಂದಾಗಿದೆ. ತಾಂತ್ರಿಕ ಕಂಪನಿಗಳ ಗುತ್ತಿಗೆಯ ಬೆಳವಣಿಗೆಯು ಮುಂದುವರಿಯುತ್ತದೆ ಎಂದು ತಜ್ಞರು ಹೇಳುತ್ತಾರೆ. "ಬೇಡಿಕೆಯು ಇದುವರೆಗೆ ಸ್ಥಿರವಾಗಿದೆ. ಜಾಗತಿಕ ಆರ್ಥಿಕ ಪ್ರಕ್ಷುಬ್ಧತೆಯಿಂದ ಬೇಡಿಕೆಗೆ ಪೆಟ್ಟು ಬೀಳದಿದ್ದರೆ 2019ರ ಮಟ್ಟವನ್ನು ತಲುಪಲು ಸಾಧ್ಯವಿದೆ," ಎಂದು ಸತ್ತ್ವ ಗ್ರೂಪ್ನ ನಿರ್ದೇಶಕ ಮಹೇಶ್ ಖೈತಾನ್ ಹೇಳಿದ್ದಾರೆ.

ಐಟಿ ಕಂಪನಿಗಳನ್ನು ಸೆಳೆಯುವುದಕ್ಕೆ ಏನೆಲ್ಲಾ ಕ್ರಮಗಳು?
ಅಂತಾರಾಷ್ಟ್ರೀಯ ಆಸ್ತಿ ಸಲಹೆಗಾರರ ಪ್ರಕಾರ, ಪ್ರತಿಭೆ, ರಿಯಲ್ ಎಸ್ಟೇಟ್ ಮತ್ತು ವ್ಯಾಪಾರಿ ಪರಿಸರದ ಆಧಾರದ ಮೇಲೆ ಏಷ್ಯಾ ಫೆಸಿಫಿಕ್ ಜಾಗತಿಕ ಮಟ್ಟದಲ್ಲಿ 14 ನಗರಗಳಲ್ಲಿ ತಾಂತ್ರಿಕ ವಲಯವು ನೆಲೆ ಕಂಡುಕೊಂಡಿರುವುದನ್ನು ತೋರಿಸುತ್ತದೆ. ಈ ಸ್ಥಳಗಳಲ್ಲಿ ದೊಡ್ಡ ಮಟ್ಟದ ಗ್ರೇಡ್ ಎ ಕಚೇರಿ ಯೋಜನೆಗಳು ಜಾರಿಯಾಗುತ್ತವೆ. ಬೃಹತ್ ಪ್ರತಿಭಾ ಪೂಲ್ ಮತ್ತು ಕೈಗೆಟುಕುವ ಕಚೇರಿ ಬಾಡಿಗೆಗಳ ಮೂಲಕ ಈ ನಗರಗಳು ಉದ್ಯೋಗಿಗಳನ್ನು ಕೈ ಬೀಸಿ ಕರೆಯುತ್ತವೆ. ಅದೇ ನಿಟ್ಟಿನಲ್ಲಿ ರಾಷ್ಟ್ರೀಯ ಮತ್ತು ಜಾಗತಿಕ ಟೆಕ್ ಕಂಪನಿಗಳನ್ನು ಸಹ ಆಕರ್ಷಿಸುತ್ತಿವೆ.

ಕೋವಿಡ್-19 ಕಾಲದಲ್ಲಿ 1 ಲಕ್ಷ ಮಂದಿ ನೇಮಕ
"ನಾವು ಭಾರತದ ಬಗ್ಗೆ ಸಾಕಷ್ಟು ಬುದ್ದಿವಂತರಾಗಿದ್ದೇವೆ. ಇದು ಪ್ರಾಥಮಿಕವಾಗಿ ಕೆಲವು ಬಾಹ್ಯ ಮತ್ತು ಆಂತರಿಕ ಅಂಶಗಳಿಂದ ನಡೆಸಲ್ಪಡುತ್ತದೆ. ಕೋವಿಡ್-19 ಸಾಂಕ್ರಾಮಿಕ ರೋಗದಿಂದ ಇಡೀ ಜಗತ್ತು ತತ್ತರಿಸುತ್ತಿರುವಾಗ, ಭಾರತೀಯ ಐಟಿ ಸೇವೆಗಳು ಸುಮಾರು 1 ಲಕ್ಷ ಜನರನ್ನು ನೇಮಕ ಮಾಡಿಕೊಳ್ಳುವುದರೊಂದಿಗೆ ಅದರಿಂದ ಪ್ರಯೋಜನ ಪಡೆಯಿತು. ಇದರಿಂದ ಆಂತರಿಕ ಮಾರುಕಟ್ಟೆಗೆ ನಾವು ಒಗ್ಗಿಕೊಳ್ಳುವಂತೆ ಮಾಡಿತು," ಎಂದು ಕ್ಯಾಪಿಟಾಲ್ಯಾಂಡ್ ಇನ್ವೆಸ್ಟ್ಮೆಂಟ್ನ ಇಂಡಿಯಾ ಬಿಸಿನೆಸ್ ಪಾರ್ಕ್ನ ಸಿಇಒ ಗೌರಿ ಶಂಕರ್ ನಾಗಭೂಷಣಂ ಹೇಳಿದರು.
ಭಾರತೀಯ ತಂತ್ರಜ್ಞಾನ ವಲಯವು ಸಾಂಕ್ರಾಮಿಕ ರೋಗದ ಆರಂಭಿಕ ಪರಿಣಾಮಗಳಿಗೆ ಚೇತರಿಸಿಕೊಳ್ಳುತ್ತಿದೆ. ಇದು ತ್ವರಿತವಾಗಿ ಮರುಕಳಿಸಲಿದ್ದು, ಇತರ ಕ್ಷೇತ್ರಗಳನ್ನು ಮೀರಿಸುತ್ತದೆ. ಪ್ರಮುಖ ಭಾರತೀಯ ನಗರಗಳಲ್ಲಿ ಎರಡು ವರ್ಷಗಳಲ್ಲಿ ಕಛೇರಿ ಬಳಕೆ ಮತ್ತು ತಂತ್ರಜ್ಞಾನದ ಉದ್ಯೋಗವು ಸಾಂಕ್ರಾಮಿಕ ಪೂರ್ವದ ಮಟ್ಟಕ್ಕೆ ಸಂಪೂರ್ಣವಾಗಿ ಚೇತರಿಸಿಕೊಂಡಿದೆ ಎಂದರು.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
IPL 2026 RCB: ಹ್ಯಾಜಲ್ವುಡ್, ಯಶ್ ದಯಾಳ್ ಅಲಭ್ಯರಾದ್ರೆ ಆರ್ಸಿಬಿ ಮುಂದಿರುವ 'ಪ್ಲಾನ್ ಬಿ' ಏನು? -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ












Click it and Unblock the Notifications