ಬೇಡಿಕೆ ಹೆಚ್ಚಿಸಿಕೊಂಡ ಚಿನ್ನ ಫಳ ಫಳ ಹೊಳೆಯುತ್ತಿದೆ !
ನವದೆಹಲಿ, ಜ.12: ಜಾಗತಿಕ ಮಾರುಕಟ್ಟೆಯಲ್ಲಿನ ಏರುಪೇರು, ಶುಭ ಸಮಾರಂಭಕ್ಕಾಗಿ ದೇಶಿ ಮಾರುಕಟ್ಟೆಯಲ್ಲಿ ಚಿನ್ನದ ಆಭರಣಕ್ಕಾಗಿ ರೀಟೈಲರ್ ಗಳಿಗೆ ಬೇಡಿಕೆ ಹೆಚ್ಚಿರುವುದು ಎಲ್ಲವೂ ಒಟ್ಟಿಗೆ ಸೇರಿ ಹಳದಿ ಲೋಹವನ್ನು ಮತ್ತೊಮ್ಮೆ ಫಳ ಫಳ ಹೊಳೆಯುವಂತೆ ಮಾಡಿದೆ. ಸೋಮವಾರ ಚಿನಿವಾರ ಪೇಟೆಯಲ್ಲಿ 230 ರು ಏರಿಕೆ ಕಂಡು ಪ್ರತಿ 10 ಗ್ರಾಂಗೆ 27,840 ರು ತಲುಪಿದೆ.
ಚಿನ್ನದ ಬೆಲೆಯಲ್ಲಿ ಇಳಿಕೆ ಮುಂದುವರಿಯುವ ಲಕ್ಷಣಗಳು ಗೋಚರಿಸಿದ ಬೆನ್ನಲ್ಲೇ ಬೆಲೆಯಲ್ಲಿ ಸುಧಾರಣೆ ಕಂಡಿರುವುದು ಆಭರಣ ಮಳಿಗೆಗಳಲ್ಲಿ ಚಟುವಟಿಕೆ ಹೆಚ್ಚಿಸಿದೆ. ಇತ್ತೀಚೆಗೆ ಈ ವರ್ಷದಲ್ಲೇ ಒಂದೇ ದಿನ ಅತ್ಯಂತ ಅಧಿಕ ಪ್ರಮಾಣದ ದರ ಏರಿಕೆ ಇದಾಗಿದೆ ಎಂದು ಚಿನಿವಾರ ಪೇಟೆಯಿಂದ ತಿಳಿದು ಬಂದಿದೆ. [ಚಿನ್ನ ಸಾಲದ ಮಿತಿ 2 ಲಕ್ಷಕ್ಕೆ ಹೆಚ್ಚಿಸಿದ ರಿಸರ್ವ್ ಬ್ಯಾಂಕ್]
ಬೆಳ್ಳಿ ಬೆಲೆ ಕೂಡಾ 400 ರು ಚೇತರಿಕೆ ಕಂಡು ಪ್ರತಿ ಕೆಜಿಗೆ 37,250 ರು ನಷ್ಟಾಗಿದೆ. ನಾಣ್ಯಗಳ ಟಂಕಿಸುವ ಬೇಡಿಕೆ ಹೆಚ್ಚಿರುವುದು ಇದಕ್ಕೆ ಕಾರಣ ಎಂದು ತಿಳಿದು ಬಂದಿದೆ. ಪ್ರತಿ 100 ಪೀಸ್ ಬೆಳ್ಳಿ ನಾಣ್ಯಗಳು 61 ಸಾವಿರದಿಂದ 62,000 ರು ನಂತೆ ಮಾರಾಟವಾಗುತ್ತಿವೆ.

ಚಿನ್ನ(ಪ್ರತಿ 10 ಗ್ರಾಂ)
ಬೆಂಗಳೂರು: 25,580(22 Karat), 27,360(ಅಪರಂಜಿ)
ದೆಹಲಿ: 25,480(22K), 27,270(24K)
ಚೆನ್ನೈ: 25,540 (22K), 27,330 (24K)
ಮುಂಬೈ: 25,500 (22K), 27,290 (24K)
ಬೆಳ್ಳಿ(ಪ್ರತಿ 1 ಕೆಜಿಗೆ)
ಬೆಂಗಳೂರು: 37,178 ರು
ದೆಹಲಿ: 37,112
ಚೆನ್ನೈ: 37,155
ಮುಂಬೈ: 37,132
ಮದುವೆ ಮುಂತಾದ ಶುಭ ಸಮಾರಂಭ, ವರ್ಷಾಂತ್ಯದ ಆಫರ್ ಗಳು ಚಿನ್ನದ ಬೇಡಿಕೆ ಹೆಚ್ಚಿಸಿತ್ತು. ಈಗಲೂ ಇದೇ ರೀತಿ ಬೇಡಿಕೆ ಮುಂದುವರೆದಿದೆ. ಜಾಗತಿಕವಾಗಿ ಸಿಂಗಪುರದಲ್ಲಿ 1,231.29 ಯುಎಸ್ ಡಿ ಪ್ರತಿ ಔನ್ಸಿಗೆ ಹಾಗೂ ಬೆಳ್ಳಿ 16.61 ಪ್ರತಿ ಔನ್ಸಿಗೆ ತಲುಪಿದೆ.(ಪಿಟಿಐ)
-
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ? -
ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಮುಂಬೈ, ದೆಹಲಿ ಮೇಲೆ ಬಾಂಬ್ ಹಾಕ್ತೀವಿ: ಪಾಕ್ ಮಾಜಿ ರಾಯಭಾರಿ ವಿವಾದಾತ್ಮಕ ಹೇಳಿಕೆ












Click it and Unblock the Notifications