'ಸೂಡೊಕು ಪಿತಾಮಹ' ಮಕಿ ಕಾಜಿ ನಿಧನ
ಟೋಕಿಯೊ, ಆ.17: ಲಕ್ಷಾಂತರ ಜನರು ಪ್ರೀತಿಸುವ ಸಂಖ್ಯಾತ್ಮಕ ಮೆದುಳಿಗೆ ಯೋಚಿಸಲು ಅಧಿಕ ಅವಕಾಶ ನೀಡುವ ಆಟ ಸೂಡೊಕುವನ್ನು ಜನಪ್ರಿಯಗೊಳಿಸುವಲ್ಲಿ ತನ್ನ ಪಾತ್ರಕ್ಕಾಗಿ "ಸೂಡೊಕು ಪಿತಾಮಹ" ಎಂದು ಕರೆಯಲ್ಪಡುವ ವ್ಯಕ್ತಿಯು ತನ್ನ 69 ನೇ ವಯಸ್ಸಿನಲ್ಲಿ ಕ್ಯಾನ್ಸರ್ ನಿಂದ ನಿಧನರಾದರು ಎಂದು ಅವರ ಜಪಾನಿನ ಪ್ರಕಾಶಕರು ಘೋಷಿಸಿದ್ದಾರೆ.
ಸೋಮವಾರ ಪ್ರಕಟಿಸಿದ ನೋಟಿಸ್ನಲ್ಲಿ, "ಸೂಡೊಕು ಪಿತಾಮಹ" ನಿಕಿಲಿ ಮಕಿ ಕಾಜಿ ಕ್ಯಾನ್ಸರ್ ವಿರುದ್ದ ಹೋರಾಡುತ್ತಾ ಆಗಸ್ಟ್ 10 ರಂದು ಮನೆಯಲ್ಲಿ ನಿಧನರಾದರು ಮತ್ತು "ನಂತರದ ದಿನಗಳಲ್ಲಿ ಅಂತಿಮ ವಿಧಿ ವಿಧಾನ ಕಾರ್ಯಕ್ರಮವನ್ನು ನಡೆಸಲಾಗುವುದು," ಎಂದು ಹೇಳಿದರು. "ನಿಕಿಲಿ ಮಕಿ ಕಾಜಿ ಸೂಡೊಕು ಪಿತಾಮಹ ಎಂದು ಕರೆಯಲಾಗುತ್ತಿತ್ತು ಮತ್ತು ಪ್ರಪಂಚದಾದ್ಯಂತದ ಒಗಟು ಅಭಿಮಾನಿಗಳು ನಿಕಿಲಿ ಮಕಿ ಕಾಜಿರನ್ನು ಪ್ರೀತಿಸುತ್ತಿದ್ದರು," ಎಂದು ಪ್ರಕಾಶಕರು ತನ್ನ ವೆಬ್ಸೈಟ್ನಲ್ಲಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸುಡೋಕು, ಒಂದು ರೀತಿಯ ಸಂಖ್ಯಾತ್ಮಕ ಕ್ರಾಸ್ವರ್ಡ್, ಸ್ವಿಸ್ ಗಣಿತಜ್ಞ ಲಿಯೊನ್ಹಾರ್ಡ್ ಯೂಲರ್ 18 ನೇ ಶತಮಾನದಲ್ಲಿ ಕಂಡುಹಿಡಿದನು. ಆಧುನಿಕ ಆವೃತ್ತಿಯನ್ನು ಕೆಲವೊಮ್ಮೆ ಯುನೈಟೆಡ್ ಸ್ಟೇಟ್ನಲ್ಲಿ ರೂಪಿಸಲಾಗಿದೆ ಎಂದು ಹೇಳಲಾಗುತ್ತದೆ. ಆದರೆ ಕಾಜಿಯು ಈ ಒಗಟನ್ನು ಜನಪ್ರಿಯಗೊಳಿಸಿದ ಕೀರ್ತಿಗೆ ಪಾತ್ರವಾಗಿದ್ದಾರೆ.

ಕಾಜಿ ಸುಡೋಕು ಎಂಬ ಹೆಸರಿನೊಂದಿಗೆ ಬಂದಿದ್ದಾರೆ ಎಂದು ಹೇಳಲಾಗುತ್ತದೆ, ಜಪಾನಿನ ಪದಗುಚ್ಛದ ಸಂಕೋಚನದ ಅರ್ಥ "ಪ್ರತಿ ಸಂಖ್ಯೆಯು ಒಂದೇ ಆಗಿರಬೇಕು," ಎಂಬುವುದಾಗಿದೆ. ಸುಡೋಕುಗೆ ಆಟಗಾರನು 81 ಚೌಕಗಳಿಂದ ಮಾಡಿದ ಪೆಟ್ಟಿಗೆಯಲ್ಲಿ ಒಂದರಿಂದ ಒಂಬತ್ತು ಸಂಖ್ಯೆಗಳನ್ನು ಹಾಕಬೇಕು, ಇದರಿಂದ ಯಾವುದೇ ಒಂಬತ್ತು ಲಂಬ ಅಥವಾ ಅಡ್ಡ ರೇಖೆಗಳಲ್ಲಿ ಯಾವುದೇ ಸಂಖ್ಯೆಯನ್ನು ಪುನರಾವರ್ತನೆ ಆಗಬಾರದು. ಏಕಾಗ್ರತೆಯನ್ನು ಮೂಡಿಸುವಂತಹ ಆಟಗಳಲ್ಲಿ ಸುಡೋಕು ಕೂಡಾ ಒಂದಾಗಿದೆ.
ವಿಷಯಗಳನ್ನು ಮತ್ತಷ್ಟು ಸಂಕೀರ್ಣಗೊಳಿಸಲು, ಗ್ರಿಡ್ ಅನ್ನು ಒಂಬತ್ತು ಏಕ ಚೌಕಗಳನ್ನು ಹೊಂದಿರುವ ಒಂಬತ್ತು ಬ್ಲಾಲ್ಗಳಾಗಿ ಉಪವಿಭಾಗ ಮಾಡಲಾಗಿದೆ, ಮತ್ತು ಪ್ರತಿ ಬ್ಲಾಕ್ ಕೂಡ ಒಂದರಿಂದ ಒಂಬತ್ತು ಸಂಖ್ಯೆಗಳನ್ನು ಹೊಂದಿರಬೇಕು. ಅದರ ಜಪಾನೀಸ್ ಹೆಸರಿನ ಹೊರತಾಗಿಯೂ, ಲ್ಯಾಟಿನ್ ಚೌಕಗಳ ಮೂಲ ಪರಿಕಲ್ಪನೆ ಪ್ರತಿ ಸಂಖ್ಯೆಯಲ್ಲಿ ಅಥವಾ ಚಿಹ್ನೆಯು ಪ್ರತಿ ಸಾಲಿನಲ್ಲಿ ಒಮ್ಮೆ ಸಂಭವಿಸುವ ಗ್ರಿಡ್ ಆಗಿದೆ. 18 ನೇ ಶತಮಾನದಲ್ಲಿ ಸ್ವಿಸ್ ಗಣಿತಜ್ಞ ಲಿಯೊನ್ಹಾರ್ಡ್ ಯೂಲರ್ ಈ ಆವಿಷ್ಕಾರ ಮಾಡಿದ್ದಾರೆ.
ನಿಕೋಲಿ 1980 ರ ದಶಕದಲ್ಲಿ ಅಮೇರಿಕನ್ ನಿಯತಕಾಲಿಕದಲ್ಲಿ ಒಂದು ಆವೃತ್ತಿಯನ್ನು ಗುರುತಿಸಿದರು ಮತ್ತು ಅದನ್ನು ಜಪಾನ್ಗೆ ತಂದರು, ಅಲ್ಲಿ ಸುಡೋಕು ಪರಿಚಯಕ್ಕೆ ಕಾರಣವಾದರು. ಇದು ಹಲವು ದಶಕಗಳ ನಂತರ ಯುರೋಪ್ ಮತ್ತು ಅಮೆರಿಕಾ ಸಂಯುಕ್ತ ಸಂಸ್ಥಾನಗಳಿಗೆ ಪ್ರವೇಶಿಸಿತು, 2005 ರಲ್ಲಿ ಬ್ರಿಟನ್ನಲ್ಲಿ ಬಿಬಿಸಿ ಮೂಲಕ ಪ್ರಕಟವಾದ ಆಟ, ಈಗ ವ್ಯಾಪಿಸಿದೆ. "ಕಳೆದ ವರ್ಷ ರಾಷ್ಟ್ರದ ಮೇಲೆ ತನ್ನ ಸೌಮ್ಯ ದಾಳಿಯನ್ನು ಆರಂಭಿಸಿದ ಸುಡೋಕೊ ಈಗ ನಾಲ್ಕು ರಾಷ್ಟ್ರೀಯ ಪತ್ರಿಕೆಗಳಲ್ಲಿ ಕಾಣಬಹುದು," ಎಂದು ಈ ಆಟದ ಬಗ್ಗೆ ಅಧಿಕಾರಿಗಳು ಹೇಳುತ್ತಾರೆ.
ಕಾಜಿ 2007 ರಲ್ಲಿ ಬಿಬಿಸಿಗೆ ಹೊಸ ಒಗಟು ಸೃಷ್ಟಿಸುವುದು "ನಿಧಿಯನ್ನು ಹುಡುಕುವ" ಹಾಗೆ ಎಂದು ಹೇಳಿದರು. "ಇದು ಹಣವನ್ನು ಗಳಿಸುತ್ತದೆಯೇ ಎಂಬುದರ ಬಗ್ಗೆ ಅಲ್ಲ. ಅದನ್ನು ಪರಿಹರಿಸಲು ಪ್ರಯತ್ನಿಸುವ ಉತ್ಸಾಹ ಇದು," ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು.
ಕಾಜಿ ತನ್ನ ತ್ರೈಮಾಸಿಕ ಒಗಟು ಪತ್ರಿಕೆಯ ಓದುಗರ ಸಹಾಯದಿಂದ ಒಗಟುಗಳನ್ನು ರಚಿಸುವುದನ್ನು ಮತ್ತು ಪರಿಷ್ಕರಿಸುವುದನ್ನು ಮುಂದುವರೆಸಿದರು. ಅನಾರೋಗ್ಯದ ಕಾರಣದಿಂದಾಗಿ ಕಾಜಿ ಜುಲೈನಲ್ಲಿ ತಮ್ಮ ಕಂಪನಿಯ ಮುಖ್ಯಸ್ಥ ಸ್ಥಾನದಿಂದ ಕೆಳಗಿಳಿದರು ಮತ್ತು ಆಗಸ್ಟ್ 10 ರಂದು ಪಿತ್ತರಸ ನಾಳದ ಕ್ಯಾನ್ಸರ್ ನಿಂದ ನಿಧನರಾದರು.
(ಒನ್ಇಂಡಿಯಾ ಸುದ್ದಿ)
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications