Breaking: ಅಂಬುಜಾ ಮತ್ತು ಎಸಿಸಿ ಸಿಮೆಂಟ್ ಸ್ವಾಧೀನಪಡಿಸಿಕೊಂಡ ಅದಾನಿ
ನವದೆಹಲಿ, ಸೆಪ್ಟೆಂಬರ್ 17: ಅಂಬುಜಾ ಸಿಮೆಂಟ್ಸ್ ಲಿಮಿಟೆಡ್ ಮತ್ತು ಎಸಿಸಿ ಲಿಮಿಟೆಡ್ನ ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆ ಪೂರ್ಣಗೊಂಡ ದಿನವನ್ನು ಐತಿಹಾಸಿಕ ದಿನ ಎಂದು ಗೌತಮ್ ಅದಾನಿ ಬಣ್ಣಿಸಿದ್ದಾರೆ.
"ಭಾರತದ ಎರಡು ಐತಿಹಾಸಿಕ ಬ್ರ್ಯಾಂಡ್ಗಳ ಸ್ವಾಧೀನವು ನಮ್ಮನ್ನು ಭಾರತದ 2ನೇ ಅತಿದೊಡ್ಡ ಸಿಮೆಂಟ್ ತಯಾರಕರನ್ನಾಗಿ ಮಾಡುತ್ತದೆ. ಅದ್ಭುತ ತಂಡ. ಅದ್ಭುತ ವೇದಿಕೆ. ಅತ್ಯುದ್ಬುತ ಹೊಂದಾಣಿಕೆಯಿಂದಾಗಿ ಮುಂದಿನ 5 ವರ್ಷಗಳಲ್ಲಿ ನಮ್ಮ ಸಾಮರ್ಥ್ಯವನ್ನು ಇಮ್ಮಡಿಗೊಳಿಸುತ್ತೇವೆ," ಎಂದು ಗೌತಮ್ ಅದಾನಿ ಹೇಳಿದ್ದಾರೆ.
ಅದಾನಿ ಸಮೂಹದ ಕುಲಪತಿ ಗೌತಮ್ ಅದಾನಿ ಅನ್ನು ಅಂಬುಜಾ ಸಿಮೆಂಟ್ಸ್ ಮಂಡಳಿಯ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಗೌತಮ್ ಅದಾನಿ ಹಿರಿಯ ಪುತ್ರ ಕರಣ್ ಅದಾನಿಯನ್ನು ಎಸಿಸಿಯಲ್ಲಿ ಅಧ್ಯಕ್ಷ ಮತ್ತು ಕಾರ್ಯನಿರ್ವಾಹಕೇತರ ನಿರ್ದೇಶಕರಾಗಿ ನೇಮಿಸಲಾಗಿದೆ.

ಅದಾನಿ ಹಿರಿಯ ಪುತ್ರ ಕರಣ್ ಅದಾನಿ:
ಅಂಬುಜಾ ಸಿಮೆಂಟ್ಸ್ನಲ್ಲಿ ಕರಣ್ ಕಾರ್ಯನಿರ್ವಾಹಕೇತರ ನಿರ್ದೇಶಕರಾಗಿರುತ್ತಾರೆ. ಸದ್ಯ ಕರಣ್ ಅದಾನಿ, ಅದಾನಿ ಬಂದರುಗಳು ಮತ್ತು ವಿಶೇಷ ಆರ್ಥಿಕ ವಲಯ ಲಿಮಿಟೆಡ್ (APSEZ)ನ CEO ಆಗಿದ್ದಾರೆ. ಹೆಚ್ಚುವರಿ 20,000 ಕೋಟಿ ರೂಪಾಯಿಯನ್ನು ಸಂಗ್ರಹಿಸಲು ಅದಾನಿ ಸಮೂಹದ ಪ್ರವರ್ತಕ ಘಟಕಕ್ಕೆ ಕನ್ವರ್ಟಿಬಲ್ ವಾರಂಟ್ಗಳ ಆದ್ಯತೆಯ ಹಂಚಿಕೆಯನ್ನು ಅಂಬುಜಾ ಸಿಮೆಂಟ್ಸ್ ಮಂಡಳಿಯು ಅನುಮೋದಿಸಿದೆ. 2030 ರ ವೇಳೆಗೆ ಭಾರತದ ಅತಿದೊಡ್ಡ ಸಿಮೆಂಟ್ ಉತ್ಪಾದಕರಾಗುವ ಗುರಿಯೊಂದಿಗೆ ಹೆಚ್ಚುವರಿ ಸಾಮರ್ಥ್ಯ ರಚಿಸಲು ಈ ನಿಧಿ ಬಳಸಲಾಗುತ್ತದೆ.
"ವಿಶ್ವದ ಅತಿದೊಡ್ಡ ನವೀಕರಿಸಬಹುದಾದ ಇಂಧನ ಕಂಪನಿಗಳಲ್ಲಿ ಒಂದಾಗಿರುವ ನಮ್ಮ ಸ್ಥಾನವು ಆರ್ಥಿಕತೆಯ ತತ್ವಗಳಿಗೆ ಅನುಗುಣವಾಗಿ ಪ್ರೀಮಿಯಂ ಗುಣಮಟ್ಟದ ಹಸಿರು ಸಿಮೆಂಟ್ ಅನ್ನು ಉತ್ತಮವಾಗಿ ತಯಾರಿಸಲು ಸಹಾಯ ಮಾಡುತ್ತದೆ. ಈ ಎಲ್ಲಾ ಆಯಾಮಗಳು 2030 ರೊಳಗೆ ಸಿಮೆಂಟ್ನ ಅತಿದೊಡ್ಡ ಮತ್ತು ಅತ್ಯಂತ ಪರಿಣಾಮಕಾರಿ ತಯಾರಕರಾಗುವ ಹಾದಿಯಲ್ಲಿದೆ," ಎಂದು ಅದಾನಿ ಹೇಳಿದರು.












Click it and Unblock the Notifications