ಬಾಹುಬಲಿ ದಾಖಲೆ ಮುರಿದ ಖೈದಿ ನಂ. 150
ಹೈದರಾಬಾದ್, ಜನವರಿ 12: ಬುಧವಾರವಷ್ಟೇ ಬಿಡುಗಡೆಯಾಗಿರುವ ಚಿರಂಜೀವಿ ಅಭಿನಯದ ಖೈದಿ ನಂಬರ್ 150 ಚಿತ್ರದ ಮೊದಲ ದಿನವೇ ಆಂಧ್ರ ಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳಲ್ಲಿ ಈ ಚಿತ್ರ ಮೊದಲ ದಿನವೇ 24 ಕೋಟಿ ರು. ಬಾಚಿದೆ.
ಇದು, ಮೊದಲ ದಿನದಲ್ಲೇ ಅತ್ಯಧಿಕ ಮೊತ್ತ ಕಲೆಹಾಕುವ ಮೂಲಕ ತೆಲುಗು ಚಿತ್ರರಂಗದಲ್ಲಿ ದಾಖಲೆ ನಿರ್ಮಿಸಿದ್ದ 'ಬಾಹುಬಲಿ' ಚಿತ್ರದ ಸಾಧನೆಯನ್ನು ಹಿಂದಿಕ್ಕಿದೆ. ಆಂಧ್ರ ಪ್ರದೇಶ ಹಾಗೂ ತೆಲಂಗಾಣಗಳಲ್ಲಿ ಬಾಹುಬಲಿ ಚಿತ್ರ ಮೊದಲ ದಿನ 22.4 ಕೋಟಿ ಕಲೆಕ್ಷನ್ ಮಾಡಿತ್ತು.

ಇದಲ್ಲದೆ, ತೆಲುಗು ಚಿತ್ರರಂಗದಲ್ಲಿ ಈವರೆಗೆ ಭರ್ಜರಿ ಓಪನಿಂಗ್ ಕಂಡಿದ್ದ ಟಾಪ್ 6 ಸಿನಿಮಾಗಳನ್ನು ಖೈದಿ ನಂಬರ್ 1 ಚಿತ್ರ ಹಿಂದಿಕ್ಕಿದೆ. ಬಾಹುಬಲಿ (22.4 ಕೋಟಿ ರು.), ಸರ್ದಾರ್ ಗಬ್ಬರ್ ಸಿಂಗ್ (20.92 ಕೋಟಿ ರು.), ಜನತಾ ಗ್ಯಾರೇಜ್ (20.49 ಕೋಟಿ ರು.), ಶ್ರೀಮಂತುಡು (14.72 ಕೋಟಿ ರು.), ಸರೈನೋಡು (10.96 ಕೋಟಿ ರು.) ಚಿತ್ರಗಳನ್ನು ಖೈದಿ ನಂಬರ್ ಒನ್ ಚಿತ್ರ ಹಿಂದಿಕ್ಕಿದೆ.
ಹೀಗಾಗಿ, ಬಿಡುಗಡೆಗೂ ಮುನ್ನವೇ ಸ್ಯಾಟಲೈಟ್, ಆಡಿಯೋ ಸೇರಿದಂತೆ ಚಿತ್ರಕ್ಕೆ ಸಂಬಂಧಿಸಿದ ಇತರ ಹಕ್ಕುಗಳನ್ನು ಮಾರಾಟ ಮಾಡುವ ಮೂಲಕ 103 ಕೋಟಿ ರು. ಗಳಿಸಿರುವ ಈ ಚಿತ್ರ, ಭರ್ಜರಿ ಕಲೆಕ್ಷನ್ ನತ್ತ ಹೆಜ್ಜೆ ಹಾಕುತ್ತಿರುವುದು ಸ್ಪಷ್ಟವಾಗಿದೆ.
ಇದಷ್ಟೇ ಅಲ್ಲದೆ, ಮೊದಲ ವಾರದ ಕಲೆಕ್ಷನ್ ಗಳನ್ನು ಈಗಲೇ ಚಿತ್ರೋದ್ಯಮದ ಪಂಡಿತರು ಲೆಕ್ಕಾ ಹಾಕುತ್ತಿದ್ದಾರೆ. ಮೊದಲ ವಾರಾಂತ್ಯಕ್ಕೆ ಈ ಚಿತ್ರವೇನಾದರೂ 73 ಕೋಟಿ ದಾಟಿದರೆ, ಅದೂ ಸಹ ಬಾಹುಬಲಿ ಚಿತ್ರದ ಮೊದಲ ವಾರದ ಕಲೆಕ್ಷನ್ ದಾಖಲೆ ಮೀರಲಿದೆ. ಬಾಹುಬಲಿ ಚಿತ್ರ ತನ್ನ ಮೊದಲ ವಾರದಲ್ಲಿ ಒಟ್ಟಾರೆಯಾಗಿ 73 ಕೋಟಿ ರು. ಗಳಿಸಿತ್ತು.
ಇನ್ನು, ಅಮೆರಿಕದಲ್ಲಿ ಮಂಗಳವಾರ ಈ ಚಿತ್ರದ ಪ್ರೀಮಿಯರ್ ಶೋ ನಡೆಸಲಾಗಿದ್ದು ಅದರಲ್ಲಿ ಈ ಚಿತ್ರ 8.56 ಕೋಟಿ ರು. ಬಾಚಿದೆ ಎಂದು ಮೂಲಗಳು ತಿಳಿಸಿವೆ.
-
IMD Weather Forecast: ಈ ಭಾಗಗಳಲ್ಲಿ ಮುಂದಿನ 3 ದಿನ ಬಿರುಗಾಳಿ, ಆಲಿಕಲ್ಲು ಸಹಿತ ಭಾರೀ ಮಳೆ -
New Railway Lines: ಬಿರೂರು-ಶಿವಮೊಗ್ಗ ರೈಲು ಹಳಿ ಡಬ್ಲಿಂಗ್, ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ಸಂಪರ್ಕಕ್ಕೆ ಒತ್ತಾಯ -
March 19 Horoscope: ಈ ರಾಶಿಯವರಿಗೆ ಶುಭಸುದ್ದಿ, ಇತರರಿಗೆ ಎಚ್ಚರಿಕೆ -
13,00,000 ಕೋಟಿ ರೂಪಾಯಿ ಹೂಡಿಕೆದಾರರ ಹಣ ಉಡೀಸ್, ಭಾರತೀಯ ಷೇರುಪೇಟೆಯಲ್ಲಿ ಬಿರುಗಾಳಿ... Stock Market -
Traffic Advisory: ಮಾ.21 ರಂಜಾನ್ ಪ್ರಯುಕ್ತ ಬೆಂಗಳೂರಿನ ಈ ರಸ್ತೆಗಳಲ್ಲಿ ಸಂಚಾರ ನಿಷೇಧ, ಪರ್ಯಾಯ ಮಾರ್ಗ -
ಬೆಂಗಳೂರಿನಿಂದ ಬೀದರ್-ಕಲಬುರಗಿಗೆ ವಿಮಾನಸೇವೆ: 23ರೊಳಗೆ ಪ್ರಸ್ತಾವನೆ ಸಲ್ಲಿಸಲು ಸೂಚನೆ -
ಕರ್ನಾಟಕ ಉಪಚುನಾವಣೆ: ದಾವಣಗೆರೆ ದಕ್ಷಿಣ, ಬಾಗಲಕೋಟೆ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ -
ರೈಲ್ವೆ ಇಲಾಖೆಗೆ ಕರ್ನಾಟಕ ರಕ್ಷಣಾ ವೇದಿಕೆಯಿಂದ ಏ.15ರ ಗಡುವು: ಟಿ.ಎ.ನಾರಾಯಣಗೌಡ ಹೇಳಿದ್ದೇನು -
ವೆಜ್ ಬಿರಿಯಾನಿ 50, ಮಟನ್ ಬಿರಿಯಾನಿಗೆ 180 ರೂಪಾಯಿ ರೇಟ್ ಫಿಕ್ಸ್... Tamil Nadu Election -
Gold Price: ಯುಗಾದಿಗೆ ಚಿನ್ನಪ್ರಿಯರಿಗೆ ಶುಭ ಸುದ್ದಿ: ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ, ಬೆಳ್ಳಿ ದರ 15,000 ರೂ.ಕುಸಿತ -
ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಸಹೋದರಿ ಜವರಮ್ಮ ನಿಧನ -
ಆಕ್ಸಿಜನ್ ಸಿಲಿಂಡರ್ ನೆರವಿನಿಂದ ಎಸ್ಎಸ್ಎಲ್ಸಿ ಪರೀಕ್ಷೆ ಬರೆದ ವಿದ್ಯಾರ್ಥಿ: ಸಲಾಂ ಎಂದ ದೇಶದ ಜನತೆ












Click it and Unblock the Notifications