100 ರೂಪಾಯಿ ಜಾಗದಲ್ಲಿ 2000; ಎಟಿಎಂನಲ್ಲಿ ಹಣದ ಮಳೆ
ಜೈಪುರ, ಜನವರಿ 18: ರಾಜಸ್ಥಾನದ ಟೊಂಕ್ ನಿವಾಸಿ ಜಿತೇಶ್ ದಿವಾಕರ್ ಗೆ ಮಂಗಳವಾರ ಸಂಜೆ ಎಟಿಎಂನಲ್ಲೆ ಲಾಟರಿ ಹೊಡೆದಿದೆ. ಅಚ್ಚರಿಯಾಗಬೇಡಿ ಇದು ಸತ್ಯ. ದಿವಾಕರ್ ಎಂಬುವರು ಕೇವಲ 3500 ರೂಪಾಯಿ ಡ್ರಾ ಮಾಡಲು ಹೊರಟರೆ ಎಟಿಎಂ ಮೆಶೀನ್ 70,000 ರೂಪಾಯಿ ನೀಡಿ, ಅವರನ್ನು ಅಚ್ಚರಿಯಲ್ಲಿ ಕೆಡವಿದೆ.
ದಿವಾಕರ್ ಮಾತ್ರವಲ್ಲ ಇದೇ ರೀತಿ ಸುಮಾರು ಹತ್ತು ಜನರಿಗೆ ಎಟಿಎಂ ಮೆಶೀನ್ ಕೇಳಿದ್ದಕ್ಕಿಂತ ಹಚ್ಚಿನ ಹಣ ನೀಡಿ ದಾನಶೂರ ಕರ್ಣನಂತೆ ವರ್ತಿಸಿದೆ.[ಜ.17ರಿಂದ ಎಟಿಎಂನಿಂದ ದಿನಕ್ಕೆ 10 ಸಾವಿರ ಡ್ರಾ ಮಾಡಬಹುದು!]

ರಾಜಸ್ಥಾನದ ರಾಜಧಾನಿ ಜೈಪುರದಿಂದ 80 ಕಿಲೋಮೀಟರ್ ದೂರದಲ್ಲಿರುವ ಬ್ಯಾಂಕ್ ಆಫ್ ಬರೋಡಾದ ಎಟಿಎಂ ಯಂತ್ರದಲ್ಲಿ ಹಣ ಇಟ್ಟಿದ್ದು ಅದಲು ಬದಲಾಗಿತ್ತು. 100 ರೂಪಾಯಿ ನೋಟು ಇಡಬೇಕಾದ ಜಾಗದಲ್ಲಿ ಸಿಬ್ಬಂದಿ 2,000 ರೂಪಾಯಿ ನೋಟುಗಳನ್ನು ಇಟ್ಟಿದ್ದರು. ಇದರಿಂದ 100 ರೂ ನೋಟಿಗೆ ಅದಕ್ಕಿಂತ20 ಪಟ್ಟು ಹೆಚ್ಚಿನ ಬೆಲೆಯ ನೋಟು ಗ್ರಾಹಕರ ಕೈಗೆ ಬಂದು ಬೀಳುತ್ತಿತ್ತು.
ಹೀಗೆ 70 ಸಾವಿರ ರುಪಾಯಿ ಹಣ ದಿವಾಕರ್ ಕೈಗೂ ತಲುಪಿತು. ಆದರೆ ಹೆಚ್ಚಿನ ಜನ ಹಣ ಪಡೆದು ದುರಾಸೆಯಿಂದ ವಾಪಸಾದರೆ, ದಿವಾಕರ್ ಮಾತ್ರ ಬ್ಯಾಂಕ್ ಅಧಿಕಾರಿಗಳಿಗೆ ಮಾಹಿತಿ ನೀಡಿ ಮಾನವೀಯತೆ ಮೆರೆದರು. ಬ್ಯಾಂಕ್ ಅಧಿಕಾರಿಗಳು ದಿವಾಕರ್ ದೂರಿನ ಮೇಲೆ ಬಂದು ನೋಡಿದರೆ ಅದಾಗಲೇ 6.76 ಲಕ್ಷ ರೂಪಾಯಿ ನಿಗದಿಗಿಂತ ಹೆಚ್ಚಾಗಿ ಖಾಲಿಯಾಗಿತ್ತು.[ಎಟಿಎಂ ವಿಥ್ ಡ್ರಾಗೆ ಬೀಳಲಿದೆ ಮಿತಿ, 3ಕ್ಕಿಂತ ಹೆಚ್ಚು ಡ್ರಾಗೆ ಶುಲ್ಕ ಪಾವತಿ]
"ತಾಂತ್ರಿಕವಾಗಿ 100 ರೂಪಾಯಿ ನೋಟು ಇಡುವ ಜಾಗದಲ್ಲಿ 2000 ರೂಪಾಯಿ ಇಟ್ಟರೆ ಸೆನ್ಸಾರುಗಳು ಅದನ್ನು ಒಪ್ಪಿಕೊಳ್ಳುವುದಿಲ್ಲ. ಹೀಗಾಗಿ ನಾವು ತಾಂತ್ರಿಕ ಪರಿಣತರ ಬಳಿ ವಿಷಯದ ತನಿಖೆ ಮಾಡುವಂತೆ ಹೇಳಿದ್ದೇವೆ," ಎಂದು ಬ್ಯಾಂಕ್ ಆಫ್ ಬರೋಡದ ಚೀಫ್ ಮ್ಯಾನೇಜರ್ ಹರಿಕಿಶನ್ ಮೀನಾ ಹೇಳಿದ್ದಾರೆ. ಬ್ಯಾಂಕ್ ಈ ಕುರಿತು ಪೊಲೀಸ್ ದೂರು ಕೂಡಾ ದಾಖಲಿಸಲಿದೆ ಎಂದು ಅವರು ಹೇಳಿದ್ದಾರೆ.
ಲಾಟರಿ ಹೊಡೆದವರು ಪೊಲೀಸರ ಕೈಗೆ ಸಿಕ್ಕಿ ಬೀಳುತ್ತಾರಾ? ನೋಡಬೇಕಷ್ಟೆ.
ಇದೇ ರೀತಿ ಕೆಲವು ದಿನಗಳ ಹಿಂದೆ ಮೈಸೂರಿನಲ್ಲಿಯೂ 4 ಸಾವಿರ ಡ್ರಾ ಮಾಡಲು ಹೋದವರಿಗೆ 80,000 ಹಣ ಬಂದಿತ್ತು.[ಎಟಿಎಂ ಚಮತ್ಕಾರ: 4 ಸಾವಿರ ಡ್ರಾ ಮಾಡಿದವರಿಗೆ ಸಿಕ್ಕಿದ್ದು 80 ಸಾವಿರ]
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್












Click it and Unblock the Notifications