ಮತ್ತೆ ಆರಂಭವಾಗಲಿದೆ '1 ರುಪಾಯಿ' ಏರ್ ಡೆಕ್ಕನ್ ವಿಮಾನ ಯಾನ
ನವದೆಹಲಿ, ಡಿಸೆಂಬರ್ 13: ರಸಪ್ರಶ್ನೆ ಕಾರ್ಯಕ್ರಮ ಮಾಡಿ, 1 ರುಪಾಯಿ ವಿಮಾನ ಯಾನ ಅಂದರೆ ಏನು ನೆನಪಾಗುತ್ತದೆ ಅಂತ ಪ್ರಶ್ನೆ ಕೇಳಿದರೆ, ಏರ್ ಡೆಕ್ಕನ್ ಎಂಬ ಉತ್ತರ ಬರಬಹುದಲ್ಲವಾ! ಭಾರತೀಯರಿಗೆ ಅತ್ಯಂತ ಕಡಿಮೆ ಪ್ರಯಾಣ ದರದಲ್ಲಿ ದೇಶೀಯ ವಿಮಾನ ಯಾನದ ಕನಸು ಬಿತ್ತಿದ್ದು ಏರ್ ಡೆಕ್ಕನ್. ಇದೀಗ ಮತ್ತೆ ತನ್ನ ಕಾರ್ಯಾಚರಣೆ ಆರಂಭಿಸಲು ಎಲ್ಲ ಸಿದ್ಧತೆ ನಡೆಸಿದೆ.
2003ರಲ್ಲಿ ಏರ್ ಡೆಕ್ಕನ್ ಆರಂಭಿಸಿದ್ದು ಜಿ.ಆರ್.ಗೋಪಿನಾಥ್. 2008ರಲ್ಲಿ ಅದು ವಿಜಯ್ ಮಲ್ಯರ ಕಿಂಗ್ ಫಿಷರ್ ಏರ್ ಲೈನ್ಸ್ ಜತೆಗೆ ವಿಲೀನವಾಯಿತು. ಆ ನಂತರ ಹಣಕಾಸು ಸಮಸ್ಯೆಯ ಕಾರಣಕ್ಕೆ 2012ರಿಂದ ತನ್ನ ಕಾರ್ಯಾಚರಣೆಯನ್ನೇ ನಿಲ್ಲಿಸಿತು. ಇದೀಗ ಎರಡನೇ ಬಾರಿ ನಭಕ್ಕೆ ಹಾರಲು ಸಿದ್ಧವಾಗಿದೆ ಏರ್ ಡೆಕ್ಕನ್.

ಮುಂಬೈ, ದೆಹಲಿ, ಕೋಲ್ಕತ್ತಾ ಹಾಗೂ ಶಿಲ್ಲಾಂಗ್ ನಿಂದ ಚಟುವಟಿಕೆ ಆರಂಭಿಸಲಿರುವ ಏರ್ ಡೆಕ್ಕನ್, ಸಮೀಪದ ನಗರಗಳಿಗೆ ಹಾರಾಟ ಆರಂಭಿಸಲಿದೆ. ಇದೇ ಡಿಸೆಂಬರ್ 22ರಂದು ನಾಸಿಕ್ ನಿಂದ ಮುಂಬೈಗೆ ಏರ್ ಡೆಕ್ಕನ್ ನ ವಿಮಾನ ಹಾರಾಟ ನಡೆಸಲಿದೆ ಎಂದು ಬೆಂಗಳೂರಿನ ನಿವಾಸಿಯಾದ ಗೋಪಿನಾಥ್ ಮಾಧ್ಯಮವೊಂದಕ್ಕೆ ಮಾಹಿತಿ ನೀಡಿದ್ದಾರೆ.
ಆರಂಭದಲ್ಲಿ ಕೆಲವು ಅದೃಷ್ಟವಂತರು ಒಂದು ರುಪಾಯಿಯಲ್ಲಿ ವಿಮಾನ ಹಾರಾಟ ನಡೆಸಬಹುದು. ಇನ್ನು ನಾಸಿಕ್-ಮುಂಬೈ ಮಧ್ಯೆ ವಿಮಾನದಲ್ಲಿ ನಲವತ್ತು ನಿಮಿಷದ ಪ್ರಯಾಣ ಆಗುತ್ತದೆ. ಅದಕ್ಕೆ 1400 ರುಪಾಯಿ ದರ ಇರುತ್ತದೆ. ಈ ಮಾರ್ಗದ ಮಧ್ಯೆ ರಸ್ತೆ ಮೂಲಕ ಸಂಚರಿಸಬೇಕು ಅಂದರೆ ನಾಲ್ಕು ಗಂಟೆ ಸಮಯ ಹಿಡಿಯುತ್ತದೆ.

ನಾಸಿಕ್ ಮತ್ತು ಪುಣೆ ಹಾಗೂ ಮುಂಬೈ ಮತ್ತು ಜಲಗಾಂವ್ ಮಧ್ಯೆ ಅದೇ ದಿನವೇ ವಿಮಾನ ಹಿಂತಿರುಗುತ್ತದೆ. ಜನವರಿ ಹೊತ್ತಿಗೆ ದೆಹಲಿಯಿಂದಲೂ ಏರ್ ಡೆಕ್ಕನ್ ಸೇವೆ ಆರಂಭಿಸಲಿದ್ದು, ಆಗ್ರಾ, ಶಿಮ್ಲಾ, ಲುಧಿಯಾನ, ಪಂಥ್ ನಗರ್, ಡೆಹ್ರಾಡೂನ್ ಮತ್ತು ಕುಲುವಿನ ಮಧ್ಯೆ ಸಂಚರಿಸಲಿದೆ.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications