Get Updates
Get notified of breaking news, exclusive insights, and must-see stories!

ಕರ್ನಾಟಕದಲ್ಲಿ ನಗರ ಅನಿಲ ಪೂರೈಕೆ ಜಾಲ ಅಭಿವೃದ್ಧಿ: ₹ 8,000 ಕೋಟಿ ಹೂಡಿಕೆ

ಬೆಂಗಳೂರು: ಭಾರತೀಯ ನಗರ ಅನಿಲ ವಿತರಣೆ (Indian City Gas Distribution) ಉದ್ಯಮದಲ್ಲಿ ಪ್ರಮುಖ ಸಂಸ್ಥೆಯಾಗಿರುವ ಎಜಿ&ಪಿ ಪ್ರಥಮ್ ಕರ್ನಾಟಕ ಸರ್ಕಾರದೊಂದಿಗೆ ಬೆಂಗಳೂರಿನಲ್ಲಿ ನಡೆಯುತ್ತಿರುವ ಜಾಗತಿಕ ಬಂಡವಾಳ ಹೂಡಿಕೆ ಸಮಾವೇಶದ ವೇಳೆ ಒಪ್ಪಂದಕ್ಕೆ ಸಹಿ ಹಾಕಿದೆ.

ಈ ಒಪ್ಪಂದದ ಪ್ರಕಾರ ಸಂಸ್ಥೆಯು ಸರ್ಕಾರದ ಸಹಯೋಗದಲ್ಲಿ ಕರ್ನಾಟಕದ 15 ಜಿಲ್ಲೆಗಳಲ್ಲಿ ವಿಶ್ವಾಸಾರ್ಹ, ಆರ್ಥಿಕತೆ ಮತ್ತು ಪರಿಸರ ಸ್ನೇಹಿಯಾದ ನ್ಯಾಚುರಲ್ ಗ್ಯಾಸ್ ಅನ್ನು ವಿತರಣೆ ಮಾಡಲು ನಗರ ಅನಿಲ ವಿತರಣೆ (ಸಿಜಿಡಿ) ಜಾಲವನ್ನು ಅಭಿವೃದ್ಧಿಪಡಿಸುವ ಕಾರ್ಯವನ್ನು ಕೈಗೊಳ್ಳಲಿದೆ.

ಈ ಒಪ್ಪಂದದಿಂದಾಗಿ ಎಜಿ&ಪಿ ಪ್ರಥಮ್ ಸಂಸ್ಥೆಯು ಮುಂದಿನ ಎಂಟು ವರ್ಷಗಳಲ್ಲಿ ಕೋಲಾರ, ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ, ಚಿಕ್ಕಮಗಳೂರು, ಕೊಡಗು, ಬಾಗಲಕೋಟೆ, ಕೊಪ್ಪಳ, ರಾಯಚೂರು, ಕಲಬುರಗಿ, ವಿಜಯಪುರ, ಶಿವಮೊಗ್ಗ, ಉತ್ತರಕನ್ನಡ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಸಿಜಿಡಿ ಜಾಲಗಳನ್ನು ಅಭಿವೃದ್ಧಿಪಡಿಸಲು 8,000 ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಲಿದೆ. ಎಜಿ&ಪಿ ಈ ಯೋಜನೆಯಡಿ ರಾಜ್ಯದ ಶೇ.55 ರಷ್ಟು ಭೂಪ್ರದೇಶ ಮತ್ತು ಶೇ.42 ರಷ್ಟು ಜನಸಂಖ್ಯೆಯನ್ನು ತಲುಪಲಿದೆ. ಮುಂದಿನ 8 ವರ್ಷಗಳಲ್ಲಿ ಎಜಿ&ಪಿ 1000 ಕಿಲೋಮೀಟರ್‌ನಷ್ಟು ಪೈಪ್ ಲೈನ್, 5000 ಕಿಲೋಮೀಟರ್‌ನಷ್ಟು ಎಂಡಿಪಿಇ ಪೈಪ್ ಲೈನ್ ಅನ್ನು ಅಳವಡಿಸಿ ಇದರ ಮೂಲಕ 5 ಮಿಲಿಯನ್‌ಗೂ ಅಧಿಕ ಮನೆಗಳು ಮತ್ತು ಅನೇಕ ಕೈಗಾರಿಕೆಗಳು ಹಾಗೂ ವಾಣಿಜ್ಯ ಸಂಸ್ಥೆಗಳಿಗೆ ನೈಸರ್ಗಿಕ ಅನಿಲವನ್ನು ಪೂರೈಸಲಿದೆ. ಇದಲ್ಲದೇ, ಸಾರಿಗೆ ಕ್ಷೇತ್ರಕ್ಕಾಗಿ 600 ಕ್ಕೂ ಹೆಚ್ಚು ಕಂಪ್ರೆಸ್ಡ್ ನ್ಯಾಚುರಲ್ ಗ್ಯಾಸ್ (ಸಿಎನ್ ಜಿ) ಸ್ಟೇಷನ್ ಗಳು ಮತ್ತು ಲಿಕ್ವಿಫೈಯ್ಡ್ ನ್ಯಾಚುರಲ್ ಗ್ಯಾಸ್ ಸ್ಟೇಷನ್ ಗಳನ್ನು ಆರಂಭಿಸುವ ಯೋಜನೆಯನ್ನು ಹೊಂದಿದೆ.

8000 crore investment by AGP Pratham for development of urban gas supply network in Karnataka

ಬಹುನಿರೀಕ್ಷಿತ ಸಿಜಿಡಿ ಮೂಲಸೌಕರ್ಯ ಅಭಿವೃದ್ಧಿಗೆ ಪೂರಕವಾಗಿ ಅಗತ್ಯವಿರುವ ಬೆಂಬಲವನ್ನು ಕರ್ನಾಟಕ ಸರ್ಕಾರ ನೀಡಲಿದ್ದು, ಇದರಿಂದ ಮನೆಗಳಿಗೆ, ವಾಣಿಜ್ಯ ಮತ್ತು ಕೈಗಾರಿಕಾ ಗ್ರಾಹಕರಿಗೆ ಹಾಗೂ ಸಿಎನ್ ಜಿ/ಎಲ್ಎನ್ ಜಿ ಸ್ಟೇಷನ್ ಗಳಿಗೆ ಪೈಪ್ ಮೂಲಕ ನೈಸರ್ಗಿಕ ಅನಿಲವನ್ನು ನಿರಂತರವಾಗಿ ಪೂರೈಕೆ ಮಾಡಲಾಗುತ್ತದೆ.

ಇದುವರೆಗೆ ಎಜಿ&ಪಿ ಪ್ರಥಮ್ ರಾಜ್ಯದಲ್ಲಿ 60 ಸಿಎನ್ ಜಿ/ಎಲ್ಎನ್ ಜಿ ಸ್ಟೇಷನ್ ಗಳನ್ನು ಆರಂಭಿಸಿದ್ದು, ಇನ್ನೂ ಅನೇಕ ಸ್ಟೇಷನ್ ಗಳ ನಿರ್ಮಾಣ ಪ್ರಗತಿಯಲ್ಲಿದೆ. ಕಂಪನಿಯು ಮೈಸೂರು ನಗರದಲ್ಲಿ ಈಗಾಗಲೇ 200 ಕಿಲೋಮೀಟರ್ ನಷ್ಟು ಸ್ಟೀಲ್ ಪೈಪ್ ಲೈನ್ ಅನ್ನು ಅಭಿವೃದ್ಧಿಪಡಿಸಿದ್ದು, ಇದರ ಮೂಲಕ ಮನೆಗಳಿಗೆ ಮತ್ತು ಕೈಗಾರಿಕೆಗಳಿಗೆ ಅನಿಲ ಸಂಪರ್ಕ ಕಲ್ಪಿಸಿದೆ.

8000 crore investment by AGP Pratham for development of urban gas supply network in Karnataka

ಈ ಸಂದರ್ಭದಲ್ಲಿ ಮಾತನಾಡಿದ ಎಜಿ&ಪಿ ಪ್ರಥಮ್ ನ ವ್ಯವಸ್ಥಾಪಕ ನಿರ್ದೇಶಕ ಅಭಿಲೇಶ್ ಗುಪ್ತಾ ಅವರು, ಕರ್ನಾಟಕದಲ್ಲಿ ಶುದ್ಧ ಇಂಧನ ಆಯ್ಕೆಗಳನ್ನು ಮತ್ತಷ್ಟು ಉತ್ತೇಜಿಸುವ ನಿಟ್ಟಿನಲ್ಲಿ ನಾವು ರಾಜ್ಯ ಸರ್ಕಾರದೊಂದಿಗಿನ ಸಹಭಾಗಿತ್ವವನ್ನು ಬಲವರ್ಧನೆಗೊಳಿಸಿಕೊಳ್ಳುತ್ತಿರುವುದಕ್ಕೆ ಸಂತಸವೆನಿಸುತ್ತಿದೆ. ಕೈಗಾರಿಕೆ ಬೆಳವಣಿಗೆಯನ್ನು ಹೆಚ್ಚಿಸಲು, ಸಾರ್ವಜನಿಕರಿಗೆ ಶುದ್ಧ ಮತ್ತು ಹಸಿರು ಇಂಧನವನ್ನು ಒದಗಿಸುವ ಮತ್ತು ಉದ್ಯೋಗಗಳನ್ನು ಸೃಷ್ಟಿಸುವ ಸರ್ಕಾರದ ಹಿತಾಸಕ್ತಿಗೆ ಅನುಗುಣವಾಗಿ ನಮ್ಮ ನಿರಂತರ ಪ್ರಯತ್ನಗಳಿಗೆ ಈ ಒಪ್ಪಂದ ಸಾಕ್ಷಿಯಾಗಿದೆ'' ಎಂದು ಅಭಿಪ್ರಾಯಪಟ್ಟರು.

ಪರಿಸರ ಸ್ನೇಹಿ ವ್ಯವಸ್ಥೆಯನ್ನು ರಚನೆ ಮಾಡುವ ನಿಟ್ಟಿನಲ್ಲಿ ಎಜಿ&ಪಿ ಪ್ರಥಮ್ ನ ನಿರಂತರ ಪ್ರಯತ್ನದೊಂದಿಗೆ ಡೀಸೆಲ್ ಮತ್ತು ಪೆಟ್ರೋಲ್ ನಂತಹ ಸಾಂಪ್ರದಾಯಿಕ ಇಂಧನಗಳಿಗಿಂತ ಹಲವಾರು ಅರ್ಹತೆಗಳನ್ನು ಹೊಂದಿರುವ ಸಿಎನ್ ಜಿ ಬಳಕೆಯನ್ನು ನಾವು ಉತ್ತೇಜಿಸುತ್ತಿದ್ದೇವೆ. ಸಿಎನ್ ಜಿ ಪ್ರಬಲವಾದ ಸುರಕ್ಷತಾ ದಾಖಲೆಯನ್ನು ಹೊಂದಿದೆ ಮತ್ತು ವಾಹನ ಮಾಲೀಕರಿಗೆ ಬಲವಾದ ಆರ್ಥಿಕ ಪ್ರಯೋಜನಗಳನ್ನುಕೊಡುತ್ತದೆ. ನೈಸರ್ಗಿಕ ಅನಿಲವು ವಾಹನಗಳು ಮತ್ತು ಕೈಗಾರಿಕೆಗಳಿಂದ ಉಂಟಾಗುವ ವಾಯು ಮಾಲಿನ್ಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅಲ್ಲದೇ, ದೇಶದ ಜವಾಬ್ದಾರಿಯುತ ಬೆಳವಣಿಗೆ ಮತ್ತು ಇಂಧನದ ಸಮರ್ಪಕತೆಗೆ ಇದು ನೆರವಾಗುತ್ತದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+