ಅಗ್ನಿ-IV ಕ್ಷಿಪಣಿ ಯಶಸ್ವಿ ಪ್ರಯೋಗ, ಸೇನೆಗೆ ಮತ್ತಷ್ಟು ಬಲ
ಭುವನೇಶ್ವರ್ (ಒಡಿಶಾ), ಡಿಸೆಂಬರ್ 23: ಅಣ್ವಸ್ತ್ರ ಸಿಡಿತಲೆಗಳನ್ನು ಹೊತ್ತೊಯ್ಯಬಲ್ಲ ದೂರ ವ್ಯಾಪ್ತಿ ಅಗ್ನಿ-IV ಕ್ಷಿಪಣಿಯನ್ನು ಭಾನುವಾರ ಯಶಸ್ವಿಯಾಗಿ ಪರೀಕ್ಷೆ ನಡೆಸಲಾಯಿತು. ಇದು ನಾಲ್ಕು ಸಾವಿರ ಕಿ.ಮೀ. ದೂರದ ಗುರಿಯನ್ನು ಕೂಡ ತಲುಪಬಲ್ಲ ಸಾಮರ್ಥ್ಯ ಹೊಂದಿದೆ.
ನೆಲದಿಂದ ನೆಲಕ್ಕೆ ಚಿಮ್ಮಬಲ್ಲ ಈ ಕ್ಷಿಪಣಿಯನ್ನು ಡಾ.ಅಬ್ದುಲ್ ಕಲಾಂ ದ್ವೀಪದಿಂದ ಇಂಟಿಗ್ರೇಟೆಡ್ ಟೆಸ್ಟ್ ರೇಂಜ್ (ಐಟಿಆರ್) ಪರೀಕ್ಷೆ ಮಾಡಲಾಯಿತು ಎಂದು ರಕ್ಷಣಾ ಮೂಲಗಳು ತಿಳಿಸಿವೆ. ಈ ಪರೀಕ್ಷೆ 'ಸಂಪೂರ್ಣ ಯಶಸ್ವಿಯಾಗಿದೆ', ಪ್ರಯೋಗಾರ್ಥ ಪರೀಕ್ಷೆಯಲ್ಲಿ ಇದರ ಉದ್ದೇಶಗಳೆಲ್ಲವೂ ಈಡೇರಿದೆ ಎನ್ನಲಾಗಿದೆ.
ಎಲ್ಲ ರಾಡಾರ್ ಗಳು, ಟ್ರಾಕಿಂಗ್ ವ್ಯವಸ್ಥೆಗಳು ಹಾಗೂ ರೇಂಜಿಂಗ್ ಸ್ಟೇಷನ್ ಗಳು ಮೊಬೈಲ್ ಲಾಂಚರ್ ಮೂಲಕ ಹಾರಿಸಲಾದ ಕ್ಷಿಪಣಿಯ ಸಾಮರ್ಥ್ಯವನ್ನು ಮೌಲ್ಯಮಾಪನ ಮಾಡಿವೆ. ಒಡಿಶಾದ ಕಡಲ ತೀರದಾದ್ಯಂತ ರಾಡಾರ್ಸ್ ಹಾಗೂ ಎಲೆಕ್ಟ್ರೋ ಆಪ್ಟಿಕಲ್ ಸಿಸ್ಟಮ್ಸ್ ಇಡಲಾಗಿತ್ತು. ಕ್ಷಿಪಣಿಗೆ ನಿಗದಿ ಪಡಿಸಿದ ಎಲ್ಲ ಮಾನದಂಡಗಳನ್ನು ಅದು ಪೂರೈಸುತ್ತದೆಯೇ ಎಂದು ಗುರುತಿಸಲು ಇಂಥ ವ್ಯವಸ್ಥೆ ಮಾಡಲಾಗಿತ್ತು ಎಂದು ಮೂಲಗಳು ತಿಳಿಸಿವೆ.

ಅಂತಿಮ ಘಟನಾವಳಿಗಳಿಗೆ ಸಾಕ್ಷಿಯಾಗಿ ಎರಡು ನೌಕಾಸೇನೆ ಹಡಗುಗಳನ್ನು ಲಂಗರು ಹಾಕಿ ನಿಲ್ಲಿಸಲಾಗಿತ್ತು. ಇದು ಅಗ್ನಿ IVರ ಏಳನೇ ಪ್ರಯೋಗ. ಕಳೆದ ಬಾರಿಯ ಪರೀಕ್ಷೆ ಜನವರಿಯಲ್ಲಿ ಆಗಿತ್ತು. ಆಗಲೂ ಯಶಸ್ವಿ ಆಗಿತ್ತು. ಸ್ವದೇಶಿ ನಿರ್ಮಿತ ಅಗ್ನಿ IV ಕ್ಷಿಪಣಿಯು ಅತ್ಯಾಧುನಿಕವಾದ, ನಾಲ್ಕು ಸಾವಿರ ಕಿ.ಮೀ. ದೂರದ ಗುರಿ ತಲುಪಬಲ್ಲ ಎರಡು ಹಂತದ ಕ್ಷಿಪಣಿ.
ಇದು ಇಪ್ಪತ್ತು ಮೀಟರ್ ಉದ್ದದ ಹಾಗೂ ಹದಿನೇಳು ಟನ್ ತೂಕ ತೂಕದ್ದಾಗಿದೆ. ಅಗ್ನಿ IV ಕ್ಷಿಪಣಿಯು ಅತ್ಯಾಧುನಿಕ ಏವಿಯಾನಿಕ್ಸ್ ಹೊಂದಿದ, ಐದನೇ ತಲೆಮಾರಿನ ಕಂಪ್ಯೂಟರ್ ಮತ್ತು ವಿತರಣೆಯ ರಚನೆ ಒಳಗೊಂಡಿದೆ. ಸಿಡಿತಲೆಗಳನ್ನು ಹೊತ್ತೊಯ್ಯಬಲ್ಲ ಅಗ್ನಿ I, II ಹಾಗೂ III ಮತ್ತು ಪೃಥ್ವಿ ಕ್ಷಿಪಣಿ ಸೇನೆಗೆ ಹೆಚ್ಚಿನ ಬಲ ತಂದಿವೆ.
-
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ












Click it and Unblock the Notifications