ಅಗ್ನಿ-IV ಕ್ಷಿಪಣಿ ಯಶಸ್ವಿ ಪ್ರಯೋಗ, ಸೇನೆಗೆ ಮತ್ತಷ್ಟು ಬಲ
ಭುವನೇಶ್ವರ್ (ಒಡಿಶಾ), ಡಿಸೆಂಬರ್ 23: ಅಣ್ವಸ್ತ್ರ ಸಿಡಿತಲೆಗಳನ್ನು ಹೊತ್ತೊಯ್ಯಬಲ್ಲ ದೂರ ವ್ಯಾಪ್ತಿ ಅಗ್ನಿ-IV ಕ್ಷಿಪಣಿಯನ್ನು ಭಾನುವಾರ ಯಶಸ್ವಿಯಾಗಿ ಪರೀಕ್ಷೆ ನಡೆಸಲಾಯಿತು. ಇದು ನಾಲ್ಕು ಸಾವಿರ ಕಿ.ಮೀ. ದೂರದ ಗುರಿಯನ್ನು ಕೂಡ ತಲುಪಬಲ್ಲ ಸಾಮರ್ಥ್ಯ ಹೊಂದಿದೆ.
ನೆಲದಿಂದ ನೆಲಕ್ಕೆ ಚಿಮ್ಮಬಲ್ಲ ಈ ಕ್ಷಿಪಣಿಯನ್ನು ಡಾ.ಅಬ್ದುಲ್ ಕಲಾಂ ದ್ವೀಪದಿಂದ ಇಂಟಿಗ್ರೇಟೆಡ್ ಟೆಸ್ಟ್ ರೇಂಜ್ (ಐಟಿಆರ್) ಪರೀಕ್ಷೆ ಮಾಡಲಾಯಿತು ಎಂದು ರಕ್ಷಣಾ ಮೂಲಗಳು ತಿಳಿಸಿವೆ. ಈ ಪರೀಕ್ಷೆ 'ಸಂಪೂರ್ಣ ಯಶಸ್ವಿಯಾಗಿದೆ', ಪ್ರಯೋಗಾರ್ಥ ಪರೀಕ್ಷೆಯಲ್ಲಿ ಇದರ ಉದ್ದೇಶಗಳೆಲ್ಲವೂ ಈಡೇರಿದೆ ಎನ್ನಲಾಗಿದೆ.
ಎಲ್ಲ ರಾಡಾರ್ ಗಳು, ಟ್ರಾಕಿಂಗ್ ವ್ಯವಸ್ಥೆಗಳು ಹಾಗೂ ರೇಂಜಿಂಗ್ ಸ್ಟೇಷನ್ ಗಳು ಮೊಬೈಲ್ ಲಾಂಚರ್ ಮೂಲಕ ಹಾರಿಸಲಾದ ಕ್ಷಿಪಣಿಯ ಸಾಮರ್ಥ್ಯವನ್ನು ಮೌಲ್ಯಮಾಪನ ಮಾಡಿವೆ. ಒಡಿಶಾದ ಕಡಲ ತೀರದಾದ್ಯಂತ ರಾಡಾರ್ಸ್ ಹಾಗೂ ಎಲೆಕ್ಟ್ರೋ ಆಪ್ಟಿಕಲ್ ಸಿಸ್ಟಮ್ಸ್ ಇಡಲಾಗಿತ್ತು. ಕ್ಷಿಪಣಿಗೆ ನಿಗದಿ ಪಡಿಸಿದ ಎಲ್ಲ ಮಾನದಂಡಗಳನ್ನು ಅದು ಪೂರೈಸುತ್ತದೆಯೇ ಎಂದು ಗುರುತಿಸಲು ಇಂಥ ವ್ಯವಸ್ಥೆ ಮಾಡಲಾಗಿತ್ತು ಎಂದು ಮೂಲಗಳು ತಿಳಿಸಿವೆ.

ಅಂತಿಮ ಘಟನಾವಳಿಗಳಿಗೆ ಸಾಕ್ಷಿಯಾಗಿ ಎರಡು ನೌಕಾಸೇನೆ ಹಡಗುಗಳನ್ನು ಲಂಗರು ಹಾಕಿ ನಿಲ್ಲಿಸಲಾಗಿತ್ತು. ಇದು ಅಗ್ನಿ IVರ ಏಳನೇ ಪ್ರಯೋಗ. ಕಳೆದ ಬಾರಿಯ ಪರೀಕ್ಷೆ ಜನವರಿಯಲ್ಲಿ ಆಗಿತ್ತು. ಆಗಲೂ ಯಶಸ್ವಿ ಆಗಿತ್ತು. ಸ್ವದೇಶಿ ನಿರ್ಮಿತ ಅಗ್ನಿ IV ಕ್ಷಿಪಣಿಯು ಅತ್ಯಾಧುನಿಕವಾದ, ನಾಲ್ಕು ಸಾವಿರ ಕಿ.ಮೀ. ದೂರದ ಗುರಿ ತಲುಪಬಲ್ಲ ಎರಡು ಹಂತದ ಕ್ಷಿಪಣಿ.
ಇದು ಇಪ್ಪತ್ತು ಮೀಟರ್ ಉದ್ದದ ಹಾಗೂ ಹದಿನೇಳು ಟನ್ ತೂಕ ತೂಕದ್ದಾಗಿದೆ. ಅಗ್ನಿ IV ಕ್ಷಿಪಣಿಯು ಅತ್ಯಾಧುನಿಕ ಏವಿಯಾನಿಕ್ಸ್ ಹೊಂದಿದ, ಐದನೇ ತಲೆಮಾರಿನ ಕಂಪ್ಯೂಟರ್ ಮತ್ತು ವಿತರಣೆಯ ರಚನೆ ಒಳಗೊಂಡಿದೆ. ಸಿಡಿತಲೆಗಳನ್ನು ಹೊತ್ತೊಯ್ಯಬಲ್ಲ ಅಗ್ನಿ I, II ಹಾಗೂ III ಮತ್ತು ಪೃಥ್ವಿ ಕ್ಷಿಪಣಿ ಸೇನೆಗೆ ಹೆಚ್ಚಿನ ಬಲ ತಂದಿವೆ.
-
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Sanju Samson Father: ಅಂದು ಮಗನನ್ನು ಅಲೆದಾಡಿಸಿದವರು ಇಂದು ಕ್ಷಮೆ ಕೇಳುತ್ತಿದ್ದಾರೆ: ಸಂಜು ಸ್ಯಾಮ್ಸನ್ ತಂದೆಯ ಭಾವುಕ ನುಡಿ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ












Click it and Unblock the Notifications