ಒಡಿಶಾದ ಜಾರ್ಸುಗುಡಾದಲ್ಲಿ ಬಸ್ ಮತ್ತು ಟ್ರಕ್ ನಡುವೆ ಡಿಕ್ಕಿ: 6 ಸಾವು - 20ಕ್ಕೂ ಹೆಚ್ಚು ಜನರಿಗೆ ಗಾಯ
ಭುವನೇಶ್ವರ ಸೆಪ್ಟೆಂಬರ್ 17: ಒಡಿಶಾದ ಜಾರ್ಸುಗುಡಾದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಕಂಪನಿಯೊಂದರ 6 ಉದ್ಯೋಗಿಗಳು ಸಾವನ್ನಪ್ಪಿದ್ದಾರೆ ಮತ್ತು 20 ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಎಲ್ಲ ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಗಾಯಗೊಂಡವರಲ್ಲಿ ಏಳು ಮಂದಿ ಸ್ಥಿತಿ ಚಿಂತಾಜನಕವಾಗಿದೆ.
ಮಾಹಿತಿಯ ಪ್ರಕಾರ, ಶುಕ್ರವಾರ ಸಂಜೆ 7 ಗಂಟೆ ಸುಮಾರಿಗೆ ಜಾರ್ಸುಗುಡಾ-ಸಂಬಲ್ಪುರ ಎಕ್ಸ್ಪ್ರೆಸ್ವೇಯಲ್ಲಿ ಟ್ರಕ್ ಮತ್ತು ಬಸ್ ಡಿಕ್ಕಿ ಹೊಡೆದಿದೆ. ಕಂಪನಿಯೊಂದರ ನೌಕರರನ್ನು ಕರೆದೊಯ್ಯುತ್ತಿದ್ದ ಬಸ್ ಟ್ರಕ್ಗೆ ಡಿಕ್ಕಿ ಹೊಡೆದಿದೆ ಎಂದು ಹೇಳಲಾಗುತ್ತಿದೆ. ಈ ಅಪಘಾತದಲ್ಲಿ 6 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದು, 20 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಅಪಘಾತದಲ್ಲಿ ಗಾಯಗೊಂಡ 10 ಜನರು ಬುರ್ಲಾದಲ್ಲಿ ಮತ್ತು 14 ಜನರು ಸಂಬಲ್ಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಾಯಗೊಂಡವರಲ್ಲಿ ಏಳು ಮಂದಿಯ ಸ್ಥಿತಿ ಇನ್ನೂ ಚಿಂತಾಜನಕವಾಗಿದೆ.
60ಕ್ಕೂ
ಹೆಚ್ಚು
ಮಂದಿ
ಪ್ರಯಾಣದ
ವೇಳೆ
ಘಟನೆ
ಮಾಹಿತಿಯ
ಪ್ರಕಾರ,
60
ಕ್ಕೂ
ಹೆಚ್ಚು
ಉದ್ಯೋಗಿಗಳು
ತೇಲಕುಳಿಯ
ಜೆಎಸ್ಡಬ್ಲ್ಯೂ
ಸ್ಥಾವರದ
ಬಸ್ನಲ್ಲಿದ್ದರು.
ಈ
ಬಸ್
ನೌಕರರೊಂದಿಗೆ
ಜಾರ್ಸುಗುಡಕ್ಕೆ
ತೆರಳುತ್ತಿದ್ದ
ವೇಳೆ
ಸಂಬಲ್ಪುರ
ಬಳಿ
ಹಿಂದಿನಿಂದ
ಕಲ್ಲಿದ್ದಲು
ತುಂಬಿದ
ಟ್ರಕ್
ಬಂದು
ಬಸ್
ಗೆ
ಗುದ್ದಿದೆ
ಎಂದು
ಹೇಳಲಾಗುತ್ತಿದೆ.
ಈ
ಅವಘಡದಲ್ಲಿ
ಹಲವು
ಸ್ಥಳೀಯರು
ಕೂಡ
ಸುರಕ್ಷಿತವಾಗಿ
ಪಾರಾಗಿದ್ದಾರೆ.
Odisha | 6 dead, over 20 injured as a bus carrying employees of a company met with an accident in Jharsuguda after coal-laden truck collided with bus. Most employees severely injured. 10 referred to hospital in Burla, Sambalpur,14 under treatment here: N Mohapatra,SDPO,Jharsuguda pic.twitter.com/TNxmUoLUEs
— ANI (@ANI) September 16, 2022
ಜಿಲ್ಲಾಧಿಕಾರಿ
ಹಾಗೂ
ಎಸ್ಡಿಪಿಒ
ಕ್ರಮದ
ಕುರಿತು
ಮಾತು
ಈ
ಅಪಘಾತದ
ಕುರಿತು
ಹೆಚ್ಚಿನ
ವಿವರಗಳನ್ನು
ನೀಡಿದ
ಜಾರ್ಸುಗುಡ
ಎಸ್ಡಿಪಿಒ,
ನಿರ್ಮಲಾ
ಮಹಾಪಾತ್ರ
ಅವರು
ಈ
ಅಪಘಾತ
ಅತ್ಯಂತ
ಭೀಕರವಾಗಿದೆ
ಎಂದು
ಹೇಳಿದ್ದಾರೆ.
ಅಪಘಾತದಲ್ಲಿ
ಗಾಯಗೊಂಡವರನ್ನು
ರಕ್ಷಿಸಲು
ನಾವು
ಪ್ರಯತ್ನಿಸುತ್ತಿದ್ದೇವೆ.
ಝಾರ್ಸುಗುಡ
ಜಿಲ್ಲಾಧಿಕಾರಿ
ಸರೋಜ್
ಸಮಾಲ್
ಕೂಡ
ಈ
ಘಟನೆಗೆ
ಸಂತಾಪ
ವ್ಯಕ್ತಪಡಿಸಿದ್ದಾರೆ.
"ಟ್ರಕ್
ಚಾಲಕನ
ಬೇಜವಾಬ್ದಾರಿ
ಚಾಲನೆಯಿಂದ
ಅಪಘಾತ
ಸಂಭವಿಸಿದೆ.
ಸುಮಾರು
18
ಮಂದಿಯನ್ನು
ಪ್ರಥಮ
ಚಿಕಿತ್ಸೆಯ
ನಂತರ
ಬಿಡುಗಡೆ
ಮಾಡಲಾಗಿದೆ,
ಆರು
ಮಂದಿ
ಗಂಭೀರವಾಗಿ
ಗಾಯಗೊಂಡವರನ್ನು
ವಿಮ್ಸರ್ಗೆ
ಕರೆದೊಯ್ಯಲಾಯಿತು
ಮತ್ತು
ನಾಲ್ವರು
ಡಿಎಚ್ಹೆಚ್ನಲ್ಲಿ
ಚಿಕಿತ್ಸೆ
ಪಡೆಯುತ್ತಿದ್ದಾರೆ"
ಎಂದು
ಅವರು
ಹೇಳಿದರು.
ಗಾಯಾಳುಗಳಿಗೆ
ಉಚಿತ
ಚಿಕಿತ್ಸೆ
ಘೋಷಣೆ
ಅಲ್ಲದೆ,
ಗಾಯಾಳುಗಳಿಗೆ
ಉಚಿತ
ಚಿಕಿತ್ಸೆ
ನೀಡಲಾಗುವುದು
ಮತ್ತು
ಎಲ್ಲಾ
ಚಿಕಿತ್ಸಾ
ವೆಚ್ಚವನ್ನು
ಜಿಲ್ಲಾಡಳಿತ
ಭರಿಸಲಿದೆ
ಎಂದು
ಜಿಲ್ಲಾಧಿಕಾರಿ
ಭರವಸೆ
ನೀಡಿದರು.
ಗಾಯಾಳುಗಳಿಗೆ
ಉತ್ತಮ
ಚಿಕಿತ್ಸೆ
ನೀಡಲು
ಸೂಕ್ತ
ವ್ಯವಸ್ಥೆ
ಮಾಡಲಾಗುವುದು,
ಅವರ
ಚಿಕಿತ್ಸೆಗಾಗಿ
ತಜ್ಞ
ವೈದ್ಯರ
ತಂಡವನ್ನು
ನೇಮಿಸಲಾಗಿದ್ದು,
ಗಾಯಾಳುಗಳಿಗೆ
ಅಗತ್ಯಕ್ಕೆ
ಅನುಗುಣವಾಗಿ
ಚಿಕಿತ್ಸೆ
ನೀಡಲು
ತಕ್ಷಣ
ಕ್ರಮಕೈಗೊಳ್ಳಲಾಗುತ್ತಿದೆ
ಎಂದರು.