ಎಂಜಿನಿಯರ್ ಕೈಲಿ ಬಸ್ಕಿ ಹೊಡೆಸಿದ್ದ ಶಾಸಕನ ಬಂಧನ
ಭುವನೇಶ್ವರ್, ಜೂನ್ 24: ನಿರ್ಮಿಸಿದ ರಸ್ತೆ ಗುಣಮಟ್ಟದ್ದಾಗಿಲ್ಲವೆಂದು ಆರೋಪಿಸಿ ರಸ್ತೆ ನಿರ್ಮಿಸಿದ ಎಂಜಿನಿಯರ್ ಅನ್ನು ಸಾರ್ವಜನಿಕವಾಗಿ ನಿಂದಿನ ಜನರ ಎದುರು ಬಸ್ಕಿ ಹೊಡೆಯುವಂತೆ ಮಾಡಿದ ಒಡಿಸ್ಸಾದ ಆಡಳಿತ ಪಕ್ಷದ ಶಾಸಕನನ್ನು ಪೊಲೀಸರು ಬಂಧಿಸಿದ್ದಾರೆ.
ಬಿಜು ಜನತಾ ದಳ (ಬಿಜೆಡಿ) ಪಕ್ಷದ ಪಾಟ್ನಾಗರ್ ಕ್ಷೇತ್ರದ ಶಾಸಕ ಸರೋಜ್ ಮೆಹರ್ ಅವರು ಮೂರು ವಾರದ ಹಿಂದೆ ಎಂಜಿನಿಯರ್ ಜಯಂತ್ ಸಬಾರ್ ಅವರನ್ನು ಸಾರ್ವಜನಿಕವಾಗಿ ಬಸ್ಕಿ ಹೊಡೆಯುವಂತೆ ಮಾಡಿದ್ದರು. ಹಾಗಾಗಿ ಇಂದು ಬೆಳಿಗ್ಗೆ ಅವರನ್ನು ಬಂಧಿಸಲಾಗಿದೆ.
ಎಂಜಿನಿಯರ್ ಜಯಂತ್ ಸಬಾರ್ ಅವರು ಉಸ್ತುವಾರಿ ವಹಿಸಿಕೊಂಡು ನಿರ್ಮಿಸಿದ್ದ ರಸ್ತೆ ಗುಣಮಟ್ಟದಿಂದ ಕೂಡಿಲ್ಲವೆಂದು ಜನರು ಆರೋಪಿಸಿದ್ದಾರೆ, ಹಾಗಾಗಿ ಅವರ ಮುಂದೆ ಬಸ್ಕಿ ಹೊಡೆಯಬೇಕೆಂದು ಒತ್ತಾಯ ಮಾಡಿ ಸರೋಜ್ ಅವರಿಂದ ಸಾರ್ವಜನಿಕವಾಗಿ ಶಾಸಕ ಸರೋಜ್ ಮೆಹರ್ ಅವರು ಎಂಜಿನಿಯರ್ ಅವರಿಂದ ಬಸ್ಕಿ ಹೊಡೆಸಿದ್ದರು.

ಶಾಸಕ ಸರೋಜ್ ಅವರು ಬಸ್ಕಿ ಹೊಡೆಸುತ್ತಿರುವ ವಿಡಿಯೋ ವೈರಲ್ ಆಗಿದ್ದು, ವಿಡಿಯೋದಲ್ಲಿ ಬಲವಂತವಾಗಿ ಎಂಜಿನಿಯರ್ ಅನ್ನು ಬಸ್ಕಿ ಹೊಡೆಸಿದ್ದು ಕಾಣುತ್ತದೆ, ಅಷ್ಟೆ ಅಲ್ಲದೆ, ನಾನು ನಿನ್ನ ಶಾಸಕ ನಾನು ಆದೇಶ ನೀಡುತ್ತಿದ್ದೇನೆ ಬಸ್ಕಿ ಹೊಡಿ ಇಲ್ಲವಾದರೆ ಜನರಿಂದ ಹೊಡೆಸುತ್ತೇನೆ ಎಂದು ಶಾಸಕ ಸರೋಜ್ ಬೆದರಿಕೆ ಹಾಕುತ್ತಿರುವುದು ಸಹ ವಿಡಿಯೋದಲ್ಲಿ ದಾಖಲಾಗಿದೆ.
ಘಟನೆ ನಡೆದಾಗ ಸ್ಥಳದಲ್ಲಿ ಪೊಲೀಸರು ಇದ್ದರು, ಅವರೇ ಎಂಜಿನಿಯರ್ ಅವರನ್ನು ರಕ್ಷಿಸಿದ್ದರು. ಆ ನಂತರ ಘಟನೆಯ ವಿಡಿಯೋ ವೈರಲ್ ಆಗಿ, ಶಾಸಕರ ದರ್ಪದ ಬಗ್ಗೆ ಭಾರಿ ಆಕ್ರೋಶ ವ್ಯಕ್ತವಾಗಿತ್ತು.
ಎಂಜಿನಿಯರ್ ಜಯಂತ್ ಅವರ ಪತ್ನಿ ಅವರು ಶಾಸಕ ಸರೋಜ್ ಮೆಹರ್ ಅವರ ವಿರುದ್ಧ ಠಾಣೆಗೆ ದೂರು ನೀಡಿದ್ದು, ಇಂದು ಬೆಳಿಗ್ಗೆ ಶಾಸಕನನ್ನು ಬಂಧಿಸಲಾಗಿದೆ. ಪರಿಶಿಷ್ಟಜಾತಿ/ ವರ್ಗ ದೌರ್ಜನ್ಯ ತಡೆ ಕಾಯ್ದೆಯ ಅಡಿ ದೂರು ದಾಖಲಿಸಲಾಗಿದೆ.
-
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral -
Naseer Ahmed: ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್ ಅಹ್ಮದ್ ವಜಾ; ಕಾಂಗ್ರೆಸ್ನಲ್ಲಿ ಆಂತರಿಕ ಭಿನ್ನಮತ ಸ್ಫೋಟ -
ದ್ವಿತೀಯ PUC ಪರೀಕ್ಷೆ-2: ಅನುತ್ತೀರ್ಣರಾದ ವಿದ್ಯಾರ್ಥಿಗಳಿಗಾಗಿ ಸರ್ಕಾರಿ ಕಾಲೇಜುಗಳಲ್ಲಿ ವಿಶೇಷ ತರಗತಿಗಳು ಆರಂಭ












Click it and Unblock the Notifications