ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ಟೇಷನ್ ಬಂದೇ ಬಿಡುತ್ತೆ, ತಾಯಿ ತಿಂಡಿ ಮುಗಿಸಿಲ್ಲವೆಂದು ರೈಲಿನ ಚೈನ್ ಎಳೆದ

|
Google Oneindia Kannada News

ನವದೆಹಲಿ, ಜುಲೈ 2: ಇನ್ನೇನು ಮಥುರಾ ರೈಲ್ವೆ ನಿಲ್ದಾಣ ಸಮೀಪಿಸುತ್ತಿದೆ, ಅಲ್ಲಿಯೇ ಇಳಿದುಕೊಳ್ಳಬೇಕಿದೆ. ಆದರೆ ತಾಯಿ ಇನ್ನೂ ತಿಂಡಿ ಮುಗಿಸಿಲ್ಲವೆಂದು ರೈಲಿನ ಚೈನ್ ಎಳೆದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ತಾಯಿ ತಿಂಡಿ ಮಾಡಬೇಕು ಎಂದು ಶತಾಬ್ಧಿ ರೈಲಿನ ಚೈನ್ ಎಳೆದು ವ್ಯಕ್ತಿಯೊಬ್ಬ ಜೈಲು ಸೇರಿದ್ದಾನೆ.

ಉ.ಪ್ರದೇಶ ಬಿಸಿಲಿನ ಝಳಕ್ಕೆ ನಾಲ್ವರು ರೈಲು ಪ್ರಯಾಣಿಕರು ಸಾವು ಉ.ಪ್ರದೇಶ ಬಿಸಿಲಿನ ಝಳಕ್ಕೆ ನಾಲ್ವರು ರೈಲು ಪ್ರಯಾಣಿಕರು ಸಾವು

ವ್ಯಕ್ತಿಯೊಬ್ಬ ತನ್ನ ತಾಯಿಯ ಜೊತೆಗೆ ದೆಹಲಿಯಿಂದ ಭೋಪಾಲ್‌ಗೆ ಶತಾಬ್ಧಿ ರೈಲಿನಲ್ಲಿ ತೆರಳುತ್ತಿದ್ದ. ಮಥುರಾ ರೈಲ್ವೆ ನಿಲ್ದಾಣದಲ್ಲಿ ಇಳಿಯಬೇಕಿತ್ತು. ನಿಲ್ದಾಣ ಬರುವ ಮುನ್ನ ಚೈನು ಎಳೆದರೆ ನಿಲ್ದಾಣ ಬರುವಷ್ಟೊತ್ತಿಗೆ ತಾಯಿ ತಿಂಡಿ ತಿಂದು ಮುಗಿಸುತ್ತಾರೆ ಎನ್ನುವ ಉದ್ದೇಶದಿಂದ ಚೈನ್ ಎಳೆದಿದ್ದ.

Mother to finish breakfast son pulles train chain

ಅವರನ್ನು ದೆಹಲಿಯ ಮನೀಷ್ ಅರೋರಾ ಎಂದು ಗುರುತಿಸಲಾಗಿದೆ. ರೈಲ್ವೆ ಕಾಯಿದೆ 141 ಅಡಿ ಪ್ರಕರಣ ದಾಖಲಿಸಲಾಗಿದೆ.ಅವರು ಸಿ-8 ಕೋಚಿನಲ್ಲಿ ಪ್ರಯಾಣಿಸುತ್ತಿದ್ದರು. ರೈಲಿನಲ್ಲಿಯೇ ತಿಂಡಿ ನೀಡಿದ್ದರು ಆದರೆ ರೈಲು ನಿಲ್ದಾಣ ಬರುವವರೆಗೂ ತಾಯಿಗೆ ತಿಂಡಿ ತಿಂದು ಆಗಿರಲಿಲ್ಲ ಹೀಗಾಗಿ ಚೈನು ಎಳೆದಿದ್ದರು.

ಬೆಂಗಳೂರು ರೈಲ್ವೆ ನಿಲ್ದಾಣದಲ್ಲಿ ಮಹಿಳೆ ಸಾವಿಗೆ ಕಾರಣ ಇದೂ ಇರಬಹುದು ಬೆಂಗಳೂರು ರೈಲ್ವೆ ನಿಲ್ದಾಣದಲ್ಲಿ ಮಹಿಳೆ ಸಾವಿಗೆ ಕಾರಣ ಇದೂ ಇರಬಹುದು

ಈಗ ಜಾಮೀನು ಸಿಕ್ಕಿದ್ದು ಅದಕ್ಕೂ ಮುನ್ನ ಮನೀಷ್ ಅವರ ತಾಯಿಯನ್ನು ಸಂಬಂಧಿಕರ ಜೊತೆಗೆ ಕಳುಹಿಸಿಕೊಡಲಾಗಿದೆ. ರೈಲ್ವೆ ಇಲಾಖೆ ನಿಗದಿಪಡಿಸಿದ ದಿನಾಂಕದಂದು ರೈಲ್ವೆ ಮ್ಯಾಜಿಸ್ಟ್ರೇಟ್‌ ಕೋರ್ಟ್‌ನಲ್ಲಿ ವಿಚಾರಣೆಗೆ ಹಾಜರಾಗಬೇಕಿದೆ.

English summary
In New Shatabdi express train mother and son traveling to Delhi to Bhopal, Mother did not finish her breakfast sp son pulled the train chain for to train to take more time to reach next station.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X