ಮಧ್ಯಪ್ರದೇಶದಲ್ಲಿ ನಿರ್ಮಾಣ ಹಂತದಲ್ಲಿದ್ದ ಸುರಂಗ ಕುಸಿತ
ಭೋಪಾಲ್ ಫೆಬ್ರವರಿ 13: ಮಧ್ಯಪ್ರದೇಶದ ಕಟ್ನಿ ಜಿಲ್ಲೆಯ ಸ್ಲೀಮನಾಬಾದ್ನಲ್ಲಿ ಬಾರ್ಗಿ ಕಾಲುವೆ ಯೋಜನೆಯ ನಿರ್ಮಾಣ ಹಂತದ ಸುರಂಗ ಕುಸಿತದು ಒಂಬತ್ತು ಕಾರ್ಮಿಕರು ಸಿಕ್ಕಿಬಿದ್ದಿದ್ದಾರೆ. ಇಲ್ಲಿಯವರೆಗೆ 5 ಕಾರ್ಮಿಕರನ್ನು ಸುರಕ್ಷಿಸಿ ಸ್ಥಳಾಂತರಿಸಲಾಗಿದೆ. ಜಬಲ್ಪುರದ ಕಟ್ನಿದಲ್ಲಿ ರಾಜ್ಯ ವಿಪತ್ತು ತುರ್ತು ಪ್ರತಿಕ್ರಿಯೆ ಪಡೆ ರಕ್ಷಣಾ ಕಾರ್ಯವನ್ನು ನಡೆಸುತ್ತಿದೆ. 9 ಕಾರ್ಮಿಕರಲ್ಲಿ 5 ಮಂದಿಯನ್ನು ರಕ್ಷಿಸಲಾಗಿದೆ, 4 ಕಾರ್ಮಿಕರು ಇನ್ನೂ ಸುರಂಗದೊಳಗೆ ಸಿಲುಕಿದ್ದಾರೆ. ಅವರನ್ನು ರಕ್ಷಿಸುವ ಕಾರ್ಯ ನಡೆಯುತ್ತಿದೆ ಎಂದು ರಾಜ್ಯ ವಿಪತ್ತು ತುರ್ತು ನಿರ್ವಹಣಾ ಪಡೆ ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಯ ಬಗ್ಗೆ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಮಾಹಿತಿ ನೀಡಲಾಗಿದೆ. ಅವರು ಕಟ್ನಿ ಡಿಎಂ ಪ್ರಿಯಾಂಕ್ ಮಿಶ್ರಾ ಅವರಿಗೆ ಕರೆ ಮಾಡಿ ಘಟನೆಯ ಬಗ್ಗೆ ವಿಚಾರಿಸಿದ್ದಾರೆ.
स्लीमनाबाद के नजदीक टनल निर्माण कार्य के दौरान हुई दुर्घटना में 9 मजदूर मलवे में फंस गये थे। इनमें से तीन मजदूरों को सकुशल बाहर निकाल लिया गया है। रेस्क्यू ऑपरेशन जारी है। SDRF की टीम भी जबलपुर से घटना स्थल के लिये रवाना हो चुकी है। - कलेक्टर @PriyankM_IAS @JansamparkMP pic.twitter.com/AAJUPcVJPM
— Collector Katni (@CollectorKatni) February 12, 2022
ಘಟನೆಯ ಬಗ್ಗೆ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಮಾಹಿತಿ ನೀಡಲಾಗಿದೆ. ಅವರು ಕಟ್ನಿ ಡಿಎಂ ಪ್ರಿಯಾಂಕ್ ಮಿಶ್ರಾ ಅವರಿಗೆ ಕರೆ ಮಾಡಿ ಘಟನೆಯ ಬಗ್ಗೆ ವಿಚಾರಿಸಿದ್ದಾರೆ. ಗಾಯಗೊಂಡವರಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಮುಖ್ಯಮಂತ್ರಿಗಳು ಆಡಳಿತಕ್ಕೆ ಸೂಚಿಸಿದ್ದಾರೆ. ಟ್ವಿಟರ್ನಲ್ಲಿ ಟ್ವೀಟ್ ಮಾಡಿರುವ ಮುಖ್ಯಮಂತ್ರಿ, ನಾನು ನಿರಂತರವಾಗಿ ಜಿಲ್ಲಾಡಳಿತದೊಂದಿಗೆ ಸಂಪರ್ಕದಲ್ಲಿದ್ದೇನೆ ಮತ್ತು ಸುರಂಗದೊಳಗೆ ಸಿಲುಕಿರುವವರ ಚೇತರಿಸಿಕೊಳ್ಳಲು ಪ್ರಾರ್ಥಿಸುತ್ತೇನೆ. ಶಿವರಾಜ್ ಸಿಂಗ್ ಚೌಹಾಣ್ ಅವರು, "ಕಟ್ನಿ ಜಿಲ್ಲೆಯ ಸ್ಲಿಮ್ನಾಬಾದ್ನಲ್ಲಿ ಸುರಂಗ ಕುಸಿದು ಕಾರ್ಮಿಕರು ಸಿಲುಕಿದ್ದಾರೆ ಎಂಬ ಸುದ್ದಿಯಿಂದ ದುಃಖವಾಗಿದೆ. 9 ಕಾರ್ಮಿಕರ ಪೈಕಿ 3 ಮಂದಿ ಸುರಕ್ಷಿತವಾಗಿ ಸ್ಥಳಾಂತರಗೊಂಡಿರುವುದು ಸಮಾಧಾನದ ಸಂಗತಿ. ಪರಿಹಾರ ಮತ್ತು ರಕ್ಷಣಾ ಕಾರ್ಯ ನಡೆಯುತ್ತಿದೆ.
#WATCH | Of the 9 labourers trapped, 5 have been rescued after an under-construction tunnel of the Bargi underground canal caved in at Sleemanabad in Katni district of Madhya Pradesh; 4 yet to be rescued. SDERF team at the spot: Administration pic.twitter.com/O0vLdYZj8B
— ANI (@ANI) February 12, 2022
Recommended Video