Get Updates
Get notified of breaking news, exclusive insights, and must-see stories!

ಚುನಾವಣೆಗೂ ಮುನ್ನ ಸಿಂಧಿಯಾ ಬೆಂಬಲಿಗರು ನೇಮಕಾತಿಯಲ್ಲಿ ಸಿಂಹಪಾಲು ಪಡೆಯುವ ಸಾಧ್ಯತೆ

ಭೋಪಾಲ್‌, ಆ.02: ಸುಮಾರು ಒಂದು ವರ್ಷ ಕಾದ ಬಳಿಕ ಇತ್ತೀಚೆಗೆ ಕೇಂದ್ರ ಸಚಿವ ಸಂಪುಟದಲ್ಲಿ ಜ್ಯೋತಿರಾದಿತ್ಯ ಸಿಂಧಿಯಾ ಸ್ಥಾನ ಪಡೆದಿದ್ದಾರೆ. ಈಗ ಜ್ಯೋತಿರಾದಿತ್ಯ ಸಿಂಧಿಯಾ ಮಧ್ಯಪ್ರದೇಶದಲ್ಲಿ ರಾಜಕೀಯ ವ್ಯವಹಾರಗಳ ಮೇಲೆ ತನ್ನ ಅಧಿಕಾರವನ್ನು ಸಾಧಿಸುವಂತೆ ತೋರುತ್ತಿದೆ. ಏಕೆಂದರೆ ಜ್ಯೋತಿರಾದಿತ್ಯ ಸಿಂಧಿಯಾ ಬೆಂಬಲಿಗರಿಗೆ ಶೀಘ್ರದಲ್ಲೇ ರಾಜಕೀಯ ಸ್ಥಾನಮಾನ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ನಾಗರಿಕ ಸಂಸ್ಥೆಗಳ ಚುನಾವಣೆಗೆ ಮುಂಚಿತವಾಗಿ, ಮಧ್ಯಪ್ರದೇಶದ ಆಡಳಿತಾರೂಢ ಭಾರತೀಯ ಜನತಾ ಪಕ್ಷವು ಈ ನಾಗರಿಕ ಸಂಸ್ಥೆಗಳ ಚುನಾವಣೆಯನ್ನು ಸಂಘಟಿತ ಘಟಕವಾಗಿ ಮಾಡಲು ಯೋಜಿಸುತ್ತಿದೆ. ಹಾಗೆಯೇ ಪಕ್ಷದೊಳಗೆ ನಾಯಕರಲ್ಲಿ ಅಸಮಾಧಾನವನ್ನು ದೂರ ಮಾಡುವ ಎಲ್ಲಾ ಯೋಜನೆ ರೂಪಿಸಿದೆ. ವಿಶೇಷವಾಗಿ ಈ ವರ್ಷದ ಆರಂಭದಲ್ಲಿ ದಾಮೋಹ್ ಉಪಚುನಾವಣೆಯಲ್ಲಿ ಸೋಲಿನ ನಂತರ ಪಕ್ಷವು ನಾಗರಿಕ ಸಂಸ್ಥೆಗಳ ಚುನಾವಣೆಗಳ ಬಗ್ಗೆ ಎಚ್ಚರದಿಂದಿದೆ.

ಮೂರನೇ ಕೋವಿಡ್ -19 ಅಲೆಯ ಆತಂಕದ ದೇಶದಲ್ಲಿ ಉಂಟಾಗಿರುವ ಹಿನ್ನೆಲೆಯಲ್ಲಿ ವೇಳಾಪಟ್ಟಿಯನ್ನು ಚುನಾವಣಾ ಆಯೋಗವು ಇನ್ನಷ್ಟೇ ಅಂತಿಮಗೊಳಿಸಬೇಕಿದೆ. ಆದರೂ 'ಪೋಲ್-ರೆಡಿ' ಬಿಜೆಪಿ ಈಗಾಗಲೇ ಸಾಂಸ್ಥಿಕ ಸಿದ್ಧತೆಗಳೊಂದಿಗೆ ಸಜ್ಜಾಗಿದೆ. ಭಾರತೀಯ ಜನತಾ ಪಕ್ಷವು ಮಂಡಳಿಗಳು ಮತ್ತು ನಿಗಮಗಳಿಗೆ ನೇಮಕಾತಿಗಳನ್ನು ಅಂತಿಮಗೊಳಿಸಿದೆ ಮತ್ತು ಜ್ಯೋತಿರಾದಿತ್ಯ ಸಿಂಧಿಯಾ ಬೆಂಬಲಿಗರು ಈ ರಾಜಕೀಯ ನೇಮಕಾತಿ ವಿಚಾರದಲ್ಲಿ ಸಿಂಹಪಾಲು ಪಡೆಯಲು ಸಿದ್ಧರಾಗಿದ್ದಾರೆ.

 Jyotiraditya Scindia Supporters May Get Lions Share of Appointments in MP Ahead of Polls

ಈ ಸಾಂಸ್ಥಿಕ ವಿಚಾರಗಳನ್ನು ಸಣ್ಣ ವಿಚಾರವಾಗಿ ಇಟ್ಟುಕೊಂಡು, ಮುಖ್ಯಮಂತ್ರಿ ಶಿವರಾಜ್ ಚೌಹಾಣ್ ಕಳೆದ ಶನಿವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಲು ನವದೆಹಲಿಗೆ ಧಾವಿಸಿದ್ದರು. ಭೋಪಾಲ್‌ಗೆ ಹಿಂದಿರುಗಿದ ನಂತರವೂ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಚೌಹಾಣ್ ಅಸಮಂಜಸವಾಗಿಯೇ ಇದ್ದರು. ಆದಾಗ್ಯೂ, ಮುಖ್ಯಮಂತ್ರಿ ಶಿವರಾಜ್ ಚೌಹಾಣ್ ರಾಜ್ಯ ಮುಖ್ಯಸ್ಥ ವಿ.ಡಿ.ಶರ್ಮಾ ಮತ್ತು ಸುಹಾಸ್ ಭಗತ್ ಮತ್ತು ಹಿತಾನಂದ್ ಸೇರಿದಂತೆ ಹಿರಿಯ ಪದಾಧಿಕಾರಿಗಳೊಂದಿಗೆ 10 ಗಂಟೆಗಳ ಕಾಲ ಗಂಭೀರ ಸಭೆ ನಡೆಸಿದರು.

ಮೂಲಗಳನ್ನು ನಂಬಬೇಕಾದರೆ, ನೇಮಕಗೊಂಡವರ ಮೊದಲ ಪಟ್ಟಿ ಸಿದ್ಧವಾಗಿದೆ ಮತ್ತು ಯಾವುದೇ ಸಮಯದಲ್ಲಿ ಶೀಘ್ರದಲ್ಲೇ ಬಿಡುಗಡೆ ಮಾಡಬಹುದು ಎಂದು ಹೇಳಲಾಗಿದೆ. ಜಸ್ಮಂತ್ ಜಾತವ್, ರಕ್ಷಾ ಸಿರೋನಿಯಾ, ಮುನ್ನಲಾಲ್ ಗೋಯಲ್, ಇಮರ್ತಿ ದೇವಿ, ಮನೋಜ್ ಚೌಧರಿ ಮತ್ತು ಇತರರು ಸೇರಿದಂತೆ ಕೆಲವು ಸ್ವತಂತ್ರ ಅಭ್ಯರ್ಥಿಗಳ ಜೊತೆಗೆ ಜ್ಯೋತಿರಾದಿತ್ಯ ಸಿಂಧಿಯಾರ ಬೆಂಬಲಿಗರನ್ನು ಈ ನಾಗರಿಕ ಸಂಸ್ಥೆಗಳ ಚುನಾವಣೆಯ ಪಟ್ಟಿಯಲ್ಲಿ ಸೇರಿಸಿಕೊಳ್ಳಬಹುದು ಎಂದು ವರದಿ ತಿಳಿಸಿದೆ.

ಜ್ಯೋತಿರಾದಿತ್ಯ ಸಿಂಧಿಯಾ ಬೆಂಬಲಿಗರಾದ ಐಡಲ್ ಸಿಂಗ್ ಕಂಸಾನಾ, ಗಿರರಾಜ್ ದಂಡೋತಿಯಾ, ರಘುರಾಜ್ ಸಿಂಗ್ ಕಂಸಾನಾ ಮತ್ತು ರಣವೀರ್ ಜಾತವ್ ಕೂಡ ರಾಜಕೀಯ ಮುಖ್ಯವಾಹಿನಿಗೆ ಮರಳಲು ಕಾಯುತ್ತಿದ್ದಾರೆ. ಅವರ ಈ ಆಕಾಂಕ್ಷೆಯಂತೇ ರಾಜಕೀಯ ಮುನ್ನೆಲೆಗೆ ಬಂದರೆ ಬಳಿಕ ನೇಮಕಾತಿಯಲ್ಲಿ ಹೆಚ್ಚು ಪ್ರಾತಿನಿಧ್ಯ ಪಡೆಯುವ ಸಾಧ್ಯತೆಯಿದೆ ಎನ್ನಲಾಗಿದೆ.

ಅನಾಮಧೇಯ ಸ್ಥಿತಿಯ ಕುರಿತು ಮಧ್ಯಪ್ರದೇಶದ ರಾಜಕೀಯ ವಿಶ್ಲೇಷಕರು ಹೇಳುವಂತೆ, ಇದು ಜ್ಯೋತಿರಾದಿತ್ಯ ಸಿಂಧಿಯಾರ ಬೆಳವಣಿಗೆಯ ನಿಲುವು ಎಂದು ಕೂಡ ಹೇಳಬಹುದು. ವಿಶೇಷವಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸಚಿವ ಸಂಪುಟದಲ್ಲಿ ಕೇಂದ್ರ ಸಚಿವರಾಗಿ ಏರಿದ ನಂತರ ಈ ಎಲ್ಲಾ ಬೆಳವಣಿಗೆ ಸಂಭವಿಸಿದೆ. ಈಗ ಜ್ಯೋತಿರಾದಿತ್ಯ ಸಿಂಧಿಯಾ ಮಧ್ಯಪ್ರದೇಶದಲ್ಲಿ ರಾಜಕೀಯ ವ್ಯವಹಾರಗಳ ಮೇಲೆ ತನ್ನ ಅಧಿಕಾರವನ್ನು ಸಾಧಿಸುವಂತೆ ತೋರುತ್ತಿದೆ. ಈ ನಡುವೆ ಮಧ್ಯಪ್ರದೇಶ ಸರ್ಕಾರವು ತನ್ನ ಆಡಳಿತ ವಿರುದ್ದ ಅಥವಾ ಪಕ್ಷದ ನಾಯಕತ್ವದ ವಿಚಾರದಲ್ಲಿ ಅಸಮಾಧಾನಗೊಂಡಿರುವ ನಾಯಕರನ್ನು ತೃಪ್ತಿಪಡಿಸಲು ಬೇಕಾದ ಕಾರ್ಯತಂತ್ರಗಳನ್ನು ಯೋಜಿಸುತ್ತಿದೆ ಎಂದು ಹೇಳಲಾಗಿದೆ.

ಸಂಪುಟ ಪುನಾರಚನೆ ಬಳಿಕ ಕೇಂದ್ರ ಸಚಿವ ಸಂಪುಟದಲ್ಲಿ ಕಾಂಗ್ರೆಸ್‌ನಿಂದ ಬಂಡಾಯವೆದ್ದು ಬಿಜೆಪಿಗೆ ಸೇರ್ಪಡೆಯಾದ ಜ್ಯೋತಿರಾದಿತ್ಯ ಸಿಂಧಿಯಾ ಸೇರ್ಪಡೆಯಾಗಿದ್ದಾರೆ. ವಿಮಾನಯಾನ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಜ್ಯೋತಿರಾದಿತ್ಯ ಸಿಂಧಿಯಾ ತಮ್ಮ ರಾಜ್ಯದ ಜನತಗೆ ಸಿಹಿ ಸುದ್ದಿ ನೀಡಿದ್ದಾರೆ. ಜುಲೈ 16 ರಿಂದ 8 ಹೊಸ ವಿಮಾನ ಸೇವೆ ಘೋಷಿಸಿದ್ದಾರೆ.

(ಒನ್‌ಇಂಡಿಯಾ ಸುದ್ದಿ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+