ವಿಮಾನದಲ್ಲಿ ಗದ್ದಲವೆಬ್ಬಿಸಿದ ಬಿಜೆಪಿ ಸಂಸದೆ ಪ್ರಗ್ಯಾ ಸಿಂಗ್
Recommended Video
ಭೋಪಾಲ್, ಡಿಸೆಂಬರ್ 23: ವಿವಾದಾತ್ಮಕ ರಾಜಕಾರಣಿ, ಬಿಜೆಪಿ ಸಂಸದೆ ಪ್ರಗ್ಯಾ ಸಿಂಗ್ ಠಾಕೂರ್ ಮತ್ತೊಂದು ವಿವಾದಕ್ಕೆ ಸಿಲುಕಿದ್ದಾರೆ. ದೆಹಲಿಯಿಂದ ಭೋಪಾಲ್ಗೆ ಸ್ಪೈಸ್ಜೆಟ್ನಲ್ಲಿ ತೆರಳುವ ವೇಳೆ ತಾವು ಕಾಯ್ದಿರಿಸಿದ ಸೀಟಿನಲ್ಲಿ ಕೂರಲು ಅವಕಾಶ ನೀಡಿಲ್ಲ ಎಂದು ಆರೋಪಿಸಿದ್ದಾರೆ. ಜತೆಗೆ ಸಹ ಪ್ರಯಾಣಿಕರ ಜತೆಗೆ ಜಗಳವನ್ನೂ ಮಾಡಿದ್ದಾರೆ.
ಪ್ರಗ್ಯಾ ಠಾಕೂರ್ ಸ್ಪೈಸ್ ಜೆಟ್ನ ಎಸ್ಜಿ 2489ರಲ್ಲಿ ಭೂಪಾಲ್ಗೆ ಬಂದಿಳಿದ ಬಳಿಕ ರಾಜ ಭೋಜ್ ವಿಮಾನ ನಿಲ್ದಾಣದ ನಿರ್ದೇಶಕರಿಗೆ ದೂರು ನೀಡಿದ್ದಾರೆ. ಭೋಪಾಲ್ನಲ್ಲಿ ವಿಮಾನ ನಿಂತ ಮೇಲೆ ಹಲವು ಸಮಯ ಕೆಳಕ್ಕಿಳಿಯಲು ನಿರಾಕರಿಸಿದ್ದ ಅವರು, ಸೀಟ್ನಲ್ಲಿಯೇ ಕುಳಿತಿದ್ದರು.
ವಿಮಾನ ನಿಲ್ದಾಣದ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಗ್ಯಾ, 'ವಿಮಾನಯಾನ ಸಂಸ್ಥೆಯ ಸಿಬ್ಬಂದಿ ಪ್ರಯಾಣಿಕರ ಜತೆಗೆ ಸರಿಯಾಗಿ ನಡೆದುಕೊಳ್ಳುತ್ತಿಲ್ಲ. ನಾನು ಕಾಯ್ದಿರಿಸಿದ ಸೀಟ್ಅನ್ನು ನನಗೆ ನೀಡಲಿಲ್ಲ. ಹಾಗೆ ನಿರಾಕರಿಸಿದ್ದಕ್ಕೆ ನಿಯಮಗಳಿದ್ದರೆ ತೋರಿಸಿ ಎಂದು ಕೇಳಿದ್ದೆ. ನಿರ್ದೇಶಕರಿಗೆ ಕರೆ ಮಾಡಿ ದೂರು ನೀಡಿದ್ದೇನೆ' ಎಂದು ಹೇಳಿದರು. ನನಗೆ ಕೊಟ್ಟ ಸೀಟಿನಲ್ಲಿ ಕೂರಲು ನಿರಾಕರಿಸಿದ್ದೇನೆಯೇ ವಿನಾ, ವಿಮಾನದೊಳಗೆ ಧರಣಿಯನ್ನೇನೂ ನಡೆಸಿಲ್ಲ ಎಂದು ಹೇಳಿದರು.

ಮಾಹಿತಿ ನೀಡಿರದ ಸ್ಪೈಸ್ ಜೆಟ್
ಪ್ರಗ್ಯಾ ಅವರಿಗೆ ಸೀಟು ಬದಲಿಸಿ ಕೂರುವಂತೆ ಮನವಿ ಮಾಡಲಾಗಿತ್ತು. ಆದರೆ ಅವರು ವಿಮಾನಯಾನ ಸಿಬ್ಬಂದಿ ಜತೆಗೆ ಸಹಕರಿಸಲು ನಿರಾಕರಿಸಿದರು ಎಂದು ಸ್ಪೈಸ್ಜೆಟ್ ಹೇಳಿದೆ.
ಪ್ರಗ್ಯಾ ಠಾಕೂರ್ ಅವರು ಒಂದು ಸೀಟನ್ನು ಕಾಯ್ದಿರಿಸಿದ್ದರು. ಆದರೆ ತಾವು ಗಾಲಿಕುರ್ಚಿಯೊಂದಿಗೆ ಬರುತ್ತಿರುವ ಮಾಹಿತಿ ನೀಡಿರಲಿಲ್ಲ. ಪ್ರಗ್ಯಾ ಅವರು ಕಾಯ್ದಿರಿಸಿದ್ದ ಸೀಟ್ನಲ್ಲಿ ಸುರಕ್ಷತೆಯ ಕಾರಣಕ್ಕೆ ವೀಲ್ಚೇರ್ನಲ್ಲಿರುವ ಪ್ರಯಾಣಿಕರಿಗೆ ಕೂರಲು ಅನುಮತಿ ನೀಡುವಂತಿರಲಿಲ್ಲ. ಗಾಲಿಕುರ್ಚಿಯ ಕುರಿತು ಸಿಬ್ಬಂದಿಗೆ ತಿಳಿದಿರಲಿಲ್ಲ. ಹೀಗಾಗಿ ಅವರು ಕೂರುವ ಸ್ಥಳವನ್ನು 'ನಾನ್ ಎಮರ್ಜೆನ್ಸಿ' ಸಾಲಿಗೆ ಬದಲಿಸುವಂತೆ ಕೋರಲಾಯಿತು ಎಂದು ಅದು ತಿಳಿಸಿದೆ.

ಕೊನೆಗೂ ಒಪ್ಪಿದ ಪ್ರಗ್ಯಾ
ಪ್ರಗ್ಯಾ ಕಾಯ್ದಿರಿಸಿದ್ದ ಸೀಟ್ ತುರ್ತು ನಿರ್ಗಮನದ ವ್ಯವಸ್ಥೆಯ ಜಾಗದಲ್ಲಿತ್ತು. ಹೀಗಾಗಿ ಆಸನ ಬದಲಾವಣೆಗೆ ಕೋರಿದರೂ ಪ್ರಗ್ಯಾ ಒಪ್ಪಲಿಲ್ಲ. ಅದಕ್ಕೆ ಇರುವ ಮಾರ್ಗಸೂಚಿಗಳನ್ನು ತೋರಿಸಿದರೂ ಅವರು ಹಠ ಬಿಡಲಿಲ್ಲ. ಇದರಿಂದ ಇತರೆ ಪ್ರಯಾಣಿಕರಿಗೂ ತೊಂದರೆಯಾಯಿತು. ಕೊನೆಗೂ ಪ್ರಗ್ಯಾ 1ಎದಿಂದ 2ಬಿಗೆ ಸೀಟು ಬದಲಿಸಲು ಒಪ್ಪಿದರು.
|
ನಿಮ್ಮ ಕೆಲಸ ತೊಂದರೆ ಕೊಡುವುದಲ್ಲ
ಪ್ರಗ್ಯಾ ಅವರ ವರ್ತನೆಯು ಪ್ರಯಾಣಿಕರಿಗೂ ಕೋಪ ತರಿಸಿತ್ತು. ಪ್ರಗ್ಯಾ ಜನಪ್ರತಿನಿಧಿ. ಅವರ ಕೆಲಸ ಜನರಿಗೆ ತೊಂದರೆ ಕೊಡುವುದಲ್ಲ ಎಂದು ಸಹ ಪ್ರಯಾಣಿಕರು ಅವರೊಂದಿಗೆ ವಾಗ್ವಾದ ನಡೆಸಿದ ವಿಡಿಯೋ ವೈರಲ್ ಆಗಿದೆ.
'ನನಗೆ ನಿಮ್ಮ ನಿಯಮದ ಪುಸ್ತಕ ತೋರಿಸಿ ಎಂದು ಮೊದಲಿನಿಂದಲೂ ಹೇಳುತ್ತಿದ್ದೇನೆ. ನನಗೆ ಇಲ್ಲಿ ಹಿತಕರ ಎನಿಸದೆ ಇದ್ದರೆ ನಾನು ಇಲ್ಲಿಂದ ಹೊರಡುತ್ತೇನೆ' ಎಂದು ಪ್ರಗ್ಯಾ ಸಿಬ್ಬಂದಿ ಜತೆ ಜಗಳವಾಡಿದರು.
'ನೀವು ಜನರ ಪ್ರತಿನಿಧಿ. ನಿಮ್ಮ ಕೆಲಸ ನಮಗೆ ತೊಂದರೆ ಕೊಡುವುದಲ್ಲ. ನೀವು ಮುಂದಿನ ವಿಮಾನದಲ್ಲಿ ಬನ್ನಿ' ಎಂದು ವ್ಯಕ್ತಿಯೊಬ್ಬರು ಆಕ್ರೋಶ ವ್ಯಕ್ತಪಡಿಸಿದರು.

ನೈತಿಕ ಜ್ಞಾನ ಇರಬೇಕು
'ಮೊದಲದರ್ಜೆ ನಿಮ್ಮ ಹಕ್ಕಲ್ಲ' ಎಂಬ ವ್ಯಕ್ತಿಗೆ, 'ಇದರಲ್ಲಿ ಪ್ರಥಮ ದರ್ಜೆಯ ಸೌಲಭ್ಯ ಇಲ್ಲ. ಮೊದಲ ದರ್ಜೆಯ ಪ್ರಯಾಣ ನನ್ನ ಹಕ್ಕು' ಎಂದು ಪ್ರಗ್ಯಾ ಪ್ರತ್ಯುತ್ತರ ನೀಡಿದರು.
'ನೀವೊಬ್ಬ ನಾಯಕರಾಗಿರುವುದರಿಂದ ಒಬ್ಬ ವ್ಯಕ್ತಿಗೆ ನಿಮ್ಮಿಂದ ತೊಂದರೆಯಾದರೆ ಅದನ್ನು ಸರಿಪಡಿಸುವ ನೈತಿಕ ಸೂಕ್ಷ್ಮತೆ ನಿಮಗಿರಬೇಕು. ಸುಮಾರು ಐವತ್ತು ಜನರನ್ನು ಹೀಗೆ ಬಂಧನದಲ್ಲಿಟ್ಟಿರುವ ನಿಮಗೆ ನಾಚಿಕೆಯಾಗಬೇಕು' ಎಂದು ವ್ಯಕ್ತಿ ಕಿಡಿಕಾರಿದರು.
ವ್ಯಕ್ತಿ ಬಳಸಿದ ಭಾಷೆಯ ಬಗ್ಗೆ ಪ್ರಗ್ಯಾ ಅಸಮಾಧಾನ ವ್ಯಕ್ತಪಡಿಸಿದರು. ಅದಕ್ಕೆ ಆ ವ್ಯಕ್ತಿ ತಾವು ಸರಿಯಾದ ಭಾಷೆಯನ್ನೇ ಬಳಸಿರುವುದಾಗಿ ಸಮರ್ಥಿಸಿಕೊಂಡರು.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications