ಚಾಲಾಕಿ ಯುವತಿ ತನ್ನ ಗೆಳತಿಯರನ್ನೇ ದರೋಡೆ ಮಾಡಿ ಸಿಕ್ಕಿಬಿದ್ಲು!
ಬೆಂಗಳೂರು, ಅಕ್ಟೋಬರ್ 23: ಇದೇನಿದು ವಿಚಿತ್ರ, ಪ್ರಾಣಸ್ನೇಹಿತೆ ಎಂದೆಲ್ಲಾ ಮಾತಾಡುವವರು, ಸ್ನೇಹಿತೆಯರನ್ನೇ ದರೋಡೆ ಮಾಡೋದೆ, ಹೌದು ಇದು ವಿಚಿತ್ರವಾದರೂ ಸತ್ಯಯುವತಿಯೊಬ್ಬಳು ತನ್ನ ಸ್ನೇಹಿತೆಯರನ್ನೇ ದರೋಡೆ ಮಾಡಿ ಇದೀಗ ಪೊಲೀಸರಿಗೆ ಅತಿಥಿಯಾಗಿದ್ದಾಳೆ.
ಭಾರತ್ ಬಂದ್ ಇರುವುದರಿಂದ ಹೊರಗಡೆ ಎಲ್ಲೂ ಹೋಗಲು ಸಾಧ್ಯವಿಲ್ಲ ನಿಮ್ಮ ಮನೆಯಲ್ಲೇ ಊಟ ಮಾಡೋಣ ಎಂದು ಹೇಳಿ ಸ್ನೇಹಿತೆಯ ಮನೆಗೆ ಹೋದವಳು ಎಲ್ಲವನ್ನೂ ದರೋಡೆ ಮಾಡಿದ್ದಾಳೆ. ಇದೀಗ ಸ್ನೇಹಿತರನ್ನೂ ನಂಬದಂತಹ ಸಮಾಜ ನಿರ್ಮಾಣವಾಗಿದೆ.
ಮದುವೆಯಲ್ಲಿ ಸಂಬಂಧಿಕರನ್ನು ಮೆಚ್ಚಿಸಲು ಯುವತಿ ಮಾಡಿದ್ದೇನು?
ಎಲ್ಲರೂ ಸೇರಿ ಊಟ ಮಾಡುತ್ತಿದ್ದಾಗ ತನ್ನ ಗ್ಯಾಂಕ್ ಕರೆಸಿ ದರೋಡೆ ಮಾಡಿಸಿದ್ದಾಳೆ. ಸ್ಪಾ ಒಂದರಲ್ಲಿ ಕೆಲಸ ಮಾಡುತ್ತಿದ್ದ ಕೆಎಸ್ ಆರ್ಟಿಸಿ ಲೇಔಟ್ ನಿವಾಸಿ ಅಶ್ವಿನಿ ಬಿಜಿ ಅಲಿಯಾಸ್ ಜಾಹ್ನವಿ ದರೋಡೆಯ ಕಿಂಗ್ ಪಿನ್, ದರೋಡೆಗೆ ಒಳಗಾಗಿದ್ದ ಈಕೆಯ ಗೆಳತಿಯರಾದ ರಂಜಿತಾ ಮತ್ತು ಸವಿತಾ ನೀಡಿದ್ದ ದೂರಿನ ಮೇರೆಗೆ ಮೈಕೊಲೇಔಟ್ ಠಾಣೆ ಪೊಲೀಸರು ದೂರು ದಾಖಲಿಸಿದ್ದಾರೆ.
ಪ್ರಕರಣವನ್ನು ಬೇಧಿಸಿರುವ ಪೊಲೀಸರು ಅಶ್ವಿನಿಯ ಸಹಚರರಾದ ಕಾಮಾಕ್ಷಿಪಾಳ್ಯದ ನಿವಾಸಿ ಎನ್ ಸ್ವಾಮಿ, ಪ್ರದೀಪ್ ಕುಮಾರ್ ಸೇರಿದಂತೆ ಅನೇಕರನ್ನಯ ಬಂಧಿಸಿದ್ದಾರೆ.
ಸಚಿವ ಆರ್.ವಿ.ದೇಶಪಾಂಡೆ ಪುತ್ರನ ಮನೆಗೆ ಕನ್ನ ಹಾಕಿದ ಖದೀಮರು
ದೂರು ದಾಖಲಿಸಿಕೊಂಡ ಪೊಲೀಸರು ತನಿಖೆ ಮುಂದುವರೆಸಿದಾಗ ಕೃತ್ಯ ಪರಿಷಯಸ್ಥರಿಂದಲೇ ನಡೆದಿದೆ ಎನ್ನುವುದು ಮನವರಿಕೆಯಾಗಿತ್ತು. ಈ ಬಗ್ಗೆ ರಂಜಿತಾ ಅವರನ್ನು ಹಲವು ಬಾರಿ ಪ್ರಶ್ನಿಸಿದ್ದರು.
ಮಂಗಳವಾರದಂದು, ಹಗಲು ವೇಳೆಯಲ್ಲಿ ಮಾತ್ರ ಕದಿಯುತ್ತಿದ್ದ ಕಳ್ಳರು ಅಂದರ್
ಆದರೂ ಆಕೆಗೆ ಯಾರ ಮೇಲೂ ಅನುಮಾನ ಬಂದಿರಲಿಲ್ಲ ಆದರೆ ಜಾಹ್ನವಿಯನ್ನು ಪ್ರಶ್ನಿಸಿದಾಗ ಈಕೆ ನಡೆದುಕೊಂಡ ರೀತಿ ಮತ್ತು ಅತಿಯಾಗಿ ಮಾತನಾಡುತ್ತಿದುದನ್ನು ಗಮನಿಸಿದ ಪೊಲೀಸರಿಗೆ ಅನುಮಾನ ಹೆಚ್ಚಾಗಿತ್ತು.
ಐಎಎಸ್ ಅಧಿಕಾರಿ ಮನೆಗೆ ಕನ್ನ ಹಾಕಿದ್ದ ಖದೀಮರು ಸಿಕ್ಕಿಬಿದ್ರು
ತಾನು ರಂಜಿತಾಳ ಬೆಸ್ಟ್ಫ್ರೆಂಡ್, ಆಕೆಯ ಎಲ್ಲಾ ಕಷ್ಟ ಸುಖಕ್ಕೆ ಆಗಿದ್ದೇನೆ ಎಂದೆಲ್ಲಾ ಅತಿಯಾಗಿ ಮಾತನಾಡಿದ ಕಾರಣ, ಆಕೆಯ ಮೊಬೈಲ್ ಕರೆಗಳ ದಾಖಲೆಗಳನ್ನು ವೀಕ್ಷಿಸಿದಾಗ ಒಂದೇ ನಂಬರ್ನಿಂದ ಪದೇ ಪದೇ ಕರೆ ಬಂದಿರುವುದು ತಿಳಿಸಿದೆ. ಆ ನಂಬರ್ ಬೆನ್ನತ್ತಿದಾಗ ಸತ್ಯ ಬಲಯಾಗಿದೆ.