ನಮ್ಮ ಬೆಂಗಳೂರು 'ರೈಸ್ ಬಾತ್' ಗೂ ರಾಜಧಾನಿ!
ಬೆಂಗಳೂರು ಕರ್ನಾಟಕದ ರಾಜಧಾನಿ...ಇದರಲ್ಲಿ ಯಾವುದೇ ಅನುಮಾನ ಬೇಡ. ನೀವು ಬಾಯಿಯನ್ನು ಕಟ್ಟಿಹಾಕಲು ಸೋತು, ತಿನ್ನಲು ಏನಾದರೂ ಸಿಗುತ್ತದೆಯೇ? ಎಂದು ಮನೆಗೆ ಬೀಗ ಜಡಿದು ಹೊರಗೆ ಹೊರಟರೆ ಬೆಂಗಳೂರಿನ ಬಗೆ-ಬಗೆಯ ತಿಂಡಿಗಳ ಪರಿಚಯವಾಗುತ್ತದೆ. ನಮ್ಮ ಬೆಂಗಳೂರನ್ನು 'ರೈಸ್ ಬಾತ್' ರಾಜಧಾನಿ ಎಂದೂ ಹೇಳಬಹುದು.
ಹಸಿದ ಹೊಟ್ಟೆಗೆ ಎಂದೂ ಮೋಸ ಮಾಡದ ನಗರ ಬೆಂಗಳೂರು. ಕೆಲಸ ಹುಡುಕಿಕೊಂಡು ಬರುವವರಿಗೆ ಕೆಲಸ ನೀಡಿ, ಹೊಟ್ಟೆ ತುಂಬಿಸುತ್ತದೆ. ಹಸಿವು ಎಂದು ರಸ್ತೆಗೆ ಕಾಲಿಟ್ಟರೆ ತಿನ್ನಲು ದಿನದ 24 ಗಂಟೆಯೂ ಏನಾದರೂ ಸಿಗುವ ಊರು ಕೆಂಪೇಗೌಡರು ಕಟ್ಟಿದ ಬೆಂಗಳೂರು.

25 ರೂ. ನಿಂದ 2,500 ರೂ. ಮತ್ತು ಅದಕ್ಕಿಂತ ಹೆಚ್ಚಿನ ಹಣದ ಊಟ, ತಿಂಡಿ ಸಿಗುವ ಊರು ನಮ್ಮ ಬೆಂಗಳೂರು. ನಗರದಲ್ಲಿ ಸಿಗುವ ಹಲವು ಬಗೆಯ ಖಾದ್ಯಗಳ ಪಟ್ಟಿಯಲ್ಲಿ ರೈಸ್ ಬಾತ್ ವಿಶೇಷ ಸ್ಥಾನ ಪಡೆದಿದೆ. ರಸ್ತೆ ಬದಿಯ ತಳ್ಳುಗಾಡಿಯಿಂದ ಯಾವ ದರ್ಶಿನಿ, ಕೆಫೆ, ಭವನ ಹೊಕ್ಕರೂ ಖಾದ್ಯಗಳ ಪಟ್ಟಿಯಲ್ಲಿ ರೈಸ್ ಬಾತ್ ಕಣ್ಣಿಗೆ ಕಾಣುತ್ತದೆ.
ಸಾಮಾನ್ಯವಾಗಿ ಚಿತ್ರಾನ್ನ, ಮೊಸರನ್ನ, ಪುಳಿಯೊಗರೆ, ಪಲಾವ್, ಬಿಸಿಬೇಳೆ ಬಾತ್ ಎಲ್ಲ ಕಡೆ ಸಿಗುತ್ತದೆ. ರೈಸ್ ಬಾತ್ ಎಂದು ಹೇಳಿದ ತಕ್ಷಣ ಕಣ್ಣ ಮುಂದೆ ಬರುವುದು ಇವುಗಳೇ. ಯಾವ ಹೋಟೆಲ್ ಹೊಕ್ಕರೂ ಪಲಾವ್, ಬೀಸಿಬೇಳೆ ಬಾತ್ ಚೆಂದದ ಚಿತ್ರಗಳು ಕಣ್ಣನ್ನು ಸೆಳೆಯುತ್ತವೆ, ಬಾಯಲ್ಲಿ ನೀರು ತರಿಸುತ್ತವೆ.
ನಮ್ಮ ಬೆಂಗಳೂರು ಹಾಗಲ್ಲ ಇಲ್ಲಿ ರೈಸ್ ಬಾತ್ ಯಾವುದಿದೆ? ಎಂದು ಕೇಳಿಯೇ ತಿಳಿದುಕೊಳ್ಳಬೇಕು. ಬಗೆ-ಬಗೆಯ ರೈಸ್ ಬಾತ್ ಗಳು ಎಲ್ಲಾ ಕಡೆ ಸಿಗುತ್ತವೆ. ಅವುಗಳನ್ನು ತಿಂದು ಆಸ್ವಾದಿಸಲು ಹೊಟ್ಟೆ ಹಸಿದಿರಬೇಕಷ್ಟೇ. ಆಜ್ ಕ್ಯಾ ಬಾತ್ ಹೇ ಜೀ? ಎಂದರೆ ಇವತ್ತಿನ ರೈಸ್ ಬಾತ್ ಹೆಸರು ಹೋಟೆಲ್ ಅವರ ಬಾಯಿಂದ ಬರುತ್ತದೆ.
ಟೊಮೆಟೋ ರೈಸ್ ಬಾತ್, ಕ್ಯಾಪ್ಸಿಕಂ ರೈಸ್ ಬಾತ್, ಆಲೂ ರೈಸ್ ಬಾತ್, ಬಟಾಣಿ ರೈಸ್ ಬಾತ್, ವೆಜಿಟೆಬಲ್ ರೈಸ್ ಬಾತ್, ಮೆಂತ್ಯಾ ರೈಸ್ ಬಾತ್ ಹೀಗೆ ಬಗೆ-ಬಗೆಯ ರೈಸ್ ಬಾತ್ ಸಿಗತ್ತೆ. ಉಳಿದಂತೆ ಘೀ ರೈಸ್, ವೆಜ್ ಬಿರಿಯಾನಿ, ಪುಳಿಯೊಗರೆ ಹಸಿದ ಹೊಟ್ಟೆ ತುಂಬಿಸುತ್ತವೆ.
ನಗರದ ಯಾವುದೇ ಭಾಗಕ್ಕೆ ಹೋದರೂ ಸಾರ್ ಲೆಮನ್ ರೈಸ್ ಬಾತ್ ಇದೆ ಎಂಬ ಮಾತು ಕೇಳಿ ಬರುತ್ತದೆ. ಚಿತ್ರನ್ನಾಕ್ಕೆ ಇಂಗ್ಲಿಷ್ ಟಚ್ ಕೊಟ್ಟು ಮೇಲಷ್ಟು ಚಟ್ನಿ ಸುರಿದು ಮಸಾಲ ವಡೆ ಹಾಕಿ ಕೈಗೆ ಕೊಡುತ್ತಾನೆ. ಮುಂದೆ ಕೈಗೆ...ಬಾಯಿಗೆ ಜಗಳ ಆರಂಭ.
ಬಗೆ-ಬಗೆಯ ದೋಸೆಗೂ ಬೆಂಗಳೂರು ಪ್ರಸಿದ್ಧಿ ಪಡೆದಿದೆ. ಇನ್ನೊಮ್ಮೆ ಆ ಬಗ್ಗೆ ಮಾತಾಡುವ.. ರೈಸ್ ಬಾತ್ ತಿನ್ನಬೇಕು ಹಸಿವಾಗ್ತಿದೆ.
-
ಬೆಂಗಳೂರು ಇ-ಖಾತಾ ದಂಧೆ ಬಯಲು: ಬ್ರ್ಯಾಂಡ್ ಬೆಂಗಳೂರಿಗೆ ಆರ್ ಅಶೋಕ್ ತೀವ್ರ ಟೀಕೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ












Click it and Unblock the Notifications