Get Updates
Get notified of breaking news, exclusive insights, and must-see stories!

ಕನ್ನಡ ರಾಜ್ಯೋತ್ಸವ: ಐಐಎಂಬಿ-ಕರ್ನಾಟಕ ಸಂಸ್ಕೃತಿ ಪರಂಪರೆ ಕೊಂಡಾಡಿದ ಮೈಸೂರು ಒಡೆಯರು

ಬೆಂಗಳೂರು, ನವೆಂಬರ್ 23: ಬೆಂಗಳೂರು ನಗರ ಸಾರವನ್ನು ಬಿಂಬಿಸುವ ಈ ಐಐಎಂಬಿ ಕ್ಯಾಂಪಸ್ ನಂತಹ ಸಂಸ್ಥೆಗಳು ರಾಷ್ಟ್ರ ನಿರ್ಮಾಣ ಮತ್ತು ಇತರ ಪ್ರಭಾವಶಾಲಿ ಚಟುವಟಿಕೆಗಳ ಮೂಲಕ ಕರ್ನಾಟಕ ರಾಜ್ಯವನ್ನು ಉತ್ತೇಜಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಮೈಸೂರು ಮಹಾರಾಜ ಶ್ರೀ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಹೇಳಿದರು.

ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ (IIMB) ಕ್ಯಾಂಪಸ್‌ನಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

yaduveer-krishnadatta-chamaraja-wadiyar

ಬೆಂಗಳೂರಿನ ಈ ಐಐಎಂ ಕ್ಯಾಂಪಸ್ ತನ್ನದೇ ಆದ ಮೂಲಸೌಕರ್ಯ ಮತ್ತು ಸುತ್ತಲಿನ ಪರಿಸರದ ಮೂಲಕ, ಒಂದು ಕಾಲದಲ್ಲಿ ಇದ್ದ ಹಳೆಯ ಬೆಂಗಳೂರಿನ ಸಾರವನ್ನು ನಿಜವಾಗಿಯೂ ಪ್ರತಿಬಿಂಬಿಸುತ್ತದೆ. ಐಐಎಂಬಿ ಕೇವಲ ಶಿಕ್ಷಣ ತಜ್ಞನಲ್ಲ. ರಾಷ್ಟ್ರ ನಿರ್ಮಾಣದಲ್ಲಿ ಇದು ಮುಖ್ಯ ಪಾತ್ರ ನಿರ್ವಹಿಸಿದೆ ಎಂದರು.

ಕನ್ನಡಿಗರ ಜವಾಬ್ದಾರಿ ಜ್ಞಾಪಿಸಿದ ಒಡೆಯರು

ಮೈಸೂರು ಅಥವಾ ಕರ್ನಾಟಕದ ಸಂಸ್ಕೃತಿ ಮತ್ತು ಪರಂಪರೆಯನ್ನು ಎತ್ತಿ ಹಿಡಿಯುವುದು ಮಾತ್ರ ಮುಖ್ಯವಲ್ಲ. ಇದರೊಂದಿಗೆ ಭಾರತೀಯ ಸಂಪ್ರದಾಯ ಮತ್ತು ಪರಂಪರೆಯನ್ನು ಕಾಪಾಡುವುದು ನಮ್ಮ ಜವಾಬ್ದಾರಿಯಾಗಿದೆ ಎಂದು ಪ್ರತಿ ಕನ್ನಡಿಗರ ಜವಾಬ್ದಾರಿಯನ್ನು ಜ್ಞಾಪಿಸಿದರು.

ಇದಕ್ಕೂ ಮುನ್ನ ಐಐಎಂಬಿಯ ಅರ್ಥಶಾಸ್ತ್ರ ವಿಭಾಗದ ಪ್ರೊ.ಆದಿತ್ಯ ಶ್ರೀನಿವಾಸ್ ಅವರು ಮಾತನಾಡಿ, ಕರ್ನಾಟಕದ ಸಮಗ್ರ ಪ್ರಗತಿಯಲ್ಲಿ ಮೈಸೂರು ಅರಮನೆಯ ಕೊಡುಗೆಗಳನ್ನು ಸ್ಮರಿಸಿದರು. ಹಿಂದಿನಿಂದಲೂ ನಡೆದುಕೊಂಡು ಅರಮನೆಯ ಆಚಾರ-ವಿಚಾರ, ಸಂಸ್ಕೃತಿ ಸ್ಪೂರ್ತಿಯಾಗಿದ್ದ. ಇಂದಿಗೂ ಸಹ ಅರಮನೆಯ ಪರಂಪರೆ ಹಾಗೇ ಉಳಿದಿದೆ ಎಂದು ತಿಳಿಸಿದರು.

yaduveer-krishnadatta-chamaraja-wadiyar

ಕರ್ನಾಟಕದ ದೇಶದ ಪ್ರತಿಭೆಗಳ ಆಕರ್ಷಣಿಯ ಸ್ಥಳ

ಐಐಎಂಬಿ ನಿರ್ದೇಶಕ ಋಷಿಕೇಷ್ ಟಿ. ಕೃಷ್ಣನ್‌ ಅವರುಡಿ, ಮೈಸೂರು ಅರಮನೆ ರಾಜ್ಯದ ಪ್ರಗತಿಯ ಪ್ರತೀಕ. ಕರ್ನಾಟಕವು ತನ್ನ ಹವಾಮಾನ, ನೈಸರ್ಗಿಕ ಸಂಪನ್ಮೂಲಗಳು, ಕಷ್ಟಪಟ್ಟು ದುಡಿಯುವ ಜನರು ಮುಂತಾದ ಎಲ್ಲಾ ಅನುಕೂಲಗಳೊಂದಿಗೆ ದೇಶದಾದ್ಯಂತದ ಪ್ರತಿಭೆಗಳನ್ನು ಆಕರ್ಷಿಸುವ ಅವಕಾಶವನ್ನು ನೀಡುತ್ತದೆ. ಕರ್ನಾಟಕವು ಎಲ್ಲಾ ಕ್ಷೇತ್ರಗಳಲ್ಲಿ ದೇಶದಲ್ಲೇ ಮುಂಚೂಣಿಯಲ್ಲಿ ಮುನ್ನಡೆಯುವ ನಿಟ್ಟಿನಲ್ಲಿ ನಾವು ಕೆಲಸ ಮಾಡಬೇಕಾಗಿದೆ ಎಂದು ಹೇಳಿದರು.

ಸಂಸ್ಥೆಯ ಸ್ಟಾಫ್ ರಿಕ್ರಿಯೇಷನ್ ಕ್ಲಬ್ (ಎಸ್‌ಆರ್‌ಸಿ) ವಿನ್ಯಾಸಗೊಳಿಸಿದ ಕಾರ್ಯಕ್ರಮಗಳೊಂದಿಗೆ ಸಂಸ್ಥೆಯ ಸುವರ್ಣ ಮಹೋತ್ಸವದ ಅಂಗವಾಗಿ ಐಐಎಂ ಬೆಂಗಳೂರು ಈ ವರ್ಷ ಕನ್ನಡ ರಾಜ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸಿತು. ಇತರ ಅಧ್ಯಾಪಕರಾದ ಪ್ರೊ. ರಾಜೇಂದ್ರ ಕೆ ಬಂಡಿ, ಡೀನ್, ಆಡಳಿತ ಮತ್ತು ಅಧ್ಯಾಪಕರು, ಮಾಹಿತಿ ವ್ಯವಸ್ಥೆಗಳ ಪ್ರದೇಶ, ಕರ್ನಲ್ ಎಸ್ ಡಿ ಅರವೇಂದನ್, ಮುಖ್ಯ ಆಡಳಿತಾಧಿಕಾರಿ, ಕೋಮಲಾ ದೇವಿ ಸೇರಿದಂತೆ ಎಸ್‌ಆರ್‌ಸಿ ಸದಸ್ಯರು, ಅಧ್ಯಕ್ಷರು - ಎಸ್‌ಆರ್‌ಸಿ, ಮತ್ತು ಸಂಸ್ಥೆಯ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+