ಬೆಂಗಳೂರು ಕೆಫೆ ಮಹಿಳಾ ಬಾತ್ರೂಮಿನಲ್ಲಿ ರಹಸ್ಯ ಕ್ಯಾಮೆರಾ ಪತ್ತೆ: ಮುಂದಾಗಿದ್ದೇನು
ಬೆಂಗಳೂರು, ಆಗಸ್ಟ್ 12: ಬೆಂಗಳೂರಿನ ಕಾಫಿ ಶಾಪ್ಗೆ ತೆರಳಿದ್ದ ಯುವತಿಯೊಬ್ಬಳು ಅಲ್ಲಿನ ವಾಶರೂಮ್ ನಲ್ಲಿ ಯಾರಿಗೂ ಗೊತ್ತಾಗದಂತೆ ಇಟ್ಟಿದ್ದ ಹಿಡನ್ ಕ್ಯಾಮೆರಾ ಪತ್ತೆ ಮಾಡಿದ್ದಾರೆ. ಮಹಿಳೆಯರು ಇಂತಹ ಶಾಪ್ಗಳಲ್ಲಿ ವಾಶ್ರೂಮ್ ಬಳಸುವ ಮುನ್ನ ಇರಲಿ ಎಚ್ಚರ ಎಂದ ಆ ಯುವತಿ ಮನವಿ ಮಾಡಿದ್ದಾರೆ. ಸದ್ಯ ಸದಾಶಿವನಗರದ ಪೊಲೀಸರ ಕ್ಯಾಮೆರಾ ಇಟ್ಟವನನ್ನು ಬಂಧಿಸಿದ್ದಾರೆ. ಅಷ್ಟಕ್ಕೂ ಆಗಿದ್ದೇನು? ಘಟನೆ ವಿವರ ಇಲ್ಲಿದೆ.
ಯುವತಿಯೊಬ್ಬರು ನಗರದ ಬಿಇಎಲ್ ರಸ್ತೆಯ 'ಥರ್ಡ್ ವೇವ್ ಕಾಫೀ' ಔಟ್ಲೆಟ್ಗೆ ತೆರಳಿದಿದ್ದಾರೆ. ಕಾಫಿ ಆರ್ಡರ್ ಮಾಡಿರುವ ಯುವತಿ ಅಲ್ಲಿನ ವಾಶ್ರೂಮ್ ಬಳಸಲು ತೆರಳಿದಾಗ ಅಲ್ಲಿ ಯಾರಿಗೂ ಕಾಣದಂದೆ ಶಾಪ್ ಸಿಬ್ಬಂದಿಯೇ ಇಟ್ಟಿದ್ದ ಮೊಬೈಲ್ ಕ್ಯಾಮೆರಾ ಇಟ್ಟಿದ್ದನ್ನು ಪತ್ತೆ ಮಾಡಿ ಪೊಲಿಸರಿಗೆ ತಿಳಿಸಿದ್ದಾಳೆ.

ಕ್ಯಾಮೆರಾ ಇಟ್ಟಿದ್ದ ಕಾಫೀ ಶಾಪ್ ಸಿಬ್ಬಂದಿ 23 ವರ್ಷ ಮನೋಜ್ ಎನ್ನಲಾಗಿದೆ. ಆರು ತಿಂಗಳ ಹಿಂದೆ ಈ ಶಾಪ್ನಲ್ಲಿ ಕೆಲಸಕ್ಕೆ ಸೇರಿದ್ದ ಈತ ಗುಟ್ಟಹಳ್ಳಿಯಲ್ಲಿ ವಾಸಿಸುತ್ತಿದ್ದು, ಶಿವಮೊಗ್ಗ ಮೂಲದವನು ಎಂದು ಸದಾಶಿವನಗರ ಪೊಲೀಸರು ಮಾಹಿತಿ ನೀಡಿದ್ದಾರೆ.
ಫ್ಲೈಟ್ ಮೂಡ್ನಲ್ಲಿತ್ತು ಕ್ಯಾಮೆರಾ
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಯುವತಿ ಮಾಹಿತಿ ಹಂಚಿಕೊಂಡಿದ್ದಾರೆ. ವಾಶ್ರೂಮ್ಗೆ ತೆರಳಿದಾಗ ಅಲ್ಲಿ ಡಸ್ಟ್ಬೀನ್ ಹಿಂದೆ ಯಾರಿಗೂ ಕಾಣದಂತೆ ಕ್ಯಾಮೆರಾ ಇಡಲಾಗಿದೆ. ನೋಡಿದರೆ ಕಳೆದ ಎರಡು ಗಂಟೆಗಳಿಂದ ಅದು ರೆಕಾರ್ಡ್ ಮಾಡುತ್ತಿದ್ದು, ಟಾಯ್ಲೆಟ್ ಸೀಟಿಗೆ ಮುಖ ಮಾಡಿ ಇಡಲಾಗಿತ್ತು. ಫ್ಲೈಟ್ ಮೂಡ್ಗೆ ಹಾಕಿ ರೆಕಾರ್ಡ್ ಇಟ್ಟಿರುವುದನ್ನು ಯುವತಿ ಪತ್ತೆ ಮಾಡಿದ್ದಾರೆ.

ಕೂಡಲೇ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರ ಫೋನ್ ವಶಕ್ಕೆ ಪಡೆದಿದ್ದಾರೆ. ಪರಿಶೀಲಿಸಿದಾಗ ಇದು ಇಲ್ಲಿನ ಸಿಬ್ಬಂದಿ ಬಂಧಿತ ಮನೋಜ್ ನದ್ದು ಎಂದು ಗೊತ್ತಾಗಿದೆ. ಪ್ರಕರಣ ದಾಖಲಿಸಿಕೊಂಡು ಪೊಲೀಸರು ಕ್ರಮ ಜರುಗಿಸಿದ್ದಾರೆ.
ನೀವು ಅಗತ್ಯ ಜಾಗೃತೆ ವಹಿಸಿ
ಇದೊಂದು ಭಯಾನಕ ಘಟನೆಯಾಗಿದ್ದು, ನೆನಸಿಕೊಂಡರೆ ಅಸಹ್ಯವೆನಿಸುತ್ತದೆ. ಕೆಫೆ ಅಥವಾ ರೆಸ್ಟೋರೆಂಟ್ ಎಷ್ಟೇ ಪ್ರಸಿದ್ಧವಾದರೂ ಸಹಿತ ಅಲ್ಲಿ ವಾಶ್ರೂಮ್ ಬಳಸುವಾಗ ಇನ್ನುಮುಂದೆ ಹೆಚ್ಚು ಜಾಗೃತೆ ವಹಿಸುತ್ತೇನೆ. ನೀವು (ಮಹಿಳೆಯರು) ಸಹ ಇಂತಹ ಶಾಪ್ಗಳಲ್ಲಿ ವಾಶ್ರೂಮ್ ಹೋಗಬೇಕಾದರೆ ಅಗತ್ಯ ಎಚ್ಚರಿಕೆ ವಹಿಸಿ ಎಂದು ಆ ಯುವತಿ ಮನವಿ ಮಾಡಿದ್ದಾರೆ.
ಘಟನೆ ಬಗ್ಗೆ 'ಥರ್ಡ್ ವೇವ್ ಕಾಫೀ' ಹೇಳಿದ್ದೇನು
ಈ ಕುರಿತು ಪ್ರತಿಕ್ರಿಯಿಸಿರುವ ಥರ್ಡ್ ವೇವ್ ಕಾಫೀ ಔಟ್ಲೆಟ್, ಬೆಂಗಳೂರಿನ ಈ ನಮ್ಮ ಔಟ್ಲೆಟ್ನಲ್ಲಿ ಇಂಥದ್ದೊಂದು ಘಟನೆ ನಡೆದಿರುವುದು ಕಳವಳಕಾರಿ ಸಂಗತಿ. ಇಂತಹ ಘಟನೆಗಳನ್ನು ನಾವು ಸಹ ಸ್ವೀಕರಿಸುವುದಿಲ್ಲ. ಇದು ಖಂಡನೀಯ ಎಂಬುದರಲ್ಲಿ ಎರಡು ಮಾತಿಲ್ಲ. ಈ ವ್ಯಕ್ತಿಯನ್ನು ತಕ್ಷಣವೇ ವಜಾಗೊಳಿಸಲಾಗಿದೆ. ಗ್ರಾಹಕರ ಸುರಕ್ಷತೆ, ಅವರ ಸೇವೆಯೆ ನಮಗೆ ಅತ್ಯಮೂಲ್ಯವಾಗಿದೆ. ಗ್ರಾಹಕರ ಸುರಕ್ಷತೆ ಖಚಿತಪಡಿಸುವ ಮೂಲಕ ಇಂತಹ ಘಟನೆಗೆ ಆಸ್ಪದ ಕೊಡದಂತೆ ಕಾರ್ಯ ನಿರ್ವಹಿಸುತ್ತೇವೆ ಎಂದು ಶಾಪ್ ಮುಖ್ಯಸ್ಥರು ಪ್ರತಿಕ್ರಿಯಿಸಿದ್ದಾರೆ.
ಸದ್ಯ ಮನೋಜ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ (ಬಿಎನ್ಎಸ್) ಸೆಕ್ಷನ್ 77 (ವೋಯರಿಸಂ) ಮತ್ತು ಮಾಹಿತಿ ತಂತ್ರಜ್ಞಾನ (ಐಟಿ) ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications