ವೈಟ್ಫೀಲ್ಡ್-ಕೆಆರ್ ಪುರಂ ಮೆಟ್ರೋ ಮಾರ್ಗ: ಯಾವ ಟೆಕ್ ಪಾರ್ಕ್ಗಳಿಗೆ ವಾಕ್ವೇ? ಎಲ್ಲಿ ವೆಬ್ ಗಿರ್ಡರ್? ಪರಿಶೀಲನೆ, ಮಾಹಿತಿ
ಬೆಂಗಳೂರು, ಜನವರಿ 18: ಫೆಬ್ರವರಿ 15 ರ ನಂತರ ವೈಟ್ಫೀಲ್ಡ್-ಕೆ ಆರ್ ಪುರಂ ಮಾರ್ಗವನ್ನು ಪರಿಶೀಲಿಸಲು ರೈಲ್ವೆ ಸುರಕ್ಷತಾ ಆಯುಕ್ತರನ್ನು (ಸಿಆರ್ಎಸ್) ನಮ್ಮ ಮೆಟ್ರೋ ಆಹ್ವಾನಿಸಿದೆ. ಸುರಕ್ಷತಾ ಪರಿಶೀಲನೆಯು ಸುಮಾರು ನಾಲ್ಕು ದಿನಗಳನ್ನು ತೆಗೆದುಕೊಳ್ಳುತ್ತದೆ ಮತ್ತು ಎಲ್ಲವೂ ಸರಿಯಾಗಿ ನಡೆದರೆ, ಮಾರ್ಚ್ನೊಳಗೆ ವೈಟ್ಫೀಲ್ಡ್ ಮೆಟ್ರೋಗೆ ಸಂಪರ್ಕ ಕಲ್ಪಿಸಲಿದೆ ಎಂದು ಅಧಿಕಾರಿ ಹೇಳಿದರು. ಈ ಕುರಿತು 'ಡೆಕ್ಕನ್ ಹೆರಾಲ್ಡ್' ವರದಿ ಮಾಡಿದೆ.
ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) ಪ್ರಸ್ತುತ 12.75 ಕಿಮೀ ಮಾರ್ಗದಲ್ಲಿ ಎರಡು ಆರು ಬೋಗಿಗಳ ರೈಲುಗಳೊಂದಿಗೆ 25 ಕಿಮೀ ವೇಗದಲ್ಲಿ ಪ್ರಾಯೋಗಿಕ ಸಂಚಾರಗಳನ್ನು ನಡೆಸುತ್ತಿದೆ ಎಂದು ಅದರ ವ್ಯವಸ್ಥಾಪಕ ನಿರ್ದೇಶಕ ಅಂಜುಮ್ ಪರ್ವೇಜ್ ತಿಳಿಸಿದ್ದಾರೆ.
ಫೆಬ್ರವರಿ 15 ರೊಳಗೆ ಸಿಆರ್ಎಸ್ ತಪಾಸಣೆಯ ಸಮಯದಲ್ಲಿ ಎಲ್ಲಾ ನಿರ್ಣಾಯಕ ಘಟಕಗಳನ್ನು ಪೂರ್ಣಗೊಳಿಸಲಾಗುವುದು ಎಂದು ಅವರು ಹೇಳಿದರು. ಸಿಆರ್ಎಸ್ ಮಾರ್ಗವನ್ನು ಅನುಮೋದಿಸಿದರೆ, ಮಾರ್ಚ್ನಲ್ಲಿ ವಾಣಿಜ್ಯ ಕಾರ್ಯಾಚರಣೆಗಳು ಪ್ರಾರಂಭವಾಗುತ್ತವೆ ಎಂದು ಅವರು ಹೇಳಿದ್ದಾರೆ.

ಆದರೆ, ಪರ್ವೇಜ್ ಪ್ರಕಾರ, 2.5 ಕಿಮೀ ಕೆ ಆರ್ ಪುರಂ- ಬೈಯಪ್ಪನಹಳ್ಳಿ ಮಾರ್ಗವು ಜೂನ್-ಜುಲೈನಲ್ಲಿ ಮಾತ್ರ ಸಿದ್ಧವಾಗಲಿದೆ. ಬಿಎಂಆರ್ಸಿಎಲ್ ಕೆ ಆರ್ ಪುರಂನಲ್ಲಿ ರೈಲ್ವೆ ಹಳಿಯಲ್ಲಿ ತೆರೆದ ವೆಬ್ ಗಿರ್ಡರ್ (ಓಡಬ್ಲ್ಯುಜಿ) ಅನ್ನು ಪ್ರಾರಂಭಿಸುವ ಪ್ರಕ್ರಿಯೆಯಲ್ಲಿದೆ. ನೈಋತ್ಯ ರೈಲ್ವೆ (SWR) ನಿಂದ ಅನುಮತಿ ಪಡೆದ ನಂತರ ಜನವರಿ 20 ರೊಳಗೆ ಓಡಬ್ಲ್ಯುಜಿ ಪ್ರಾರಂಭಿಸಲು ಸಿದ್ದತೆ ನಡೆದಿದೆ. ಅದು ಯಾವುದೇ ದಿನ ಬರಬಹುದು ಎಂದು ಪರ್ವೇಜ್ ತಿಳಿಸಿದ್ದಾರೆ.
15.25-ಕಿಮೀ ವೈಟ್ಫೀಲ್ಡ್- ಬೈಯಪ್ಪನಹಳ್ಳಿ ಮಾರ್ಗವು ಅಸ್ತಿತ್ವದಲ್ಲಿರುವ ಪರ್ಪಲ್ ಲೈನ್ನ ವಿಸ್ತರಣೆಯಾಗಿದೆ. ಇದು ಪ್ರಸ್ತುತ ಕೆಂಗೇರಿಯನ್ನು ಬೈಯಪ್ಪನಹಳ್ಳಿಯೊಂದಿಗೆ ಸಂಪರ್ಕಿಸುತ್ತದೆ. ಒಮ್ಮೆ ಕಾರ್ಯಾರಂಭ ಮಾಡಿದರೆ, ವೈಟ್ಫೀಲ್ಡ್-ಬೈಯಪ್ಪನಹಳ್ಳಿ ಮಾರ್ಗವು ಬೆಂಗಳೂರಿನ ಪೂರ್ವ ಐಟಿ ಹಬ್ನಲ್ಲಿ ಟ್ರಾಫಿಕ್ ಸಮಸ್ಯೆಗಳನ್ನು ಪರಿಹರಿಸಲು ಸಹಾಯ ಮಾಡುತ್ತದೆ.
ಮಂಗಳವಾರ, BMRCL, ಮಾಹಿತಿ ತಂತ್ರಜ್ಞಾನ ಪಾರ್ಕ್ ಲಿಮಿಟೆಡ್ (ITPL) ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ. ಪಟ್ಟಂದೂರು ಅಗ್ರಹಾರ ಮೆಟ್ರೋ ನಿಲ್ದಾಣದ ಕಾನ್ಕೋರ್ಸ್ನಿಂದ ಬೆಂಗಳೂರಿನ ಇಂಟರ್ನ್ಯಾಷನಲ್ ಟೆಕ್ನಾಲಜಿ ಪಾರ್ಕ್ಗೆ ವಾಕ್ವೇ ಮೂಲಕ ನೇರ ಪ್ರವೇಶವನ್ನು ಒದಗಿಸುತ್ತದೆ.

BMRCL ಅನುಮೋದಿಸಿದ ವಿನ್ಯಾಸಗಳ ಪ್ರಕಾರ ಪ್ರವೇಶ ಮೂಲಸೌಕರ್ಯಗಳ ನಿರ್ಮಾಣವನ್ನು ITPB ನಿರ್ವಹಿಸುತ್ತದೆ. ITPB ಯಲ್ಲಿ ಕೆಲಸ ಮಾಡುವ 55,000 ಕ್ಕೂ ಹೆಚ್ಚು ಜನರು ಮೆಟ್ರೋ ನಿಲ್ದಾಣದಿಂದ ನೇರವಾಗಿ ತಮ್ಮ ಕೆಲಸದ ಸ್ಥಳಗಳನ್ನು ತಲುಪಲು ವಾಕ್ವೇ ಸಹಾಯ ಮಾಡುತ್ತದೆ.
ಬೈಯಪ್ಪನಹಳ್ಳಿ- ವೈಟ್ಫೀಲ್ಡ್ ಮೆಟ್ರೊ ಮಾರ್ಗದಲ್ಲಿ ಎಂಒಯು ಮೊದಲ ಒಪ್ಪಂದವಾಗಿದೆ ಎಂದು ಬಿಎಂಆರ್ಸಿಎಲ್ ಪ್ರಕಟಣೆಯಲ್ಲಿ ತಿಳಿಸಿದೆ.
ಮೆಟ್ರೋ ಅಪಘಾತ: ಶನಿವಾರ IISc ವರದಿ
ಮೆಟ್ರೋ ಅಪಘಾತದ ತನಿಖೆಯ ವರದಿಯನ್ನು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ (ಐಐಎಸ್ಸಿ) ಶನಿವಾರ ಸಲ್ಲಿಸಲಿದೆ ಎಂದು ಸಿವಿಲ್ ಎಂಜಿನಿಯರಿಂಗ್ ವಿಭಾಗದ ಪ್ರೊ.ಚಂದ್ರ ಕಿಶನ್ ಜೆಎಂ ಡಿಎಚ್ಗೆ ತಿಳಿಸಿದ್ದಾರೆ. ತನಿಖೆಗಳು ಇನ್ನೂ ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ವಿವರಗಳನ್ನು ಹಂಚಿಕೊಳ್ಳಲು ನಿರಾಕರಿಸಿದರು.

ಅಪಘಾತದ ಕುರಿತು ತನ್ನ ಆಂತರಿಕ ತಾಂತ್ರಿಕ ಸಮಿತಿಯ ವರದಿಗಾಗಿ BMRCL ಕಾಯುತ್ತಿದೆ. ಸಮಿತಿಯು ಸುರಕ್ಷತೆ, ಗುಣಮಟ್ಟ ಮತ್ತು ಕೆಲಸದ ವಿಭಾಗಗಳ ಮುಖ್ಯ ಎಂಜಿನಿಯರ್ಗಳನ್ನು ಒಳಗೊಂಡಿದೆ.
ಬೆಂಗಳೂರು ಪೊಲೀಸರು ಅಪಘಾತದ ತನಿಖೆಯನ್ನು ಹೈದರಾಬಾದ್ನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಗೆ (ಐಐಟಿ) ವಹಿಸಿದೆ.












Click it and Unblock the Notifications