Get Updates
Get notified of breaking news, exclusive insights, and must-see stories!

LIVE ಪ್ರಸಾರ: ಕೆಐಎಎಲ್ ನಲ್ಲಿ ಕೆಂಪೇಗೌಡ ಪ್ರತಿಮೆಗೆ ಭೂಮಿ ಪೂಜೆ

ಬೆಂಗಳೂರು, ಜೂನ್ 26: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮುಂದೆ ನಿರ್ಮಿಸಲು ಉದ್ದೇಶಿಸಿರುವ ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಬೃಹತ್‌ ಕಂಚಿನ ಪ್ರತಿಮೆ ನಿರ್ಮಾಣಕ್ಕೆ ಜೂನ್ 27ರಂದು ಶಂಕುಸ್ಥಾಪನೆ ಹಾಗೂ ಸೆಂಟ್ರಲ್ ಪಾರ್ಕ್ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರದ ಉಪಾಧ್ಯಕ್ಷ, ಉಪ ಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಶುಕ್ರವಾರದಂದು ತಿಳಿಸಿದರು

ಜೂನ್ 27 ರಂದು ನಾಡ ಪ್ರಭು ಕೆಂಪೇಗೌಡರ 511ನೇ ಜಯಂತಿ ಮಹೋತ್ಸವ ನಡೆಯಲಿದೆ. ಅಂದೇ ನಾಡಪ್ರಭುಗಳ 108 ಅಡಿ ಎತ್ತರದ ಕಂಚಿನ ಪ್ರತಿಮೆ ಹಾಗೂ ಸೆಂಟ್ರಲ್ ಪಾರ್ಕ್ ಕಾಮಗಾರಿಯ ಭೂಮಿ ಪೂಜೆಯೂ ಸಹ ನೆರವೇರುತ್ತಿರುವುದು ವಿಶೇಷ. ಹೃದಯಸ್ಪರ್ಶಿಯಾದ ಈ ಸಮಾರಂಭವು ಯೂಟ್ಯೂಬ್ ಚಾನೆಲ್ ಮೂಲಕ ನೇರ ಪ್ರಸಾರವಾಗಲಿದ್ದು, ಇದರಲ್ಲಿ ತಾವು ಪಾಲ್ಗೊಳ್ಳಬೇಕೆಂದು ಡಾ.ಸಿ.ಎನ್‌.ಅಶ್ವತ್ಥನಾರಾಯಣ ಕೋರಿದ್ದಾರೆ.

ಸ್ಥಳ: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಬೆಂಗಳೂರು
ದಿನಾಂಕ: ಜೂನ್ 27, 2020
ಸಮಯ: ಬೆಳಗ್ಗೆ 10:30ಕ್ಕೆ
ನೇರ ಪ್ರಸಾರ ಕಾರ್ಯಕ್ರಮ: Nadaprabhu Kemepegowda, Youtube Channel

Watch Live: Foundation stone event Kempegowda statue at KIA on Kempegowda Jayanti

ಭೂಮಿ ಪೂಜೆ ಹಾಗೂ ಮಾದರಿ ಪ್ರತಿಮೆ ಅನಾವರಣ
-ಬಿ.ಎಸ್ ಯಡಿಯೂರಪ್ಪ, ಮುಖ್ಯಮಂತ್ರಿ, ಕರ್ನಾಟಕ ಸರ್ಕಾರ.

ದಿವ್ಯ ಸಾನಿಧ್ಯ:
* ಡಾ. ನಿರ್ಮಲಾನಂದನಾಥ ಸ್ವಾಮೀಜಿ, ಆದಿಚುಂಚನಗಿರಿ ಮಹಾ ಸಂಸ್ಥಾನ ಮಠ
* ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿ, ಸುತ್ತೂರು ಮಠ
* ನಂಜಾವಧೂತ ಸ್ವಾಮೀಜಿ, ಗುರುಗುಂಡ ಬ್ರಹ್ಮೇಶ್ವರ ಮಠ.
* ಚಂದ್ರಶೇಖರ ಸ್ವಾಮೀಜಿ, ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠ

ಘನ ಉಪಸ್ಥಿತಿ;
ಎಚ್ ಡಿ ದೇವೇಗೌಡ, ಮಾಜಿ ಪ್ರಧಾನಿ
ಡಿ. ವಿ ಸದಾನಂದ ಗೌಡ, ಕೇಂದ್ರ ಸಚಿವ
ಎಸ್ಎಂ ಕೃಷ್ಣ, ಮಾಜಿ ಮುಖ್ಯಮಂತ್ರಿ
ಪ್ರಹ್ಲಾದ್ ಜೋಶಿ, ಕೇಂದ್ರ ಸಚಿವ
ಸುರೇಶ್ ಅಂಗಡಿ, ಕೇಂದ್ರ ಸಚಿವ

Watch Live: Foundation stone event Kempegowda statue at KIA on Kempegowda Jayanti

ಗೌರವಾನ್ವಿತ ಅತಿಥಿಗಳು:
ಡಾ. ಸಿ.ಎನ್ ಅಶ್ವಥನಾರಾಯಣ, ಉಪಮುಖ್ಯಮಂತ್ರಿ, ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರದ ಉಪಾಧ್ಯಕ್ಷ,
ಗೋವಿಂದ ಎಂ ಕಾರಜೋಳ, ಉಪ ಮುಖ್ಯಮಂತ್ರಿ
ಲಕ್ಷ್ಮಣ ಸಂಗಪ್ಪ ಸವದಿ, ಉಪ ಮುಖ್ಯಮಂತ್ರಿ

ಅಧ್ಯಕ್ಷತೆ
ಎಲ್ ಎನ್ ನಿಸರ್ಗ ನಾರಾಯಣ ಸ್ವಾಮಿ, ದೇವನಹಳ್ಳಿ ಶಾಸಕ

ಮುಖ್ಯ ಅತಿಥಿಗಳು
ಆರ್ ಅಶೋಕ
ಎಸ್ ಸುರೇಶ್ ಕುಮಾರ್
ವಿ ಸೋಮಣ್ಣ
ಜೆ. ಸಿ ಮಾಧುಸ್ವಾಮಿ
ಸಿ.ಟಿ ರವಿ
ಡಾ. ಸುಧಾಕರ್
ಕೆ ಗೋಪಾಲಯ್ಯ
ಬಿ.ಎ ಬಸವರಾಜು
ಎಸ್. ಆರ್ ವಿಶ್ವನಾಥ್
ಕೆ.ಸಿ ನಾರಾಯಣಗೌಡ
ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ
ಎಚ್ ಡಿ ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ
ಗೌತಮ್ ಕುಮಾರ್, ಬೆಂಗಳೂರು ಮಹಾಪೌರರು
ಜಯಮ್ಮ ಅನಿಲ್ ಲಕ್ಷ್ಮಿ ನಾರಾಯಣ್, ಬೆಂಗಳೂರು ಗ್ರಾಮಾಂತರ ಜಿ.ಪಾಂ ಅಧ್ಯಕ್ಷರು.

Watch Live: Foundation stone event Kempegowda statue at KIA on Kempegowda Jayanti

ನಳೀನ್ ಕುಮಾರ್ ಕಟೀಲ್, ಬಿಜೆಪಿ ರಾಜ್ಯಾಧ್ಯಕ್ಷ
ಬಿ.ಎನ್ ಬಚ್ಚೇಗೌಡ, ಸಂಸದ
ಡಿ.ಕೆ ಸುರೇಶ್, ಸಂಸದ
ಡಿ.ಕೆ ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ

ಇವರ ಜೊತೆಗೆ ಬಿಬಿಎಂಪಿ ಅಧಿಕಾರಿಗಳೂ, ನಾಡಪ್ರಭು ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರದ ನಾಮ ನಿರ್ದೇಶಿತ ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ವಿಧಾನಸೌಧ ಮತ್ತು ವಿಕಾಸಸೌಧದ ಮಧ್ಯೆ ಇರುವ ಗಾಂಧೀಜಿ ಪ್ರತಿಮೆಯನ್ನು ನಿರ್ಮಾಣ ಮಾಡಿದ ಖ್ಯಾತ ಕಲಾವಿದ ಅನಿಲ್‌ ರಾಮಸುತಾರ್‌ ಅವರಿಗೆ ಕೆಂಪೇಗೌಡರ ಪ್ರತಿಮೆ ನಿರ್ಮಾಣದ ಗುತ್ತಿಗೆ ನೀಡಲಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+