Get Updates
Get notified of breaking news, exclusive insights, and must-see stories!

ಶ್ರೀರಾಮಾನುಜರು ಶರಣಾಗತಿಯ ಪ್ರತೀಕ : ತಿರುನಾರಾಯಣ ಶ್ರೀ

ಬೆಂಗಳೂರು, ಜನವರಿ 30: ಶ್ರೀ ರಾಮಾನುಜಾಚಾರ್ಯರ ಜನ್ಮ ಸಹಸ್ರಮಾನೋತ್ಸವ ಕುರಿತು ಬೆಂಗಳೂರಿನ ಯಲಚೇನಹಳ್ಳಿಯಲ್ಲಿ ವಿಶ್ವ ಮಂಗಳ ಮಹೋತ್ಸವವನ್ನು ಮೇಲುಕೋಟೆ ಯದುಗಿರಿ ಯತಿರಾಜ ಮಠದ ಯತಿರಾಜ ತಿರುನಾರಾಯಣ ಜೀಯರ್ ನೆರವೇರಿಸಿದರು.

ಕನಕಪುರ ರಸ್ತೆಯಲ್ಲಿರುವ ಜ್ಯೋತಿ ವಿದ್ಯಾಕೇಂದ್ರದಲ್ಲಿ ಶ್ರೀರಾಮಾನುಜಾಚಾರ್ಯರಿಗೆ ವಿಶ್ವಮಂಗಳ ಮಹೋತ್ಸವವನ್ನು ಶ್ರೀ ವೈಷ್ಣವರೆಲ್ಲರೂ ಒಡಗೂಡಿ ಆಚಾರ್ಯರ ಸಹಸ್ರಮಾನ ವರ್ಷದ 1300ನೇ ಸ್ಪರ್ಶ ಪಾದುಕಾ ಪೂಜಾ ಕೈಂಕರ್ಯದಲ್ಲಿ ಭಾಗಿಯಾದರು. ವೈಷ್ಣವ ಸಂಪ್ರದಾಯದಂತೆ ಪೂಜಾ ಕಾರ್ಯಗಳು ಜರುಗಿದವು.[ರಾಮಾನುಜರ ಸ್ಮರಣೆಗಾಗಿ ವಿಶ್ಮಮಂಗಳ ಸಹಸ್ರಮಾನೋತ್ಸವ]

Vishwamangala Mahothsava function: Tirunarayan jiyar performed Paduka Pooja

ತಿರುನಾರಾಯಣ ಜೀಯರ್ ಸ್ವಾಮಿಗಳು ಶಂಕರಾಚಾರ್ಯರು, ಮಧ್ವಚಾರ್ಯರ ಕಾಲಮಾನವನ್ನು ನೆನೆಯುತ್ತಾ ರಾಮಾನುಜಾಚಾರ್ಯರ ಜ್ಞಾನ, ಭಕ್ತಿ, ವೈರಾಗ್ಯ ಜೊತೆಗೆ ಶರಣಾಗತಿ, ಪ್ರಪತ್ತಿಯನ್ನು ಉಪದೇಶಿದರು. ಅಲ್ಲದೆ ಆಚಾರ್ಯರು ಕರ್ನಾಟಕದಾದ್ಯಂತ ರಾಜ ಬಿಟ್ಟಿದೇವ(ವಿಷ್ಣುವರ್ಧನ)ನ ಸಹಾಯದಿಂದ 18 ಪಂಗಡಗಳಾಗಿದ್ದ ಎಲ್ಲ ಸಮುದಾಯದ ಒಗ್ಗೂಡಿಸಿದ್ದರ ಬಗ್ಗೆ ತಿಳಿಹೇಳಿದರು.

Vishwamangala Mahothsava function: Tirunarayan jiyar performed Paduka Pooja

ರಾಜನ ಸಹಾಯದಿಂದ ಎಲ್ಲ ಜಾತಿಯವರಿಗೂ ಸಲ್ಲುವ ಕೆರೆ ನಿರ್ಮಾಣ, ಆಲಯ ಪ್ರವೇಶ ಸುಧಾರಣೆಗಳ ಬಗ್ಗೆ ವಿವರಿಸಿದರು.

ಇದೇ ಮಾದರಿಯಲ್ಲಿ ಫೆಬ್ರವರಿ 18 ರಂದು ರಾಮಾನುಜಾಚಾರ್ಯರ ಪಾದುಕಾ ಪೂಜೆಯನ್ನು ಶೇಷಾದ್ರಿಪುರಂನಲ್ಲಿ ನೆರವೇರಿಸಲಾಗುವುದು ಎಂದು ಶ್ರೀಗಳು ಘೋಷಿಸಿದರು.

Vishwamangala Mahothsava function: Tirunarayan jiyar performed Paduka Pooja

ಇನ್ನು ಸಹಸ್ರಮಾನ ಸಂದರ್ಭದಲ್ಲಿ ಶ್ರೀರಾಮಾನುಜಾಚಾರ್ಯರ ಜೀವನ ಚರಿತ್ರೆಯನ್ನು ಒಳಗೊಂಡ ದೃಶ್ಯ ಮುದ್ರಿಕೆ ಮತ್ತು ದಿನದರ್ಶಿಕೆಯನ್ನು ಲೋಕಾರ್ಪಣೆಗೊಳಿಸಲಾಯಿತು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+