Video Viral: ಕೋತಿ ಮಾಡಿದ ಅವಾಂತರಕ್ಕೆ ಶಿವಗಂಗೆ ಬೆಟ್ಟದ ತುದಿಗೆ ಇಳಿದ ವ್ಯಕ್ತಿ: ಮುಂದೇನಾಯ್ತು..?
Wahtch Viral Video: ಕೋತಿಗಳೇ ಹಾಗೇ ಅವುಗಳು ಕಾಟ ನೀಡಲು ಮುಂದಾದರೆ ಮನುಷ್ಯರಿಗೆ ಎಂತಹ ಅಪಾಯವನ್ನಾದರೂ ತಂದೊಡ್ಡಿ ಬಿಡುತ್ತವೆ. ಅದು ಮನೆ, ಮಠಗಳ ಜಾಗವಾದರೂ ಸರಿಯೇ, ಪ್ರವಾಸಿ ತಾಣ, ಬೆಟ್ಟ-ಗುಡ್ಡಗಳಲ್ಲಿ ಆದರೂ ಸರಿಯೇ..! ಇಲ್ಲೊಬ್ಬರ ಬ್ಯಾಗ್ ಕಸಿಕೊಂಡು ಓಡಿ ಹೋಗಿ ಚೆಲ್ಲಾಪಿಲ್ಲ ಮಾಡಿದ ಕೋತಿಯಿಂದ ಆ ಬ್ಯಾಗ್ ತರಲು ಪ್ರವಾಸಿಗರೊಬ್ಬರು ಹರಸಾಹಸ ಪಟ್ಟ ಘಟನೆ ನಡೆದಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಅಸಲಿಗೆ ಈ ಘಟನೆ ನಡೆದಿರುವುದು ಬೆಂಗಳೂರಿನಿಂದ 55 ಕಿಲೋ ಮೀಟರ್ ದೂರವಿರುವ ಶಿವಗಂಗೆ ಬೆಟ್ಟದ (Shivagange Hill) ತುದಿಯಲ್ಲಿ. ಹೌದು, ಇಲ್ಲಿಗೆ ಎಂದಿನಂತೆ ಪ್ರವಾಸಿಗರು ಬಂದಿದ್ದಾರೆ. ಇದು ಕಳೆದ ವಾರಾಂತ್ಯದ ವಿಡಿಯೋ ಅಂತಲೂ ಹೇಳಲಾಗುತ್ತಿದೆ. ಇನ್ಸ್ಟಾಗ್ರಾಮ್ ನಲ್ಲಿ wandering_allwayzz ಖಾತೆಯಿಂದ ವಿಡಿಯೋ ಹಂಚಿಕೊಳ್ಳಲಾಗಿದೆ.

ಬೆಟ್ಟದ ತುದಿಯಲ್ಲಿ ನಿಂತ ಪ್ರವಾಸಿಗರೊಬ್ಬರ ಬ್ಯಾಗ್ ಕಸಿದುಕೊಂಡ ಮಂಗವು ಬೆಟ್ಟದ ತುದಿಯ ಇಳಿಜಾರಿನಲ್ಲಿ ಬ್ಯಾಗ್ ಅನ್ನು ಉಚ್ಚಿ ಅದರಲ್ಲಿನ ವಸ್ತುಗಳನ್ನು ಹೊರಗೆಡವಿದೆ. ಒಂದಷ್ಟು ಬೇಕಾದ ಅತ್ಯಗತ್ಯ ವಸ್ತುಗಳು ಅದರಲ್ಲಿದ್ದವು ಎನ್ನಲಾಗಿದೆ. ಹೀಗಾಗಿಯೇ ಜೀವ ಪಣಕ್ಕಿಟ್ಟು ಬ್ಯಾಗ್ ಮಾಲೀಕ ಅದನ್ನು ತರಲು ಬೆಟ್ಟದ ತುದಿಗೆ ಇಳಿಯುವ ದೃಶ್ಯಗಳು ವಿಡಿಯೋದಲ್ಲಿ ಸೆರೆಯಾಗಿದೆ. ಒಂದೊಮ್ಮೆ ಈ ದೃಶ್ಯ ನೋಡುವಾಗ ಎದೆ ಝಲ್ ಅನ್ನಿಸದೇ ಇರದು.
ಶಿವಗಂಗೆ ಬೆಟ್ಟದ ಒಂದು ಕಡೆ ದೇವಸ್ಥಾನ ಇದೆ. ಮತ್ತೊಂದು ತುದಿಯತ್ತ ತುದಿಗೆ ಜನರು ಹೋಗಿ ಅಪಾಯ ತಂದುಕೊಳ್ಳಬಾರದೆಂದು ಬ್ಯಾರಿಕೇಡ್ ರೀತಿಯಲ್ಲಿ ಅಡ್ಡಲಾಗಿ ಕಬ್ಬಿಣದ ಕಂಬಗಳನ್ನು ಅಳವಡಿಸಲಾಗಿದೆ. ಈ ಕೋತಿ ಪ್ರವಾಸಿಗರೊಬ್ಬರ ಬ್ಯಾಗ್ ಕಸಿದು ಆ ಕಬ್ಬಿಣದ ಕಂಬ ದಾಟಿ ಮುಂದೆ ಹೋಗಿದೆ.
ಇದನ್ನು ನೋಡಿದ ವ್ಯಕ್ತಿ ಇತರರ ಪ್ರವಾಸಿಗರ ಸಹಾಯದಿಂದ ಸರಪಳಿ ರೀತಿ ಕೈ ಕೈ ಹಿಡಿದು ನಿಧಾನವಾಗಿ ಬ್ಯಾಗ್ನತ್ತೆ ತೆರಳಿದ್ದಾರೆ. ಆಗಲೂ ಸುಮ್ಮನಿರದ ಕೋತಿ ಅವರೆಲ್ಲರನ್ನು ಹೆದರಿಸಲು, ಮೈ ಮೇಲೆ ಎರಗಲು ಮುಂದಾಗಿದೆ. ಕೆಲವರು ನಿಧಾನ ನಿಧಾನ ಎಂದು ಕೂಗಿದರೆ, ಇನ್ನೂ ಕೆಲವರು ಕೋತಿಗಳನ್ನು ಓಡಿಸುವ ದೃಶ್ಯವನ್ನು ವಿಡಿಯೋದಲ್ಲಿ ಕಾಣಬಹುದು. ನೋಡ ನೋಡುತ್ತಿದ್ದಂತೆ ಬ್ಯಾಗ್ ಇರುವ ಸ್ಥಳಕ್ಕೆ ತೆರಳಿದ ವ್ಯಕ್ತಿ ಒಂದೊಂದೇ ವಸ್ತುಗಳನ್ನು ಬ್ಯಾಗ್ ಒಳಕ್ಕೆ ಹಾಕಿ, ಅಲ್ಲಿಂದ ನಿಧಾನವಾಗಿ ಸುರಕ್ಷಿತ ಸ್ಥಳಕ್ಕೆ ಬಂದಿದ್ದಾರೆ. ಅದೃಷ್ಟವಶಾತ್ ಯಾವುದೇ ತೊಂದರೆ ಆಗಿಲ್ಲ. ಆದರೆ ಇಂತದ್ದೊಂದು ಘಟನೆ ನಡೆದಾಗ ಎಷ್ಟೆ ಜಾಗರೂಕರಾದರೂ ಸಹಿತ ಜೀವಕ್ಕೆ ತೊಂದರೆ ಆಗಿ ಬಿಡುತ್ತದೆ. ಹೀಗಾಗಿ ಕೋತಿಗಳಿರುವ ಪ್ರದೇಶದಲ್ಲಿ ಎಚ್ಚರಿಕೆ ವಹಿಸುವುದು ಅವಶ್ಯಕ.
ವಿಡಿಯೋ ನೋಡಿದ ನೆಟ್ಟಿಗರು ಹೇಳಿದ್ದೇನು?
'ನಿಜವಾಗಲೂ ಇದೇ ರೀತಿ ಖಂಡಿತ ಕೋತಿ ಮಾಡುತ್ತವೆ ನಿಮ್ಮ ವಸ್ತುಗಳನ್ನು ಜೋಪಾನವಾಗಿ ಬಿಗಿಯಾಗಿ ಹಿಡಿದುಕೊಂಡು ಹೋಗಿ. ಅನುಭವದ ಮಾತು' ಎಂದು ತಮಾಷೆಯಾಗಿ ಕಾಮೆಂಟ್ ಮಾಡಿದ್ದಾರೆ. 'ಕೋತಿ ಮಾಡಿದ ಅವಾಂತರ ಮಾತ್ರವಲ್ಲದೇ ವ್ಯಕ್ತಿಯ ಬೇಜವಾಬ್ದಾರಿ ಸಹ ಇದೆ ಎಂದು ಮತ್ತೊಬ್ಬರು ಹೇಳಿದ್ದಾರೆ.', 'ವಿಡಿಯೋ ಮಾಡೋದು ಬಿಟ್ಟು. ಹೋಗಿ ಅವರಿಗೆ ಸಹಾಯ ಮಾಡಿ' ಎಂದು ಇನ್ನೊಬ್ಬರು ತಿಳಿಸಿದ್ದಾರೆ.
'ಅದಕ್ಕೆ ಟೂರಿಸ್ಟ್ ಪ್ಲೇಸ್ ಗಳಲ್ಲಿ ಮೊದಲು ಬೋರ್ಡ್ ಹಾಕಿರ್ತೀರಲ್ಲ ನಿಮ್ಮ ಸಮಾನುಗಳಿಗೆ ನೀವೇ ಜವಾಬ್ದಾರರು''ಅಂತಲೂ ತಿಳಿ ಹೇಳುವಂತೆ ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ. ಹುಷಾರು ಕಣಪ್ಪ, ನಂದು ಒಂದ್ ಬ್ಯಾಗ್ ಅಲ್ಲೇ ಇದೆ ತನ್ನಿ ಅಂತಲೂ ಕೆಲವರು ಕಾಲೆಳೆದಿದ್ದಾರೆ.
-
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD












Click it and Unblock the Notifications