Viral: ಬೆಂಗಳೂರಿನ ಸ್ಲೀಪರ್ ಬಸ್ನಲ್ಲಿ ಒಟ್ಟಿಗೆ ಇದ್ದ ಯುವಕ-ಯುವತಿ; ಕಂಡಕ್ಟರ್ನಿಂದ ನೈತಿಕ ಪೊಲೀಸ್ಗಿರಿ
ಬೆಂಗಳೂರು: ರಾತ್ರಿ ವೇಳೆಯ ಖಾಸಗಿ ಬಸ್ ಪ್ರಯಾಣವು ಕೆಲವೊಮ್ಮೆ ಕಹಿನೆನಪುಗಳನ್ನು ಹುಟ್ಟುಹಾಕುತ್ತದೆ. ಇದೀಗ ಬೆಂಗಳೂರಿನಿಂದ ಖಾಸಗಿ ಎಸಿ ಸ್ಲೀಪರ್ ಬಸ್ನಲ್ಲಿ ಪ್ರಯಾಣಿಸುತ್ತಿದ್ದ ಯುವಕ ಮತ್ತು ಆತನ ಗೆಳತಿಗೆ ಬಸ್ ನಿರ್ವಾಹಕನೊಬ್ಬ (Conductor) ಅನಗತ್ಯವಾಗಿ ನೈತಿಕ ಪೊಲೀಸ್ಗಿರಿ (Moral policing) ಮಾಡಿರುವ ಘಟನೆಯೊಂದು ಬೆಳಕಿಗೆ ಬಂದಿದೆ. ಈ ಕಹಿ ಅನುಭವವನ್ನು ಯುವಕ ಜನಪ್ರಿಯ ಜಾಲತಾಣವಾದ ರೆಡ್ಡಿಟ್ನ 'ಆರ್/ಬೆಂಗಳೂರು' ಪುಟದಲ್ಲಿ ಹಂಚಿಕೊಂಡಿದ್ದು, ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.
ಘಟನೆಯ ಹಿನ್ನೆಲೆ ಏನು?
ಆರಾಮದಾಯಕ ಪ್ರಯಾಣಕ್ಕಾಗಿ ಹಾಗೂ ಹೆಚ್ಚಿನ ಸ್ಥಳಾವಕಾಶವಿರಲಿ ಎಂಬ ಉದ್ದೇಶದಿಂದ ಯುವಕ ಮತ್ತು ಯುವತಿ ಒಟ್ಟು ಮೂರು ಕೆಳಗಿನ ಸ್ಲೀಪರ್ ಬರ್ತ್ಗಳನ್ನು (Lower sleeper berths) ಮುಂಗಡವಾಗಿ ಕಾಯ್ದಿರಿಸಿದ್ದರು. ಪ್ರಯಾಣದ ವೇಳೆ ಇಬ್ಬರೂ ಒಟ್ಟಿಗೆ ಒಂದು ಬರ್ತ್ನಲ್ಲಿ ಕುಳಿತಿದ್ದನ್ನು ಗಮನಿಸಿದ ನಿರ್ವಾಹಕ, ತಕ್ಷಣವೇ ಅಲ್ಲಿಗೆ ಬಂದು ಇಬ್ಬರಿಗೂ ಪ್ರತ್ಯೇಕವಾಗಿ ಕುಳಿತುಕೊಳ್ಳುವಂತೆ ತಾಕೀತು ಮಾಡಿದ್ದಾನೆ.

"ನಾವು ತಕ್ಷಣವೇ ಎದ್ದು ಹೋಗದಿದ್ದಾಗ, ಕಂಡಕ್ಟರ್ ನಮ್ಮ ಮೇಲೆ ಅನಗತ್ಯವಾಗಿ ರೇಗಾಡಲು ಶುರುಮಾಡಿದ. 'ನಿಮ್ಮ ಪೋಷಕರಿಗೆ ಕರೆ ಮಾಡುತ್ತೇನೆ', 'ಪೊಲೀಸ್ ಠಾಣೆಗೆ ಹೋಗೋಣ' ಎಂದೆಲ್ಲಾ ಬೆದರಿಕೆ ಹಾಕಿದ. ಇದು ನಮಗೆ ನಿಜಕ್ಕೂ ಮುಜುಗರ ಹಾಗೂ ಆತಂಕ ತರಿಸಿತು. ನಾವು ಮೂರೂ ಸೀಟುಗಳಿಗೆ ಅಧಿಕೃತವಾಗಿ ಟಿಕೆಟ್ ಹಣ ಪಾವತಿಸಿದ್ದೆವು ಮತ್ತು ಬಸ್ನಲ್ಲಿದ್ದ ಬೇರೆ ಯಾವ ಪ್ರಯಾಣಿಕರಿಗೂ ನಮ್ಮಿಂದ ಯಾವುದೇ ತೊಂದರೆಯಾಗಿರಲಿಲ್ಲ. ಆದರೂ, ಬಸ್ನಲ್ಲಿ ದೊಡ್ಡ ರಂಪಾಟವಾಗುವುದು ಬೇಡ ಎಂದು ಸುಮ್ಮನೆ ಪ್ರತ್ಯೇಕವಾಗಿ ಕುಳಿತುಕೊಂಡೆವು" ಎಂದು ಯುವಕ ತನ್ನ ಪೋಸ್ಟ್ನಲ್ಲಿ ಅಳಲು ತೋಡಿಕೊಂಡಿದ್ದಾನೆ.
ಜೊತೆಗೆ, "ಯಾವುದೇ ನಿಯಮಗಳ ಉಲ್ಲಂಘನೆಯಾಗದಿದ್ದರೂ ಕಂಡಕ್ಟರ್ ಈ ರೀತಿ ನಡೆದುಕೊಂಡಿದ್ದು ನಿಜಕ್ಕೂ ನಿಯಮವೋ ಅಥವಾ ಬರೀ ನೈತಿಕ ಪೊಲೀಸ್ಗಿರಿಯೋ? ಸಾರಿಗೆ ಸಂಸ್ಥೆಗಳಲ್ಲಿ ಒಟ್ಟಿಗೆ ಯಾರು ಮಲಗಬೇಕು/ಕೂತುಕೊಳ್ಳಬೇಕು ಎಂಬ ಬಗ್ಗೆ ಲಿಖಿತ ನಿಯಮಗಳಿವೆಯೇ? ಯಾರಿಗಾದರೂ ಈ ರೀತಿಯ ಅನುಭವವಾಗಿದೆಯೇ?" ಎಂದು ಆತ ಪ್ರಶ್ನಿಸಿದ್ದಾನೆ.
ಪರ-ವಿರೋಧ ಚರ್ಚೆ
ಯುವಕನ ಈ ಪೋಸ್ಟ್ಗೆ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ನಿರ್ವಾಹಕನ ನಡೆಯನ್ನು ಸಮರ್ಥಿಸಿಕೊಂಡರೆ, ಬಹುತೇಕರು ಆತನ ಉದ್ಧಟತನವನ್ನು ತೀವ್ರವಾಗಿ ಖಂಡಿಸಿದ್ದಾರೆ.
"ಇದು ಕೇವಲ ಹಣದಾಸೆಗೆ ಮಾಡಿದ ತಂತ್ರ. ನೀವು ಮೂರು ಸೀಟು ಬುಕ್ ಮಾಡಿದ್ದೀರಿ, ಒಂದು ಸೀಟು ಖಾಲಿ ಇರುತ್ತದೆ. ಇಬ್ಬರನ್ನೂ ಬೇರೆ ಬೇರೆ ಕೂರಿಸಿ, ಆ ಖಾಲಿ ಸೀಟನ್ನು ದಾರಿಯಲ್ಲಿ ಬೇರೆ ಪ್ರಯಾಣಿಕರಿಗೆ ಮಾರಿ ಹಣ ಮಾಡಿಕೊಳ್ಳುವುದು ಆತನ ಉದ್ದೇಶವಾಗಿರಬಹುದು. ನೀವು ಆತನಿಗೆ ಸರಿಯಾಗಿ ಬುದ್ಧಿ ಕಲಿಸಬೇಕಿತ್ತು" ಎಂದು ಬಳಕೆದಾರರೊಬ್ಬರು ಅನುಮಾನ ವ್ಯಕ್ತಪಡಿಸಿದ್ದಾರೆ.
ಮತ್ತೊಬ್ಬ ಬಳಕೆದಾರರು ತಮ್ಮದೇ ಕಹಿ ಅನುಭವವನ್ನು ಹಂಚಿಕೊಳ್ಳುತ್ತಾ, "ನನಗೂ ಇದೇ ರೀತಿಯ ಅನುಭವವಾಗಿತ್ತು. ಅಣ್ಣ-ತಂಗಿ ಆಗಿದ್ದರೆ ಮಾತ್ರ ಒಟ್ಟಿಗೆ ಪ್ರಯಾಣಿಸಲು ಅವಕಾಶ, ಇಲ್ಲದಿದ್ದರೆ ಪೋಷಕರಿಗೆ ಕರೆ ಮಾಡುತ್ತೇವೆ ಎಂದು ಬೆದರಿಸಿದ್ದರು. ಪ್ರಯಾಣದುದ್ದಕ್ಕೂ ಕಂಡಕ್ಟರ್ ನಮ್ಮನ್ನು ಕೆಟ್ಟ ಪದಗಳಿಂದ ನಿಂದಿಸಿದ್ದಲ್ಲದೆ, ಪದೇ ಪದೇ ಬಂದು ನಾವೇನು ಮಾಡುತ್ತಿದ್ದೇವೆ ಎಂದು ಪರಿಶೀಲಿಸುತ್ತಿದ್ದ" ಎಂದು ಆಕ್ರೋಶ ಹೊರಹಾಕಿದ್ದಾರೆ.
"ನೀವು ಎರಡು ಸೀಟು ಬುಕ್ ಮಾಡಿದ್ದರೆ ಬಹುಶಃ ಆತ ಏನೂ ಕೇಳುತ್ತಿರಲಿಲ್ಲ. ಆದರೆ, ಮೂರು ಸೀಟು ಬುಕ್ ಮಾಡಿದ್ದು ಆತನಿಗೆ ಅನುಮಾನ ಮೂಡಿಸಿರಬಹುದು" ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.
ಒಟ್ಟಾರೆಯಾಗಿ, ಖಾಸಗಿ ಬಸ್ಗಳಲ್ಲಿ ಅಧಿಕೃತ ಟಿಕೆಟ್ ಹೊಂದಿದ್ದರೂ, ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸದಿದ್ದರೂ ಸಿಬ್ಬಂದಿ ಈ ರೀತಿ ಪ್ರಯಾಣಿಕರ ಖಾಸಗಿತನದಲ್ಲಿ (Privacy) ಹಸ್ತಕ್ಷೇಪ ಮಾಡುವುದು ಎಷ್ಟು ಸರಿ ಎಂಬ ಚರ್ಚೆ ಶುರುವಾಗಿದೆ. ಪ್ರಯಾಣಿಕರು ಟಿಕೆಟ್ ಖರೀದಿಸಿದ ಬಳಿಕ, ಇತರರಿಗೆ ತೊಂದರೆಯಾಗದಂತೆ ಹೇಗೆ ಪ್ರಯಾಣಿಸಬೇಕು ಎಂಬುದು ಅವರ ಹಕ್ಕು. ಇದು ಯಾವುದೇ ಸಾರಿಗೆ ನಿಯಮಗಳ ಅಡಿಯಲ್ಲಾಗಲಿ ಬರುವುದಿಲ್ಲ, ಬದಲಾಗಿ ಇದು ಸಮಾಜದಲ್ಲಿ ಬೇರೂರಿರುವ 'ನೈತಿಕ ಪೊಲೀಸ್ಗಿರಿ'ಯ ಒಂದು ಭಾಗವಷ್ಟೇ ಎಂದು ಹಲವರು ಬಲವಾಗಿ ಪ್ರತಿಪಾದಿಸಿದ್ದಾರೆ.
-
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
Bengaluru: 50 ವಾರ್ಡ್ಗಳಲ್ಲಿ ಕಸ ವಿಲೇವಾರಿ ಸ್ಥಗಿತ; ವೇತನ ವಿಳಂಬಕ್ಕೆ ಮುನಿದು ಸಾಮೂಹಿಕ ರಜೆ ಹಾಕಿದ ಕಾರ್ಮಿಕರು -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ












Click it and Unblock the Notifications