ವಿಜಯನಗರ-ಎಲೆಕ್ಟ್ರಾನಿಕ್ ಸಿಟಿ ನಡುವೆ ವೋಲ್ವೋ ಸೇವೆ

ಎಲೆಕ್ಟ್ರಾನಿಕ್ ಸಿಟಿಗೆ ಪ್ರಯಾಣಿಸಲು ಸಂಚಾರದಟ್ಟಣೆಯಲ್ಲಿ ಸಿಲುಕಿ ಗಂಟೆಗಟ್ಟಲೆ ವ್ಯರ್ಥ ಮಾಡುತ್ತಿದ್ದವರು ಇನ್ನು ಮುಂದೆ ನೂತನ ಸೇವೆಯ ಮೂಲಕ ಐವತ್ತು ನಿಮಿಷಗಳಲ್ಲಿ ಎಲೆಕ್ಟ್ರಾನಿಕ್ ಸಿಟಿಯನ್ನು ತಲುಪಬಹುದಾಗಿದೆ.
ವಿಜಯನಗರದಿಂದ ಎಲೆಕ್ಟ್ರಾನಿಕ್ ಸಿಟಿಗೆ ನೈಸ್ ರಸ್ತೆಯ ಮೂಲಕ ಮಾರ್ಗ ಸಂಖ್ಯೆ ವಿ 600 ಎನ್ಎಲ್ನಲ್ಲಿ ನೂತನ ವೋಲ್ವೊ ಬಸ್ಗಳ ಸಂಚಾರ ಪ್ರಾರಂಭಿಸಲಾಗಿದೆ. ಇದರಿಂದಾಗಿ ಎಲೆಕ್ಟ್ರಾನಿಕ್ ಸಿಟಿಗೆ ಪ್ರಯಾಣ ಮತ್ತಷ್ಟು ಸುಲಭವಾಗಿದೆ.
ಈ ಬಸ್ ಚಂದ್ರ ಲೇಔಟ್, ನಾಗರಬಾವಿ ವೃತ್ತ, ನಾಯಂಡಹಳ್ಳಿ ಜಂಕ್ಷನ್, ಹೊಸಕೆರೆಹಳ್ಳಿ ನೈಸ್ ರೋಡ್ ಜಂಕ್ಷನ್, ಕನಕಪುರ ನೈಸ್ ರೋಡ್ ಜಂಕ್ಷನ್, ಗೊಟ್ಟಿಗೆರೆ ನೈಸ್ ರೋಡ್ ಜಂಕ್ಷನ್ ಮೂಲಕ ಎಲೆಕ್ಟ್ರಾನಿಕ್ ಸಿಟಿಗೆ ತಲುಪಲಿದೆ.
ವಿಜಯನಗರದಿಂದ-ಎಲೆಕ್ಟ್ರಾನಿಕ್ ಸಿಟಿಗೆ ರೂ.125 ರೂ. ದರ ನಿಗದಿಗೊಳಿಸಲಾಗಿದೆ. ಮಾಸಿಕ ಮತ್ತು ದಿನದ ಪಾಸು ಹೊಂದಿರುವ ಪ್ರಯಾಣಿಕರು ರೂ.30ದರವನ್ನು ಪ್ರತಿ ಪ್ರಯಾಣಕ್ಕೆ ಪಾವತಿ ಮಾಡಬೇಕಾಗುತ್ತದೆ.
ವಿಜಯನಗರದಿಂದ ಬೆಳಿಗ್ಗೆ 7.30, 8, 8.30, 9 ಗಂಟೆಗೆ ಹಾಗೂ ಎಲೆಕ್ಟ್ರಾನಿಕ್ ಸಿಟಿಯಿಂದ 5.30, 6, 6.30 ಹಾಗೂ 7 ಗಂಟೆಗೆ ಬಸ್ ಹೊರಡಲಿದೆ. ಈ ಮೂಲಕ ನೈಸ್ ರಸ್ತೆಯಲ್ಲಿ ಬಿಎಂಟಿಸಿ ಬಸ್ ಸಂಚಾರ ಪ್ರಾರಂಭವಾಗಿದೆ. (ವೋಲ್ವೋ ಪ್ರಯಾಣ ದರ ಹೆಚ್ಚಳ)
ದರಗಳ ವಿವರ
ವಿಜಯನಗರ-ಎಲೆಕ್ಟ್ರಾನಿಕ್ ಸಿಟಿ ರೂ.125
ಹೊಸಕೆರೆಹಳ್ಳಿ ನೈಸ್ ಟೋಲ್-ಎಲೆಕ್ಟ್ರಾನಿಕ್ ಸಿಟಿ ರೂ.115
ಕನಕಪುರ ರೋಡ್ ಜಂಕ್ಷನ್-ಎಲೆಕ್ಟ್ರಾನಿಕ್ ಸಿಟಿ ರೂ.100
ಗೊಟ್ಟಿಗೆರೆ ರೋಡ್ ಜಂಕ್ಷನ್-ಎಲೆಕ್ಟ್ರಾನಿಕ್ ಸಿಟಿ ರೂ.85
ಗೊಟ್ಟಿಗೆರೆ ರೋಡ್ ಜಂಕ್ಷನ್-ವಿಜಯನಗರ ರೂ.115
ಕನಕಪುರ ರೋಡ್ ಜಂಕ್ಷನ್-ವಿಜಯನಗರ ರೂ.10
-
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಇಂಡೋನೇಷ್ಯಾದಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪ: ಏಷ್ಯಾ ರಾಷ್ಟ್ರಗಳಲ್ಲಿ ಸುನಾಮಿ ಆತಂಕ, ಭಾರತದ ಮೇಲಾಗುವ ಪರಿಣಾಮವೇನು? -
Bengaluru House Rent: ಬೆಂಗಳೂರಿನ ಪ್ರೈಮ್ ಏರಿಯಾದಲ್ಲೂ ನಾನ್ವೆಜ್ ಪ್ರಿಯರಿಗೆ ಮನೆ ಸಿಗ್ತಿಲ್ಲ, ಸೋಷಿಯಲ್ ಮೀಡಿಯಾ ಚರ್ಚೆ -
Prakash Raj: ನಾಸ್ತಿಕನಾದರೂ ತಾಯಿಯ ನಂಬಿಕೆಗೆ ಗೌರವ ಕೊಟ್ಟು; ಕ್ರೈಸ್ತ ಧರ್ಮದ ಸಂಪ್ರದಾಯ ಪಾಲನೆ: ನಟ ಪ್ರಕಾಶ್ ರಾಜ್ -
Education: CBSE 9 ಮತ್ತು 10ನೇ ತರಗತಿಯ ಹೊಸ ಪಠ್ಯಕ್ರಮ ಇಂದು ಬಿಡುಗಡೆ -
ಮುಂದಿನ 2 ರಿಂದ 3 ವಾರಗಳಲ್ಲಿ ಇರಾನ್ ಮೇಲೆ ಅತ್ಯಂತ ಭೀಕರ ದಾಳಿ: ಟ್ರಂಪ್ ಎಚ್ಚರಿಕೆ -
ವಿದ್ಯಾರ್ಥಿಗಳ ಮೊಬೈಲ್ ಗೀಳಿಗೆ ಬ್ರೇಕ್: ಹೊಸ 'ಡಿಜಿಟಲ್ ನೀತಿ' ಪ್ರಕಟಿಸಿದ ಆರೋಗ್ಯ ಇಲಾಖೆ -
Raghav Chadha: ಸಂಸದ ರಾಘವ್ ಚಡ್ಡಾಗೆ ಶಾಕ್ ಕೊಟ್ಟ ಎಎಪಿ, ಬಿಜೆಪಿ ಸೇರಲಿದ್ದಾರೆಯೇ ಸ್ಟಾರ್ ರಾಜಕಾರಣಿ -
Nuwan Thushara: ಆರ್ಸಿಬಿಗಾಗಿ ಶ್ರೀಲಂಕಾ ಕ್ರಿಕೆಟ್ ಮಂಡಳಿಯ ವಿರುದ್ಧವೇ ತಿರುಗಿ ಬಿದ್ದ ಸ್ಟಾರ್ ಆಟಗಾರ ನುವಾನ್ ತುಷಾರ












Click it and Unblock the Notifications