ಪಕ್ಷ ಸಂಘಟನೆಗಾಗಿ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಮುಖಂಡರ ಸಭೆ
ಬೆಂಗಳೂರು, ಡಿಸೆಂಬರ್ 07 : ಪಕ್ಷ ಸಂಘಟನೆಗಾಗಿ ಕಾಂಗ್ರೆಸ್ ಮುಖಂಡರು ವಿಭಾಗವಾರು ಸರಣಿ ಸಭೆ ಈಗಾಗಲೇ ಆರಂಭಿಸಿದ್ದಾರೆ. ಮೂರನೇ ದಿನವಾರದ ಗುರುವಾರ ಬೆಂಗಲೂರಿನ ಕೆಪಿಸಿಸಿ ಕಚೇರಿಯಲ್ಲಿ ಬೆಳಗಾವಿ ವಿಭಾಗದ ಸಭೆ ನಡೆಸಿದರು.
ಮೂರನೇ ದಿನದ ಸಭೆಗೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವಣುಗೋಪಾಲ್ ಹಾಗೂ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಆಗಮಿಸಿದ್ದರು. ಬೆಳಗಾವಿ, ಬೆಳಗಾವಿ ಗ್ರಾಮೀಣ, ಧಾರವಾಡ ಗ್ರಾಮೀಣ, ಹುಬ್ಬಳ್ಳಿ ನಗರ, ಉತ್ತರ ಕನ್ನಡ, ಹಾವೇರಿ, ಬಾಗಲಕೋಟೆ, ಚಿಕ್ಕೋಡಿ, ಗದಗ ಬಿಜಾಪುರ ಒಟ್ಟು 10 ಜಿಲ್ಲೆಗಳು ಬೆಳಗಾವಿ ವಿಭಾಗದಲ್ಲಿ ಬರಲಿದೆ.

ಸಭೆಯಲ್ಲಿ ರಮೇಶ್ ಜಾರಕಿಹೊಳಿ, ಎಚ್.ಕೆ. ಪಾಟೀಲ್, ವೀರಣ್ಣ ಮತ್ತಿಕಟ್ಟಿ, ಅಪ್ಪಾಜಿ ನಾಡಗೌಡ, ಫರೋಜ್ ಶೇಠ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಡಿ.ಸಿ.ಚಂದ್ರಶೇಖರ್, ಎಸ್.ಎ. ಹುಸೇನ್, ವೆಂಕಟರಾವ್ ಘೋರ್ಪಡೆ ಮತ್ತು ಹಲವು ನಾಯಕರು ಭಾಗಿಯಾಗಿದ್ದರು.












Click it and Unblock the Notifications