ಗಾಳಿ ಆಂಜನೇಯಸ್ವಾಮಿ ಜಾತ್ರೆ, ಮೈಸೂರು ರಸ್ತೆ ಸಂಚಾರ ನಿಷೇಧ

ಬೆಂಗಳೂರು, ಏ.13: ಮೈಸೂರು ರಸ್ತೆಯ ಗಾಳಿ ಆಂಜನೇಯಸ್ವಾಮಿ ಜಾತ್ರೆ ಇಂದು(ಏ.13) ನಡೆಯಲಿದ್ದು, ಮೈಸೂರು ರಸ್ತೆಯಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದೆ.

ಶನಿವಾರದಿಂದ ಮೂರು ದಿನಗಳ ಕಾಲ ಜಾತ್ರೆ ನಡೆಯಲಿದೆ. ಏ.13ರಿಂದ 15ರವರೆಗೆ ಕಿಮ್ಕೋ ಜಂಕ್ಷನ್ ನಿಂದ ಹೊಸಗುಡ್ಡದಹಳ್ಳಿ ಜಂಕ್ಷನ್ ವರೆಗೆ ನಿರ್ದಿಷ್ಟ ಅವಧಿಗೆ ಎಲ್ಲ ರೀತಿಯ ವಾಹನ ಸಂಚಾರ ನಿಷೇಧಿಸಲಾಗಿದೆ.

ಮೈಸೂರು ರಸ್ತೆಯಲ್ಲಿ ನಗರದ ಕಡೆಯಿಂದ ಬರುವ ವಾಹನಗಳು ಹೊಸಗುಡ್ಡದಹಳ್ಳಿ ಜಂಕ್ಷನ್‌ನಲ್ಲಿ ಎಡತಿರುವು ಪಡೆದು ಟಿಂಬರ್ ಯಾರ್ಡ್ ಬಡಾವಣೆ ಮೂಲಕ ಮುನೇಶ್ವರ ಬ್ಲಾಕ್‌ನ 50 ಅಡಿ ರಸ್ತೆ ಸೇರಿ ಮೈಸೂರು ರಸ್ತೆ ಕಡೆ ತೆರಳಬಹುದು.

Vehicles are banned in mysuru road today

ಅದೇ ರೀತಿ ಮೈಸೂರು ರಸ್ತೆಯಲ್ಲಿ ನಗರದ ಕಡೆಗೆ ಬರುವ ವಾಹನಗಳು ಕಿಮ್ಕೋ ಜಂಕ್ಷನ್‌ನಲ್ಲಿ ಎಡತಿರುವು ಪಡೆದು ಸೇತುವೆ ಮೇಲೆ ಸಂಚರಿಸಿ ಬಾಪೂಜಿನಗರ ಜಂಕ್ಷನ್‌ ಬಳಿ ಮೈಸೂರು ರಸ್ತೆ ಸೇರಿ ನಗರಕ್ಕೆ ಪ್ರವೇಶಿಸಬಹುದು.ಏ. 13ರಂದು ಬೆಳಗ್ಗೆ 10 ರಿಂದ 4 ಮತ್ತು ಏ.14ರ ಬೆಳಗ್ಗೆ 8ರಿಂದ ಏ.15ರ ಬೆಳಗ್ಗೆ 10 ಗಂಟೆವರೆಗೆ ವಾಹನಗಳ ಸಂಚಾರ ನಿಷೇಧಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+