ವೆಜ್ ಅಥವಾ ನಾನ್ ವೆಜ್ , ನಿಮ್ಮ ಆಯ್ಕೆ ಯಾವುದು?
ಬೆಂಗಳೂರು, ಜೂನ್ 11: ಆಧುನಿಕ ಸಮಾಜಕ್ಕೆ, ಆಹಾರ ಪದ್ಧತಿಗೆ ಒಗ್ಗಿಕೊಂಡವರಿಗೆ ಆಹಾರ ಪದ್ಧತಿ ಬಗ್ಗೆ ಎಷ್ಟು ಹೇಳಿದರೂ ಕಾಡಿಮೆಯೇ. ಉಪವಾಸ ಎಂಬ ಪದಕ್ಕೆ ಡಯೆಟ್ ಎಂಬ ಹಣೆಪಟ್ಟಿ ಹಚ್ಚಿಕೊಂಡು ಓಡಾಡುತ್ತಿದ್ದೇವೆ. ದೇಹದ ಸಮತೂಕ ಕಾಪಾಡಿಕೊಳ್ಳಲು ಹರಸಾಹಸ ಮಾಡುತ್ತಾ ಇದ್ದೇವೆ.
ಜನಗಣತಿ ವರದಿ ಹೇಳುವಂತೆ ಭಾರತದಲ್ಲಿ ಶೇ. 70 ರಷ್ಟು ಮಾಂಸಹಾರಿಗಳಿದ್ದರೆ ಶೇ. 15 ರಷ್ಟು ಮಾತ್ರ ಸಸ್ಯಹಾರಿಗಳಿದ್ದಾರೆ. ಸಸ್ಯಹಾರ ಉತ್ತಮವೋ ಅಥವಾ ಮಾಂಸಹಾರವೋ ಎಂಬ ಅಂಶಗಳನ್ನು ನಾವು ಲೆಕ್ಕ ಹಾಕಬೇಕಾಗುತ್ತದೆ.[ನಿಮ್ಮ ಮನೆಯಲ್ಲೂ ಸಿಹಿಕಹಿ ಚಂದ್ರು "ಬೊಂಬಾಟ್ ಭೋಜನ"!]

2014 ರ ಜನಗಣತಿ ದಾಖಲೆ ಹೇಳುವಂತೆ ತೆಲಂಗಾಣದಲ್ಲಿ ಅತಿ ಹೆಚ್ಚು ಮಾಂಸಹಾರಿಗಳಿದ್ದಾರೆ. ಶೇ. 98.8 ಪುರುಷರು ಮತ್ತು ಶೇ. 98.6 ರಷ್ಟು ಜನ ಮಹಿಳೆಯರು ಮಾಂಸಹಾರಿಗಳು. ಅತಿಹೆಚ್ಚು ಸಸ್ಯಹಾರಿಗಳಿರುವ ಜಿಲ್ಲೆ ರಾಜಸ್ಥಾನ, ರಾಜಸ್ಥಾನದಲ್ಲಿ ಶೇ. 73.2 ಪುರುಷರು ಮತ್ತು ಶೇ. 76.6 ರಷ್ಟು ಮಹಿಳೆಯರು ಸಸ್ಯಹಾರಿಗಳಾಗಿದ್ದಾರೆ.[ಅಪ್ಪೆಮಿಡಿ ಉಪ್ಪಿನಕಾಯಿ ಬೇಕಾ? ಭಟ್ಟರಿಗೆ ಫೋನ್ ಮಾಡಿ]

2014 ಮತ್ತು 2004 ರ ಜನಗಣತಿಗೆ ಹೋಲಿಕೆ ಮಾಡಿದರೆ ಮಾಂಸಹಾರಿಗಳ ಲೆಕ್ಕದಲ್ಲಿ ಶೇ. 5 ರಷ್ಟು ಇಳಿಕೆ ಕಂಡುಬಂದಿದೆ. ಆದರೆ ಮಾಂಸ ಮತ್ತು ಮೀನು ತಿನ್ನುವವಿಕೆ ಪ್ರಮಾಣ ಹೆಚ್ಚಾಗಿದೆ.
ಆದರೆ ಅಂಕಿ ಅಂಶಗಳು ಹೇಳುವಂತೆ ನಾನ್ ವೆಜಿಟೆರಿಯನ್ ಡಯಟ್ ಮಾಡುವುದಕ್ಕಿಂತ ವೆಜಿಟೆರಿಯಬ್ ಡಯಟ್ ಉತ್ತಮವಂತೆ. ಹೆಚ್ಚಿನ ಪೋಷಕಾಂಶಗಳು ಲಭ್ಯವಾಗುವುದು ಸಸ್ಯಹಾರದಲ್ಲಿಯೇ![ಕಳೆದ 59 ವರ್ಷಗಳಿಂದ ಇಲ್ಲಿ 'ಕಾಂಗ್ರೆಸ್' ನದ್ದೇ ಆಡಳಿತ!]
ಕರ್ನಾಟಕದ ಕತೆ ಏನು?
ಕರ್ನಾಟಕದಲ್ಲಿ ಶೇ. 20.9 ಸಸ್ಯಹಾರಿ ಪುರುಷರಿದ್ದರೆ ಶೇ. 21.3 ಸಸ್ಯಹಾರಿ ಮಹಿಳೆಯರಿದ್ದಾರೆ. ಶೇ. ಮಾಂಸಹಾರಿ ಪುರುಷರಿದ್ದರೆ 79.1 ಶೇ. 78.7 ಮಾಂಸಹಾರಿ ಮಹಿಳೆಯರಿದ್ದಾರೆ.
ಸಮತೋಲಿತ ಆಹಾರ ಎಂದರೇನು?
ಕೊಚ್ಚಿ ಮೂಲದ ಸಂಸ್ಥೆಯೊಂದು ಆಹಾರ ವ್ಯವಸ್ಥೆ ಬಗ್ಗೆ ನೀಡಿರುವ ವರದಿಯನ್ನು ಗಮನಿಸಲೇಬೇಕಾಗುತ್ತದೆ. ಶೇ. 55-60 ಕಾರ್ಬೋಹೈಡ್ರೇಟ್ (ಅನ್ನ, ಆಲೂಗಡ್ಡೆ), ಶೇ. 18-20 ರಷ್ಟು ಪ್ರೋಟಿನ್ ( ಬೇಳೆಕಾಳು, ತರಕಾರಿ, ಚಿಕನ್) ಮತ್ತು ಶೇ. 20-25 ರಷ್ಟು ಕೊಬ್ಬು (ಎಣ್ಣೆ, ತೆಂಗಿನ ಎಣ್ಣೆ) ಅಂಶಗಳನ್ನು ಸಮತೋಲಿತ ಆಹಾರ ಒಳಗೊಂಡಿರಬೇಕಾಗುತ್ತದೆ.

ಆದರೆ ಬೆಂಗಳೂರಿನ ವೈದ್ಯೆಯೊಬ್ಬರು ಹೇಳುವಂತೆ ಸಸ್ಯಹಾರ ಮತ್ತು ಮಾಂಸಾಹಾರ ಎಂಬ ಚರ್ಚೆಯೇ ಅನಗತ್ಯ. ಸಸ್ಯಹಾರ ಆರೋಗ್ಯಕರ ಎಂಬುದೇ ದೃಢವಾಗಿದ್ದರೆ ಬ್ರಾಹ್ಮಣರಿಗೆ ರೋಗವೇ ತಗುಲಬಾರದಿತ್ತು ಎಂಬ ವಾದವನ್ನು ಮುಂದೆ ಇಡುತ್ತಾರೆ.
ಒಟ್ಟಿನಲ್ಲಿ ಆಹಾರದಲ್ಲಿ ಕೆಟ್ಟದ್ದು ಒಳ್ಳೆಯದು ಎಂಬುದು ಇಲ್ಲ. ಆಹಾರದ ಬಗ್ಗೆ ಇರುವ ಕೆಲವು ಅಸಮರ್ಪಕ ಮಾಹಿತಿಗಳು ನಮ್ಮನ್ನು ದಾರಿ ತಪ್ಪಿಸುತ್ತವೆ. ಮಾಂಸಾಹಾರ ಇರಲಿ ಸಸ್ಯಾಹಾರ ಇರಲಿ ಸಕಲ ಪೋಷಕಾಂಶಗಳನ್ನು ಹೊಂದಿರಬೇಕಾದದ್ದು ಮುಖ್ಯ.
-
War Updates: ಇರಾನ್ಗೆ ಟ್ರಂಪ್ ವಾರ್ನಿಂಗ್: ತೈಲ ಮಾರ್ಗ ಬಂದ್ ಮಾಡಿದರೆ ದೇಶವೇ ಸರ್ವನಾಶ, ಇಂದಿನ ಪ್ರಮುಖಾಂಶಗಳು -
ಇಸ್ರೇಲ್-ಯುಎಸ್ ಜಂಟಿ ದಾಳಿ ಅಬ್ಬರ: ಇರಾನ್ಗೆ ಉತ್ತರಾಧಿಕಾರಿ ನೇಮಕ, ಇಂದಿನ ಪ್ರಮುಖಾಂಶಗಳು ಇಲ್ಲಿವೆ -
Gold Rate: ಬಂಗಾರ ಮತ್ತಷ್ಟು ದುಬಾರಿ: 16,000 ರೂ. ದಾಟಿದ ಚಿನ್ನ, ಬೆಳ್ಳಿ ಬೆಲೆ ಕೂಡ ಏರಿಕೆ, ಇಲ್ಲಿದೆ ಇಂದಿನ ದರ ವಿವರ -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣಕ್ಕೆ ಈ ಪ್ರದೇಶ ಬೆಸ್ಟ್: ಉದ್ಯಮಿ ಕಿರಣ್ ಮಜುಂದಾರ್ ಶಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Gold Price Today: ಆಭರಣ ಪ್ರಿಯರಿಗೆ ಬಿಗ್ ರಿಲೀಫ್: ಬೆಂಗಳೂರಿನಲ್ಲಿ ಚಿನ್ನದ ಬೆಲೆ ದಿಢೀರ್ ಇಳಿಕೆ; ಇಂದಿನ ದರ ಇಲ್ಲಿದೆ -
Horoscope March 9; ಈ ರಾಶಿಯವರ ಅದೃಷ್ಟವೇ ಬದಲಾಗುತ್ತೆ: 12 ರಾಶಿ ಭವಿಷ್ಯ ತಿಳಿಯಿರಿ











Click it and Unblock the Notifications