ವೆಜ್ ಅಥವಾ ನಾನ್ ವೆಜ್ , ನಿಮ್ಮ ಆಯ್ಕೆ ಯಾವುದು?
ಬೆಂಗಳೂರು, ಜೂನ್ 11: ಆಧುನಿಕ ಸಮಾಜಕ್ಕೆ, ಆಹಾರ ಪದ್ಧತಿಗೆ ಒಗ್ಗಿಕೊಂಡವರಿಗೆ ಆಹಾರ ಪದ್ಧತಿ ಬಗ್ಗೆ ಎಷ್ಟು ಹೇಳಿದರೂ ಕಾಡಿಮೆಯೇ. ಉಪವಾಸ ಎಂಬ ಪದಕ್ಕೆ ಡಯೆಟ್ ಎಂಬ ಹಣೆಪಟ್ಟಿ ಹಚ್ಚಿಕೊಂಡು ಓಡಾಡುತ್ತಿದ್ದೇವೆ. ದೇಹದ ಸಮತೂಕ ಕಾಪಾಡಿಕೊಳ್ಳಲು ಹರಸಾಹಸ ಮಾಡುತ್ತಾ ಇದ್ದೇವೆ.
ಜನಗಣತಿ ವರದಿ ಹೇಳುವಂತೆ ಭಾರತದಲ್ಲಿ ಶೇ. 70 ರಷ್ಟು ಮಾಂಸಹಾರಿಗಳಿದ್ದರೆ ಶೇ. 15 ರಷ್ಟು ಮಾತ್ರ ಸಸ್ಯಹಾರಿಗಳಿದ್ದಾರೆ. ಸಸ್ಯಹಾರ ಉತ್ತಮವೋ ಅಥವಾ ಮಾಂಸಹಾರವೋ ಎಂಬ ಅಂಶಗಳನ್ನು ನಾವು ಲೆಕ್ಕ ಹಾಕಬೇಕಾಗುತ್ತದೆ.[ನಿಮ್ಮ ಮನೆಯಲ್ಲೂ ಸಿಹಿಕಹಿ ಚಂದ್ರು "ಬೊಂಬಾಟ್ ಭೋಜನ"!]

2014 ರ ಜನಗಣತಿ ದಾಖಲೆ ಹೇಳುವಂತೆ ತೆಲಂಗಾಣದಲ್ಲಿ ಅತಿ ಹೆಚ್ಚು ಮಾಂಸಹಾರಿಗಳಿದ್ದಾರೆ. ಶೇ. 98.8 ಪುರುಷರು ಮತ್ತು ಶೇ. 98.6 ರಷ್ಟು ಜನ ಮಹಿಳೆಯರು ಮಾಂಸಹಾರಿಗಳು. ಅತಿಹೆಚ್ಚು ಸಸ್ಯಹಾರಿಗಳಿರುವ ಜಿಲ್ಲೆ ರಾಜಸ್ಥಾನ, ರಾಜಸ್ಥಾನದಲ್ಲಿ ಶೇ. 73.2 ಪುರುಷರು ಮತ್ತು ಶೇ. 76.6 ರಷ್ಟು ಮಹಿಳೆಯರು ಸಸ್ಯಹಾರಿಗಳಾಗಿದ್ದಾರೆ.[ಅಪ್ಪೆಮಿಡಿ ಉಪ್ಪಿನಕಾಯಿ ಬೇಕಾ? ಭಟ್ಟರಿಗೆ ಫೋನ್ ಮಾಡಿ]

2014 ಮತ್ತು 2004 ರ ಜನಗಣತಿಗೆ ಹೋಲಿಕೆ ಮಾಡಿದರೆ ಮಾಂಸಹಾರಿಗಳ ಲೆಕ್ಕದಲ್ಲಿ ಶೇ. 5 ರಷ್ಟು ಇಳಿಕೆ ಕಂಡುಬಂದಿದೆ. ಆದರೆ ಮಾಂಸ ಮತ್ತು ಮೀನು ತಿನ್ನುವವಿಕೆ ಪ್ರಮಾಣ ಹೆಚ್ಚಾಗಿದೆ.
ಆದರೆ ಅಂಕಿ ಅಂಶಗಳು ಹೇಳುವಂತೆ ನಾನ್ ವೆಜಿಟೆರಿಯನ್ ಡಯಟ್ ಮಾಡುವುದಕ್ಕಿಂತ ವೆಜಿಟೆರಿಯಬ್ ಡಯಟ್ ಉತ್ತಮವಂತೆ. ಹೆಚ್ಚಿನ ಪೋಷಕಾಂಶಗಳು ಲಭ್ಯವಾಗುವುದು ಸಸ್ಯಹಾರದಲ್ಲಿಯೇ![ಕಳೆದ 59 ವರ್ಷಗಳಿಂದ ಇಲ್ಲಿ 'ಕಾಂಗ್ರೆಸ್' ನದ್ದೇ ಆಡಳಿತ!]
ಕರ್ನಾಟಕದ ಕತೆ ಏನು?
ಕರ್ನಾಟಕದಲ್ಲಿ ಶೇ. 20.9 ಸಸ್ಯಹಾರಿ ಪುರುಷರಿದ್ದರೆ ಶೇ. 21.3 ಸಸ್ಯಹಾರಿ ಮಹಿಳೆಯರಿದ್ದಾರೆ. ಶೇ. ಮಾಂಸಹಾರಿ ಪುರುಷರಿದ್ದರೆ 79.1 ಶೇ. 78.7 ಮಾಂಸಹಾರಿ ಮಹಿಳೆಯರಿದ್ದಾರೆ.
ಸಮತೋಲಿತ ಆಹಾರ ಎಂದರೇನು?
ಕೊಚ್ಚಿ ಮೂಲದ ಸಂಸ್ಥೆಯೊಂದು ಆಹಾರ ವ್ಯವಸ್ಥೆ ಬಗ್ಗೆ ನೀಡಿರುವ ವರದಿಯನ್ನು ಗಮನಿಸಲೇಬೇಕಾಗುತ್ತದೆ. ಶೇ. 55-60 ಕಾರ್ಬೋಹೈಡ್ರೇಟ್ (ಅನ್ನ, ಆಲೂಗಡ್ಡೆ), ಶೇ. 18-20 ರಷ್ಟು ಪ್ರೋಟಿನ್ ( ಬೇಳೆಕಾಳು, ತರಕಾರಿ, ಚಿಕನ್) ಮತ್ತು ಶೇ. 20-25 ರಷ್ಟು ಕೊಬ್ಬು (ಎಣ್ಣೆ, ತೆಂಗಿನ ಎಣ್ಣೆ) ಅಂಶಗಳನ್ನು ಸಮತೋಲಿತ ಆಹಾರ ಒಳಗೊಂಡಿರಬೇಕಾಗುತ್ತದೆ.

ಆದರೆ ಬೆಂಗಳೂರಿನ ವೈದ್ಯೆಯೊಬ್ಬರು ಹೇಳುವಂತೆ ಸಸ್ಯಹಾರ ಮತ್ತು ಮಾಂಸಾಹಾರ ಎಂಬ ಚರ್ಚೆಯೇ ಅನಗತ್ಯ. ಸಸ್ಯಹಾರ ಆರೋಗ್ಯಕರ ಎಂಬುದೇ ದೃಢವಾಗಿದ್ದರೆ ಬ್ರಾಹ್ಮಣರಿಗೆ ರೋಗವೇ ತಗುಲಬಾರದಿತ್ತು ಎಂಬ ವಾದವನ್ನು ಮುಂದೆ ಇಡುತ್ತಾರೆ.
ಒಟ್ಟಿನಲ್ಲಿ ಆಹಾರದಲ್ಲಿ ಕೆಟ್ಟದ್ದು ಒಳ್ಳೆಯದು ಎಂಬುದು ಇಲ್ಲ. ಆಹಾರದ ಬಗ್ಗೆ ಇರುವ ಕೆಲವು ಅಸಮರ್ಪಕ ಮಾಹಿತಿಗಳು ನಮ್ಮನ್ನು ದಾರಿ ತಪ್ಪಿಸುತ್ತವೆ. ಮಾಂಸಾಹಾರ ಇರಲಿ ಸಸ್ಯಾಹಾರ ಇರಲಿ ಸಕಲ ಪೋಷಕಾಂಶಗಳನ್ನು ಹೊಂದಿರಬೇಕಾದದ್ದು ಮುಖ್ಯ.
-
Gold Price Drop: ವಾರದ ಮೊದಲ ದಿನವೇ ಚಿನ್ನ-ಬೆಳ್ಳಿ ದರ ಭರ್ಜರಿ ಕುಸಿತ, ಇಂದಿನ ದರಪಟ್ಟಿ -
Karnataka Rains: ಸಮುದ್ರ ಮಲ್ಮೈ ಸುಳಿಗಾಳಿ, ಏಪ್ರಿಲ್ 14-17ರವರೆಗೆ ಬೆಂಗಳೂರು, ಇತರ ಜಿಲ್ಲೆಗಳಲ್ಲಿ ಮಳೆ -
Aditya: ನಿನ್ನೆ ಮೊನ್ನೆ ಬಂದೋರೆಲ್ಲ ದರ್ಶನ್ಗೆ ಕ್ಲೋಸ್ ಅಂತಿದ್ದಾರೆ, ಅವನು ಎಂದಿಗೂ ನನ್ನ ದೋಸ್ತ್: ನಟ ಆದಿತ್ಯ -
ಮುಂಬೈ ವಿರುದ್ಧದ ಹೈವೋಲ್ಟೇಜ್ ಕದನಕ್ಕೆ ಆರ್ಸಿಬಿ ಪ್ಲೇಯಿಂಗ್ 11ನಲ್ಲಿ ಮಹತ್ವದ ಬದಲಾವಣೆ ಸಾಧ್ಯತೆ -
Dhurandhar 2 Pakistan: ಅರಬ್ ರಾಷ್ಟ್ರದ ಸಾಲ ತೀರಿಸಲು ದುರಂಧರ್ 2 ಬಿಡುಗಡೆಗೆ ಮುಂದಾಯ್ತಾ ಪಾಕಿಸ್ತಾನ, ಟ್ವಿಸ್ಟ್ -
Lata Mangeshkar & Asha Bhosle: ಆ ಒಂದು ಕಾರಣಕ್ಕೆ ತಂಗಿ ಆಶಾ ಬೋಸ್ಲೆ ಜೊತೆ ಮಾತು ಬಿಟ್ಟಿದ್ದ ಲತಾ ಮಂಗೇಶ್ಕರ್ -
Karntaka Weather: ಹವಾಮಾನ ವೈಪರೀತ್ಯ! ರಾಜ್ಯದ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ -
ಗಂಡ-ಹೆಂಡತಿ ಜಗಳ ಇಡೀ ದಿನ ತೋರಿಸಿದರೆ ಸಮಾಜಕ್ಕೆ ಏನು ಪ್ರಯೋಜನ: ಮಾಧ್ಯಮಗಳಿಗೆ ಸಿಎಂ ಪ್ರಶ್ನೆ -
Gas Booking New Rules: ಎಲ್ಪಿಜಿ ಗ್ಯಾಸ್ ಬುಕ್ಕಿಂಗ್ನಲ್ಲಿ ಹೊಸ ನಿಯಮ, ಎಷ್ಟು ದಿನಕ್ಕೆ ಸಿಗುತ್ತೆ ಗ್ಯಾಸ್ ಸಿಲಿಂಡರ್ -
ಮೈಸೂರು-ಬೆಂಗಳೂರು ರೈಲು ಪ್ರಯಾಣಿಕರಿಗೆ ಗುಡ್ನ್ಯೂಸ್ ಕೊಟ್ಟ ವಿ.ಸೋಮಣ್ಣ -
'ಕೋಟಿಗೊಬ್ಬ' ರೀರಿಲೀಸ್: ವಿಷ್ಣುದಾದಾ ಅಭಿಮಾನಿಗಳಿಂದ ಸಂಭ್ರಮ, ಪ್ರಸನ್ನ ಥಿಯೇಟರ್ನಲ್ಲಿ ನಾಳೆ 10,000 ಮಂದಿಗೆ ನಾನ್ವೆಜ್ ಊಟ -
Ram Gopal Varma: ದಾವೂದ್ ಇಬ್ರಾಹಿಂ ಇಲ್ಲದಿದ್ದರೆ ನಾನು ಬದುಕು ಕಟ್ಟಿಕೊಳ್ಳುತ್ತಿರಲಿಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ












Click it and Unblock the Notifications