ಸೊಳ್ಳೆ ದಿನಾಚರಣೆ ಬಗ್ಗೆ ಸೊಲ್ಲೆತ್ತಿದ ಅಮಿತಾಬ್ ಬಚ್ಚನ್!
ಬೆಂಗಳೂರು, ಆಗಸ್ಟ್ 20: ವಿಶ್ವ ಸೊಳ್ಳೆ ದಿನಾಚರಣೆ (ಆಗಸ್ಟ್ 20) ಅಂಗವಾಗಿ ಸಾಮಾಜಿಕ ಜಾಲ ತಾಣಗಳಲ್ಲಿ ಸೊಳ್ಳೆಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಬಾಲಿವುಡ್ ನಟ ಬಿಗ್ ಬಿ ಅಮಿತಾಬ್ ಕೂಡಾ 'ಸೊಳ್ಳೆ ಕಡಿತ' ಅಪಾಯ ಎಂದು ಎಚ್ಚರಿಕೆ ಸಂದೇಶಗಳನ್ನು ಹಾಕಿದ್ದಾರೆ.
ಮಲೇರಿಯಾ, ಡೆಂಘಿ ಸೇರಿದಂತೆ ಸಾಂಕ್ರಾಮಿಕ ರೋಗಗಳಿಗೆ ಕಾರಣವಾಗುವ ತುರಿಕೆ ತರುವ ಚುಚ್ಚುಮದ್ದು ನೀಡುವ ನೀಳಕಾಯದ ಕೀಟ ಸೊಳ್ಳೆಗೆ ಹೆದರದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ. ಭಾರತದ ಸ್ವಚ್ಛತೆಯ ಬಗ್ಗೆ ಪ್ರಧಾನಿ ಮೋದಿ ಅವರ ಮುಂದಾಳತ್ವದಲ್ಲಿ ದೊಡ್ಡ ಮಟ್ಟದ ಅಭಿಯಾನ ನಡೆಸಲಾಗುತ್ತಿದೆ. ಅದರೆ, ಇನ್ನೂ ಸೊಳ್ಳೆಗಳ ಕಾಟವನ್ನು ತಪ್ಪಿಸಲು ನಗರ ಪಾಲಿಕೆಗಳಿಗೆ ಸಾಧ್ಯವಾಗುತ್ತಿಲ್ಲ. [ವಿಶ್ವ ಸೊಳ್ಳೆ ದಿನಾಚರಣೆ ಬಗ್ಗೆ ವಿಶೇಷ ಲೇಖನ]
ಮಲೇರಿಯಾ ರೋಗ ಹೆಣ್ಣು ಅನಾಫಿಲಿಸ್ ಸೊಳ್ಳೆಯಿಂದ ಹಬ್ಬುತ್ತದೆ ಎಂದು ರೊನಾಲ್ಡ್ ರಾಸ್ 1897ರಲ್ಲಿ ಕಂಡು ಹಿಡಿದ ದಿನವನ್ನು ಕಳೆದ ನೂರಾರು ವರ್ಷಗಳಿಂದ ವಿಶ್ವದೆಲ್ಲೆಡೆ 'ವಿಶ್ವ ಸೊಳ್ಳೆ ದಿನ' ಎಂದು ಆಚರಿಸಿಕೊಂಡು ಬರಲಾಗುತ್ತಿದೆ. [ಸೊಳ್ಳೆಗಳಿಗೆ ಯಮಪಾಶ]
ಈ ಶೋಧಕ್ಕಾಗಿ ರೊನಾಲ್ಡ್ ರಾಸ್ ಅವರಿಗೆ ನೊಬೆಲ್ ಪಾರಿತೋಷಕವೂ ಲಭ್ಯವಾಗಿತ್ತು. ಈ ದಿನದಂದು ಸೊಳ್ಳೆ ಕಡಿತದ ಲೆಕ್ಕಾಚಾರ, ಸೊಳ್ಳೆ ಕಡಿತದಿಂದ ಬರುವ ರೋಗ ರುಜಿನ, ಸ್ವಚ್ಚತೆ ಬಗ್ಗೆ ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟ್ಟರ್ ನಲ್ಲಿ ಸಂದೇಶಗಳು ಹರಿದು ಬರುತ್ತಿವೆ.

ಸೊಳ್ಳೆ ದಿನಾಚರಣೆ ಬಗ್ಗೆ ನಾಲ್ಕು ಮಾತು
ಮಲೇರಿಯಾ, ಡೆಂಗ್ಯೂ, ಕಾಮಾಲೆ, ಚಿಕನ್ ಗುನ್ಯಾ ಮುಂತಾದ ರೋಗ ಹರಡಲು ಕಾರಣವಾಗುವ ಸೊಳ್ಳೆಗಳು ನಿಜವಾಗಲು ಮಾನವ ಕುಲಕ್ಕೆ ಘಾತುಕವಾಗಿರುವ ಕೀಟಗಳು.

ಸೊಳ್ಳೆ ಕಡಿತದಿಂದ ಪಾರಾಗಲು ಸಾಧ್ಯವಿಲ್ಲವೇ?
ಸೊಳ್ಳೆ ತನ್ನ ಸಂತಾನ ಬೆಳೆಸದಂತೆ ಮನೆ, ಊರು ಕೇರಿಯನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಉತ್ತಮ ಪರಿಹಾರ. ಸೊಳ್ಳೆ ಕಡಿತದಿಂದ ಉರಿ, ತುರಿಕೆ ಆಗುವುದನ್ನು ತಪ್ಪಿಸಲು ಸಾಧ್ಯವಿಲ್ಲ. ಸೊಳ್ಳೆ ಕಡಿತಗಳಿಂದ ನಿರಂತರವಾಗಿ ನೊಂದಿದ್ದರೆ, ಇಲ್ಲಿ ಕೆರೆತ ಮುಂತಾದ ಭಾದೆಗಳಿಂದ ಪರಿಹಾರ ತೋರುವ ಕೆಲವು ಉಪಾಯಗಳು ಇಲ್ಲಿವೆ [ಸೊಳ್ಳೆ ಕಡಿತದಿಂದ ಪಾರಾಗಬೇಕೆ?]
|
ಸೊಲ್ಲೆತ್ತಿದ ಅಮಿತಾಬ್ ಬಚ್ಚನ್!
ಓಹ್ ಇವತ್ತು ಸೊಳ್ಳೆ ದಿನಾಚರಣೆಯಾ? ನಾನು ಪ್ರತಿದಿನ ಸೊಳ್ಳೆ ದಿನ ಎಂದು ತಿಳಿದಿದ್ದೆ.
|
ಸೊಳ್ಳೆ ದಿನಾಚರಣೆ ಹುಟ್ಟಿಕೊಂಡಿದ್ದರ ಕಥೆ
ಸೊಳ್ಳೆ ದಿನಾಚರಣೆ ಹುಟ್ಟಿಕೊಂಡಿದ್ದರ ಕಥೆಯ ಬಗ್ಗೆ ಟ್ವೀಟ್
|
ಮೆಸ್ಸಿ ಇಂದ ಮಲೇರಿಯಾ ವಿರುದ್ಧ ಹೋರಾಟ
ಮೆಸ್ಸಿ ಕೂಡಾ ಮಲೇರಿಯಾ ವಿರುದ್ಧ ಹೋರಾಟ ನಡೆಸಲಿದ್ದಾರೆ. ಆಗಸ್ಟ್ 20ರಂದು ಟ್ವಿಟ್ಟರ್ ಗೆ ಎಂಟ್ರಿಕೊಡಲಿದ್ದಾರೆ ಎಂಬ ಸುದ್ದಿ ಹಬ್ಬಿದೆ.
|
ನನಗೆ ಇವತ್ತು ಇಷ್ಟು ಸಲ ಸೊಳ್ಳೆ ಕಚ್ಚಿತು
ನನಗೆ ಇವತ್ತು 42 ಸಲ ಸೊಳ್ಳೆ ಕಚ್ಚಿತು ನಿಮಗೆ ಎಷ್ಟು ಸಲ ಕಚ್ಚಿದೆ ಎಂದು ಪ್ರಶ್ನಿಸಿದ ಟ್ವೀಟ್
|
ಒಂದು ಸಣ್ಣ ಕಡಿತ ಜೀವನವನ್ನೇ ಹಾಳು ಮಾಡಬಹುದು
ಒಂದು ಸಣ್ಣ ಕಡಿತ ಜೀವನವನ್ನೇ ಹಾಳು ಮಾಡಬಹುದು, ಸೊಳ್ಳೆ ಕಡಿತದ ಬಗ್ಗೆ ಎಚ್ಚರ!
|
ಡೆಂಗ್ಯೂ ಬಗ್ಗೆ ಜಾಗೃತಿ ಟ್ವೀಟ್ಸ್
ಡೆಂಗ್ಯೂ ಬಗ್ಗೆ ಜಾಗೃತಿ ಇರುವ ಟ್ವೀಟ್ಸ್ ಗಳು ಹರಿದಾಡುತ್ತಿವೆ.
ನಾನಾ ಪಾಟೇಕರ್ ಜನಪ್ರಿಯ ಡೈಲಾಗ್
ಸಾಲ, ಏಕ್ ಮಚ್ಚರ್ ಆದ್ಮಿ ಕೋ ಹಿಜ್ಡಾ ಬನಾದೇತಿ ಹೈ
-
"ಕೆಡಿ" ಸಿನಿಮಾದ ಹಾಡು ಅಶ್ಲೀಲವಾಗಿದ್ರೆ ಕೂಡಲೇ ಎಲ್ಲ ಕಡೆ ತೆರವು ಮಾಡಿ: ಸೆನ್ಸಾರ್ ಮಂಡಳಿಗೆ ಕೇಂದ್ರ ಸರ್ಕಾರ ಸೂಚನೆ -
Byadagi Chilli: ಕರ್ನಾಟಕದ ಕೆಂಪು ಚಿನ್ನ ಬ್ಯಾಡಗಿ ಮೆಣಸಿನಕಾಯಿಗೆ ಹೊಸ ಸಂಕಷ್ಟ, ರೈತರು ಕಂಗಾಲು -
ಸರಕು ಖಾಲಿಯಾಯ್ತಾ ಪ್ರೇಮ್, ಇಡೀ ದೇಶದ ಮುಂದೆ ಕನ್ನಡಿಗರು ತಲೆತಗ್ಗಿಸುವಂತೆ ಮಾಡಿದಿರಿ: ಸೆರಗ ಸರ್ಸೆ ಹಾಡಿಗೆ ವಿರೋಧ -
Bengaluru Second Airport: ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣ: ದೆಹಲಿಯಲ್ಲಿ ಕೇಂದ್ರ ಸಚಿವರ ಭೇಟಿಯಾದ ಡಿ.ಕೆ.ಶಿವಕುಮಾರ್ -
Nora Fatehi: ಸರ್ಸೆ ನಿನ್ನ ಸೆರಗ ಹಾಡು ವಿವಾದ: ಹೇಳಿದ್ದೊಂದು- ಮಾಡಿದ್ದು ಇನ್ನೊಂದು, ನನ್ನ ನಂಬಿ ಪ್ಲೀಸ್ -
SSLC ವಿದ್ಯಾರ್ಥಿಗಳ ಗಮನಕ್ಕೆ: ಮಾರ್ಚ್ 18ಕ್ಕೆ ಪ್ರಥಮ ಭಾಷೆ ಕನ್ನಡ ಪರೀಕ್ಷೆ; ಪಾಸಾಗಲು ಈ ಪ್ರಮುಖ ಅಂಶಗಳನ್ನು ಗಮನಿಸಿ -
"ನಾನು ಭಾರತವನ್ನು ಪ್ರೀತಿಸುತ್ತೇನೆ... ಆದರೆ ನನ್ನನ್ನು ಬೆಳೆಸಿದ್ದು UAE": ಭಾರತ ಮೂಲದ ಮಹಿಳಾ ಉದ್ಯಮಿ ರೂಪಾ ಝಾ ಪೋಸ್ಟ್ Viral -
Karnataka Weather: ಧಾರವಾಡದಲ್ಲಿ 101 ಮಿಮೀ ಮಳೆ ದಾಖಲು, ಒಳನಾಡಿಗೆ ಅಲಿಕಲ್ಲು ಸಹಿತ ಮಳೆ ಮುನ್ಸೂಚನೆ -
Teachers Recruiment: ಪ್ರಾಥಮಿಕ, ಪ್ರೌಢ ಶಾಲೆಗಳ ದೈಹಿಕ ಶಿಕ್ಷಕರ ನೇರ ನೇಮಕಾತಿ: ಮಧು ಬಂಗಾರಪ್ಪ -
ಟೀಂ ಇಂಡಿಯಾಗೆ ನನ್ನದೊಂದು ಸಲಾಂ, ಐಪಿಎಲ್ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಪಂಜಾಬ್ ಕಿಂಗ್ಸ್ ಕೋಚ್ ರಿಕಿ ಪಾಂಟಿಂಗ್ -
ದೆಹಲಿ ಮೆಟ್ರೋ ಸಂಸ್ಕೃತಿ ಬೆಂಗಳೂರಿಗೂ ಬಂತಾ? ಮೆಟ್ರೋದಲ್ಲಿ ಯುವತಿಯರಿಂದ ನಿಯಮ ಉಲ್ಲಂಘನೆ Video Viral -
Prem: ಅಂದು ಮೇಲುಕೋಟೆ ಹುಡುಗಿ, ಇಂದು ಸೆರಗ ಸರ್ಸೆ: ವಿವಾದಕ್ಕೆ ಕಾರಣವಾದ ಪ್ರೇಮ್ ಸಿನಿಮಾ ಹಾಡುಗಳು












Click it and Unblock the Notifications